Bengaluru: ಹೂಡಿಕೆಯಲ್ಲಿ ಹಣ ದ್ವಿಗುಣ ಆಮಿಷ ತೋರಿಸಿ 35.35 ಲಕ್ಷ ರೂ. ವಂಚನೆ
ಬ್ಯಾಂಕ್ ಖಾತೆ ತೆರೆಯಲು ಕಮಿಷನ್ ಪಡೆಯುತ್ತಿದ್ದ ಮೂವರ ಬಂಧನ
Team Udayavani, Oct 19, 2024, 3:17 PM IST
ಬೆಂಗಳೂರು: ಅಂತಾರಾಜ್ಯ ವ್ಯಕ್ತಿಗಳ ಜೊತೆಗೆ ಸೇರಿಕೊಂಡು ಹವಾಲ ದಂಧೆಯಲ್ಲಿ ಭಾಗಿಯಾಗಿದ್ದ ಮೂವರನ್ನು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹುಬ್ಬಳಿ ಮೂಲದ ಅಮನ್, ಅಹಮದಾಬಾದ್ ಮೂಲದ ಗುರು ಬಾಯ್, ಭರತ್ ಬಾಯಿ ಬಂಧಿತರು.
ಎಚ್ಎಸ್ಆರ್ ಲೇಔಟ್ನ ವೆಂಕಟಾಪುರದ ವ್ಯಕ್ತಿ ಯೊಬ್ಬರನ್ನು ವಾಟ್ಸಆ್ಯಪ್ ಮೂಲಕ ಸಂಪರ್ಕಿಸಿದ ಆರೋಪಿಗಳು, ಗಣೇಶ ಗ್ರೀನ್ ಭಾರತ್ ಲಿ. ಐಪಿಒ ಎಂಬ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ಹಣ ದ್ವಿಗುಣ ವಾಗಿ ಹೆಚ್ಚಿನ ಹಣ ಸಂಪಾದಿಸಬಹುದೆಂದು ಆಮಿಷವೊಡ್ಡಿದ್ದರು.
ನಂತರ ಹಂತ ಹಂತವಾಗಿ 35.35 ಲಕ್ಷ ರೂ. ಅನ್ನು ವಿವಿಧ ಬ್ಯಾಂಕ್ಗಳಿಗೆ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದರು. ಈ ಬಗ್ಗೆ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸಿಇಎನ್ ಠಾಣೆ ಪೊಲೀಸರ ತನಿಖೆ ವೇಳೆ ದೂರುದಾರರಿಂದ ದೇಶದ ವಿವಿಧ ರಾಜ್ಯಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ಕಂಡು ಬಂದಿತ್ತು. ಆ ಹಣವನ್ನು ವಿತ್ ಡ್ರಾ ಮಾಡಿದ ಇಬ್ಬರುವ ಆರೋಪಿಗಳನ್ನು ಹೈದರಾಬಾದ್ ನಲ್ಲಿ ವಶಕ್ಕೆ ಪಡೆದಿದ್ದಾರೆ.
ಆ ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ, ಒಬ್ಬನ ಸಹೋದರ ದುಬೈನಲ್ಲಿ ವಾಸವಾಗಿದ್ದು, ಆತನು ಆರೋಪಿಗಳಿಬ್ಬರ ಜೊತೆ ಸೇರಿಕೊಂಡು ವಿವಿಧ ಬ್ಯಾಂಕ್ಗಳಲ್ಲಿ ಖಾತೆಗಳನ್ನು ತೆರೆಸಿರುವುದು ಗೊತ್ತಾಗಿದೆ. ನಂತರ ಆರೋಪಿಗಳು ದೂರುದಾರರಿಗೆ ಆಮಿಷವೊಡ್ಡಿ ವಿವಿಧ ಖಾತೆಗಳಿಗೆ ಹಣ ಸಂದಾಯ ಮಾಡಿಸಿದ್ದರು. ಈ ರೀತಿ ಸಂದಾಯ ಮಾಡಿದ ಹಣವನ್ನು ಈ ಮೂವರು ವ್ಯಕ್ತಿಗಳ ಮೂಲಕ ಡ್ರಾ ಮಾಡಿಸಿ, ನಂತರ ಹವಾಲ ಮೂಲಕ ದುಬೈನಲ್ಲಿ ಹಣ ಪಡೆದುಕೊಳ್ಳುತ್ತಿದ್ದ ವಿಚಾರ ತನಿಖೆಯಲ್ಲಿ ಕಂಡು ಬಂದಿದೆ.
ಶೇ.3ರಷ್ಟು ಹಣ ಹವಾಲ ಏಜೆಂಟರಿಗೆ
ಇತರೆ ವಿವಿಧ ಬ್ಯಾಂಕ್ ಖಾತೆಗಳ ಕೆವೈಸಿ ಹಾಗೂ ತಾಂತ್ರಿಕ ಮಾಹಿತಿಯನ್ನು ಸಂಗ್ರಹಿಸಿ ಪರಿಶೀಲಿಸಿ ದಾಗ ಹುಬ್ಬಳ್ಳಿ ಮೂಲದ ವ್ಯಕ್ತಿ ಇದರಲ್ಲಿ ಭಾಗಿ ಯಾಗಿರುವುದು ಗೊತ್ತಾಗಿತ್ತು. ನಂತರ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಆ ವೇಳೆ ಈ ರೀತಿ ಕಳುಹಿಸುತ್ತಿದ್ದ ಹಣಕ್ಕೆ ಶೇ.3ರಷ್ಟು ಹಣವನ್ನು ಅಹಮದಾಬಾದ್ನಲ್ಲಿರುವ ವ್ಯಕ್ತಿಯು ಹವಾಲಾ ಏಜೆಂಟರಿಗೆ ಕಳುಹಿಸುತ್ತಿದ್ದ. ನಂತರ ಸ್ನೇಹಿತರೊಂದಿಗೆ ಬ್ಯಾಂಕ್ಗಳಿಗೆ ಭೇಟಿ ನೀಡಿ ಚೆಕ್ ಮೂಲಕ ಹಣವನ್ನು ವಿತ್ ಡ್ರಾ ಮಾಡಿಕೊಂಡಿರುತ್ತಾರೆ. ಎಟಿಎಂಗಳಲ್ಲಿಯೂ ಸಹ ಹಣ ವಿತ್ ಡ್ರಾ ಮಾಡಿಕೊಳ್ಳುತ್ತಿದ್ದರು. ಎಟಿಎಂ ಕಾರ್ಡ್ ನ ಮಿತಿ ಮುಗಿದಾಗ ಸ್ಥಳೀಯ ಪೆಟ್ರೋಲ್ ಬಂಕ್ ಗಳಲ್ಲಿ ಎಟಿಎಂ ಕಾರ್ಡ್ ಬಳಸಿ ಕೊಂಡು ಹಣ ಪಡೆದು ಮಾಲಿಕರಿಗೆ ಶೇ.3 ರಷ್ಟು ಕಮಿಷನ್ ನೀಡುತ್ತಿದ್ದ ಸಂಗತಿಯೂ ಹೊರ ಬಿದ್ದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna Biological Park: ಬನ್ನೇರುಘಟ್ಟಕ್ಕೆ ಬಿಹಾರದಿಂದ ಅತಿಥಿಗಳು!
Bengaluru: ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಆರೋಪಿ ಪಶ್ಚಿಮ ಬಂಗಾಳದಲ್ಲಿ ಬಂಧನ
Bengaluru: ಸಾಕ್ಷಿದಾರರಿಗೆ ಜೈಲಿನಿಂದ ಬೆದರಿಕೆ: ಜೈಲು ಅಧೀಕ್ಷಕರ ವಿರುದ್ದ ತನಿಖೆ
Bengaluru: ಅಂಚೆ ಮೂಲಕ ತರಿಸಿದ್ದ 21 ಕೋಟಿ ರೂ. ಡ್ರಗ್ಸ್ ಜಪ್ತಿ
Bengaluru: ಸೊಸೈಟಿ ಮಹಾಮಂಡಲದಲ್ಲಿ 19.3 ಕೋಟಿ ಅಕ್ರಮ
MUST WATCH
ಹೊಸ ಸೇರ್ಪಡೆ
ಮಂಗಳೂರು:ಮಂದಾರದ ಬದುಕು ಕಸಿದ ಪ್ಲಾಸ್ಟಿಕ್ ಪರ್ವತ…ಈ ಸ್ಥಿತಿಗೆ ಪ್ಲಾಸ್ಟಿಕ್ ನೇರ ಕಾರಣ!
Drone target; ಉಗ್ರರಿಂದ ಇಸ್ರೇಲ್ ಪ್ರಧಾನಿ ನೆತನ್ಯಾಹು ಟಾರ್ಗೆಟ್: ನಿವಾಸದ ಬಳಿ ಸ್ಫೋ*ಟ
Jammu & Kashmir ಜನರ ಮುಖದಲ್ಲಿ ಮತ್ತೆ ನಗು ಕಾಣಬೇಕು: ಸಿಎಂ ಒಮರ್ ಅಬ್ದುಲ್ಲಾ
BBK11: ಅಪ್ಪನಿಗೆ ಹುಟ್ಟಿದರೆ ಎನ್ನುವ ಮಾತು.. ಮಾನಸ, ಚೈತ್ರಾಗೆ ಕಿಚ್ಚನಿಂದ ತರಾಟೆ
Devaru Ruju Madidanu Movie ಸುನಿ ಸಿನಿಮಾದ ನಾಯಕಿಯರಿವರು..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.