Udayavani Campaign: ಬಸ್‌ ಬೇಕೇ, ಬೇಕು- ಕುಂದಾಪುರಕ್ಕಷ್ಟೇ ಅಲ್ಲ, ಭಟ್ಕಳಕ್ಕೂ ಬೇಕು!

ಬೈಂದೂರು, ಉಪ್ಪುಂದವರೆಗೂ ಭಟ್ಕಳದ ವಿದ್ಯಾರ್ಥಿಗಳಿದ್ದಾರೆ.

Team Udayavani, Jun 21, 2024, 2:41 PM IST

Udayavani Campaign: ಬಸ್‌ ಬೇಕೇ, ಬೇಕು- ಕುಂದಾಪುರಕ್ಕಷ್ಟೇ ಅಲ್ಲ, ಭಟ್ಕಳಕ್ಕೂ ಬೇಕು!

ಬೈಂದೂರು: ಬೈಂದೂರು ತಾಲೂಕಿನ ಗ್ರಾಮೀಣ ಭಾಗಗಳಿಂದ ಬೈಂದೂರು, ಕುಂದಾಪುರದ ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಗೋಳೇ ಹೇಳ ತೀರದಾಗಿದೆ. ಅದರ ಜತೆಗೆ ಈ ಭಾಗದಿಂದ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಟ್ಕಳ, ಮುರ್ಡ್ವೇಶ್ವರಕ್ಕೂ ಹೋಗುತ್ತಿದ್ದು, ಅವರೂ ಸಮಸ್ಯೆ ಎದುರಿಸುತ್ತಿದ್ದಾರೆ. ಅಂದರೆ ಬೈಂದೂರಿನ ಬಸ್‌ ಸಮಸ್ಯೆ ದಕ್ಷಿಣ ಧ್ರುವದಿಂ ಉತ್ತರ ಧ್ರುವಕೂ ಹರಡಿಕೊಂಡಿದೆ.

ಶಿರೂರು, ಬೈಂದೂರು, ಕರಾವಳಿ, ದೊಂಬೆ, ಉಪ್ಪುಂದ, ಪಡುವರಿ ಮುಂತಾದ ಭಾಗಗಳ ವಿದ್ಯಾರ್ಥಿಗಳು ಕುಂದಾಪುರ ಕಾಲೇಜುಗಳಿಗೆ ಹೋಗುವವಂತೆಯೇ ಉತ್ತರ ಕನ್ನಡ ಜಿಲ್ಲೆಯ ಕಾಲೇಜುಗಳಿಗೂ ಹೋಗುತ್ತಾರೆ. ನಿಜ ವೆಂದರೆ ಕುಂದಾಪುರ ಭಾಗಕ್ಕೇ ಬಸ್ಸಿನ ವ್ಯವಸ್ಥೆ ಕಡಿಮೆ ಇದೆ. ಭಟ್ಕಳ ಕಡೆಗೆ ಹೋಗುವವರಿಗೆ ಇದಕ್ಕಿಂತಲೂ ಕಡಿಮೆ ವ್ಯವಸ್ಥೆ ಇದೆ. ಸಕಾಲದಲ್ಲಿ ಬಸ್‌ ಇಲ್ಲದೆ ಪಡಬಾರದ ಪಾಡು ಪಡುತ್ತಾರೆ.

ಈ ಭಾಗದ ವಿದ್ಯಾರ್ಥಿಗಳು ಮುಖ್ಯವಾಗಿ ಭಟ್ಕಳದ ಸುಧೀಂದ್ರ ಕಾಲೇಜು, ಅಂಜುಮಾನ್‌ ಡಿಗ್ರಿ ಕಾಲೇಜು ಮತ್ತು ಮುರ್ಡ್ವೇಶ್ವರದ
ಆರ್‌ಎನ್‌ ಎಸ್‌‌ ಐಟಿಐಗೆ ಹೋಗುತ್ತಾರೆ. ಗಡಿ ಭಾಗವಾದ ಶಿರೂರಿನಿಂದ ಭಟ್ಕಳಕ್ಕೆ ಕೇವಲ 8 ಕಿ.ಮೀ. ಇದ್ದರೆ, ಮುರ್ಡ್ವೇಶ್ವರಕ್ಕೆ 22 ಕಿ.ಮೀ. ಇದೆ. ಅದೇ ಶಿರೂರಿನಿಂದ ಕುಂದಾಪು ರಕ್ಕೆ 40 ಕಿ.ಮೀ. ಇದೆ. ಶಿರೂರಿನಿಂದ ಕುಂದಾಪು ರಕ್ಕೆ ಬಸ್‌ ಪ್ರಯಾಣವೇ ಕೆಲವೊಮ್ಮೆ ಒಂದೂವರೆ ಗಂಟೆ ಆಗುವುದುಂಟು. ಹೀಗಾಗಿ ಕೆಲವರು ಶಿಕ್ಷಣಕ್ಕಾಗಿ ಭಟ್ಕಳವನ್ನು ನೆಚ್ಚಿ ಕೊಂಡಿದ್ದಾರೆ. ಶಿರೂರು ಮಾತ್ರವಲ್ಲ, ಬೈಂದೂರು, ಉಪ್ಪುಂದವರೆಗೂ ಭಟ್ಕಳದ ವಿದ್ಯಾರ್ಥಿಗಳಿದ್ದಾರೆ.

ಎಕ್ಸ್‌ಪ್ರೆಸ್‌ ಬಸ್‌ ಗಳ ಕೊರತೆ
ಶಿರೂರು ಭಾಗದಿಂದ ಕುಂದಾಪುರಕ್ಕೆ ಬರುವ ವರ ಇನ್ನೊಂದು ಸಮಸ್ಯೆ ಏನೆಂದರೆ ಎಕ್ಸ್‌ ಪ್ರಸ್‌ ಬಸ್‌. ಒಳರೂಟಿನಿಂದ ಬಂದು ಹೆದ್ದಾರಿ ಸೇರುವ ವಿದ್ಯಾರ್ಥಿಗಳಿಗೆ ಸಮಯದ ಅಭಾವ ಇರುತ್ತದೆ. ಹೀಗಾಗಿ ಅವರಿಗೆ ತ್ವರಿತವಾಗಿ ಕುಂದಾಪುರ ತಲು ಪಲು ಎಕ್ಸ್‌ ಪ್ರಸ್‌ ಬಸ್‌ಗಳ ಅಗತ್ಯತೆ ಇದೆ. ಆದರೆ, ಈ ಮಾರ್ಗದಲ್ಲಿ ಸ್ಥಳೀಯವಾಗಿ ಲೋಕಲ್‌ ಬಸ್‌ ಗಳೇ ಹೆಚ್ಚು. ಎಕ್ಸ್‌ ಪ್ರೆಸ್‌ ಬಸ್‌ ಗಳ
ಸಂಖ್ಯೆ ಕಡಿಮೆ. ಹೀಗಾಗಿ ಎಕ್ಸ್‌ ಪ್ರೆಸ್‌ ಬಸ್‌ ನಲ್ಲಿ 50 ನಿಮಿಷದಲ್ಲಿ ಕ್ರಮಿಸಬಹುದಾದ ಹಾದಿಗೆ ಇಲ್ಲಿ ಒಂದೂವರೆ ಗಂಟೆಯೂ ಆಗುತ್ತದೆ.

ಕನೆಕ್ಟಿಂಗ್‌ ಬಸ್‌ ಗಳ ಸಮಸ್ಯೆ
ಭಟ್ಕಳ ಕಡೆಗೆ ಹೋಗುವವರು ಶಿರೂರು, ಬೈಂದೂರು, ಉಪ್ಪುಂದಗಳಲ್ಲಿ ಬಸ್‌ ಹತ್ತುತ್ತಾ ರಾದರೂ ಅದಕ್ಕಿಂತ ಮೊದಲು ಅವರು ಒಳ ಭಾಗದಿಂದ ಪ್ರಧಾನ ರಸ್ತೆಗೆ ಬರಲು ಬೇರೆ ಬಸ್‌ ಅವಲಂಬಿಸಿರುತ್ತಾರೆ, ಇಲ್ಲವೇ ನಾಲ್ಕೈದು ಕಿ.ಮೀ. ನಡೆದುಕೊಂಡು ಬರಬೇ ಕಾಗುತ್ತದೆ. ಹೆದ್ದಾರಿಗೆ ಬಂದ ಬಳಿಕವೂ ಅವರಿಗೆ ಸಕಾಲದಲ್ಲಿ ಬಸ್‌ ಸಿಗದೆ ತೊಂದರೆಯಾಗುತ್ತದೆ. ಸಂಜೆ ಮರಳಿ ಬರುವಾಗಲೂ ಅದೇ ಸಮಸ್ಯೆ. ಇಲ್ಲಿ ಕನೆಕ್ಟಿಂಗ್‌ ಬಸ್‌ ಗಳ ಕೊರತೆ ಕಾಡುತ್ತದೆ.

ದಿನಕ್ಕೆರಡು ಗಂಟೆ ಬಸ್‌ ಪ್ರಯಾಣ
ಬೈಂದೂರಿನಿಂದ ಕುಂದಾಪುರಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಬಸ್‌ ಸಂಖ್ಯೆ ಕಡಿಮೆ ಇದೆ. ಇರುವ ಬಸ್ಸಿನಲ್ಲಿ ಉಸಿರು ತೆಗೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಿದೆ. ಲೋಕಲ್‌ ಬಸ್‌ ಗಳಲ್ಲಿ ಬಂದರೆ ಮನೆಯಿಂದ ಕುಂದಾಪುರಕ್ಕೆ ಕೆಲವರಿಗೆ ಎರಡು ಗಂಟೆ ಹಿಡಿಯುತ್ತದೆ.
-ಶುಭಾ, ಬಿ.ಕಾಂ. ವಿದ್ಯಾರ್ಥಿನಿ , ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ

ದಿನಕ್ಕೊಂದೇ ಬಸ್‌ ನಮಗೆ
ಕಾಲೇಜು ಮುಗಿಸಿ ಮನೆಗೆ ಬರಲು ಇರುವುದೊಂದೆ ಬಸ್‌ ಮಳೆಗಾಲದಲ್ಲಂತೂ ವಿದ್ಯಾರ್ಥಿಗಳ ಸಮಸ್ಯೆ ಹೇಳತೀರದು.ಕನಿಷ್ಟ
ಪಕ್ಷ ಬಸ್‌ ಸಂಖ್ಯೆ ಹೆಚ್ಚಿಸಿದರೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಅನುಕೂಲವಾಗುತ್ತಿತ್ತು.
-ಖುಷಿ ಬಿಲ್ಲವ, ಎಸೆಸೆಲ್ಸಿ ವಿದ್ಯಾರ್ಥಿ, ಸ.ಪ.ಪೂ. ಕಾಲೇಜು ಬೈಂದೂರು

*ಅರುಣಕುಮಾರ್‌ ಶಿರೂರು

ಟಾಪ್ ನ್ಯೂಸ್

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

prahlad joshi

Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

Nigeria; ಮದುವೆ ಹಾಲ್, ಆಸ್ಪತ್ರೆಯಲ್ಲಿ ಆತ್ಮಾಹುತಿ ಬಾಂಬ್ ದಾಳಿ; 18 ಮಂದಿ ಸಾವು

3-vitla

Campco ಮಾಜಿ ಅಧ್ಯಕ್ಷ ಎಲ್.ಎನ್. ಕೂಡೂರು ಇನ್ನಿಲ್ಲ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

INDWvsSAW; ಸ್ನೇಹ್ ರಾಣಾ ಸ್ಪಿನ್ ಜಾಲಕ್ಕೆ ಸಿಲುಕಿ ದಿಢೀರ್ ಕುಸಿತ ಕಂಡ ದ.ಆಫ್ರಿಕಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ

T20 World Cup ಗೆದ್ದ ಧನ್ಯತೆಯಲ್ಲಿ ಬಾರ್ಬಡೋಸ್ ಪಿಚ್ ಮಣ್ಣು ತಿಂದ ರೋಹಿತ್ ಶರ್ಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain ಕೋಟೇಶ್ವರ: ಭಾರೀ ಮಳೆಗೆ ಬಾವಿ ಕುಸಿತ

Heavy Rain ಕೋಟೇಶ್ವರ: ಭಾರೀ ಮಳೆಗೆ ಬಾವಿ ಕುಸಿತ

Shankaranarayana: ಕಾರಿನಲ್ಲಿ ಬಂದು ದನ ಕಳ್ಳತನ; ಸಿಸಿ ಕೆಮರಾದಲ್ಲಿ ದಾಖಲು

Shankaranarayana ದನ ಕಳ್ಳತನ ಪ್ರಕರಣ; ಆರೋಪಿಗಳ ಬಂಧನ

Kamalashile: ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ

Kamalashile: ಸಾಲ ತೀರಿಸಲಾಗದೆ ಯುವಕ ಆತ್ಮಹತ್ಯೆ

Fish ಪದಾರ್ಥ ಮಾಡಿಟ್ಟು ಹೋಗು ಎಂದು ಪತ್ನಿಗೆ ಸೌದೆಯಿಂದ ಗಂಭೀರ ಹಲ್ಲೆ

Fish ಪದಾರ್ಥ ಮಾಡಿಟ್ಟು ಹೋಗು ಎಂದು ಪತ್ನಿಗೆ ಸೌದೆಯಿಂದ ಗಂಭೀರ ಹಲ್ಲೆ

Albady: ಕುಡಿಯುವ ನೀರಿನ ಪೈಪ್‌ಲೈನ್‌ ಹೊಂಡಕ್ಕೆ ಸಿಲುಕಿದ ಗೂಡ್ಸ್‌ ವಾಹನ

Albady: ಕುಡಿಯುವ ನೀರಿನ ಪೈಪ್‌ಲೈನ್‌ ಹೊಂಡಕ್ಕೆ ಸಿಲುಕಿದ ಗೂಡ್ಸ್‌ ವಾಹನ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

TeamIndia; ಮುಂದಿನ ಕೋಚ್ ಬಹುತೇಕ ಅಂತಿಮ…: ದೊಡ್ಡ ಸುಳಿವು ನೀಡಿದ ಬಿಸಿಸಿಐ ಅಧ್ಯಕ್ಷ ಬಿನ್ನಿ

5-kushtagi

Kushtagi: ಕಳೆದೆರೆಡು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದ್ದ ಕೋತಿ ಸೆರೆ

9

700 ಕೋಟಿ ವೆಚ್ಚದ ʼಕಲ್ಕಿ 2898 ಎಡಿʼ.. ಇಲ್ಲಿದೆ ಅತ್ಯಂತ ದುಬಾರಿ ಭಾರತೀಯ ಚಿತ್ರಗಳ ಪಟ್ಟಿ

prahlad joshi

Hubli; ಹೆಚ್ಚುವರಿ ಡಿಸಿಎಂ ಸ್ಥಾನ ವಿಚಾರದಲ್ಲಿ ಸಿದ್ದರಾಮಯ್ಯ ಕೈವಾಡವಿದೆ: ಪ್ರಹ್ಲಾದ ಜೋಶಿ

Crime: ಸ್ನೇಹಿತನನ್ನು ಕಟ್ಟಡದಿಂದ ಕೆಳಗೆ ದೂಡಿ ಕೊಲೆಗೈದ ಆರೋಪಿ ಸೆರೆ

Crime: ಸ್ನೇಹಿತನನ್ನು ಕಟ್ಟಡದಿಂದ ಕೆಳಗೆ ದೂಡಿ ಕೊಲೆಗೈದ ಆರೋಪಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.