ಒಂಭತ್ತು ಸಾವಿರ ಕಾರ್ನರ್‌ ಸೈಟ್‌ ಡೌಟು?


Team Udayavani, Jun 11, 2020, 5:28 AM IST

niveshana

ಬೆಂಗಳೂರು: ಆರ್ಥಿಕ ಸುಧಾರಣೆಗೆ ಸರ್ಕಾರವು ಬಿಡಿಎ ಮೂಲೆ ನಿವೇಶನ ಹರಾಜಿಗೆ ಮುಂದಾಗಿದ್ದು, ಕೆಲ ಕಾನೂನಿನ ಅಡ್ಡಿ ಎದುರಾಗಿದೆ. ಕೆಲ ನಿವೇಶನ ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯಗಳಿದ್ದು, ಮೂಲೆ ನಿವೇಶನ ಹಗರಣ  ಸಂಬಂಧ ಎಸಿಬಿ ವರದಿ ಸಲ್ಲಿಸಿಲ್ಲ. ಇದರ ನಡುವೆಯೇ ಎಷ್ಟು ಮೂಲೆ ನಿವೇಶನಗಳಿವೆ ಎಂಬ ಪಟ್ಟಿ ಮಾಡಲಾಗುತ್ತಿದ್ದು, ತಿಂಗಳಾಂತ್ಯದೊಳಗೆ ಪಟ್ಟಿ ಸಿದ್ಧವಾಗಲಿದೆ.

ಮೂಲೆ ನಿವೇಶನಗಳು ಎಷ್ಟಿವೆ ಎಂಬುದರ ಬಗ್ಗೆ ಕೆಲ ಗೊಂದಲಗಳಿದ್ದು, ವರದಿ ಸಿದ್ಧಪಡಿಸಿದ ನಂತರ  ಗೊಂದಲಕ್ಕೆ ತೆರೆ ಬೀಳಲಿದೆ. ಆದರೆ, ಸರ್ಕಾರ ನಿರೀಕ್ಷಿಸಿ  ದಷ್ಟು ಅಂದರೆ 8-9 ಸಾವಿರ ಮೂಲೆ ನಿವೇಶನಗಳು ಸಿಗುವುದು ಅನುಮಾನ. ಗೊಂದಲ ಮತ್ತು ಹಗರಣ  ಗಳಿಗೆ ಸಂಬಂಧಪಟ್ಟ  ನಿವೇಶನಗಳನ್ನು ಹೊರತುಪಡಿಸಿ, ಅಬ್ಬಬ್ಟಾ ಎಂದರೆ ಸುಮಾರು ನಾಲ್ಕು ಸಾವಿರ ನಿವೇಶನಗಳು ಸಿಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಎಂಜಿನಿಯರಿಂಗ್‌ ವಿಭಾಗವು ಮಾಹಿತಿ ಕಲೆ ಹಾಕುತ್ತಿದ್ದು, ಬನಶಂಕರಿ 6ನೇ ಹಂತ,  ಅಂಜನಾಪುರ, ವಿಶ್ವೇಶ್ವರ ಲೇಔಟ್‌ ಸೇರಿ ಹೊಸ ಬಡಾವಣೆಗಳಲ್ಲಿ ಮೂಲೆ ನಿವೇಶನ ಸಂಬಂಧ ನ್ಯಾಯಾಲಯದಲ್ಲಿ ವ್ಯಾಜ್ಯಗಳಿಲ್ಲ. ಹಳೇ ಬಡಾವಣೆಗಳಲ್ಲಿನ ಕಾರ್ನರ್‌ ಸೈಟಿಗೆ ಸಂಬಂಧಿಸಿ ಸುಮಾರು 25-30 ವ್ಯಾಜ್ಯಗಳಿರಬಹುದು.  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈವರೆಗೆ 64 ಬಡಾವಣೆಗಳನ್ನು ಅಭಿವೃದ್ಧಿಪಡಿಸಿದ್ದು, ಯಾವ ಬಡಾವಣೆಗಳಲ್ಲಿ ಎಷ್ಟು ಕಾರ್ನರ್‌ ಸೈಟ್‌ ದೊರೆಯಲಿವೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ಸಂಬಂಧಿತ ಎಂಜಿನಿಯರ್‌ಗಳಿಗೆ ತಿಳಿಸಲಾಗಿದೆ.

ನ್ಯಾಯಾಲಯದಲ್ಲಿ ವ್ಯಾಜ್ಯಗಳಿರುವ ಸೈಟ್‌ಗಳನ್ನು ಹೊರತುಪಡಿಸಿ ಉಳಿದವುಗಳ ಪಟ್ಟಿ ಮಾಡಿ ವರದಿ ಸಿದ್ಧಪಡಿಸಲಾಗುವುದು. ಈ ಪ್ರಕ್ರಿಯೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಬಿಡಿಎ ಅಧಿಕಾರಿಯೊಬ್ಬರು  ತಿಳಿಸಿದ್ದಾರೆ.

ಹರಾಜಿಗೆ ಎಸಿಬಿ ತನಿಖೆ ಅಡ್ಡಿ?: ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಮೂಲೆ ನಿವೇಶನ ಮಾರಾಟದ ಅವ್ಯವಹಾರವನ್ನು 2019 ಸೆಪ್ಟೆಂಬರ್‌ನಲ್ಲಿ ಬಿಜೆಪಿ ಸರ್ಕಾರ ಎಸಿಬಿ ತನಿಖೆಗೆ ವಹಿಸಿದೆ. ಎರಡು ತಿಂಗಳಲ್ಲಿ ವರದಿ ನೀಡುವಂತೆ  ತಿಳಿಸಿದ್ದರೂ, ಈವರೆಗೆ ವರದಿ ನೀಡಿಲ್ಲ. ತನಿಖೆ ಅಪೂರ್ಣವಾಗಿದೆ. ಇದರಿಂದ ಕೆಲ ಸೈಟ್‌ಗಳನ್ನು ಹರಾಜು ಮಾಡಲಾಗುತ್ತಿಲ್ಲ. ಜತೆಗೆ ಒಂದಿಷ್ಟು ಸೈಟ್‌ಗಳ ಮಾಲೀಕತ್ವದ ಕುರಿತ ಪ್ರಕರಣಗಳು ಕೋರ್ಟ್‌ನಲ್ಲಿವೆ. ಇಷ್ಟೇ ಸಂಖ್ಯೆಯ  ಸೈಟ್‌ಗಳು ಒತ್ತುವರಿಗೆ ಒಳಗಾಗಿವೆ. ವಸ್ತುಸ್ಥಿತಿ ಹೀಗಿರುವಾಗ ಮುಖ್ಯಮಂತ್ರಿಗಳ ಹೇಳಿಕೆಯನ್ನು ಕಾರ್ಯರೂಪಕ್ಕೆ ತರಲು ಕಷ್ಟ ಎಂಬ ಮಾತು ಕೇಳಿಬರುತ್ತಿವೆ.

ಕಾರ್ನರ್‌ ಸೈಟ್‌ ವಿಭಾಗಿಸಿದ ಹಗರಣ: ಬಿಡಿಎಗೆ ಸೇರಿದ ಕಾರ್ನರ್‌ ಸೈಟ್‌ಗಳು  ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವಂತಹದ್ದು. ಇದರಿಂದಾಗಿ ಇವುಗಳ ಬೆಲೆ ಅಧಿಕವಾಗಿರುತ್ತವೆ. ಇಂತಹ ಸೈಟ್‌ಗಳನ್ನು ಹರಾಜಿನ ಮೂಲಕ ಮಾತ್ರ ಪಡೆಯಲು ಸಾಧ್ಯ. ಕೆಲ ವರ್ಷಗಳಿಂದ ಇಂತಹ ಆಯಕಟ್ಟಿನ  ಜಾಗವನ್ನು ತಮ್ಮದಾಗಿಸಿಕೊಳ್ಳಲು ಪಟ್ಟಭದ್ರರು ಪ್ರಾಧಿಕಾರದ ಸಿಬ್ಬಂದಿ ಜತೆ ಶಾಮೀಲಾಗಿ ಹಗರಣ ಸೃಷ್ಟಿಸಿದ್ದಾರೆ. ಕಾರ್ನರ್‌ ಸೈಟ್‌ ವಿಭಜಿಸಿ ಒಂದು ಭಾಗವನ್ನು ವಾಸದ ನಿವೇಶನಗಳನ್ನಾಗಿಸಿ, ಅವುಗಳನ್ನು ಬದಲಿ ಸೈಟ್‌ ರೂಪದಲ್ಲಿ ಹಂಚಿಕೆ ಮಾಡಲಾಗಿದೆ. ಇದರ ತನಿಖೆ ಈಗಷ್ಟೇ ಪೂರ್ಣಗೊಳ್ಳಬೇಕಿದೆ. ಇವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಷ್ಟು ನಿವೇಶನಗಳಿವೆ ಎಂಬ ಬಗ್ಗೆ ವರದಿ  ನೀಡಬೇಕಿದೆ.

ಹೇಳಿದಷ್ಟು ಸಿಗುವುದು ಕಷ್ಟ!: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ 9 ಸಾವಿರ ಬಿಡಿಎ ನಿವೇಶನಗಳ ಮಾರಾಟದಿಂದ ಸಾವಿರಾರು ಕೋಟಿ ರೂ. ಬರುತ್ತದೆ ಎಂದು ತಿಳಿಸಿದ್ದರು. ಆದರೆ, ಇಷ್ಟೊಂದು  ನಿವೇಶನಗಳು ಸಿಗುವುದು ಕಷ್ಟ ಸಾಧ್ಯ. ಮೂಲಗಳ ಪ್ರಕಾರ ನಾಲ್ಕು ಸಾವಿರ ನಿವೇಶನಗಳು ಸಿಗಲಿವೆ. ಇವುಗಳನ್ನು ಒಂದೇ ಬಾರಿಗೆ ಹರಾಜು ಹಾಕುವುದಿಲ್ಲ. ನೂರು ನೂರು ನಿವೇಶನಗಳಂತೆ ಹರಾಜು ಹಾಕಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಡಿಎ ಬಡಾವಣೆಗಳಲ್ಲಿ ಎಷ್ಟು ಕಾರ್ನರ್‌ ಸೈಟ್‌ಗಳು ಸಿಗಲಿವೆ? ನ್ಯಾಯಾಲಯದಲ್ಲಿ ವ್ಯಾಜ್ಯಗಳು ಎಷ್ಟಿವೆ ಎಂಬ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಕೇಳಿದ್ದೇನೆ. ಶೀಘ್ರ ನೀಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು  ಮುಂದಿನ ಕ್ರಮಕೈಗೊಳ್ಳಲಾಗುವುದು.
-ಡಾ.ಎಚ್‌.ಆರ್‌. ಮಹಾದೇವ್‌, ಬಿಡಿಎ ಆಯುಕ್ತ

* ಮಂಜುನಾಥ ಗಂಗಾವತಿ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.