Fire Crackers: ಕೆಂಪು ಪಟಾಕಿ ಮಾರಾಟಕ್ಕೆ ಬಿದ್ದಿಲ್ಲ ಲಗಾಮು!

ಹಸಿರು ಪಟಾಕಿ ಗುರುತಿಸುವುದೇ ಗ್ರಾಹಕರಿಗೆ ಗೊಂದಲ; ನಿಷೇಧಿತ ಕೆಂಪು ಪಟಾಕಿ ತುಂಬಿದ ಬಾಕ್ಸ್‌ಗೆ ಹಸಿರು ಪಟಾಕಿ ಲೇಬಲ್‌

Team Udayavani, Nov 11, 2023, 8:18 AM IST

2-fire-crackers

ಬೆಂಗಳೂರು: ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಕೆಂಪು ಪಟಾಕಿ ನಿಷೇಧಿಸಿದ್ದರೂ ಇದರ ಮಾರಾಟಕ್ಕೆ ಸಂಪೂರ್ಣ ಲಗಾಮು ಬಿದ್ದಿಲ್ಲ. ಹಸಿರು ಹಾಗೂ ಕೆಂಪು ಪಟಾಕಿ ಯಾವುದು ಎಂಬುದನ್ನು ತಿಳಿದುಕೊಳ್ಳುವ ಬಗ್ಗೆ ಸಾರ್ವಜನಿಕರು ಗೊಂದಲಕ್ಕೀಡಾಗಿದ್ದಾರೆ. ಇದನ್ನು ಅರಿತಿರುವ ಪಟಾಕಿ ಮಾರಾಟಗಾರರು ಕೆಂಪು ಪಟಾಕಿ ಬಾಕ್ಸ್‌ಗಳ ಮೇಲೆ ಹಸಿರು ಪಟಾಕಿ ಲೇಬಲ್‌ ಅಂಟಿಸಿ ಮಾರಾಟಕ್ಕೆ ಮುಂದಾಗಿರುವ ಗಂಭೀರ ಆರೋಪ ಕೇಳಿ ಬಂದಿದೆ….!

ಕರ್ನಾಟಕದಲ್ಲಿ ಪಟಾಕಿ ಉತ್ಪಾದನಾ ಕೇಂದ್ರವಿಲ್ಲ. ತಮಿಳುನಾಡಿನ ವಿವಿಧ ಭಾಗಗಳಿಂದ ಕರ್ನಾಟಕಕ್ಕೆ ಪಟಾಕಿಗಳು ಪೂರೈಕೆಯಾಗುತ್ತಿವೆ. ಆದರೆ, ಪಟಾಕಿ ಖರೀದಿಸಿ ಸಿಡಿಸಿದಾಗ ಅದರಿಂದ ಉತ್ಪತ್ತಿಯಾಗುವ ಹೊಗೆಯಿಂದ ಇದು ಹಸಿರು ಪಟಾಕಿ ಎಂಬುದನ್ನು ನಿರ್ಧರಿಸುವುದು ಕಷ್ಟಸಾಧ್ಯ. ಕೆಂಪು ಪಟಾಕಿಗೆ ಹೋಲಿಸಿದರೆ ಬೆಳಕು, ಶಬ್ಧಗಳಲ್ಲಿ ಹಸಿರು ಪಟಾಕಿಗೆ ಯಾವುದೇ ವ್ಯತ್ಯಾಸವಿಲ್ಲ. ಹೀಗಾಗಿ, ಸಾರ್ವಜನಿಕರು ಈ ಬಗ್ಗೆ ತಲೆಕೆಡಿಸಿಕೊಂಡಂತಿಲ್ಲ.

ಮತ್ತೂಂದೆಡೆ ವ್ಯಾಪಾರಿಗಳು ಹೊರ ರಾಜ್ಯಗಳಿಂದ ಹಾಗೂ ಸ್ಥಳೀಯವಾಗಿ ತಯಾರಿಸಿದ ಮಾಮೂಲಿ ಪಟಾಕಿಗಳನ್ನೇ ಸಂಗ್ರಹಿಸಿಟ್ಟಿದ್ದಾರೆ. ಜನರು ಖರೀದಿಗೆ ಹೋದಾಗ ಎಲ್ಲವೂ ಹಸಿರು ಪಟಾಕಿ ಎಂದು ಹೇಳುತ್ತಾ ಮಾರಾಟ ಮಾಡುತ್ತಿದ್ದಾರೆ. ಹಸಿರು ಪಟಾಕಿಯ ಬಗ್ಗೆ ಇರುವ ಗೊಂದಲವನ್ನು ನಿವಾರಿಸಬೇಕಾಗಿದೆ.

ಹಸಿರು ಪಟಾಕಿಯಿಂದ ಮಾಲಿನ್ಯ ನಿಯಂತ್ರಣ ಸಾಧ್ಯವೇ?:

ಹಸಿರು ಪಟಾಕಿಯಲ್ಲಿ ಇಂತಿಷ್ಟೇ ರಾಸಾಯನಿಕ ಬಳಸಬೇಕು ಎಂದು ಎಲ್ಲೂ ಸರ್ಕಾರವು ಸೂಚಿಸಿಲ್ಲ. ಕೆಂಪು ಪಟಾಕಿಗಳಿಗೆ ಹೋಲಿ ಸಿದರೆ, ಹಸಿರು ಪಟಾಕಿ ಗಳಲ್ಲಿ ರಾಸಾಯನಿಕದ ಪ್ರಮಾಣ ಕಡಿಮೆ ಇರುತ್ತದೆ ಎನ್ನುತ್ತಾರೆ. ಆದರೆ, ಕೆಂಪು ಪಟಾಕಿಗಳನ್ನೇ ಬಾಕ್ಸ್‌ಗಳಲ್ಲಿ ತುಂಬಿ ಬಾಕ್ಸ್‌ ಮೇಲೆ ಹಸಿರು ಪಟಾಕಿ ಎಂದು ಸ್ಟಿಕ್ಕರ್‌ ಅಂಟಿಸಿರುವ ಹಲವು ಪ್ರಕರಣಗಳು ಪ್ರತಿ ವರ್ಷ ಬೆಳಕಿಗೆ ಬರುತ್ತವೆ. ಸಾರ್ವಜನಿಕರು ಸ್ಟಿಕ್ಕರ್‌ ನೋಡಿ ಹಸಿರು ಪಟಾಕಿಯೇ ಇರಬಹುದು ಎಂದು ಭಾವಿಸಿ ಖರೀದಿಸುತ್ತಾರೆ.

ಜೊತೆಗೆ ಹಸಿರು ಪಟಾಕಿಗೂ ಅಪಾಯಕಾರಿ ರಾಸಾಯನಿಕ ಬಳಸಲೇಬೇಕು. ಹೀಗಾಗಿ ಹಸಿರು ಪಟಾಕಿಗಳಿಂದ ಮಾಲಿನ್ಯ ನಿಯಂತ್ರಿಸುವುದು ಸಾಧ್ಯವೇ ಎಂಬ ಪ್ರಶ್ನೆ ಮೂಡುತ್ತದೆ ಎನ್ನುತ್ತಾರೆ ಪರಿಸರ ತಜ್ಞ ಡಾ.ಎ.ಎನ್‌.ಯಲ್ಲಪ್ಪ ರೆಡ್ಡಿ.

ಹಸಿರು ಪಟಾಕಿ ಪತ್ತೆಹಚ್ಚುವುದು ಹೇಗೆ?:

ಹಸಿರು ಪಟಾಕಿ ಪ್ಯಾಕ್‌ಗಳ ಮೇಲೆ ವೈಜ್ಞಾನಿಕ ಹಾಗೂ ಕೈಗಾರಿಕಾ ಸಂಶೋಧನಾ ಸಮಿತಿ, ರಾಷ್ಟ್ರೀಯ ಪರಿಸರ ಹಾಗೂ ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆ, ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯ ಹಸಿರು ಲೋಗೋ ಇರುತ್ತದೆ.

ಅದರ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಕೂಡ ಇರಲಿದೆ. ಗ್ರಾಹಕರು ಆ್ಯಂಡ್ರಾಯ್ಡ್ ಮೊಬೈಲ್‌ಗ‌ಳ ಪ್ಲೇಸ್ಟೋರ್‌ ನಿಂದ ಸಿಎಸ್‌ಐಆರ್‌, ನೀಲಿ ಗ್ರೀನ್‌ ಕ್ಯೂಆರ್‌ ಕೋಡ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ಪಟಾಕಿ ಪ್ಯಾಕ್‌ಗಳ ಮೇಲಿರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದಾಗ ಅದರಲ್ಲಿ ಹಸಿರು ಪಟಾಕಿ ಎಂದು ಬರುತ್ತದೆ. ಪಟಾಕಿ ಪ್ಯಾಕ್‌ಗಳ ಮೇಲೆ ಈ ಲೋಗೋಗಳು, ಕ್ಯೂಆರ್‌ ಕೋಡ್‌ ಇಲ್ಲದಿದ್ದರೆ ಇವುಗಳನ್ನು ಹಸಿರು ಪಟಾಕಿ ಎಂದು ದೃಢಪಡಿಸುವುದು ಕಷ್ಟ.

ಪರವಾನಗಿದಾರರಿಂದ ಪಟಾಕಿ ಖರೀದಿಸಿ:

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಹಾಗೂ ಎನ್‌ಇಇಆರ್‌ಐನ ವಿಜ್ಞಾನಿಗಳು ಹಸಿರು ಪಟಾಕಿ ಅಭಿವೃದ್ಧಿಪಡಿಸಿದ್ದಾರೆ. ಇದರಲ್ಲಿ ಲೀಥಿಯಂ, ಆರ್ಸೆನಿಕ್‌, ಬೇರಿಯಂ ಮತ್ತು ಸತು, ನೈಟ್ರೇಟ್‌ನಂತಹ ಅಪಾಯಕಾರಿ ರಾಸಾಯನಿಕ ಬಳಸುವಂತಿಲ್ಲ. ಇದರ ಉತ್ಪಾದನೆಗೆ ದೇಶದ 230 ಕಂಪನಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಬೀದಿ ಬದಿ ವ್ಯಾಪಾರಿಗಳಿಂದ ಹಸಿರು ಪಟಾಕಿ ಗಳನ್ನು ಖರೀದಿಸುವ ಬದಲು ಪರವಾನಗಿ ಹೊಂದಿರುವ ಮಾರಾಟಗಾರರಿಂದ ಖರೀದಿಸಿದರೆ ಉತ್ತಮ.

ಕಾನೂನು ಸಮರ್ಪಕ ಅನುಷ್ಠಾನ ಇಲ್ಲ

ಸಾರ್ವಜನಿಕರಿಗೆ ಪಟಾಕಿ ಹೊಗೆಯಿಂದ ಉಂಟಾಗುವ ಅನಾನುಕೂಲತೆ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. ಸಂವಿಧಾನದ 48 “ಎ’ ಪ್ರಕಾರ ನಾಡಿನ ನೆಲ, ಜಲ, ಗಾಳಿ, ಪರಿಸರ ಸಂರಕ್ಷಣೆ ಮಾಡುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಹೇಳಲಾಗಿದೆ. ಜೊತೆಗೆ 51 “ಜಿ’ನಲ್ಲಿ ಪ್ರತಿಯೊಬ್ಬ ನಾಗರಿಕರೂ ಪ್ರಾಣವಾಯು, ಜೀವಜಲ, ಮಣ್ಣು ಮಾಲಿನ್ಯ ಮಾಡಬಾರದು ಎಂಬ ನಿಯಮಗಳಿವೆ. ಕಾನೂನು ಸ್ಪಷ್ಟವಾಗಿದ್ದರೂ ಇದನ್ನು ಸಮರ್ಪಕ ಅನುಷ್ಠಾನಕ್ಕೆ ತರುವಲ್ಲಿ ವಿಫ‌ಲವಾಗಿದ್ದೇವೆ ಎನ್ನುತ್ತಾರೆ ಪರಿಸರ ತಜ್ಞರು.

ಕೆಂಪು ಪಟಾಕಿ ಮಾರಾಟ ಪತ್ತೆಯಾದರೆ ಕೆಎಸ್‌ಪಿಸಿಬಿಯ ಪರಿಸರ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಕೆಂಪು ಪಟಾಕಿಯಿಂದ ಪರಿಸರಕ್ಕೆ ಬಹಳಷ್ಟು ಹಾನಿ ಇದೆ. ನಾಗರಿಕರೆಲ್ಲರೂ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಪರಿಸರ ಸ್ನೇಹಿ ದೀಪಾವಳಿ ಆಚರಿಸಬೇಕು. ●ಎಂ.ಜಿ.ಯತೀಶ್‌, ಹಿರಿಯ ಪರಿಸರ ಅಧಿಕಾರಿ, ಕೆಎಸ್‌ಪಿಸಿಬಿ.

-ಅವಿನಾಶ ಮೂಡಂಬಿಕಾನ

ಟಾಪ್ ನ್ಯೂಸ್

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

Jaishankar

Jaishankar; ಭಾರತ-ಪಾಕ್ ಸಂಬಂಧದ ಕುರಿತ ಚರ್ಚೆಗೆ ಇಸ್ಲಾಮಾಬಾದ್‌ಗೆ ಹೋಗುತ್ತಿಲ್ಲ

1-yati

Prophet Hate Speech; ಯತಿ ನರಸಿಂಹಾನಂದ ಸರಸ್ವತಿ ಯುಪಿ ಪೊಲೀಸರ ವಶಕ್ಕೆ

congress

Exit poll results; ಹರಿಯಾಣದಲ್ಲಿ ಕೈಗೆ ಅಧಿಕಾರ, ಜಮ್ಮು ಮತ್ತು ಕಾಶ್ಮೀರ ಅತಂತ್ರ?

CM-Sidda-Raichuru

Manvi: ವಿಪಕ್ಷಗಳ ಬೆದರಿಕೆಗಳಿಗೆ ಜಗ್ಗಲ್ಲ, ಜನರಿಗಾಗಿ ಹೋರಾಟ ಮುಂದುವರಿಸುವೆ: ಸಿದ್ದರಾಮಯ್ಯ

01

ನಾಡೋಜ‌ ಜಿ. ಶಂಕರ್ 69ನೇ ಹುಟ್ಟು ಹಬ್ಬ: ಉಚ್ಚಿಲ‌ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-ksrtc-dasara

Bengaluru: ಕೆಎಸ್‌ಆರ್‌ಟಿಸಿಯಿಂದ ದಸರಾಗೆ 2000 ಹೆಚ್ಚುವರಿ ಬಸ್‌ ಸಂಚಾರ

19-bbmp

Bengaluru: ಆನ್‌ಲೈನ್‌ನಲ್ಲೇ ಆಸ್ತಿ ಇ-ಖಾತಾ ಪಡೆಯಿರಿ

18-wonderla

Bengaluru: ವಂಡರ್‌ಲಾದಲ್ಲಿ 2 ಟಿಕೆಟ್‌ ಖರೀದಿಸಿದರೆ 1 ಟಿಕೆಟ್‌ ಫ್ರೀ

16-bng

Bengaluru: ದಸರಾ ಬೊಂಬೆಗಳ ಹಬ್ಬದಲ್ಲೂ ಅಯೋಧ್ಯಾ ಶ್ರೀ ರಾಮಮಂದಿರ

14-bng

Bengaluru: 5ನೇ ಮಹಡಿಯಿಂದ ಜಿಗಿದು ಮಹಿಳಾ ಟೆಕಿ ಆತ್ಮಹತ್ಯೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

8

Mallika Sherawat: ಮೀಟೂ ವಿವಾದಕ್ಕೆ ನಟಿ ಮಲ್ಲಿಕಾ ಶೆರಾವತ್‌ ಧ್ವನಿ; ಹೀರೋ ಮೇಲೆ ಆರೋಪ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

JDS: ಎಡಿಜಿಪಿ ವಿರುದ್ಧ ಜೆಡಿಎಸ್‌ ಪ್ರತಿಭಟನೆ

1-qweeqw

Shimla: ವಿವಾದಿತ ಮಸೀದಿಯ 3 ಅನಧಿಕೃತ ಮಹಡಿಗಳನ್ನು ಕೆಡವಲು ಆದೇಶ

5

ಅಮೆಜಾನ್‌ನಲ್ಲಿ ಶೀಘ್ರ 14,000 ಉದ್ಯೋಗ ಕಡಿತ: ವರದಿ

4

Dr G Parameshwar: ಸೆನ್‌ ಠಾಣೆಗಳಿಗೂ ಎಸ್ಪಿ ಕೇಡರ್‌: ಗೃಹ ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.