Kundapura: ಮಕ್ಕಳನ್ನು ಹೊತ್ಕೊಂಡೇ ಹೊಳೆ ದಾಟಿಸಬೇಕು!ಅಮಾಸೆಬೈಲಿನ ಕುಡಿಸಾಲು ಪರಿಸರದ ಸಮಸ್ಯೆ

ಇಲ್ಲಿ ಸೇತುವೆಯೂ ಇಲ್ಲ; ಸಂಕವೂ ಇಲ್ಲ

Team Udayavani, Jul 27, 2024, 12:14 PM IST

Screenshot (3) copy

ಕುಂದಾಪುರ: ಅಮಾಸೆಬೈಲು ಗ್ರಾಮದ ಬಳ್ಮನೆ ಸಮೀಪದ ಕುಡಿಸಾಲು ಪರಿಸರದ ಮಕ್ಕಳು ಜೋರು ಮಳೆ ಬಂದ ದಿನ ಶಾಲೆಗೆ ರಜೆ ಹಾಕಲೇಬೇಕು. ಇಲ್ಲಿ ಮಳೆ ಕಡಿಮೆ ಇದ್ದರೂ ಹೊಳೆ ದಾಟಲು ಸೇತುವೆಯಿಲ್ಲ. ಪೋಷಕರೇ ಅವರನ್ನು ಎತ್ತಿಕೊಂಡು ಹೊಳೆ ದಾಟಿಸಿ ಕಳುಹಿಸಬೇಕಾದ ಪರಿಸ್ಥಿತಿಯಿದೆ. ಕೆಲವೊಮ್ಮೆ ನೀರಿನ ರಭಸ ಎಷ್ಟಿರುತ್ತದೆ ಎಂದರೆ ಹಿರಿಯರಿಗೂ ಈ ಮಕ್ಕಳನ್ನು ಹೊತ್ತುಕೊಂಡು ದಾಟುವುದು ಕಷ್ಟ. ಆವತ್ತು ಶಾಲೆಗೆ ರಜೆ!

ಅಮಾಸೆಬೈಲು ಗ್ರಾ.ಪಂ.ನ ಎರಡನೇ ವಾರ್ಡಿನ ಬಳ್ಮನೆ ಸಮೀಪದ ಕುಡಿಸಾಲು – ಹಂದಿಮನೆ ಭಾಗದಲ್ಲಿ 6 ಮನೆಗಳಿವೆ. ಇವರಿಗೆ ಶಾಲೆಗೆ ಹೋಗಬೇಕಾದರೆ 4 ಕಿ.ಮೀ. ದೂರದ ಜಡ್ಡಿನಗದ್ದೆಗೆ ಬರಬೇಕು. 2 ಕಿ.ಮೀ. ದೂರದ ಬಳ್ಮನೆಯಲ್ಲಿ ಕಿ.ಪ್ರಾ. ದವರೆಗೆ ಮಾತ್ರವಿದೆ. ಎರಡೂ ಕಡೆಗೂ ಈ ಹೊಳೆಯನ್ನೇ ದಾಟಿ ಬರಬೇಕು. ಹೊಳೆಗೆ ಸೇತುವೆಯಿಲ್ಲ. ಮರದ ಪಾಲ ಹಾಕಿದರೆ ಭಾರೀ ಮಳೆಗೆ ಕೊಚ್ಚಿ ಕೊಂಡು ಹೋಗುತ್ತಿದೆ. ಮಳೆಗಾಲವಿಡೀ ಮಕ್ಕಳನ್ನು ಮನೆಯವರೇ ಎತ್ತಿಕೊಂಡು ಬಂದು, ಹೊಳೆ ದಾಟಿಸಬೇಕಾದ ಸ್ಥಿತಿಯಿದೆ. ದಶಕಗಳಿಗೂ ಹೆಚ್ಚು ಕಾಲದಿಂದ ಇಲ್ಲಿ ಸೇತುವೆಗಾಗಿ ಬೇಡಿಕೆ ಇಡುತ್ತಿದ್ದರೂ, ಈಡೇರುವ ಲಕ್ಷಣ ಮಾತ್ರ ಕಾಣುತ್ತಿಲ್ಲ. ಹೀಗಾಗಿ ಪೀಳಿಗೆ ಯಿಂದ ಪೀಳಿಗೆ ಮಕ್ಕಳನ್ನು ಹೊತ್ತುಕೊಂಡು ದಾಟಿಸುವುದನ್ನು ಅಭ್ಯಾಸ ಮಾಡಿಕೊಂಡಂತಿದೆ.

14 ದಿನ ಶಾಲೆಗೆ ಹೋಗಿಲ್ಲ…

ಭಾರೀ ಮಳೆಯಿಂದಾಗಿ ಕಳೆದ 25 ದಿನಗಳಲ್ಲಿ ನಮ್ಮ ಇಲ್ಲಿನ ಮಕ್ಕಳು 14 ದಿನ ಶಾಲೆಗೆ ಹೋಗಲು ಸಾಧ್ಯವಾಗಿಲ್ಲ. ಹೊಳೆ ತುಂಬಿ ಹರಿಯುವುತ್ತಿರುವುದರಿಂದ ದೊಡ್ಡವರು ದಾಟುವುದು ಕಷ್ಟ. ಇಲ್ಲಿಂದ 3-4 ಮಕ್ಕಳು ಜಡ್ಡಿನಗದ್ದೆ ಶಾಲೆಗೆ ಹೋಗುವವರಿದ್ದಾರೆ. ಜೋರು ಮಳೆ ಬಂದರೆ ಇಲ್ಲಿನ ಮಕ್ಕಳಿಗೆ ರಜೆಯೇ ಹಾಕಬೇಕಾಗುತ್ತದೆ. ಮಳೆಗಾಲದಲ್ಲಿ ಇಲ್ಲಿನ ಮಕ್ಕಳು ಶಾಲೆಗೆ ಹೋಗುವುದಕ್ಕಿಂತ ರಜೆ ಹಾಕುವುದೇ ಹೆಚ್ಚು.

ಇದು ಏಳು ದಶಕಗಳ ಬೇಡಿಕೆ
ಸ್ಥಳೀಯರೇ ಹೇಳುವ ಪ್ರಕಾರ ಕುಡಿಸಾಲು ಹೊಳೆಗೆ ಸೇತುವೆ ಬೇಡಿಕೆ ಇಂದು- ನಿನ್ನೆಯದಲ್ಲ. ಬರೋಬ್ಬರಿ 7 ದಶಕಗಳಿಂದ ನಾವು ಬೇಡಿಕೆ ಕೊಡುತ್ತಿದ್ದೇವೆ. ಎಲ್ಲ ಜನಪ್ರತಿನಿಧಿಗಳು, ಅಮಾಸೆಬೈಲು ಗ್ರಾ.ಪಂ.ಗೆ ಮನವಿ ಕೊಟ್ಟಿದ್ದೇವೆ. ಈಗಿನ ಶಾಸಕರಿಗೂ ಮನವಿ ಕೊಟ್ಟಿದ್ದು, ಮಾಡಿಕೊಡುವ ಬಗ್ಗೆ ಭರವಸೆ ಕೊಟ್ಟಿದ್ದಾರೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಇನೆಷ್ಟು ವರ್ಷ ಕಾಯಬೇಕು…
ಇಲ್ಲಿನ ನಿವಾಸಿಗರು ಕಳೆದ 70 ವರ್ಷಗಳಿಗೂ ಹೆಚ್ಚು ಕಾಲದಿಂದ ಸೇತುವೆಯೊಂದು ಮಾಡಿಕೊಡಿ ಎಂದು ಕೇಳುತ್ತಿದ್ದಾರೆ. ಆದರೆ ಯಾರೂ ಓಗೊಟ್ಟಿಲ್ಲ. ಬಹುಷಃ ಇಲ್ಲಿರುವುದು 6 ಮನೆಗಳು ಮಾತ್ರ ಅನ್ನುವ ಕಾರಣಕ್ಕೆ ಈ ರೀತಿಯ ತಾತ್ಸಾರ ತೋರುತ್ತಿದ್ದಾರೆಯೇ? 6 ಮನೆಗಳಿದ್ದರೂ, ಅವರಿಗೆ ಮೂಲ ಸೌಕರ್ಯ ಕೇಳಿ ಪಡೆಯುವ ಹಕ್ಕಿಲ್ಲವೇ? ಅನ್ನುವುದಾಗಿ ಆಳುವ ವರ್ಗವನ್ನು ಅಲ್ಲಿನ ಜನ ಪ್ರಶ್ನಿಸುತ್ತಿದ್ದಾರೆ.

6 ತಿಂಗಳು ವಾಹನ ಸಂಚಾರವಿಲ್ಲ
ಮಳೆಗಾಲ ಆರಂಭವಾಗುವ ಜೂನ್‌ನಿಂದ ಮುಂದಿನ ಡಿಸೆಂಬರ್‌ವರೆಗೆ ಇಲ್ಲಿನ ಜನರಿಗೆ ಹೊಳೆಯಾಚೆಗೆ ವಾಹನ ಸಂಚಾರವೇ ಇಲ್ಲ. ಅದಕ್ಕೂ ಮೊದಲೇ ಕುಂದಾಪುರ ಅಥವಾ ಅಮಾಸೆಬೈಲು ಪೇಟೆಯಿಂದ ರಿಕ್ಷಾ ಮಾಡಿಕೊಂಡು, ಮನೆಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ತಂದಿಟ್ಟುಕೊಳ್ಳಬೇಕು. ಅದರ ಅನಂತರ ಏನಾದರೂ ಬೇಕಾದರೂ 8 ಕಿ.ಮೀ. ದೂರದ ಅಮಾಸೆಬೈಲಿನಿಂದ ಕುಡಿಸಾಲು ಹೊಳೆಯವರೆಗೆ ರಿಕ್ಷಾ ಅಥವಾ ಬೈಕ್‌ನಲ್ಲಿ ತರಬೇಕು. ಅಲ್ಲಿಂದ ಮುಂದಕ್ಕೆ ತಲೆ ಮೇಲೆ ಹೊತ್ತು ಕೊಂಡೇ ಬರಬೇಕು ಎನ್ನುತ್ತಾರೆ ಸ್ಥಳೀಯರಾದ ಸುದೀಪ್‌.

ಹುಷಾರಿಲ್ಲ ಅಂದ್ರೆ ಭಯವಾಗುತ್ತೆ!
ನಾವು ಚಿಕ್ಕವರಿದ್ದಾಗಲೂ ನಮ್ಮ ಅಪ್ಪ- ಅಮ್ಮ ಹೀಗೆ ಎತ್ತಿಕೊಂಡೇ ಹೊಳೆ ದಾಟಿಸುತ್ತಿದ್ದರು. ಈಗ ನಾವು ನಮ್ಮ ಮಕ್ಕಳನ್ನು ಸಹ ಎತ್ತಿಕೊಂಡೇ ಹೊಳೆ ದಾಟಿಸಿ, ಕಳುಹಿಸುತ್ತಿದ್ದೇವೆ. ಸೇತುವೆಯಿಲ್ಲದೆ ತುಂಬಾ ಕಷ್ಟವಾಗುತ್ತಿದೆ. ಅದರಲ್ಲೂ ಯಾರಿಗಾದರೂ ಹುಷಾರಿಲ್ಲಂದ್ರೆ ತುಂಬಾ ಭಯವಾಗುತ್ತೆ. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದೇ ಒಂದು ದೊಡ್ಡ ಪ್ರಯಾಸದ ಕೆಲಸ. ಸಣ್ಣ ಮಗುವಿಗೆ ಈಗ ಕೆಮ್ಮು, ಕಫ ಇದೆ. ಆದರೆ ಆಸ್ಪತ್ರೆಗೆ ಹೊಳೆ ದಾಟಿ, ಕರೆದುಕೊಂಡು ಹೋಗಬೇಕು. ಅದು ಕಷ್ಟವೆಂದು ಆಸ್ಪತ್ರೆಗೆ ಹೋಗಿಲ್ಲ ಎನ್ನುವುದಾಗಿ ಅಳಲು ತೋಡಿಕೊಳ್ಳುತ್ತಾರೆ ಕುಡಿಸಾಲಿನ ನಿವಾಸಿ ಶ್ಯಾಮಲಾ.

–  ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

4-bng-crime

Bengaluru: ಪತ್ನಿ, ಪ್ರಿಯಕರನ ಕೊಂದು ಪತಿ ಆತ್ಮಹತ್ಯೆ!

INDvsNZ: Dhruv Jurel wicket-keeping instead of Pant; What’s up with Rishabh Pant?

INDvsNZ: ಪಂತ್‌ ಬದಲು ಧ್ರುವ್ ಜುರೆಲ್‌ ವಿಕೆಟ್‌ ಕೀಪಿಂಗ್;‌ ರಿಷಭ್‌ ಪಂತ್‌ ಗೆ ಏನಾಗಿದೆ?

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು

Thirthahalli: ವಿದ್ಯಾರ್ಥಿಯ ಮೇಲೆ ಹರಿದ ಪ್ರವಾಸಿಗರ ಬಸ್;‌ ವಿದ್ಯಾರ್ಥಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-kota-pammu

Pramod Madhwaraj ಅವರದ್ದು ಯಾರನ್ನೂ ದ್ವೇಷಿಸದ ಅಪರೂಪದ ವ್ಯಕ್ತಿತ್ವ: ಕೋಟ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

Udupi: ಗೀತಾರ್ಥ ಚಿಂತನೆ-67: ಅರ್ಜುನನ ಅಹಂ ನಾಶಕ್ಕೆ ಕೃಷ್ಣತಂತ್ರ

4

Malpe: ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

1

Udupi: ಅಡ್ಡಗಟ್ಟಿ ಹಲ್ಲೆ, ಜೀವಬೆದರಿಕೆ; ದೂರು

13(1)

Udupi: ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ ಚುರುಕು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

3(1)

Mangaluru: ಪ್ಲಾಸ್ಟಿಕ್‌ ಬ್ರಹ್ಮರಾಕ್ಷಸನ ತಡೆವ ಮಂತ್ರದಂಡ ಬೇಕಿದೆ !

2

Puttur: ಎಪಿಎಂಸಿ ವಸತಿಗೃಹದಲ್ಲಿ ಅನಧಿಕೃತ ವಾಸ; ಮಹಿಳೆ ಹೊರಕ್ಕೆ

8-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕದಿಯುತ್ತಿದ್ದ ಆರೋಪಿ ಸೆರೆ

1(1)

Belthangady: ರಸ್ತೆ ಶೋಚನೀಯ; ನಿರ್ವಹಣೆಯ ಕೊರತೆ; ರಸ್ತೆಯಲ್ಲಿ ಇಂಗು ಗುಂಡಿ ತರಹದ ಹೊಂಡ

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.