![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, Feb 19, 2023, 5:40 AM IST
ಉಪ್ಪುಂದ: ಮನೆಯ ಕಟ್ಟಡ ಕಟ್ಟಲು ಬೇಕಾದ ವ್ಯಕ್ತಿ ಮನೆಯಲ್ಲಿ ಕಳವು ಮಾಡಿದ ಘಟನೆ ಕಾಲ್ತೋಡು ಗ್ರಾಮದ ಯಡೇರಿ ಗುರುಮಕ್ಕಿ ನಡೆದಿದೆ.
ಸುರೇಂದ್ರ ಪೂಜಾರಿ ಅವರು ತಾಯಿ ಹಾಗೂ ತಂಗಿಯೊಂದಿಗೆ ವಾಸ ಮಾಡಿಕೊಂಡಿದ್ದು ಸುಮಾರು 3 ತಿಂಗಳ ಹಿಂದೆ ಮಹಾಂತೇಶ್ ಅವರಿಗೆ ಮನೆಯ ಮೇಲ್ಚಾವಣಿಯ ಅಡ್ಡಗೋಡೆ ಕಟ್ಟಲು ಮತ್ತು ಗಾರೆ ಕೆಲಸ ಮಾಡಲು ಮನೆಗೆ ಕರೆಯಿಸಿಕೊಂಡಿದ್ದು, ಕೆಲಸ ಮುಗಿಸಿದ್ದು, ಮನೆ ಕೆಲಸದ ಲೆಕ್ಕಾಚಾರ ಮಾಡಿ ಬಾಕಿ ಹಣ ನೀಡಿ ಕಳುಹಿಸಿದ್ದರು. ಅನಂತರ ಮನೆಗೆ ಬಂದಿದ್ದ ಮಹಾಂತೇಶ ಕೋಣೆಯೊಳಗೆ ಹೋಗಿ ತೆರಳಿದ್ದ. ಬಳಿಕ ಕೋಣೆಯ ಪೆಟ್ಟಿಗೆಯಲ್ಲಿಟ್ಟಿದ್ದ ಚಿನ್ನದ ಕರಿಮಣಿ ಸರವನ್ನು ನೋಡಿದಾಗ ಚಿನ್ನದ ಸರ ಕಾಣಿಸದೇ ಇದ್ದು, ಮಹಾಂತೇಶನು ಕೋಣೆಯ ಪೆಟ್ಟಿಗೆಯಲ್ಲಿಟ್ಟಿದ್ದ 24 ಗ್ರಾಂ ತೂಕದ 1,20,000 ರೂ. ಬೆಲೆಬಾಳುವ ಚಿನ್ನದ ಕರಿಮಣಿ ಸರವನ್ನು ಕಳವು ಮಾಡಿಕೊಂಡು ಹೋಗಿದ್ದಾನೆ ಎಂದು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೈಕ್ಗಳ ಢಿಕ್ಕಿ
ಸಿದ್ದಾಪುರ: ಹಿಲಿಯಾಣ ಗ್ರಾಮದ ಹಿಲಿಯಾಣಜೆಡ್ಡುವಿನಲ್ಲಿ ಫೆ. 16ರಂದು ಬೈಕ್ಗಳ ನಡುವೆ ಢಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಹೆಸ್ಕಾಂದ ನಂಚಾರು ಉದಯ ಮೊಗವೀರ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಣಕಾಸಿನ ತೊಂದರೆ: ಆತ್ಮಹತ್ಯೆ
ಕುಂದಾಪುರ: ಕೆದೂರು ಗ್ರಾಮದ ನಿವಾಸಿ ಮಂಜುನಾಥ ಶೆಟ್ಟಿ (56) ಅವರು ವ್ಯವಹಾರ, ಹಣಕಾಸಿನ ಅಥವಾ ಯಾವುದೋ ಕಾರಣಕ್ಕೆ ಮನನೊಂದು ಕೀಟನಾಶಕ ವಿಷ ಪದಾರ್ಥವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಫೆ. 18ರಂದು ಸಂಭವಿಸಿದೆ. ಅವರ ಅಣ್ಣ ಭುಜಂಗ ಶೆಟ್ಟಿ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.