ಶ್ರಮದಾನದಡಿ ಮಳೆಕೊಯ್ಲು ಅಳವಡಿಸಿ ಮಾದರಿಯಾದ ಸಿಎಸ್‌ಐ ಚರ್ಚ್‌

ಮನೆ ಮನೆಗೆ ಮಳೆಕೊಯ್ಲು' ಉದಯವಾಣಿ ಅಭಿಯಾನದ ಯಶಸ್ಸು

Team Udayavani, Aug 10, 2019, 12:45 PM IST

10-Naveen-3

ಕಮಲಾಕ್ಷ ಶೆಟ್ಟಿ ಅವರ ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಕೆ ಮಾಡಲಾಗಿದೆ.

ಮಹಾನಗರ: ‘ಉದಯವಾಣಿ’ಯ ‘ಮನೆಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಣೆಗೊಂಡ ಇನ್ನಷ್ಟು ಮಂದಿ ತಮ್ಮ ಮನೆಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ. ಮನೆ, ಸಂಘ ಸಂಸ್ಥೆಗಳು ಮಾತ್ರವಲ್ಲದೆ, ಧಾರ್ಮಿಕ ಕೇಂದ್ರಗಳಲ್ಲಿಯೂ ಮಳೆಕೊಯ್ಲು ಮೂಲಕ ನೀರುಳಿತಾಯಕ್ಕೆ ಧನಾತ್ಮಕ ಹೆಜ್ಜೆ ಇಡುತ್ತಿರುವುದು ಜೀವಜಲದ ಉಳಿತಾಯಕ್ಕೆ ಹೊಸ ಮುನ್ನುಡಿಯಾಗಿದೆ.

ಎಂಆರ್‌ಪಿಎಲ್ ಉದ್ಯೋಗಿ ಅಶೋಕ್‌ಕುಮಾರ್‌ ಹೆಗ್ಡೆ ಅವರು ಕಾರ್ಕಳ ಕಡ್ತಲ ಗ್ರಾಮದಲ್ಲಿರುವ ತಮ್ಮ ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ.

ಛಾವಣಿ ನೀರು ಬಾವಿಗೆ
ಮೂಡುಬಿದಿರೆಯ ಬಡಗ ಮಿಜಾರ್‌ ಮರಕಡ ಕ್ರಾಸ್‌ ನಿವಾಸಿ ಕಮಲಾಕ್ಷ ಶೆಟ್ಟಿ ಅವರ ಮನೆಯ ಬಾವಿಗೆ ಮಳೆಕೊಯ್ಲು ಅಳವಡಿಕೆ ಮಾಡಲಾಗಿದೆ.

ಅಂದಾಜು 12 ಸಾವಿರ ರೂ. ವೆಚ್ಚದಲ್ಲಿ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಛಾವಣಿ ನೀರನ್ನು ಪೈಪ್‌ ಮುಖಾಂತರ ಟ್ಯಾಂಕ್‌ಗೆಬಿಟ್ಟು ಶುದ್ಧೀಕೃತ ನೀರನ್ನು ಬಾವಿಗೆ ಬೀಳುವಂತೆ ನೋಡಿಕೊಳ್ಳಲಾಗಿದೆ. ಕಮಲಾಕ್ಷ ಅವರಿಂದ ಪ್ರೇರಣೆಗೊಂಡು ಪಕ್ಕದ ಮನೆಯವರೂ ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ.

‘ಉದಯವಾಣಿ’ ಮಳೆಕೊಯ್ಲು ಬಗ್ಗೆ ಪ್ರಕಟಿಸುತ್ತಿರುವ ಮಾಹಿತಿಯುಕ್ತ ಲೇಖನಗಳಿಂದ ಪ್ರೇರಿತನಾಗಿ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಂಡಿದ್ದೇನೆ. ಭವಿಷ್ಯದಲ್ಲಿ ನೀರಿನ ಸಮಸ್ಯೆ ಉಂಟಾಗದು ಎಂಬ ಭರವಸೆ ಇದೆ ಎನ್ನುತ್ತಾರೆ ಕಮಲಾಕ್ಷ ಶೆಟ್ಟಿ.

ಸಿಎಸ್‌ಐ ಚರ್ಚ್‌ನಲ್ಲಿ ಜಲ ಸಂರಕ್ಷಣೆ

ಈ ಬೇಸಗೆಯಲ್ಲಿ ಉಂಟಾದ ನೀರಿನ ಬವಣೆ ಮುಂದಿನ ದಿನಗಳಲ್ಲಿ ಆಗದಿರಲಿ ಎಂಬ ಸದಾಶಯದೊಂದಿಗೆ ಬೊಕ್ಕಪಟ್ಣದ ಸಿಎಸ್‌ಐ ವಿಶ್ರಾಂತಿ ದೇವಾಲಯದ ಸದಸ್ಯರು ದೇವಾಲಯದ ಆವರಣದಲ್ಲಿರುವ ಬಾವಿಗೆ ಮಳೆಕೊಯ್ಲು ಅಳವಡಿಸಿದ್ದಾರೆ. ಸ್ಯಾಮುವೆಲ್ ಜಾನ್‌ ಲೀ ಕರ್ಕಡ, ಜೋಶಿ ಜನಾಸ್‌, ಜೋಯಲ್ ಕರ್ಕಡ, ಸಂದೀಪ್‌ ಕೈರನ್ನ ಅವರು ಶ್ರಮದಾನದ ಮೂಲಕ ಒಂದು ವಾರದಲ್ಲಿ ಮಳೆಕೊಯ್ಲು ಅಳವಡಿಕೆ ಮಾಡಿದ್ದಾರೆ. ಸಭಾ ಪಾಲಕರಾದ ರೆ| ವಿಲಿಯಂ ಕುಂದರ್‌, ಗೊಡ್ವಿನ್‌ ಕಾರ್ಯಪ್ಪ ಅವರ ಪ್ರೋತ್ಸಾಹ ಮತ್ತು ಉತ್ಸಾಹಿ ಕುಟುಂಬಗಳ ಧನಸಹಾಯ ನೀಡಿರುವುದರಿಂದ ಇದು ಸಾಧ್ಯವಾಗಿದೆ. ‘ಉದಯವಾಣಿ ಮಳೆಕೊಯ್ಲು ಅಭಿಯಾನವೇ ನಮಗೆ ಪ್ರೇರಣೆಯಾಯಿತು’ ಎಂದು ಸಿಎಸ್‌ಐ ವಿಶ್ರಾಂತಿ ಸಭೆಯ ಸದಸ್ಯರು ತಿಳಿಸಿದ್ದಾರೆ.

ಸಿಎಸ್‌ಐ ಚರ್ಚ್‌ನಲ್ಲಿ ಜಲ ಸಂರಕ್ಷಣೆ
ಈ ಬೇಸಗೆಯಲ್ಲಿ ಉಂಟಾದ ನೀರಿನ ಬವಣೆ ಮುಂದಿನ ದಿನಗಳಲ್ಲಿ ಆಗದಿರಲಿ ಎಂಬ ಸದಾಶಯದೊಂದಿಗೆ ಬೊಕ್ಕಪಟ್ಣದ ಸಿಎಸ್‌ಐ ವಿಶ್ರಾಂತಿ ದೇವಾಲಯದ ಸದಸ್ಯರು ದೇವಾಲಯದ ಆವರಣದಲ್ಲಿರುವ ಬಾವಿಗೆ ಮಳೆಕೊಯ್ಲು ಅಳವಡಿಸಿದ್ದಾರೆ. ಸ್ಯಾಮುವೆಲ್ ಜಾನ್‌ ಲೀ ಕರ್ಕಡ, ಜೋಶಿ ಜನಾಸ್‌, ಜೋಯಲ್ ಕರ್ಕಡ, ಸಂದೀಪ್‌ ಕೈರನ್ನ ಅವರು ಶ್ರಮದಾನದ ಮೂಲಕ ಒಂದು ವಾರದಲ್ಲಿ ಮಳೆಕೊಯ್ಲು ಅಳವಡಿಕೆ ಮಾಡಿದ್ದಾರೆ. ಸಭಾ ಪಾಲಕರಾದ ರೆ| ವಿಲಿಯಂ ಕುಂದರ್‌, ಗೊಡ್ವಿನ್‌ ಕಾರ್ಯಪ್ಪ ಅವರ ಪ್ರೋತ್ಸಾಹ ಮತ್ತು ಉತ್ಸಾಹಿ ಕುಟುಂಬಗಳ ಧನಸಹಾಯ ನೀಡಿರುವುದರಿಂದ ಇದು ಸಾಧ್ಯವಾಗಿದೆ. ‘ಉದಯವಾಣಿ ಮಳೆಕೊಯ್ಲು ಅಭಿಯಾನವೇ ನಮಗೆ ಪ್ರೇರಣೆಯಾಯಿತು’ ಎಂದು ಸಿಎಸ್‌ಐ ವಿಶ್ರಾಂತಿ ಸಭೆಯ ಸದಸ್ಯರು ತಿಳಿಸಿದ್ದಾರೆ.

ಅಭಿಯಾನವೇ ಪ್ರೇರಣೆ

ಉದಯವಾಣಿ ಸುದಿನದ ಮನೆ ಮನೆಗೆ ಮಳೆಕೊಯ್ಲು ಅಭಿಯಾನ ಯಶಸ್ಸು ಕಂಡಿದ್ದು, ಇದರಿಂದ ಪ್ರೇರಿತರಾಗಿ ಹೆಚ್ಚಿನ ಮಂದಿ ತಮ್ಮ ಮನೆಯಲ್ಲಿ ಮಳೆಕೊಯ್ಲು ಅಳವಡಿಸಿದ್ದಾರೆ.ಇದಕ್ಕೆ ಸರಕಾರ ಕೂಡ ಪ್ರೋತ್ಸಾಹ ನೀಡಬೇಕಿದೆ. ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಬಾವಿಗೂ ಮಳೆಕೊಯ್ಲು ಅಳವಡಿಸಬೇಕು. ನಾವು ಕೂಡ ಮಳೆಕೊಯ್ಲು ಅಳವಡಿಸಿದ್ದು ನಮಗೆ ‘ಉದಯವಾಣಿ’ ಅಭಿಯಾನವೇ ಪ್ರೇರಣೆ.
ಮೇಘನಾ ಆಚಾರ್ಯ,ವಾಮಂಜೂರು 

ಟಾಪ್ ನ್ಯೂಸ್

Basanagowda-Yatnal

BJP: ಕೇಂದ್ರ ಶಿಸ್ತು ಸಮಿತಿ ನೋಟಿಸ್​​ಗೆ ಉತ್ತರ ಕೊಟ್ಟ ಶಾಸಕ ಬಸನಗೌಡ ಯತ್ನಾಳ್‌

Yadagiri: ವಿದ್ಯಾರ್ಥಿಗಳಿಂದ ಚರಂಡಿ ಸ್ವಚ್ಛತೆ: ಆಕ್ರೋಶ

Yadagiri: ವಿದ್ಯಾರ್ಥಿಗಳಿಂದ ಚರಂಡಿ ಸ್ವಚ್ಛತೆ: ಆಕ್ರೋಶ

14-uv-fusion

Bhagavad Gita: ಪ್ರಜಾಪ್ರಭುತ್ವ ಸಂಪೂರ್ಣ ಸಾಕಾರಗೊಳ್ಳಲು ಪ್ರತಿಯೊಬ್ಬನಿಗೂ ಭಗವದ್ಗೀತೆ

13-uv-fusion

UV Fusion: ತೆರೆಯಲು ಬಯಸದ ಮನದ ಪುಟ!

Mangaluru: ಮಗುವಿನ ಗಂಟಲಲ್ಲಿ ಸಿಲುಕಿದ್ದ ಕ್ಯಾಂಡಿ ಹೊರತೆಗೆದ ವೈದ್ಯರು

Mangaluru: ಮಗುವಿನ ಗಂಟಲಲ್ಲಿ ಸಿಲುಕಿದ್ದ ಕ್ಯಾಂಡಿ ಹೊರತೆಗೆದ ವೈದ್ಯರು

Precautionary measures to prevent load shedding this time: Minister K.J. George

Electricity: ಈ ಬಾರಿ ಲೋಡ್‌ ಶೆಡ್ಡಿಂಗ್‌ ಆಗದಂತೆ ಮುಂಜಾಗೃತಾ ಕ್ರಮ: ಸಚಿವ ಕೆ.ಜೆ. ಜಾರ್ಜ್

Belagavi: Massive explosion of gelatin stick in stone quarry

Belagavi: ಕಲ್ಲಿನ ಕ್ವಾರಿಯಲ್ಲಿ ಜಿಲೆಟಿನ್ ಕಡ್ಡಿ ಭಾರೀ ಪ್ರಮಾಣದ ಸ್ಪೋಟ; ಆತಂಕದಲ್ಲಿ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಮಗುವಿನ ಗಂಟಲಲ್ಲಿ ಸಿಲುಕಿದ್ದ ಕ್ಯಾಂಡಿ ಹೊರತೆಗೆದ ವೈದ್ಯರು

Mangaluru: ಮಗುವಿನ ಗಂಟಲಲ್ಲಿ ಸಿಲುಕಿದ್ದ ಕ್ಯಾಂಡಿ ಹೊರತೆಗೆದ ವೈದ್ಯರು

7

Surathkal: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಬಾಗಿಲು ತಟ್ಟಿದ ಡ್ರೈನೇಜ್‌ ಸೌಲಭ್ಯ ವಂಚಿತರು

4

Mangaluru: ಶ್ರೀದೇವಿಯ ಉಯ್ಯಾಲೆಗೆ ಧಾನ್ಯ ಅಲಂಕಾರ!

Udupi-Kasaragod: ಪರ್ಯಾಯ ಮಾರ್ಗ ಮೂಲಕ ಅನುಷ್ಠಾನಕ್ಕೆ ಒತ್ತಾಯಿಸಿ ಫೆ.20ರಂದು ಬೃಹತ್‌ ಜಾಥಾ

Udupi-Kasaragod: ಪರ್ಯಾಯ ಮಾರ್ಗ ಮೂಲಕ ಅನುಷ್ಠಾನಕ್ಕೆ ಒತ್ತಾಯಿಸಿ ಫೆ.20ರಂದು ಬೃಹತ್‌ ಜಾಥಾ

Mangaluru ಬಲ್ಮಠ: ಮನೆಯಿಂದ ಕಳವು; ಪ್ರಕರಣ ದಾಖಲು

Mangaluru ಬಲ್ಮಠ: ಮನೆಯಿಂದ ಕಳವು; ಪ್ರಕರಣ ದಾಖಲು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Basanagowda-Yatnal

BJP: ಕೇಂದ್ರ ಶಿಸ್ತು ಸಮಿತಿ ನೋಟಿಸ್​​ಗೆ ಉತ್ತರ ಕೊಟ್ಟ ಶಾಸಕ ಬಸನಗೌಡ ಯತ್ನಾಳ್‌

15-yellapur

Yellapur: ಕಂದಕಕ್ಕೆ ಬಿದ್ದ ಸರಕು ತುಂಬಿದ ಲಾರಿ; ಚಾಲಕ ಹಾಗೂ ನಿರ್ವಾಹಕ ಪಾರು

Manipal: ಫೆ.21, 22ರಂದು 6 ನೇ ರಾಷ್ಟ್ರೀಯ ಸಮ್ಮೇಳನ

Manipal: ಮಾಹೆ; ಆಧುನಿಕ ಗ್ರಂಥಾಲಯಗಳ ನಿರ್ವಹಣೆ: ಫೆ. 21, 22: 6ನೇ ರಾಷ್ಟ್ರೀಯ ಸಮ್ಮೇಳನ

Yadagiri: ವಿದ್ಯಾರ್ಥಿಗಳಿಂದ ಚರಂಡಿ ಸ್ವಚ್ಛತೆ: ಆಕ್ರೋಶ

Yadagiri: ವಿದ್ಯಾರ್ಥಿಗಳಿಂದ ಚರಂಡಿ ಸ್ವಚ್ಛತೆ: ಆಕ್ರೋಶ

14-uv-fusion

Bhagavad Gita: ಪ್ರಜಾಪ್ರಭುತ್ವ ಸಂಪೂರ್ಣ ಸಾಕಾರಗೊಳ್ಳಲು ಪ್ರತಿಯೊಬ್ಬನಿಗೂ ಭಗವದ್ಗೀತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.