ಪೊಲೀಸ್ ಪೇದೆಯ 14 ಜನ ಸಂಬಂಧಿಕರು ಕ್ವಾರಂಟೈನ್ಗೆ
Team Udayavani, Jun 3, 2020, 11:16 AM IST
ಸಾಂದರ್ಭಿಕ ಚಿತ್ರ
ಮಲೇಬೆನ್ನೂರು: ದಾವಣಗೆರೆಯ ಪೇದೆಯೊಬ್ಬರಿಗೆ ಕೋವಿಡ್ ಪಾಸಿಟೀವ್ ಬಂದಿದ್ದು, ಅವರು ಮಲೇಬೆನ್ನೂರಿಗೆ ಬಂದು ಹೋಗಿದ್ದರಿಂದ ಪೇದೆಯ ಸಂಬಂಧಿಕರ ಮನೆಯ ಸದಸ್ಯರನ್ನು ಮಂಗಳವಾರ ಕ್ವಾರಂಟೈನ್ ಮಾಡಲಾಗಿದೆ.
ದಾವಣಗೆರೆಯಲ್ಲಿ ಕ್ವಾರಂಟೈನ್ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಯೊಬ್ಬರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಪೇದೆಗೆ ಕೋವಿಡ್ ಪಾಸೀಟೀವ್ ಬಂದಿದೆ. ಮಲೇ ಬೆನ್ನೂರಿನ ಗೌಸ್ ನಗರದಲ್ಲಿರುವ ಅವರ ಅಣ್ಣನ ಮನೆಗೆ ರಂಜಾನ್ ಹಬ್ಬಕ್ಕೆ ಬಂದಿದ್ದರು. ಪೇದೆಯ ಮಗನನ್ನು ಮಲೇಬೆನ್ನೂರಿನ ತನ್ನ ಅಣ್ಣನ ಮನೆಯಲ್ಲಿ ಬಿಟ್ಟಿದ್ದನು. ತನ್ನ ಮಗನ ಹುಟ್ಟುಹಬ್ಬಕ್ಕೆಂದು ಮಲೇಬೆನ್ನೂರಿಗೆ ಬಂದಾಗ ಆತನಿಗೆ ಕೋವಿಡ್ ಪಾಸೀಟೀವ್ ಬಂದಿದೆ ಎಂದು ಲ್ಯಾಬ್ ರಿಪೋರ್ಟ್ ಬಂದಿದೆ. ಪೇದೆ ಮತ್ತು ಮಗ ಸೇರಿದಂತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ಕು ಜನರು ಜಿಲ್ಲಾ ಆಸ್ಪತ್ರೆಯಲ್ಲಿ ಐಸೊಲೇಶನ್ ಮಾಡಲಾಗಿದೆ. ಮಲೇಬೆನ್ನೂರಿನ ಆತನ ಅಣ್ಣನ ಮನೆಯವರ ಮತ್ತು ಪಕ್ಕದ ಮನೆಯವರ ಸದಸ್ಯರನ್ನು ಪೇದೆಯ ದ್ವಿತೀಯ ಸಂಪರ್ಕದಲ್ಲಿದ್ದ 9ಜನ ಮತ್ತು ಐದು ಮಕ್ಕಳು, ಒಬ್ಬಳು ಬಾಣಂತಿ ಮತ್ತು 5 ತಿಂಗಳ ಹಸುಗೂಸು ಸೇರಿದಂತೆ ಒಟ್ಟು 14 ಜನರನ್ನು ಮನೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಮಲೇಬೆನ್ನೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ 7 ಜನರ ಗಂಟಲು ದ್ರವ ಸಂಗ್ರಹಿಸಲಾಗಿದ್ದು, ಉಳಿದ 7 ಜನರ ಗಂಟಲು ದ್ರವ ಸಂಗ್ರಹಿಸಲು ಹರಿಹರದ ಆಸ್ಪತ್ರೆಗೆ 108 ತುರ್ತು ವಾಹನದಲ್ಲಿ ಕಳುಹಿಸಿ ಕೊಡಲಾಗಿದೆ. ಇನ್ನೆರಡು ದಿನಗಳಲ್ಲಿ ವರದಿ ಬರಲಿದೆ.
ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ಉಪ ತಹಶೀಲ್ದಾರ್ ಆರ್. ರವಿ, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಚಂದ್ರಮೋಹನ್, ಪಿಎಸ್ಐ ವೀರಬಸಪ್ಪ ಕುಸಲಾಪುರ್, ವಾರ್ಡ್ ಸದಸ್ಯ ಆರೀಪ್ ಅಲಿ ಅವರು ಪಟ್ಟಣದ ಗೌಸ್ ನಗರದಲ್ಲಿರುವ ಎರಡು ಮನೆಗೆ ಭೇಟಿ ನೀಡಿ ಪರಿಶೀಲಿಸಿ ಅವರಿಗೆ ಧೈರ್ಯ ತುಂಬಿದ್ದಾರೆ. ಎರಡೂ ಮನೆಯ ಮುಂದೆ ಬ್ಯಾರಿಕೇಡ್ಗಳನ್ನು ಹಾಕಿ ಮನೆಯ ಗೋಡೆಗೆ ಕ್ವಾರಂಟೈನ್ ಗೆ ಒಳಪಡಿಸಿದೆ ಎಂಬ ಸೂಚನಾ ಫಲಕ ಹಾಕಿಸಿದ್ದಾರೆ.
ಮನೆಯ ಸದಸ್ಯರಿಗೆ ಯಾವುದಕ್ಕೂ ಮನೆಯಿಂದ ಹೊರಗಡೆ ಬರಬೇಡಿ, ನಿಮಗೆ ಅವಶ್ಯಕ ವಸ್ತುಗಳಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ತಿಳಿಸಿದ್ದಾರೆ. ಪಟ್ಟಣದ ಎಲ್ಲಾ ಬೀದಿಗಳಲ್ಲಿ ಸಂಚರಿಸಿ ಅಂಗಡಿಗಳ ಮಾಲೀಕರು, ಗ್ರಾಹಕರು, ಗ್ರಾಮಸ್ಥರು ಸಂಪೂರ್ಣವಾಗಿ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಜಾಥಾ ಮೂಡಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಧ್ವಜ ಕಟ್ಟುವ ವಿಚಾರಕ್ಕೆ ವಾಗ್ವಾದ: 8 ಜನರ ವಿರುದ್ಧ ದೂರು ದಾಖಲು
ಇನ್ನು ಹತ್ತು ವರ್ಷಗಳಲ್ಲಿ ದಾವಣಗೆರೆ ಐಎಎಸ್ ಹಬ್- ಜಿ.ಬಿ. ವಿನಯ್ ಕುಮಾರ್
Congress ಆಡಳಿತ ವೈಫಲ್ಯ ಮರೆಮಾಚಲು ಮಾನವ ಸರಪಳಿ ಗಿಮಿಕ್: ರೇಣು
Davanagere: ಗಣೇಶ ವಿಸರ್ಜನೆ ವೇಳೆ ಜೆಸಿಬಿ ಹರಿದು ಮಹಿಳೆ ಸೇರಿ 5-6 ಮಂದಿಗೆ ಗಂಭೀರ ಗಾಯ
Davanagere: 80 ಕಿಲೋಮೀಟರ್ ಉದ್ದದ ಮಾನವ ಸರಪಳಿ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.