![Bollywood: ರಿಷಬ್ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್ ಅಪ್ಡೇಟ್](https://www.udayavani.com/wp-content/uploads/2025/02/9-22-415x249.jpg)
![Bollywood: ರಿಷಬ್ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್ ಅಪ್ಡೇಟ್](https://www.udayavani.com/wp-content/uploads/2025/02/9-22-415x249.jpg)
Team Udayavani, Jan 29, 2025, 2:48 PM IST
ಕಲಬುರಗಿ: ಸೇಡಂದಲ್ಲಿ ಆರಂಭಗೊಂಡ 7ನೇ ಭಾರತೀಯ ಸಂಸ್ಕೃತಿ ಉತ್ಸವದ ಪ್ರಮುಖ ಆಕರ್ಷಣೀಯ ಕೇಂದ್ರ ವಿಜ್ಞಾನ ಲೋಕವಾಗಿದೆ.
ವಿಜ್ಞಾನದ ವಸ್ತು ಪ್ರದರ್ಶನ ಕೌತುಕಗಳು, ಸಾಧನೆಗಳ ಮೈಲುಗಲ್ಲುಗಳ ಪ್ರಾತ್ಯಕ್ಷಿಕೆಗಳನ್ನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕುತೂಹಲದಿಂದ ವೀಕ್ಷಣೆ ಮಾಡುತ್ತಿದ್ದಾರೆ.
ವಿಜ್ಞಾನ ಲೋಕವನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಜಿ ಮೂಲಿಮನಿ ಉದ್ಘಾಟಿಸಿದರು.
ವಿಜ್ಞಾನವನ್ನು ಜನಸಾಮಾನ್ಯರೇ ಮಟ್ಟಕ್ಕೆ ತಲುಪಿಸಲು ಈ ಉತ್ಸವ ಸಹಕಾರಿಯಾಗಲಿದೆ. ಉತ್ಸವಗಳು ಜ್ಞಾನ ಮತ್ತು ಅಭಿವೃದ್ಧಿಯನ್ನು ಜನಮಾನಕ್ಕೆ ಮೂಡಿಸುವ ಕೆಲಸ ಮಾಡಿದಾಗ ಸಾರ್ಥಕ ಎಂದು ಮೂಲಿಮನಿ ಹೇಳಿದರು.
ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದ ನಿವೃತ್ತ ಜಿಲ್ಲಾ ವಿಜ್ಞಾನಾಧಿಕಾರಿಗಳಾದ ಲಕ್ಷ್ಮೀನಾರಾಯಣ, ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಶನ್ ಗೀತಾ ಪಾಟೀಲ್, ಬೀದರ್ ಅಗಸ್ತ್ಯ ವಿಜ್ಞಾನ ಕೇಂದ್ರ ದ ಮುಖ್ಯಸ್ಥ ಬಾಬುರಾವ್, ಯಾದಗಿರಿಯ ಅಗಸ್ತ್ಯ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸಾಬಣ್ಣ, ಮಾತೃ ಛಾಯಾ ಪ್ರೌಢಶಾಲೆಯ ಮುಖ್ಯ ಗುರು ಮನ್ಸೂರ್ ಅವಂಟಿ, ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಸಂಯೋಜಕ ಸತ್ಯ ಕುಮಾರ್ ಭಾಗೋಡಿ ಹಾಗೂ ಇತರ ಸಿಬ್ಬಂದಿಗಳು ಶಿಕ್ಷಕ ವೃಂದದವರು ಹಾಗೂ ವಿಜ್ಞಾನ ಲೋಕದ ಸಂಯೋಜಕರು ಹಾಜರಿದ್ದರು.
ಅಗಸ್ತ್ಯ ಇಂಟರ್ ನ್ಯಾಷನಲ್ ವತಿಯಿಂದ ಸುಮಾರು 400 ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಮುಖ್ಯ ಅತಿಥಿಗಳು ಹಾಗೂ ಗಣ್ಯರು ಮಾದರಿಗಳನ್ನು ವೀಕ್ಷಿಸಿ ಮಕ್ಕಳಿಗೆ ವಿಜ್ಞಾನಿಗಳಾಗುವಂತೆ ಹಾರೈಸಿದರು. ಜಿಲ್ಲಾ ವಿಜ್ಞಾನ ಕೇಂದ್ರ ಕಲಬುರ್ಗಿಯ ವಿಜ್ಞಾನ ವಸ್ತು ಪ್ರದರ್ಶನ ವಾಹನ, ಪುಣೆಯ ಕುತೂಹಲ್ ಸೈಂಟಿಫಿಕ್ ನಿಂದ ವಿಜ್ಞಾನದ ಕಿಟ್ ಗಳ ಮಾರಾಟ ಮತ್ತು ಪ್ರದರ್ಶನ ಮಳಿಗೆಯನ್ನು, ಶಿಕ್ಷಕರಿಂದ ಕಲಿಕಾ ನಿಲ್ದಾಣವೆಂಬ ಪ್ರಾಯೋಗಿಕ ವಿಭಾಗ, ಗಣಿತ ವಿಭಾಗ ಹಾಗೂ ಇನ್ನಿತರೆ ವಿಜ್ಞಾನ ಪ್ರದರ್ಶನಗಳನ್ನು ಏರ್ಪಡಿಸಲಾಗಿದ್ದು ಈಗಲೇ ಸಾವಿರ ಸಾರ್ವಜನಿಕರು ವಿಜ್ಞಾನ ಲೋಕವನ್ನು ವೀಕ್ಷಿಸಿದರು.
Kalaburagi: ಸಾವಿರ ಕೋ.ರೂ ವೆಚ್ಚದ ಕಲ್ಯಾಣಪಥ ಯೋಜನೆಗೆ ಶೀಘ್ರ ಅಡಿಗಲ್ಲು: ಡಾ. ಅಜಯ್ ಸಿಂಗ್
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
Udupi: ಗೀತಾರ್ಥ ಚಿಂತನೆ-189; ಕ್ರಿಟಿಕಲ್ ಇನ್ಸೈಡರ್ ಆಗಬೇಕಾದ ಅಗತ್ಯ
Hosanagar: ಶ್ರೀಗಂಧ ಚೋರರ ಬಂಧನ; 18 ಕೆ.ಜಿ ಶ್ರೀಗಂಧ ವಶ
Bollywood: ರಿಷಬ್ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್ ಅಪ್ಡೇಟ್
Editorial: ನೀರಿನ ಸಂರಕ್ಷಣೆಗಾಗಿ ಈಗಿನಿಂದಲೇ ಎಚ್ಚರ ಅಗತ್ಯ
Udupi: ಗೀತಾರ್ಥ ಚಿಂತನೆ-188: ವೇದಾಂತ-ವ್ಯವಹಾರ ಮಿಶ್ರಣವಾದರೆ ಗೊಂದಲ
You seem to have an Ad Blocker on.
To continue reading, please turn it off or whitelist Udayavani.