1ರಿಂದ ರೈಲುಗಳ ಸಂಚಾರ ವೇಗ ಹೆಚ್ಚಳ -ವೇಳೆ ಪರಿಷ್ಕರಣೆ


Team Udayavani, May 22, 2022, 11:30 AM IST

3

ಹುಬ್ಬಳ್ಳಿ: ನೈಋತ್ಯ ರೈಲ್ವೆ ವಲಯ ಜೂ. 1ರಿಂದ ಕೆಲ ರೈಲುಗಳ ವೇಗವೃದ್ಧಿ ಮತ್ತು ವೇಳೆ ಪರಿಷ್ಕರಣೆ ಮಾಡಲು ನಿರ್ಧರಿಸಿದೆ. ಬೆಂಗಳೂರು-ಕಾರವಾರ ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ (16595) ರೈಲು ಸಂಜೆ 6:40ರ ಬದಲು 6:50 ಗಂಟೆಗೆ ಬೆಂಗಳೂರಿನಿಂದ ಹೊರಡಲಿದೆ. ಅದೇ ರೀತಿ ಕಾರವಾರ-ಬೆಂಗಳೂರು (16596) ರೈಲು ಬೆಳಗ್ಗೆ 8ರ ಬದಲು 7:15 ಗಂಟೆಗೆ ಬೆಂಗಳೂರು ತಲುಪಲಿದೆ. ಹಾಸನ-ಕಾರವಾರ-ಹಾಸನ ನಡುವೆ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಬೆಂಗಳೂರು-ಕನ್ನೂರ ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ (16511) ರೈಲು ರಾತ್ರಿ 9:30ರ ಬದಲು 9:35 ಗಂಟೆಗೆ ಬೆಂಗಳೂರಿನಿಂದ ಹೊರಡಲಿದೆ. ಅದೇ ರೀತಿ ಕನ್ನೂರ-ಬೆಂಗಳೂರು (16512) ರೈಲು ಬೆಳಗ್ಗೆ 6:50ರ ಬದಲು 6:30 ಗಂಟೆಗೆ ಬೆಂಗಳೂರು ತಲುಪಲಿದೆ. ಹಾಸನ-ಕನ್ನೂರ-ಹಾಸನ ನಡುವೆ ವೇಳೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಮಿರಜ್‌-ಬೆಂಗಳೂರು ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ (16590) ರೈಲು ಬೆಂಗಳೂರಿಗೆ ಬೆಳಗ್ಗೆ 6:30ರ ಬದಲು 6:15 ಗಂಟೆಗೆ ತಲುಪಲಿದೆ.  ಮಿರಜದಿಂದ ಯಶವಂತಪುರ ನಡುವೆ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ವಿಜಯಪುರ-ಮಂಗಳೂರು ಜಂಕ್ಷನ್‌ ನಿತ್ಯ ಸಂಚಾರ ಎಕ್ಸ್‌ಪ್ರೆಸ್‌ ಸ್ಪೇಶಲ್‌ (07377) ರೈಲು ಸಂಜೆ 6:15ರ ಬದಲು 6:35 ಗಂಟೆಗೆ ವಿಜಯಪುರದಿಂದ ಹೊರಟು ಬಸವನ ಬಾಗೇವಾಡಿ ರೋಡ್‌ (7:12), ಆಲಮಟ್ಟಿ (7:30), ಬಾಗಲಕೋಟೆ (ರಾತ್ರಿ 8:18), ಗುಳೇದಗುಡ್ಡ ರೋಡ್‌ (8:33), ಬಾದಾಮಿ (8:47), ಹೊಳೆಆಲೂರು (9:11), ಮಲ್ಲಾಪೂರ (9:31), ಗದಗ (10:30), ಹುಬ್ಬಳ್ಳಿ (11:55) ಮಾರ್ಗವಾಗಿ ಮಂಗಳೂರು ಜಂಕ್ಷನ್‌ ತಲುಪಲಿದೆ. ಕರ್ಜಗಿಯಿಂದ ಮಂಗಳೂರು ಜಂಕ್ಷನ್‌ ನಡುವೆ ವೇಳೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಅರಸೀಕೆರೆ-ಹುಬ್ಬಳ್ಳಿ ನಿತ್ಯ ಸಂಚಾರ ಪ್ಯಾಸೆಂಜರ್‌ ಸ್ಪೇಶಲ್‌ (07367) ರೈಲು ಅರಸೀಕೆರೆಯಿಂದ ಬೆಳಗ್ಗೆ 5:10ರ ಬದಲು 5:30 ಗಂಟೆಗೆ ಹೊರಟು ವೇಳೆ ಪರಿಷ್ಕರಣೆಯೊಂದಿಗೆ ಬಾಣಾವರ, ಕಡೂರು, ಬಿರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಸವಣೂರು ಮಾರ್ಗವಾಗಿ ಎಂದಿನಂತೆ ಮಧ್ಯಾಹ್ನ 12:15 ಗಂಟೆಗೆ ಹುಬ್ಬಳ್ಳಿ ತಲುಪಲಿದೆ.

ಜೂ. 4ರಿಂದ ಹುಬ್ಬಳ್ಳಿ-ಯಶವಂತಪುರ ವಾರದ ಎಕ್ಸ್‌ಪ್ರೆಸ್‌ (16544) ರೈಲು ಹುಬ್ಬಳ್ಳಿಯಿಂದ ಬೆಳಗ್ಗೆ 11:20ರ ಬದಲು 11:30 ಗಂಟೆಗೆ ಹೊರಡಲಿದೆ. ಹಾವೇರಿಯಿಂದ ಯಶವಂತಪುರ ನಡುವೆ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಜೂ. 1ರಿಂದ ಹಜರತ್‌ ನಿಜಾಮುದ್ದೀನ-ಯಶವಂತಪುರ ವಾರದಲ್ಲಿ ಎರಡು ದಿನ ಸಂಚಾರ ಸೂಪರ್‌ಫಾಸ್ಟ್‌ ಎಕ್‌ Õಪ್ರಸ್‌ (12630) ರೈಲು ಯಶಂತಪುರಕ್ಕೆ ಬೆಳಗ್ಗೆ 6:05ರ ಬದಲು 5:45 ಗಂಟೆಗೆ ತಲುಪಲಿದೆ. ಮಾರ್ಗ ನಡುವಿನ ಇನ್ನುಳಿದ ನಿಲ್ದಾಣಗಳಲ್ಲಿ ಸಮಯದಲ್ಲಿ ಯಾವುದೇ ಬದಲಾವಣೆಯಿಲ್ಲ.

ಜೂ. 2ರಿಂದ ಯಶವಂತಪುರ-ಹಜರತ್‌ ನಿಜಾಮುದ್ದೀನ (12629) ರೈಲು ಯಶವಂತಪುರದಿಂದ ಮಧ್ಯಾಹ್ನ 1:55ರ ಬದಲು 2:30 ಗಂಟೆಗೆ ಹೊರಟು ತುಮಕೂರು (3:20), ಅರಸೀಕೆರೆ (ಸಂಜೆ 4:37), ದಾವಣಗೆರೆ (6:38), ಹಾವೇರಿ (7:45) ಮಾರ್ಗವಾಗಿ ಹಜರತ್‌ ನಿಜಾಮುದ್ದೀನ ತಲುಪಲಿದೆ. ಹಾವೇರಿ-ಹಜರತ್‌ ನಿಜಾಮುದ್ದೀನ-ಹಾವೇರಿ ನಡುವೆ ವೇಳೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಮೇ 31ರಿಂದ ಚಂಡಿಗಢ-ಯಶವಂತಪುರ ವಾರದಲ್ಲಿ ಎರಡು ದಿನ ಸಂಚಾರದ ಎಕ್ಸ್‌ಪ್ರೆಸ್‌ (22686) ರೈಲು ಯಶವಂತಪುರಕ್ಕೆ ಬೆಳಗ್ಗೆ 6:05ರ ಬದಲು 5:45 ಗಂಟೆಗೆ ತಲುಪಲಿದೆ. ಜೂ. 1ರಿಂದ ಯಶವಂತಪುರ-ಚಂಡಿಗಢ ವಾರದಲ್ಲಿ ಎರಡು ದಿನ ಸಂಚಾರದ ಎಕ್ಸ್‌ ಪ್ರಸ್‌ (22685) ರೈಲು ಮಧ್ಯಾಹ್ನ 1:55ರ ಬದಲು 2:30 ಗಂಟೆಗೆ ಯಶವಂತಪುರದಿಂದ ಹೊರಟು ತುಮಕೂರು (3:20), ಅರಸೀಕೆರೆ (ಸಂಜೆ 4:37), ದಾವಣಗೆರೆ (6:38) ಮಾರ್ಗವಾಗಿ ಚಂಡಿಗಢ ತಲುಪಲಿದೆ. ದಾವಣಗೆರೆ-ಚಂಡಿಗಂಢ-ದಾವಣಗೆರೆ ನಡುವೆ ಸಮಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಜೂ. 3ರಿಂದ ಪಂಢರಪುರ-ಯಶವಂತಪುರ ವೀಕ್ಲಿ ಎಕ್ಸ್‌ಪ್ರೆಸ್‌ (16542) ರೈಲು ಯಶವಂತಪುರದಿಂದ ಬೆಳಗ್ಗೆ 6:05ರ ಬದಲು 5:45 ಗಂಟೆಗೆ ಹೊರಡಲಿದೆ. ಮಾರ್ಗ ನಡುವಿನ ಇನ್ನುಳಿದ ನಿಲ್ದಾಣಗಳಲ್ಲಿ ವೇಳೆಯಲ್ಲಿ ಯಾವುದೇ ಬದಲಾವಣೆಗಳಿಲ್ಲವೆಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.