Bengaluru: ಲವ್‌ ಬ್ಲ್ಯಾಕ್‌ಮೇಲ್‌: ವಿದ್ಯಾರ್ಥಿನಿ ಬಳಿ 15 ಲಕ್ಷ ಚಿನ್ನಾಭರಣ ಸುಲಿಗೆ

ಪ್ರಿಯಕರ ಜತೆಗಿನ ಖಾಸಗಿ ವಿಡಿಯೋ ವೈರಲ್‌ ಮಾಡುವುದಾಗಿ ಆರೋಪಿ ಬೆದರಿಕೆ

Team Udayavani, Aug 24, 2024, 2:22 PM IST

9-bng

ಬೆಂಗಳೂರು: ಪ್ರಿಯಕರನೊಂದಿಗಿನ ಖಾಸಗಿ ವಿಡಿಯೋ ವೈರಲ್‌ ಮಾಡುವುದಾಗಿ ಬ್ಲ್ಯಾಕ್‌ ಮೇಲ್‌ ಮಾಡಿ ಯುವತಿಯಿಂದ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲಪಟಾಯಿಸಿದ್ದ ಯುವಕನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರ್‌.ಟಿ. ನಗರದ ಹರ್ಫಾತ್‌ ಬಂಧಿತ ಆರೋಪಿ. ಈತನಿಂದ 15 ಲಕ್ಷ ರೂ. ಮೌಲ್ಯದ 264 ಗ್ರಾಂ. ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಜಯನಗರದ ನಿವಾಸಿ ಜ್ಯುವೆಲ್ಲರಿ ಅಂಗಡಿ ಮಾಲೀಕರೊಬ್ಬರ ಪುತ್ರಿ ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದಳು. ಇತ್ತೀಚೆಗೆ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿದ್ದಳು. ಕಾಲೇಜಿನಲ್ಲಿ ಓದುತ್ತಿದ್ದಾಗ ಡ್ಯಾನಿಶ್‌ ಎಂಬುವನೊಂದಿಗೆ ಯುವತಿ ಸ್ನೇಹ ಬೆಳೆಸಿಕೊಂಡಿದ್ದಳು. ಇವರಿಬ್ಬರಿಗೂ ಆರೋಪಿ ಹರ್ಫಾತ್‌ ಸ್ನೇಹಿತನಾಗಿದ್ದ. ಕೆಲ ದಿನಗಳ ಹಿಂದೆ ಯುವತಿ ಹಾಗೂ ಸ್ನೇಹಿತ ಡ್ಯಾನಿಶ್‌ ಇಬ್ಬರೂ ಆರೋಪಿಯಿಂದ ಅಂತರ ಕಾಯ್ದುಕೊಂಡಿದ್ದರು.

ಚಿನ್ನಕ್ಕಾಗಿ ಬ್ಲ್ಯಾಕ್‌ ಮೇಲ್‌: ಇತ್ತ ಹರ್ಫಾತ್‌ ಯುವತಿಗೆ ಕರೆ ಮಾಡಿ ಡ್ಯಾನಿಶ್‌ ಜೊತೆಗಿನ ಖಾಸಗಿ ವಿಡಿಯೋ ಹಾಗೂ ಫೋಟೋ ಇರುವುದಾಗಿ ಸುಳ್ಳು ಹೇಳಿ ಬೆದರಿಸಿದ್ದ. ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿ ವೈರಲ್‌ ಮಾಡುವುದಾಗಿ ಬೆದರಿಸಿದ್ದ. ಆತನ ಒತ್ತಡಕ್ಕೆ ಮಣಿದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಹಂತ-ಹಂತವಾಗಿ ಆತನಿಗೆ ಕೊಟ್ಟಿದ್ದಳು. ಇತ್ತ ಮನೆಯಲ್ಲಿ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣವು ಕಳವಾಗಿರುವುದನ್ನು ಗಮನಿಸಿದ ಜ್ಯುವೆಲ್ಲರ್‌ ಮಾಲಿಕರು ಈ ಕುರಿತು ತಮ್ಮ ಮಗಳನ್ನು ಪ್ರಶ್ನಿಸಿದ್ದರು. ಆಗ ಆಕೆ ಗೊಂದಲದ ಮಾತುಗಳನ್ನು ಆಡಿದ್ದಳು. ಸ್ನೇಹಿತರೊಂದಿಗೆ ಸೇರಿ ಮನೆಯಲ್ಲಿ ಮಗಳು ಚಿನ್ನಾಭರಣ ಕಳವು ಮಾಡಿರುವುದಾಗಿ ಜ್ಯುವೆಲ್ಲರಿ ಮಾಲಿಕರು ತನ್ನ ಮಗಳ ಮೇಲೆಯೇ ಅನುಮಾನ ವ್ಯಕ್ತಪಡಿಸಿ ಜಯನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಬಳಿಕೆ ಆಕೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯಾಂಶ ಹೊರ ಬಂದಿದೆ.

ಕೂಡಲೇ ಆರ್‌.ಟಿ.ನಗರದಲ್ಲಿದ್ದ ಆರೋಪಿ ಹರ್ಫಾತ್‌ನನ್ನು ವಶಕ್ಕೆ ಪಡೆದ ಪೊಲೀಸರು ಚಿನ್ನಾಭರಣದ ಬಗ್ಗೆ ಪ್ರಶ್ನಿಸಿದಾಗ ಚಿನ್ನದ ಅಂಗಡಿಯೊಂದರಲ್ಲಿ ಅಡವಿಟ್ಟಿರುವುದಾಗಿ ಹೇಳಿದ್ದ. ಆ ಅಂಗಡಿಯಿಂದ 15 ಲಕ್ಷ ರೂ. ಮೌಲ್ಯದ ಚಿನ್ನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಯುವತಿಯ ಖಾಸಗಿ ವಿಡಿಯೋ ಇರುವುದಾಗಿ ಸುಳ್ಳು ಹೇಳಿರುವುದು ತನಿಖೆಯಲ್ಲಿ ಗೊತ್ತಾಗಿದೆ.

 

 

ಟಾಪ್ ನ್ಯೂಸ್

Temple-kota

Form a New committee: 103 ಎ ದರ್ಜೆ ದೇಗುಲಗಳಿಗಿಲ್ಲ ವ್ಯವಸ್ಥಾಪನ ಸಮಿತಿ

Darshan, ಸುದೀಪ್‌ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು

Darshan, ಸುದೀಪ್‌ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು

TAX ಸಮಪಾಲು ಕೊಡಿ: ಕೇಂದ್ರಕ್ಕೆ ಆಗ್ರಹ; ತೆರಿಗೆ ಪಾಲನ್ನು ಶೇ. 50ಕ್ಕೆ ಏರಿಸಲು ಒತ್ತಾಯ

TAX ಸಮಪಾಲು ಕೊಡಿ: ಕೇಂದ್ರಕ್ಕೆ ಆಗ್ರಹ; ತೆರಿಗೆ ಪಾಲನ್ನು ಶೇ. 50ಕ್ಕೆ ಏರಿಸಲು ಒತ್ತಾಯ

Mescom

Mescom: ವಿದ್ಯುತ್‌ ಬಾಕಿ ಉಳಿಸಿಕೊಂಡಿರುವ ಸರಕಾರಿ ಸಂಸ್ಥೆಗಳು

Pocso

Uppinangady: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು

1-horoscope

Daily Horoscope: ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ, ಶುಭಫಲಗಳೇ ಅಧಿಕ

Nagamangala Case: ಗಣೇಶ ವಿಸರ್ಜನೆ ವೇಳೆ 6 ಅಂಗಡಿ ಭಸ್ಮ,7 ಬೈಕ್‌ ಹಾನಿ,1 ಕಾರು ಜಖಂ

Nagamangala Case: ಗಣೇಶ ವಿಸರ್ಜನೆ ವೇಳೆ 6 ಅಂಗಡಿ ಭಸ್ಮ,7 ಬೈಕ್‌ ಹಾನಿ,1 ಕಾರು ಜಖಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Bengaluru: ಚಕ್ರದಡಿ ಮಲಗಿದ್ದ ವ್ಯಕ್ತಿ ಮೇಲೆ ಬಸ್‌ ಹತ್ತಿಸಿದ ಚಾಲಕ

4

Fraud: ಜಿಎಸ್ಟಿ ಅಧಿಕಾರಿಗಳಿಂದ ಉದ್ಯಮಿ ಕಿಡ್ನ್ಯಾಪ್, ಸುಲಿಗೆ

3

Bengaluru: ನಮ್ಮಲ್ಲೇ ಔಷಧ ಖರೀದಿಸಿ ಎಂದು ಡಿಸಿಪಿಗೆ ಧಮ್ಕಿ; ಸಿಬ್ಬಂದಿ ವಿರುದ್ಧ ಕೇಸ್‌

Bengaluru: ಗಣಪತಿ ಮೂರ್ತಿ ವಿಸರ್ಜನೆ ವೇಳೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

Bengaluru: ಗಣಪತಿ ಮೂರ್ತಿ ವಿಸರ್ಜನೆ ವೇಳೆ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

Bengaluru-CM-Visit

Bengaluru: ನಗರ ಸುತ್ತಿ ಆಡಳಿತ ವ್ಯವಸ್ಥೆಗೆ ಬಿಸಿ ಮುಟ್ಟಿಸಿದ ಸಿಎಂ ಸಿದ್ದರಾಮಯ್ಯ

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

Temple-kota

Form a New committee: 103 ಎ ದರ್ಜೆ ದೇಗುಲಗಳಿಗಿಲ್ಲ ವ್ಯವಸ್ಥಾಪನ ಸಮಿತಿ

Darshan, ಸುದೀಪ್‌ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು

Darshan, ಸುದೀಪ್‌ ಹಾಡಿಗಾಗಿ ವಾಗ್ವಾದ, ಗಣೇಶ ಮೂರ್ತಿ ವಿಸರ್ಜನೆ ಮೊಟಕು

TAX ಸಮಪಾಲು ಕೊಡಿ: ಕೇಂದ್ರಕ್ಕೆ ಆಗ್ರಹ; ತೆರಿಗೆ ಪಾಲನ್ನು ಶೇ. 50ಕ್ಕೆ ಏರಿಸಲು ಒತ್ತಾಯ

TAX ಸಮಪಾಲು ಕೊಡಿ: ಕೇಂದ್ರಕ್ಕೆ ಆಗ್ರಹ; ತೆರಿಗೆ ಪಾಲನ್ನು ಶೇ. 50ಕ್ಕೆ ಏರಿಸಲು ಒತ್ತಾಯ

Mescom

Mescom: ವಿದ್ಯುತ್‌ ಬಾಕಿ ಉಳಿಸಿಕೊಂಡಿರುವ ಸರಕಾರಿ ಸಂಸ್ಥೆಗಳು

Pocso

Uppinangady: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.