ಭಕ್ತರ ಕಾಮಧೇನು ನೀಲಕಂಠ ಕಾಳೇಶ್ವರ
Team Udayavani, Apr 27, 2022, 10:01 AM IST
ಕಾಳಗಿ: ಕಲ್ಯಾಣ ಕರ್ನಾಟಕ ಭಾಗದ ಪುಣ್ಯ ಕ್ಷೇತ್ರಗಳಲ್ಲಿ ಪುರಾತನ ಇತಿಹಾಸವುಳ್ಳ ಹಾಗೂ ಪುರಾಣಗಳಲ್ಲಿ ಪ್ರಸಿದ್ಧಿ ಪಡೆದ, ದಕ್ಷಿಣ ಕಾಶಿಯೆಂದೇ ಪ್ರಖ್ಯಾತವಾದ ಇಲ್ಲಿನ ನೀಲಕಂಠ ಕಾಳೇಶ್ವರ ದೇವಸ್ಥಾನ ಭಕ್ತರ ಪಾಲಿಗೆ ಕಾಮಧೇನುವಾಗಿದೆ.
ಕ್ರಿ.ಶ ಎರಡನೇ ಶತಮಾನದಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದೆ ಎಂದು ಪುರಾತನ ದಾಖಲೆಗಳಿಂದ ತಿಳಿಯುತ್ತದೆ. ಈ ಕಾಳೇಶ್ವರ ದೇವಾಲಯ ಶಾಸನೋಕ್ತ ಸಯಂಭು ಕಾಳೇಶ್ವರ ದೇಗುಲವಾಗಿದೆ. ಈ ಕುರಿತು 1103ರ ಶಾಸನದಲ್ಲಿ ಉಲ್ಲೇಖೀಸಲಾಗಿದೆ.
ಇದೊಂದು ದೇಗುಲದ ಸಂಕೀರ್ಣವಾಗಿದೆ. ಇಲ್ಲಿ ಪೂರ್ವಾಭಿಮುಖವಾಗಿ ನೀಲಕಂಠ ಕಾಳೇಶ್ವರ, ರೇವಣಸಿದ್ಧೇಶ್ವರ, ಈಶ್ವರ ಗುಡಿ, ಉತ್ತರಾಭಿಮುಖವಾಗಿ ಸೋಮೇಶ್ವರ, ವೀರಭದ್ರೇಶ್ವರ ದೇವಾಲಯಗಳಿವೆ. ಇವುಗಳಿಗೆಲ್ಲ ಸೇರಿದಂತೆ ವಿಶಾಲವಾದ ತೆರೆದ ಸಭಾಮಂಟಪವಿದೆ. ಈ ಗುಡಿಯ ಆವರಣದಲ್ಲಿ ಚತುರ್ಮುಖೀ ಗಣಪತಿ ಶಿಲ್ಪ, ಕಾರ್ತಿಕೇಯ, ಕಿರಣಸ್ಥಂಭ, ವೀರಗಲ್ಲುಗಳಿವೆ. ಸೋಮೇಶ್ವರ ದೇಗುಲದಲ್ಲಿ ಜಲಹರಿ ಲಿಂಗವಿದೆ. ಸೂರ್ಯನಾರಾಯಣ ದೇವಾಲಯದಲ್ಲಿ ಸುಂದರವಾಗಿ ಕೆತ್ತಲಾಗಿರುವ ಶಿಲಾಬಾಲಕಿಯರ ಶಿಲ್ಪಕಲೆಗಳು ನೋಡುಗರನ್ನು ಆಕರ್ಷಿಸುತ್ತವೆ.
ನೈಸರ್ಗಿಕ ನೀರಿನ ಬುಗ್ಗಿಗಳು
ಈ ದೇವಸ್ಥಾನದ ಮತ್ತೂಂದು ವೈಶಿಷ್ಠ್ಯವೇನೆಂದರೆ ದೇವಸ್ಥಾನದ ಎಡ ಭಾಗದಲ್ಲಿ ರೌದ್ರವತಿ ನದಿ ಹರಿಯುತ್ತಿದೆ. ಇದರ ಪಕ್ಕದಲ್ಲಿ ನಾಲ್ಕು ಪುಷ್ಕರಣಿಗಳಿವೆ. ಇವುಗಳಲ್ಲಿ ನಿರಂತರವಾಗಿ ಝರಿಗಳಿಂದ ನೀರು ಹೊರಚಿಮ್ಮತ್ತಿರುತ್ತದೆ. ಎಂತಹ ಬರಗಾಲದ ಸಂದರ್ಭದಲ್ಲಿಯೂ ಸುತ್ತಮುತ್ತಲಿನ ಗ್ರಾಮಗಳಿಗೆ ಹಗಲಿರುಳು ನೀರು ಪೂರೈಸಿದರೂ ಒಂದಿಂಚೂ ಕಡಿಮೆಯಾಗುವುದಿಲ್ಲ. ಭಕ್ತರು ಪ್ರತಿ ವರ್ಷಕ್ಕೊಮ್ಮೆ ಯುಗಾದಿ ಹಬ್ಬವಾದ ಹನ್ನೆರಡನೇ ದಿನಕ್ಕೆ ಉತ್ತರಕಾಶಿಯಿಂದ ದಕ್ಷಿಣಕಾಶಿ ಕಾಳೇಶ್ವರ ಪುಷ್ಕರಣಿಯಲ್ಲಿ ಹಾಲಿನ ಬಣ್ಣದ ನೀರು ಬರುತ್ತವೆ ಎಂದು ಪುರಾಣದಲ್ಲಿ ಉಲ್ಲೇಖವಿದೆ. ಅಂದು ಸಹಸ್ರಾರು ಭಕ್ತರು ಆಗಮಿಸಿ ಪುಷ್ಕರಣಿಯಲ್ಲಿ ಮಿಂದೆದ್ದು ದರ್ಶನ ಪಡೆದುಕೊಳ್ಳುತ್ತಾರೆ.
-ಭೀಮರಾಯ ಕುಡ್ಡಳ್ಳಿ ಕಾಳಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Firing; ಕಲಬುರಗಿಯಲ್ಲಿ ಗುಂಡಿನ ಸದ್ದು; ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Alanda: ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ… ಆರೋಪಿ ಕಾಲಿಗೆ ಗುಂಡೇಟು
Kalaburagi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡದಂತೆ ನಿಡುಮಾಮಿಡಿ ಶ್ರೀಗಳ ಆಗ್ರಹ
Cabinet meeting ತೃಪ್ತಿ ತಂದಿಲ್ಲ: ಬಿ.ಆರ್.ಪಾಟೀಲ ಮತ್ತೊಮ್ಮೆ ಅಸಮಧಾನ
CM Siddaramaiah ಕಲ್ಯಾಣ ಕರ್ನಾಟಕಕ್ಕೆ ಪ್ರತಿ ವರ್ಷ 5000 ಕೋಟಿ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Desi Swara: ಯುಎಐಯಲ್ಲಿ “ನಮ್ಮವರು ವಿಶ್ವಕರ್ಮ ಸಮಿತಿ’ ಉದ್ಘಾಟನೆ
BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ
Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು
Vijayapura: ತಿರುಪತಿ ಲಡ್ಡು ಪಾವಿತ್ರ್ಯತೆ ಹಾಳು ಮಾಡಿದವರನ್ನು ಗಲ್ಲಿಗೇರಿಸಬೇಕು: ಯತ್ನಾಳ್
Dandeli: ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ದ್ವಿಚಕ್ರ ವಾಹನ: ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.