ಅಡ್ಡ ಬಂದ ಬೈಕ್‌ ಸವಾರನ ಮೇಲೆ ಕಾರು ಹತ್ತಿಸಿ ಹತ್ಯೆ ಯತ್ನ; ಮೂವರ ವಿರುದ್ದ ಪ್ರಕರಣ ದಾಖಲು

ಕಾರಿನ ಬಾನೆಟ್‌ ಹಿಡಿದುಕೊಂಡು 200 ಮೀಟರ್‌ ದೂರ ನೇತಾಡಿದ ಬೈಕ್‌ಸವಾರ ; ಮಲ್ಲೇಶ್ವರದ ಬಳಿ ಅಮಾನವೀಯ ಘಟನೆ

Team Udayavani, Jan 30, 2025, 8:28 AM IST

2-bng

ಬೆಂಗಳೂರು: ಕಾರಿಗೆ ಅಡ್ಡ ಬಂದಿದ್ದಕ್ಕೆ ಚಾಲಕ ಸೇರಿ ಮೂವರು ಬೈಕ್‌ ಸವಾರನಿಗೆ ನಡು ರಸ್ತೆಯಲ್ಲಿ ಅಮಾನವೀಯವಾಗಿ ಹಲ್ಲೆ ನಡೆಸಿ, ಕಾರಿನಿಂದ ಗುದ್ದಿ ಹತ್ಯೆಗೆ ಯತ್ನಿಸಿರುವ ಘಟನೆ ಸುಬ್ರಹ್ಮಣ್ಯನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮಲ್ಲೇಶ್ವರದ ಮಿಲ್ಕ್ ಕಾಲೋನಿ ನಿವಾಸಿ ಎನ್‌. ಭರತ್‌ (25) ಹಲ್ಲೆಗೊಳಗಾದವರು.

ಜನವರಿ 8ರ ತಡರಾತ್ರಿ ಸುಮಾರು 1.30ಕ್ಕೆ ಮಲ್ಲೇಶ್ವರದ 17ನೇ ಅಡ್ಡರಸ್ತೆಯ ಜಿಯೋ ಮೆಸ್ಟ್ರಿ ಗ್ಯಾಸ್ಟ್ರೋ ಪಬ್‌ ಎದುರು ಘಟನೆ ನಡೆದಿದೆ. ಆರೋಪಿಯ ಕಾರು ನಂಬರ್‌ ಪತ್ತೆಯಾಗಿದ್ದು, ಸದ್ಯದಲ್ಲೇ ಆರೋಪಿಗಳ ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದರು.

ಏನಿದು ಘಟನೆ?: ಕೋರಮಂಗಲದ ಖಾಸಗಿ ಕಂಪನಿ ಯಲ್ಲಿ ಕೆಲಸ ಮಾಡುತ್ತಿರುವ ದೂರುದಾರ ಭರತ್‌, ಜ.7ರ ತಡರಾತ್ರಿ ಕೆಲಸ ಮುಗಿಸಿಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಸ್ನೇಹಿತನನ್ನು ವಿಜಯನಗರಕ್ಕೆ ಡ್ರಾಪ್‌ ಮಾಡಿ ಬಳಿಕ ಮನೆ ಕಡೆಗೆ ಬರುತ್ತಿದ್ದರು. ಮಲ್ಲೇಶ್ವರದ 17ನೇ ಕ್ರಾಸ್‌ನಲ್ಲಿ ಮನೆಗೆ ತೆರಳಲು ದ್ವಿಚಕ್ರ ವಾಹನ ತಿರುವು ಪಡೆಯುವಾಗ ವೈಟ್‌ ಹಾರ್ಸ್‌ ಪಬ್‌ ಕಡೆಯಿಂದ ಕಾರೊಂದು ಬಂದಿದ್ದು, ದ್ವಿಚಕ್ರ ವಾಹನಕ್ಕೆ ಅಡ್ಡ ನಿಲ್ಲಿಸಿದ್ದಾರೆ.

ಬಳಿಕ ಬಳಿಕ ಕಾರು ಚಾಲಕ ಹಾಗೂ ಆತನ ಇಬ್ಬರು ಸಚಹರರು ಕಾರಿನಿಂದ ಕೆಳಗೆ ಇಳಿದು ಏಕಾಏಕಿ ಭರತ್‌ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಕಾರನ್ನು ಭರತ್‌ ಮೇಲೆ ಚಲಾಯಿಸಲು ಪ್ರಯತ್ನಿಸಿದ್ದಾರೆ. ಈ ವೇಳೆ ಕಾರಿನ ಬಾನೆಟ್‌ ಹಿಡಿದ ಭರತ್‌, ಸುಮಾರು 200 ಮೀಟರ್‌ ನೇತಾಡಿ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ತೋಳು, ತಲೆ, ಬೆನ್ನಿಗೆ ರಕ್ತಗಾಯವಾಗಿದೆ. ಬಳಿಕ ದುಷ್ಕರ್ಮಿಗಳು ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಸದ್ಯ ಗಾಯಾಳು ಭರತ್‌ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದರು.

 ಆಗಿದ್ದೇನು?

 ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಭರತ್‌

 ಇದೇ ವೇಳೆ ಕಾರಿನಲ್ಲಿ ಬರುತ್ತಿದ್ದ ಚಾಲಕ ಹಾಗೂ ಇಬ್ಬರು ಸ್ನೇಹಿತರು.

 ಮಲ್ಲೇಶ್ವರದ ಬಳಿ ತಿರುವಿನಲ್ಲಿ ದಿಢೀರ್‌ ಬಂದ ಭರತ್‌

 ಕಾರು ನಿಲ್ಲಿಸಿ ಬೈಕ್‌ ಅಡ್ಡಗಟ್ಟಿದ ಚಾಲಕ, ಇಬ್ಬರು ಸಹಚರರು

 ಕಾರಿನಿಂದ ಮೂವರು ಇಳಿದು ಏಕಾಏಕಿ ಭರತ್‌ ಮೇಲೆ ತೀವ್ರ ಹಲ್ಲೆ

 ಬಳಿಕ ಭರತ್‌ ಮೇಲೆಯೇ ಕಾರು ಹರಿಸಲು ಯತ್ನಿಸಿದ ಚಾಲಕ

 ಕಾರಿನ ಬಾನೆಟ್‌ ಹಿಡಿದುಕೊಂಡು ನೇತಾಡಿದ ಸಂತ್ರಸ್ತ ಯುವಕ

 ಬಾನೆಟ್‌ ಮೇಲೆಯೇ 200 ಮೀಟರ್‌ ಉದ್ದಕ್ಕೆ ಹೋಗಿ ಕೆಳಗಿ ಬಿದ್ದ ಭರತ್‌

 ಯುವಕನಿಗೆ ಗಂಭೀರ ಗಾಯ, ಪ್ರಾಣಾಪಾಯದಿಂದ ಪಾರು

ಟಾಪ್ ನ್ಯೂಸ್

Padubidri: ರಿಕ್ಷಾ, ಬೈಕ್‌ಗಳ ಮಧ್ಯೆ ಅಪಘಾತ: ಬೈಕ್‌ ಸವಾರನ ಮೂಳೆ ಮುರಿತ

Padubidri: ರಿಕ್ಷಾ, ಬೈಕ್‌ಗಳ ಮಧ್ಯೆ ಅಪಘಾತ: ಬೈಕ್‌ ಸವಾರನ ಮೂಳೆ ಮುರಿತ

Augusta scam broker Michael granted bail after 6 years in custody

Augusta scam: 6 ವರ್ಷಗಳ ಕಸ್ಟಡಿ ಬಳಿಕ ಅಗಸ್ಟಾ ಹಗರಣ ದಲ್ಲಾಳಿ ಮೈಕೆಲ್‌ಗೆ ಜಾಮೀನು

Belthangady ಮುಂಡಾಜೆ ಕಾಣಿಕೆ ಡಬ್ಬಿಯಿಂದ ಹಣ ಕಳ್ಳತನ

Belthangady ಮುಂಡಾಜೆ ಕಾಣಿಕೆ ಡಬ್ಬಿಯಿಂದ ಹಣ ಕಳ್ಳತನ

TTD-Donate

TTD: ತಿರುಪತಿ ದೇಗುಲದ ಉಚಿತ ಅನ್ನಪ್ರಸಾದ ಟ್ರಸ್ಟ್‌ಗೆ ಮುಂಬೈ ವ್ಯಕ್ತಿ 11ಕೋಟಿ ರೂ.ದೇಣಿಗೆ!

Udupi: ಲಾರಿಗೆ ಸ್ಕೂಟರ್‌ ಢಿಕ್ಕಿ: ಸವಾರ ಸಾವು

Udupi: ಲಾರಿಗೆ ಸ್ಕೂಟರ್‌ ಢಿಕ್ಕಿ: ಸವಾರ ಸಾವು

Bidar: A man from Chillargi village who was on his way to the Kumbh Mela passed away in road accident!

Bidar: ರಸ್ತೆ ಅಪಘಾತದಲ್ಲಿ ಕುಂಭಮೇಳಕ್ಕೆ ತೆರಳುತ್ತಿದ್ದ ಚಿಲ್ಲರ್ಗಿ ಗ್ರಾಮದ ವ್ಯಕ್ತಿ ಸಾವು!

Bird flu outbreak: Ban on transportation of poultry and products from Udgir

Bidar: ಹಕ್ಕಿ ಜ್ವರ ಹೆಚ್ಚಳ: ಉದಗಿರನಿಂದ ಕೋಳಿ, ಉತ್ಪನ್ನಗಳ ಸಾಗಾಟಕ್ಕೆ ನಿಷೇಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cauvery water: ಕಾವೇರಿ ನೀರು ಬಳಸಿ ಕಾರು ತೊಳೆದರೆ ಹುಷಾರ್‌: ಬೀಳುತ್ತೆ 5000 ರೂ. ದಂಡ!

Cauvery water: ಕಾವೇರಿ ನೀರು ಬಳಸಿ ಕಾರು ತೊಳೆದರೆ ಹುಷಾರ್‌: ಬೀಳುತ್ತೆ 5000 ರೂ. ದಂಡ!

Fraud: ಟ್ರಾಯ್‌, ಸಿಬಿಐ ತಂಡದ ಹೆಸರಿನಲ್ಲಿ 42.85 ಲಕ್ಷ ರೂ. ವಂಚನೆ: ಕೇಸ್‌ ದಾಖಲು

Fraud: ಟ್ರಾಯ್‌, ಸಿಬಿಐ ತಂಡದ ಹೆಸರಿನಲ್ಲಿ 42.85 ಲಕ್ಷ ರೂ. ವಂಚನೆ: ಕೇಸ್‌ ದಾಖಲು

Namma Metro: ದರ ಗಣನೀಯ ಹೆಚ್ಚಳದ ಬೆನ್ನಲ್ಲೇ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿತ

Namma Metro: ದರ ಗಣನೀಯ ಹೆಚ್ಚಳದ ಬೆನ್ನಲ್ಲೇ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕುಸಿತ

Fraud Case: ಐಶ್ವರ್ಯಗೌಡ ವಿರುದ್ಧದ ಕೇಸ್‌ಗೆ ಇ.ಡಿ. ಎಂಟ್ರಿ

Fraud Case: ಐಶ್ವರ್ಯಗೌಡ ವಿರುದ್ಧದ ಕೇಸ್‌ಗೆ ಇ.ಡಿ. ಎಂಟ್ರಿ

Bengaluru: ಬುದ್ಧಿವಾದ ಹೇಳಿದ್ದಕ್ಕೆ ತಂದೆಯನ್ನೇ ಕೊಂದ ಪುತ್ರ!

Bengaluru: ಬುದ್ಧಿವಾದ ಹೇಳಿದ್ದಕ್ಕೆ ತಂದೆಯನ್ನೇ ಕೊಂದ ಪುತ್ರ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Sullia ಬಸ್‌ ಅಪಘಾತ ಪ್ರಕರಣ: ಚಾಲಕನಿಗೆ ಶಿಕ್ಷೆ

Sullia ಬಸ್‌ ಅಪಘಾತ ಪ್ರಕರಣ: ಚಾಲಕನಿಗೆ ಶಿಕ್ಷೆ

Kumbh stampede: Ashutosh sinha protest against the government

Kumbh stampede: ಸರ್ಕಾರದ ವಿರುದ್ಧ “ಅಸ್ಥಿ ಕುಡಿಕೆ’ ಪ್ರತಿಭಟನೆ

Road Mishap ಸ್ಕೂಟಿಗೆ ಗೂಡ್ಸ್‌ ರಿಕ್ಷಾ ಢಿಕ್ಕಿ; ಸವಾರ ಸಾವು

Road Mishap ಸ್ಕೂಟಿಗೆ ಗೂಡ್ಸ್‌ ರಿಕ್ಷಾ ಢಿಕ್ಕಿ; ಸವಾರ ಸಾವು

Padubidri: ರಿಕ್ಷಾ, ಬೈಕ್‌ಗಳ ಮಧ್ಯೆ ಅಪಘಾತ: ಬೈಕ್‌ ಸವಾರನ ಮೂಳೆ ಮುರಿತ

Padubidri: ರಿಕ್ಷಾ, ಬೈಕ್‌ಗಳ ಮಧ್ಯೆ ಅಪಘಾತ: ಬೈಕ್‌ ಸವಾರನ ಮೂಳೆ ಮುರಿತ

Augusta scam broker Michael granted bail after 6 years in custody

Augusta scam: 6 ವರ್ಷಗಳ ಕಸ್ಟಡಿ ಬಳಿಕ ಅಗಸ್ಟಾ ಹಗರಣ ದಲ್ಲಾಳಿ ಮೈಕೆಲ್‌ಗೆ ಜಾಮೀನು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.