Bengaluru: ಕಾರ್ಖಾನೆ ಕಾರ್ಮಿಕನ ಹತ್ಯೆ ಮಾಡಿದ್ದ ನಾಲ್ವರ ಬಂಧನ
ಯುವತಿಗೆ ನಿಂದಿಸಿದ್ದಕ್ಕೆ ಹತ್ಯೆಗೈದಿದ್ದ ಆರೋಪಿಗಳು
Team Udayavani, Aug 24, 2024, 3:51 PM IST
ಬೆಂಗಳೂರು: ಯುವತಿಗೆ ನಿಂದಿಸಿದ್ದಕ್ಕೆ ಕಾರ್ಖಾ ನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ಹತ್ಯೆ ಮಾಡಿ ತಲೆಮರೆಸಿ ಕೊಂಡಿದ್ದ ನಾಲ್ವರನ್ನು ಕಾಟನ್ ಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಜೈಭೀಮ್ ನಗರದ ಮನೋಜ್, ದೊರೆಸ್ವಾಮಿ ನಗರದ ನಿರಂಜನ್, ರಾಮಕೃಷ್ಣ ಸೇವಾನಗರದ ನವೀನ್ ಹಾಗೂ ಎ.ಶರತ್ ಬಂಧಿತರು.
ಕೆ.ಪಿ.ಅಗ್ರಹಾರದ ಮಾರ್ಕಂಡೇ ಶ್ವರ ನಗರದ ನಿವಾಸಿ ಶರತ್ ಕುಮಾರ್ ಕೊಲೆಯಾದವ. ಗುರುವಾರ ಬೆಳಗ್ಗೆ ಅಂಜನಪ್ಪ ಗಾರ್ಡನ್ನಲ್ಲಿ ನೆಲೆಸಿದ್ದ ಶರತ್ ಅವರ ಪರಿಚಯಸ್ಥರೊಬ್ಬರು ಮೃತಪಟ್ಟಿದ್ದರು. ಅವರ ಅಂತಿಮ ದರ್ಶನ ಪಡೆಯಲು ಶರತ್ ಬಂದಿದ್ದರು. ಅಂತಿಮ ದರ್ಶನದ ವೇಳೆ ಶರತ್ ಅವರು ಅಲ್ಲಿದ್ದ ಯುವತಿಯೊಬ್ಬಳಿಗೆ ನಿಂದಿಸಿದ್ದರು. ಆ ಯುವತಿ ತನ್ನ ಸ್ನೇಹಿತರಾದ ಆರೋಪಿಗಳಿಗೆ ಈ ವಿಷಯ ತಿಳಿಸಿದ್ದಳು.
ಇದರಿಂದ ಆಕ್ರೋಶಗೊಂಡ ಆರೋಪಿ ಗಳು ಶರತ್ ಅವರನ್ನು ಅಡ್ಡಗಟ್ಟಿ ಕೊಲೆ ಮಾಡಿದ್ದರು. ನಿಂದನೆಗೊಳಗಾಗಿದ್ದ ಯುವತಿ ತಲೆಮರೆಸಿ ಕೊಂಡಿದ್ದು, ಆಕೆಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪ್ರೇಯಸಿಯ ಪೀಡಿಸುತ್ತಿದ್ದವನಿಗೆ ಪ್ರಿಯಕರನಿಂದ ಚಾಕು ಇರಿತ!
Bengaluru: ಮೆಜೆಸ್ಟಿಕ್ ಬಳಿ ಬಿಎಂಟಿಸಿ ಬಸ್ ಡಿಕ್ಕಿ; ಅಂಗವಿಕಲ ಸ್ಥಳದಲ್ಲೇ ಸಾವು
Bengaluru: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮತ್ತೆ 9 ಮೊಬೈಲ್ ಫೋನ್ಗಳು ಪತ್ತೆ!
Leopard: ಎಲೆಕ್ಟ್ರಾನಿಕ್ ಸಿಟಿ ಎನ್ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ
Anekal: ಶಾಲಾ ಬಸ್ ಅಡ್ಡಗಟ್ಟಿ ಚಾಲಕನಿಗೆ ತೀವ್ರ ಹಲ್ಲೆ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.