ಕರ್ನಾಟಕ ರಾಜ್ಯೋತ್ಸವಕ್ಕೆ ಪರಿಸರಸ್ನೇಹಿ ಬಾವುಟ

ನಗರದ ಶಾಲೆಗಳಲ್ಲಿ ಹಾರಾಡಲಿವೆ ಬೀಜ ಧ್ವಜ !

Team Udayavani, Oct 31, 2019, 4:14 PM IST

31-October-20

ಮಹಾನಗರ : ಪ್ಲಾಸ್ಟಿಕ್‌ ಬಾವುಟಗಳನ್ನು ತ್ಯಜಿಸಿ ಬಟ್ಟೆಯ ಬಾವುಟ ಗಳನ್ನು ಹಿಡಿದಿದ್ದಾಯಿತು. ಇದೀಗ ಈ ರಾಜ್ಯೋತ್ಸವ ಸಂದರ್ಭ ಮಂಗಳೂರಿನ ಶಾಲೆಗಳಲ್ಲಿ ಬೀಜ ಬಾವುಟಗಳು ಹಾರಾಡಲಿವೆ.

ವಿಶೇಷವೆಂದರೆ, ಬಾವುಟಗಳೇ ಸುಂದರ ಸಸ್ಯಗಳಾಗಿ ರೂಪು ತಳೆದು ಕಡಲನಾಡಿನ ಜನತೆಯ ಉಸಿರಾಟಕ್ಕೆ ಶುದ್ಧ ವಾಯು, ಸೇವನೆಗೆ ಆಹಾರ ಒದಗಿಸಲಿವೆ!

ಪರಿಸರಸ್ನೇಹಿ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವ ನಗರದ ಇಕೋ ಫ್ರೆಂಡ್ಸ್‌ ತಂಡವು ಈ ಕರ್ನಾಟಕ ರಾಜ್ಯೋತ್ಸವಕ್ಕೆ ಬೀಜ ಬಾವುಟಗಳನ್ನು ತಯಾರಿಸಿದ್ದು, ಇದೇ ಮೊದಲ ಬಾರಿಗೆ ನಗರದ ಶಾಲೆಗಳಲ್ಲಿ ಬೀಜ ಬಾವುಟವನ್ನು ಅರಳಿಸಲು ಪ್ರೇರಣೆ ನೀಡಿದೆ.

ಬಾವುಟ ತಯಾರಿ
ಕನ್ನಡ ಬಾವುಟದ ಬಣ್ಣವಾದ ಕೆಂಪು, ಹಳದಿ ಬಣ್ಣದ ಪೇಪರ್‌ಗಳಲ್ಲಿ ಈ ಬಾವುಟಗಳನ್ನು ತಯಾರಿಸಲಾಗಿದೆ. ಬಾವುಟವು 3 ಇಂಚು ಉದ್ದ ಮತ್ತು 2 ಇಂಚು ಅಗಲ ಇರುತ್ತದೆ. ಮುಂದಿನ ಭಾಗದಲ್ಲಿ ಎರಡು ಬಣ್ಣದ ಪೇಪರ್‌ ಗಳು, ನಡುವೆ ತರಕಾರಿ ಬೀಜಗಳು, ಹಿಂದಿನ ಭಾಗದಲ್ಲಿ ಬಿಳಿ ಬಣ್ಣದ ಬಣ್ಣದ ಪೇಪರ್‌ಗಳನ್ನು ಅಂಟಿಸಿ ಅದಕ್ಕೆ ಪಿನ್‌ ಮಾಡಲಾಗಿದೆ. ಪೇಪರ್‌ಗಳು ಮಣ್ಣಿನಲ್ಲಿ ಸುಲಭವಾಗಿ ಕರಗುವ ಗುಣ ಹೊಂದಿರುವುದರಿಂದ ಮಕ್ಕಳು ಬಾವುಟ ಬಳಕೆ ಮಾಡಿದ ನಂತರ ಈ ಪೇಪರ್‌ಗಳನ್ನು ಪಾಟ್‌ ಅಥವಾ ಮಣ್ಣಿನಲ್ಲಿ ನೇರವಾಗಿ ಹಾಕಬಹುದು. ಕೆಲವು ದಿನಗಳ ಅನಂತರ ಈ ಪೇಪರ್‌ ಮಣ್ಣಿನಲ್ಲಿ ಕರಗಿ ಬೀಜ ಮೊಳಕೆ ಯೊಡೆಯಲು ಆರಂಭಿಸುತ್ತದೆ. ಪ್ರತಿ ದಿನ ನೀರು ಹಾಕುತ್ತಿರಬೇಕು. ಕ್ರಮೇಣ ಮೊಳಕೆಯೊಡೆದ ಬೀಜ ಗಿಡವಾಗಿ ರೂಪು ತಳೆದು ಫಲಭರಿತವಾಗುತ್ತದೆ ಎಂಬುದು ತಂಡದ ಯೋಜನೆ.

ತರಕಾರಿ ಬೀಜಗಳು
ಈ ಬಾರಿ ತರಕಾರಿ ಬೀಜಗಳನ್ನೇ ಬಾವುಟದಲ್ಲಿ ಇಡಲಾಗಿದೆ. ಟೊಮೇ ಟೊ, ಬೆಂಡೆ, ಸೌತೆ ಮತ್ತು ಹರಿವೆ ಬೀಜಗಳನ್ನು ಬಾವುಟದೊಳಗಿಟ್ಟು ಬಾವುಟ ತಯಾರಿಸಲಾಗಿದೆ. ಈ ಬೀಜಗಳು ಬಹುಬೇಗನೆ ಮೊಳಕೆಯೊಡೆಯುವುದರಿಂದ ಮಕ್ಕಳಿಗೂ ಇಷ್ಟವಾಗಬಹುದು ಎನ್ನುವ ಉದ್ದೇಶ ತಂಡದ್ದು.

ಪ್ಲಾಸ್ಟಿಕ್‌ ತ್ಯಜಿಸಿ ಪರಿಸರ ಉಳಿಸಿ
ರಸ್ತೆ ಬದಿಗಳಲ್ಲಿ, ಕೆಲ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ ಬಾವುಟಗಳನ್ನು ಮಾರಾಟ ಮಾಡುವುದರಿಂದ ಅದು ರಸ್ತೆಯಲ್ಲಿ ಬಿದ್ದು ಅಥವಾ ಕಸದ ತೊಟ್ಟಿಗಳ ಮೂಲಕ ಭೂಮಿ ಒಡಲನ್ನು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದೆ.

ಇದರಿಂದ ಜೀವಸಂಕುಲದ ಮೇಲೆಯೂ ಪರಿಣಾಮ ಉಂಟಾಗುತ್ತದೆ. ಜೈವಿಕ ಕಾಗದ ಬೀಜ ಬಾವುಟಗಳು ಪರಿಸರಕ್ಕೆ ಉತ್ತಮ ಎಂಬ ಉದ್ದೇಶದಿಂದ ಈ ಬೀಜ ಬಾವುಟ ತಯಾರಿಸಲಾಗಿದೆ.

5 ಶಾಲೆ; 500 ಬೀಜ ಬಾವುಟ ಹಾರಾಟ ಪ್ರಾಯೋಗಿಕವಾಗಿ ಈ ವರ್ಷ ಬೀಜದ ಬಾವುಟಗಳನ್ನು ತಯಾರಿಸಲಾಗಿದ್ದು, ನಗರದ 5 ಶಾಲೆಗಳ ಮಕ್ಕಳಿಗೆ ಗುರುವಾರ ಬಾವುಟಗಳನ್ನು ಉಚಿತವಾಗಿ ನೀಡಲಾಗುತ್ತದೆ. ಉರ್ವ ಕೆನರಾ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಉರ್ವ ಸರಕಾರಿ ಶಾಲೆ, ಡೊಂಗರಕೇರಿ ಕೆನರಾ ಶಾಲೆ, ಕದ್ರಿ ಸರಕಾರಿ ಶಾಲೆಗಳಲ್ಲಿ ನ. 1ರ ಕರ್ನಾಟಕ ರಾಜ್ಯೋತ್ಸವದಂದು ಈ ಬಾವುಟಗಳು ಹಾರಾಡಲಿವೆ. ಈಗಾಗಲೇ 600 ಬಾವುಟಗಳನ್ನು ತಯಾರಿಸಲಾಗಿದ್ದು, ಈ ಪೈಕಿ 500 ಬಾವುಟಗಳನ್ನು ತಲಾ 100ರಂತೆ 5 ಶಾಲೆಗಳಿಗೆ ನೀಡಲಾಗುತ್ತದೆ. ಉಳಿದ 100 ಬಾವುಟಗಳನ್ನು ಮಣ್ಣಗುಡ್ಡೆ ಸಾವಯವ ಸಂತೆಯಲ್ಲಿ ಇಟ್ಟು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗುವುದು ಎನ್ನುತ್ತಾರೆ ತಂಡದ ಸದಸ್ಯರು.

ಪರಿಸರ ಸ್ನೇಹಿ ಆಚರಣೆ
ಪರಿಸರಸ್ನೇಹಿ ರಾಜ್ಯೋತ್ಸವ ಆಚರಿಸುವ ಉದ್ದೇಶದಿಂದ ಬೀಜ ಬಾವುಟಗಳನ್ನು ತಯಾರಿಸಲಾಗಿದೆ. 500 ಬಾವುಟಗಳನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಲಾಗುವುದು. ಮುಂದೆ ಆ. 15ರಂದು ಶಾಲೆ ಗಳಲ್ಲೇ ಬೀಜ ಬಾವುಟ ತಯಾರಿಸುವಂತೆ ಪ್ರೇರೇಪಿಸುವ ಉದ್ದೇಶವಿದೆ.
– ರಾಜೇಶ್‌, ಇಕೋ ಫ್ರೆಂಡ್ಸ್‌
ಗ್ರೂಪ್‌

‡ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Mysore-Somanna

New Train: ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್‌ ರೈಲು: ಕೇಂದ್ರ ಸಚಿವ ಸೋಮಣ್ಣ

Sharana-Patil

Security: ಮಹಿಳಾ ಆರೋಗ್ಯ ಸಿಬ್ಬಂದಿ ಭದ್ರತೆಗೆ ಎಐ ವ್ಯವಸ್ಥೆ: ಸಚಿವ ಶರಣ ಪ್ರಕಾಶ ಪಾಟೀಲ್‌

-Hindu-yuvasene

Ganesh Procession: ಮಂಗಳೂರು ಗಣೇಶೋತ್ಸವ ಸಂಪನ್ನ

Udupi-Vidyesh

Udupi: ಶ್ರೀವಿದ್ಯೇಶತೀರ್ಥರ ಕೃತಿ ಕೃಷ್ಣನಿಗೆ ಅರ್ಪಣೆ ಐತಿಹಾಸಿಕ

Father-Muller

Father Muller: ಔಷಧ ವಿಜ್ಞಾನ ಮಹಾವಿದ್ಯಾಲಯ ಬಿ ಫಾರ್ಮ ಕೋರ್ಸ್‌ಗೆ ಅನುಮತಿ

Kaljiga-1

Film Release: ಬಹುನಿರೀಕ್ಷಿತ “ಕಲ್ಜಿಗ’ ಸಿನೆಮಾ ಬಿಡುಗಡೆ

Kateel

Temple: ಕೊನೆಯ ಶ್ರಾವಣ ಶುಕ್ರವಾರ ಕಟೀಲಿಗೆ ಅಪಾರ ಭಕ್ತರ ಭೇಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

-Hindu-yuvasene

Ganesh Procession: ಮಂಗಳೂರು ಗಣೇಶೋತ್ಸವ ಸಂಪನ್ನ

Father-Muller

Father Muller: ಔಷಧ ವಿಜ್ಞಾನ ಮಹಾವಿದ್ಯಾಲಯ ಬಿ ಫಾರ್ಮ ಕೋರ್ಸ್‌ಗೆ ಅನುಮತಿ

Kateel

Temple: ಕೊನೆಯ ಶ್ರಾವಣ ಶುಕ್ರವಾರ ಕಟೀಲಿಗೆ ಅಪಾರ ಭಕ್ತರ ಭೇಟಿ

11

Bantwal: ಮನೆಯ ಬಾಗಿಲಿನ ಚಿಲಕ ಮುರಿದು 3.54 ಲಕ್ಷ ರೂ. ಮೌಲ್ಯದ ನಗ-ನಗದು ಕಳವು

Mangaluru: ಮೀಸಲಾತಿ ವ್ಯವಸ್ಥೆ ಕುರಿತು ಅಮೆರಿಕದಲ್ಲಿ ರಾಹುಲ್ ಹೇಳಿಕೆಗೆ ಬಿಜೆಪಿ ಖಂಡನೆ

Mangaluru: ಮೀಸಲಾತಿ ವ್ಯವಸ್ಥೆ ಕುರಿತು ಅಮೆರಿಕದಲ್ಲಿ ರಾಹುಲ್ ಹೇಳಿಕೆಗೆ ಬಿಜೆಪಿ ಖಂಡನೆ

MUST WATCH

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

ಹೊಸ ಸೇರ್ಪಡೆ

Mysore-Somanna

New Train: ಶೀಘ್ರವೇ ರಾಜ್ಯಕ್ಕೆ ಮತ್ತೊಂದು ವಂದೇ ಭಾರತ್‌ ರೈಲು: ಕೇಂದ್ರ ಸಚಿವ ಸೋಮಣ್ಣ

Sharana-Patil

Security: ಮಹಿಳಾ ಆರೋಗ್ಯ ಸಿಬ್ಬಂದಿ ಭದ್ರತೆಗೆ ಎಐ ವ್ಯವಸ್ಥೆ: ಸಚಿವ ಶರಣ ಪ್ರಕಾಶ ಪಾಟೀಲ್‌

Katapadi

Katapadi: ಸ್ಟೀಲ್‌ ನಟ್‌ಗಳ‌ ಈಶ ವಿಶ್ವದಾಖಲೆಗೆ

-Hindu-yuvasene

Ganesh Procession: ಮಂಗಳೂರು ಗಣೇಶೋತ್ಸವ ಸಂಪನ್ನ

Udupi-Vidyesh

Udupi: ಶ್ರೀವಿದ್ಯೇಶತೀರ್ಥರ ಕೃತಿ ಕೃಷ್ಣನಿಗೆ ಅರ್ಪಣೆ ಐತಿಹಾಸಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.