![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 12, 2021, 10:56 AM IST
ಚಿಂಚೋಳಿ: ತಾಲೂಕಿನ ರಟಕಲ್ ಗ್ರಾಮದ ಐತಿಹಾಸಿಕ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ತೆಂಗಿನಕಾಯಿ ಒಡೆಯುವ ಗುತ್ತಿಗೆ ಹರಾಜು ಪ್ರಕ್ರಿಯೆ ರದ್ದುಪಡಿಸುವಂತೆ ಒತ್ತಾಯಿಸಿ ತಾಲೂಕು ವೀರಶೈವ ಸಮಾಜ ವತಿಯಿಂದ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಅನೇಕ ವರ್ಷಗಳಿಂದ ಅರ್ಚಕರು ದೇವರ ಪೂಜೆ ಮಾಡುತ್ತಾ ಬರುತ್ತಿದ್ದು ಮತ್ತು ಉಪಜೀವನಕ್ಕಾಗಿ ಭಕ್ತರು ನೀಡಿದ ತೆಂಗಿನಕಾಯಿ ಒಡೆದು ಹಸಿ ತೆಂಗನ ಕಾಯಿ ಒಣಗಿಸಿ ಮಾರಾಟ ಉಪಜೀವನ ಸಾಗಿಸುತ್ತಿದ್ದ ಕುಟುಂಬದ ಮೇಲೆ ಸರಕಾರ ಹೊಟ್ಟೆ ಮೇಲೆ ಕಬ್ಬಿಣದ ಬರೆ ಹಾಕಿದೆ.
ಅನೇಕ ವರ್ಷಗಳಿಂದ ದೇವರ ಪೂಜೆ ಮತ್ತು ಹೋಮ ಹವನ ಮಾಡುತ್ತಿದ್ದ ಸರಕಾರದಿಂದ ಯಾವುದೇ ವೇತನ ಪಡೆದುಕೊಳ್ಳದೇ ಮಾಡುತ್ತಿದ್ದ ಅರ್ಚಕರಿಗೆ ಇನ್ನು ಮುಂದೆ ತೆಂಗಿನ ಕಾಯಿ ಒಡೆಯುವುದನ್ನು ನಿಲ್ಲಿಸಿ ಬೇರೆಯವರಿಗೆ ಗುತ್ತಿಗೆ ನೀಡಲು ಹರಾಜು ಮಾರಾಟ ಮಾಡಲಾಗಿದೆ. ಇದರಿಂದ ಅರ್ಚಕರ ಕುಟುಂಬ ನಿರ್ವಹಣೆಗೆ ಭಾರಿ ತೊಂದರೆ ಆಗಲಿದೆ.
ಹಸಿ ತೆಂಗಿನ ಕಾಯಿ ಮಾರಾಟ ಗುತ್ತಿಗೆ ಪ್ರಕ್ರಿಯೆಯನ್ನು ಕೂಡಲೇ ರದ್ದುಪಡಿಸಬೇಕೆಂದು ತಾಲೂಕು ವೀರಶೈವ ಮುಖಂಡರು ಸರಕಾರಕ್ಕೆ ಒತ್ತಾಯಿಸಿದ್ದಾರೆ. ಒಂದು ವೇಳೆ ಹರಾಜು ಪ್ರಕ್ರಿಯೇ ಕೂಡಲೇ ರದ್ದುಗೊಳಿಸದಿದ್ದರೆ ರಟಕಲ್ ದೇವಸ್ಥಾನ ಬಳಿ ತಾಲೂಕು ವೀರಶೈವ ಸಮಾಜದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಅಗ್ರಹಿಸಿ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಕಂದಾಯ ನಿರೀಕ್ಷಕ ಸುಭಾಶ ನಿಡಗುಂದಾ ಅವರಿಗೆ ಮನವಿ ಪತ್ರ ಸ್ವೀಕರಿಸಿದರು. ಅಧ್ಯಕ್ಷ ಸಂಜೀವಕುಮಾರ ಪಾಟೀಲ, ನಾಗರಾಜ ಸುಭಾಶ ಸೀಳೀನ್, ಆನಂದ ಹಿತ್ತಲ್, ಶಂಕರ ಶಿವಪೂರಿ, ನಾಗರಾಜ ಮಲಕೂಡ, ನಾಗೇಶ ಸುಂಕದ, ಸುನೀಲಕುಮಾರ ಮನ್ನಳ್ಳಿ, ಹಣಮಂತ ಕೊರೆ, ವಿಶ್ವನಾಥರೆಡ್ಡಿ ಇದ್ದರು
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.