ವಿದ್ಯಾರ್ಥಿ ರೂಪಿಸಿದ ಪರಿಸರ ಸ್ನೇಹಿ ಸ್ಯಾನಿಟೈಸರ್‌ ಬಾಟಲಿ

ಮೊವಾಡಿ ಸರಕಾರಿ ಶಾಲಾ ವಿದ್ಯಾರ್ಥಿ ಪ್ರಥಮ ಪೂಜಾರಿಯಿಂದ ಆವಿಷ್ಕಾರ

Team Udayavani, Jan 5, 2021, 6:07 AM IST

ವಿದ್ಯಾರ್ಥಿ ರೂಪಿಸಿದ ಪರಿಸರ ಸ್ನೇಹಿ ಸ್ಯಾನಿಟೈಸರ್‌ ಬಾಟಲಿ

ಕುಂದಾಪುರ: ತ್ರಾಸಿ ಗ್ರಾಮದ ಮೊವಾಡಿ ಸರಕಾರಿ ಹಿ.ಪ್ರಾ. ಶಾಲೆಯ 8ನೇ ತರಗತಿ ವಿದ್ಯಾರ್ಥಿ ಪ್ರಥಮ ಕೆ. ಪೂಜಾರಿ ತೆಂಗಿನ ಕಾಯಿ ಗೆರಟೆಯಿಂದ ಪರಿಸರ ಸ್ನೇಹಿ ಸ್ಯಾನಿಟೈಸರ್‌ ಬಾಟಲಿಯನ್ನು ತಯಾರಿಸಿದ್ದು, ವಿದ್ಯಾರ್ಥಿಯ ಈ ವಿನೂತನ ಆವಿಷ್ಕಾರವು ಈಗ ಕೇಂದ್ರದಿಂದ ನಡೆಸುವ 2020-21ರ ಇನ್‌ಸ್ಪಾಯರ್‌ ಅವಾರ್ಡ್‌ ಸ್ಪರ್ಧೆಗೆ ಆಯ್ಕೆಯಾಗಿದೆ.

ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ ಎನ್ನುವ ಕಾರಣಕ್ಕೆ ಇದನ್ನು ತಪ್ಪಿಸಲು ಪರ್ಯಾಯವಾಗಿ ಶಾಲಾ ಮಕ್ಕಳಿಗೆ ವಿವಿಧ ರೀತಿಯ ಮಾದರಿಗಳನ್ನು ತಯಾರಿಸಲು ಒಂದು ವಿಶಿಷ್ಟ ಸ್ಪರ್ಧೆಯ ರೀತಿಯನ್ನು ಹಮ್ಮಿಕೊಳ್ಳಲಾಗಿತ್ತು. ಹೊಸಾಡು ಗ್ರಾಮದ ಕೇರಿಕೊಡ್ಲು ನಿವಾಸಿ ಕುಶಲ ಕೆ. ಪೂಜಾರಿ ಮತ್ತು ಶಾರದಾ ಕೆ. ಪೂಜಾರಿ ದಂಪತಿಯ ಪುತ್ರ ಪ್ರಥಮ ಕೆ. ಪೂಜಾರಿ ಅವನು ಮಾಡಿದ ಪರಿಸರ ಸ್ನೇಹಿ ಈ ತೆಂಗಿನ ಕಾಯಿ ಗೆರಟೆಯ ಸ್ಯಾನಿಟೈಸರ್‌ ಬಾಟಲಿ ಈಗ ಎಲ್ಲರ ಗಮನಸೆಳೆಯುತ್ತಿದೆ.

ತಯಾರಿ ಹೇಗೆ?
ಒಂದೂವರೆ ತೆಂಗಿಕಾಯಿ ಗೆರಟೆ ಅಂದರೆ ಕಾಯಿ ತುರಿದ ಮೂರು ಖಾಲಿ ಗೆರಟೆಯನ್ನು ತೆಗೆದುಕೊಂಡು, ಅದಕ್ಕೆ ವುಡ್‌ ಪಾಲಿಶ್‌ ಮಾಡಿ, ಫೆವಿಕ್ವಿಕ್‌ ಗಮ್‌ ಮತ್ತು ಎಂಸಿಲ್‌ ಬಳಸಿ ಖಾಲಿ ಶ್ಯಾಂಪು ಬಾಟಲಿಯ ಮುಚ್ಚಳವನ್ನು ಬಳಸಿಕೊಂಡು ಮಾದರಿ ತಯಾರಿಸಲಾಗಿದೆ. ಇದು ಪರಿಸರ ಸ್ನೇಹಿಯಾಗಿದ್ದು, ಮರು ಬಳಕೆಗೂ ಕೂಡ ಅವಕಾಶವಿದೆ.

ಪರಿಸರ ಸ್ನೇಹಿ
ಕೇಂದ್ರದಿಂದ ನಡೆಸುವ ಇನ್‌ಸ್ಪಾಯರ್‌ ಅವಾರ್ಡ್‌ 2020-21ಕ್ಕೆ ನಮ್ಮ ಶಾಲೆಯ ವಿದ್ಯಾರ್ಥಿ ಪ್ರಥಮ ಕೆ. ಪೂಜಾರಿ ಆಯ್ಕೆಯಾಗಿದ್ದು, ಈತನು ಮಾಡಿದ ಪರಿಸರ ಸ್ನೇಹಿ ಸ್ಯಾನಿಟೈಸರ್‌ ಬಾಟಲಿ ವಿಶೇಷವಾಗಿದೆ. ಇವನು ಈ ರೀತಿಯ ಹಲವು ಪ್ರಯೋಗಗಳನ್ನು ಮಾಡಿದ್ದಾನೆ.
– ವತ್ಸಲಾ, ಮೊವಾಡಿ ಸರಕಾರಿ ಶಾಲೆಯ ಶಿಕ್ಷಕಿ

ಶಿಕ್ಷಕರು, ಹೆತ್ತವರ ಸಹಕಾರ
ಶಾಲೆಯ ಟೀಚರ್‌ ಮಾದರಿ ತಯಾರಿಸಲು ತಿಳಿಸಿದಾಗ ಏನಾದರೂ ಮಾಡಬೇಕೆಂದು ಆಲೋಚಿಸಿದಾಗ ತೆಂಗಿನಕಾಯಿಯ ಗೆರಟೆಯಿಂದ ಈ ಸ್ಯಾನಿಟೈಸ್‌ ಬಾಟಲಿ ಮಾಡುವ ಯೋಚನೆ ಬಂತು. ಪ್ಲಾಸ್ಟಿಕ್‌ ಬಳಕೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಇದನ್ನು ತಪ್ಪಿಸಲು ತೆಂಗಿನ ಚಿಪ್ಪಿನಿಂದ ಸ್ಯಾನಿಟೈಸರ್‌ ಬಾಟಲಿ ತಯಾರಿಕೆ ಮಾಡಿದ್ದೇನೆ. ಶಿಕ್ಷಕರು ಮತ್ತು ಹೆತ್ತವರ ಸಹಕಾರದಿಂದ ಇದು ಸಾಧ್ಯವಾಗಿದೆ.
– ಪ್ರಥಮ ಕೆ. ಪೂಜಾರಿ, ಮೊವಾಡಿ ಶಾಲೆಯ 8ನೇ ತರಗತಿ ವಿದ್ಯಾರ್ಥಿ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.