ಸತತ 3ನೇ ಬಾರಿ ಗದ್ದುಗೆ ಏರಲು ಕಮಲ ತಯಾರಿ­


Team Udayavani, Sep 7, 2021, 1:37 PM IST

scSD

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಿಷನ್‌-60 ಎಂದು ಅಬ್ಬರಿಸಿದ್ದ ಬಿಜೆಪಿ 39ಕ್ಕೆ ನಿಂತಿದೆ, ನಾಯಕತ್ವಕೊರತೆಯ ಕಾಂಗ್ರೆಸ್‌ 33ಕ್ಕೆ ತಲುಪಿದೆ,ಸದ್ದುಗದ್ದಲವೇ ಇಲ್ಲದೆ ಎಐಎಂಐಎಂ3 ಸ್ಥಾನ ಗಳಿಸಿದೆ, ಕಳೆದ ಬಾರಿ 9 ಸ್ಥಾನಹೊಂದಿದ್ದ ಜೆಡಿಎಸ್‌ ಒಂದು ಸ್ಥಾನಕ್ಕಿಳಿದಿದೆ.

ಆಪ್‌ ಶೂನ್ಯ ಸಾಧನೆ ತೋರಿದ್ದು, ಆರು ಕಡೆಪಕ್ಷೇತರರು ಗೆಲುವಿನ ನಗೆ ಬೀರಿದ್ದಾರೆ.ಬಹುಮತಕ್ಕೆ ಮೂರು ಸ್ಥಾನಗಳ ಕೊರತೆಇದ್ದರೂ, ಶಾಸಕರು ಹಾಗೂ ಸಂಸದಮತಗಳಗೊಂದಿಗೆ ಬಿಜೆಪಿ ಸತತ ಮೂರನೇಬಾರಿಗೆ ಅಧಿಕಾರಕ್ಕೇರಲು ಯಾವುದೇ ಅಡ್ಡಿಇಲ್ಲ.

ಪಾಲಿಕೆ ಫಲಿತಾಂಶ ಪಕ್ಷಗಳಿಗೆ ಹಲವುಪಾಠಗಳನ್ನು ಕಲಿಸಿದೆ, ಎಚ್ಚರಿಕೆ ಸಂದೇಶರವಾನಿಸಿದೆ.ಪಾಲಿಕೆ ಚುನಾವಣೆಯಲ್ಲಿ ಟಿಕೆಟ್‌ಹಂಚಿಕೆ ಅಸಮಾಧಾನ, ಪಕ್ಷದೊಳಗಿನಒಳಪೆಟ್ಟುಗಳು ತಮ್ಮದೇ ರೀತಿಯಲ್ಲಿ ಕೆಲಸಮಾಡಿವೆ ಎಂಬುದಕ್ಕೆ ಪಾಲಿಕೆ ಫಲಿತಾಂಶಪುಷ್ಟಿ ನೀಡಿದೆ.

ಆರು ಕಡೆ ಪಕ್ಷೇತರರಗೆಲುವು ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೆಹಲವು ರೀತಿಯ ಸಂದೇಶ ನೀಡಿವೆ. ಟಿಕೆಟ್‌ದೊರೆತಿಲ್ಲ ಎಂದು ಮುನಿಸಿಕೊಂಡುಬಂಡಾಯ ಸಾರಿ ಸ್ಪರ್ಧೆಗಿಳಿದವರಿಗೆಸಿಹಿ-ಕಹಿ ಫಲಿತಾಂಶ ಲಭ್ಯವಾಗಿದೆ. ನಾವುಎಡವಿದ್ದೆಲ್ಲಿ ಎಂದು ಪಕ್ಷಗಳ ನಾಯಕರುಆತ್ಮಾವಲೋಕನಕ್ಕಿಳಿಯುವಂತೆ ಮಾಡಿದೆ.

ಮಿಷನ್‌-60 ನಲವತ್ತಕ್ಕೂ ತಲುಪಲಿಲ್ಲ:ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯೊಂದಿಗೆಮುಂದಡಿ ಇರಿಸಿದ್ದ ಬಿಜೆಪಿ ಮಿಷನ್‌-60ಎಂಬ ಘೋಷಣೆಯೊಂದಿಗೆ ಚುನಾವಣೆಎದುರಿಸಿತ್ತು. ಪಕ್ಷದ ನಾಯಕರು,ಮುಖಂಡರು ಪಕ್ಷ 60ಕ್ಕೂ ಹೆಚ್ಚುಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದೇಹೇಳಿದ್ದರು. ಆದರೆ, ಬಿಜೆಪಿಯವರಆಶಯಕ್ಕೆ ತಕ್ಕಂತೆ ಮತದಾರ ಮನಸ್ಸುಮಾಡಿಲ್ಲ. ಗುಪ್ತಚರ ಇಲಾಖೆ ಪ್ರಕಾರಬಿಜೆಪಿ ಪಾಲಿಕೆಯಲ್ಲಿ 37-38 ಸ್ಥಾನಗಳನ್ನುಗಳಿಸಬಹುದು ಎಂಬುದಾಗಿತ್ತು.

ಪಕ್ಷದ ಕೆಳಹಂತದ ಮುಖಂಡರು ಸಹ 35-40ಸ್ಥಾನಗಳಿಗೆ ತಲುಪಬಹುದು ಎಂಬ ಅನಿಸಿಕೆ ವ್ಯಕ್ತಪಡಿಸುತ್ತಿದ್ದರು.2013ರ ಪಾಲಿಕೆ ಚುನಾವಣೆಯಲ್ಲಿಬಿಜೆಪಿ 45 ಸ್ಥಾನಗಳ ಗೆಲುವು ಖಚಿತಎಂಬ ಅಬ್ಬರದ ಪ್ರಚಾರ ನಡೆಸಿತ್ತಾದರೂಅಂತಿಮವಾಗಿ 33 ಸ್ಥಾನಗಳನ್ನು ಗಳಿಸುವಲ್ಲಿಯಶಸ್ವಿಯಾಗಿತ್ತು.

ಅಲ್ಲಿಗೆ ನಿರೀಕ್ಷೆಗಿಂತ12 ಸ್ಥಾನಗಳ ಕೊರತೆ ಅನುಭವಿಸಿತ್ತು.2021ರಲ್ಲಿಯೂ 60 ಸ್ಥಾನ ಗೆಲ್ಲುತ್ತೇವೆಂದುಹೇಳಿಕೊಳ್ಳುತ್ತಿದ್ದರೂ ನಿರೀಕ್ಷೆಗಿಂತ 21 ಸ್ಥಾನಕಡಿಮೆ ಬಂದಿದೆ.ಬಿಜೆಪಿ ಸ್ಮಾರ್ಟ್‌ಸಿಟಿ ಯೋಜನೆಯಕಾಮಗಾರಿ,ಫ್ಲೆ çಓವರ್‌ನಿರ್ಮಾಣ,ರಸ್ತೆಗಳಅಭಿವೃದ್ಧಿ, ಪ್ರತಿ ಮನೆಗೂ ಕುಡಿಯುವನೀರಿನ ಯೋಜನೆ ಹೀಗೆ ವಿವಿಧ ಅಭಿವೃದ್ಧಿಯೋಜನೆಗಳ ವಿಷಯಗಳನ್ನು ಪ್ರಸ್ತಾಪಿಸಿತ್ತು.

ಪಾಲಿಕೆ ಚುನಾವಣೆ ಘೋಷಣೆ ಹಂತಹಾಗೂ ಮತದಾನಕ್ಕೆ ಕೆಲವೇ ದಿನಗಳುಇವೆ ಎನ್ನುವಾಗಲೇ ಕೆಲವೊಂದುರಸ್ತೆಗಳ ದುರಸ್ತಿ, ಫ್ಲೆ çಓವರ್‌ ನಿರ್ಮಾಣಆರಂಭಿಸುತ್ತೇವೆಂದು ನೆಲ ಅಗೆಯುವಿಕೆಇನ್ನಿತರ ಎಲ್ಲ ಕಾರ್ಯಗಳನ್ನು ಕೈಗೊಂಡಿತ್ತು.ಪಕ್ಷದ ರಾಜ್ಯಾಧ್ಯಕ್ಷ, ಹಲವು ಸಚಿವರು,ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿ,ಪಕ್ಷದ ನಾಯಕರು, ಪದಾಧಿಕಾರಿಗಳು ಮನೆಮನೆ ಪ್ರಚಾರ ಕೈಗೊಂಡಿದ್ದರು.

ಇಷ್ಟೆಲ್ಲ ಸರ್ಕಸ್‌ ನಡುವೆಯೂ ಫಲಿತಾಂಶ ನಿರೀಕ್ಷಿತ ರೀತಿಯಲ್ಲಿ ದೊರೆಯಲಿಲ್ಲಯಾಕೆ ಎಂಬ ಆತ್ಮಾವಲೋಕನಕ್ಕೆ ಬಿಜೆಪಿ ಇಳಿಯಬೇಕಾಗಿದೆ. ಮತ್ತೂಂದೆಡೆಕಾಂಗ್ರೆಸ್‌ ಅಧಿಕಾರ ಹಿಡಿಯದಿದ್ದರೂ ಸ್ಥಾನ ಗಳಿಕೆಯಲ್ಲಿ ನೆಗೆತ ಕಂಡಿರುವುದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ.

ಅಮರೇಗೌಡ ಗೋನವಾ

ಟಾಪ್ ನ್ಯೂಸ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.