18 ಸಾಹಿತಿಗಳಿಗೆ ರಾಜ್ಯಮಟ್ಟದ ಬಸವ ಪುರಸ್ಕಾರ ಪ್ರದಾನ


Team Udayavani, May 9, 2022, 10:15 AM IST

3award

ಕಲಬರುಗಿ: 12ನೇ ಶತಮಾನದಲ್ಲಿ ಅಶಾಂತಿ ಅಧರ್ಮ, ಮೌಡ್ಯತೆ, ಕಂದಾಚಾರಗಳು ವಿಜೃಂಭಿಸುತ್ತಿದ್ದವು. ಆಗ ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿ ಶರಣರನ್ನು ಒಂದುಗೂಡಿಸಿ ಸಮ ಸಮಾಜ ನಿರ್ಮಾಣ ಮಾಡಿದರು ಎಂದು ಗುವಿವಿ ಕುಲಪತಿ ಪ್ರೊ| ದಯಾನಂದ ಅಗಸರ್‌ ವ್ಯಾಖ್ಯಾನಿಸಿದರು.

ಗುವಿವಿ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ರವಿವಾರ ಪಾಳಾ ಗ್ರಾಮದ ಸುಭಾಶ್ಚಂದ್ರ ಪಾಟೀಲ್‌ ಸ್ಮಾರಕ ಜನಕಲ್ಯಾಣ ಟ್ರಸ್ಟ್‌ ನಾಲ್ಕನೇ ವರ್ಷದ ಬಸವ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 18 ಸಾಹಿತಿಗಳಿಗೆ 2022ನೇ ಸಾಲಿನ ರಾಜ್ಯಮಟ್ಟದ ಬಸವ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.

ಬಸವ ಪುರಸ್ಕಾರ ಪಡೆದ 18 ಸಾಹಿತಿಗಳಿಗೆ ಜವಾಬ್ದಾರಿ ಹೆಚ್ಚಿಸಿದೆ. ಪ್ರಶಸ್ತಿ ಪ್ರತಿಭೆಗಳನ್ನು ಅರಿಸಿಕೊಂಡು ಹೋಗಬೇಕು ಆಗ ಮಾತ್ರ ಪ್ರಶಸ್ತಿಗಳ ಮೌಲ್ಯ ಹೆಚ್ಚುತ್ತದೆ. ಇದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಆದರೆ, ಇವತ್ತು ಕೆಲವರು ಪ್ರಶಸ್ತಿಗಳನ್ನು ಅರಸಿಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ಅವುಗಳ ಮೌಲ್ಯವೂ ಕುಸಿಯುತ್ತಿದೆ. ಈ ವೇಳೆಯಲ್ಲಿ ಪಾಳಾದ ಸುಭಾಶ್ಚಂದ್ರ ಪಾಟೀಲ್‌ ಸ್ಮಾರಕ ಜನಕಲ್ಯಾಣ ಟ್ರಸ್‌ ಸೂಕ್ತ ಸಾಹಿತಿಗಳನ್ನು ಗುರುತಿಸಿ ಗೌರವಿಸುತ್ತಿರುವುದು ಮೌಲ್ಯಯುತ ಎಂದರು.

ಸಾನಿಧ್ಯವಹಿಸಿದ್ದ ಚಿಗರಹಳ್ಳಿ ಮರುಳಸಿದ್ದೇಶ್ವರ ದೇವರ ಗುರುಪೀಠದ ಸಿದ್ಧಬಸವ ಕಬೀರ ಮಹಾ ಸ್ವಾಮಿಗಳು ಮಾತನಾಡುತ್ತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕಳೆದುಕೊಳ್ಳುತ್ತಿವೆ. ಮೌಲ್ಯಗಳನ್ನು ರೂಪಿಸಲು ಬಸವ ಪುರಸ್ಕಾರದ ಮೂಲಕ ಶರಣಗೌಡ ಪಾಟೀಲ ಪಾಳಾ ಅವರು ಮಾಡಿದ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಸಾರ್ವಜನಿಕ ಇಲಾಖೆ ಗ್ರಂಥಾಲಯ ನಿರ್ದೇಶಕ ಡಾ ಸತೀಶ್‌ ಕುಮಾರ್‌ ಹೊಸಮನಿ ಮಾತನಾಡಿದರು. ಗುಲಬರ್ಗಾ ವಿಶ್ವವಿದ್ಯಾಲಯದ ಡೀನ್‌ (ಕಲಾನಿಕಾಯ) ಪ್ರೊ| ರಮೇಶ ರಾಠೊಡ್‌ ಅಧ್ಯಕ್ಷತೆವಹಿಸಿದ್ದರು. ಗುಲಬರ್ಗಾ ವಿಶ್ವ ವಿದ್ಯಾ ಲಯದ ಸೆನೆಟ್‌ ಸದಸ್ಯ ರಾಜೇಂದ್ರ ಕಗ್ಗನಮಡಿ ಅತಿಥಿಗಳಾಗಿದ್ದರು. ಸುಭಾಶ್ಚಂದ್ರ ಪಾಟೀಲ್‌ ಸ್ಮಾರಕ ಜನಕಲ್ಯಾಣ ಟ್ರಸ್ಟ್‌ ಅಧ್ಯಕ್ಷ ಶರಣಗೌಡ ಪಾಟೀಲ, ಪಾಳಾ ಸ್ವಾಗತಿಸಿದರು. ಬಿ ಎಚ್‌ ನಿರಗುಡಿ ಪ್ರಾಸ್ತಾವಿಕ ಮಾತನಾಡಿದರು. ಡಾ| ಶರಣಬಸವ ವಡ್ಡಕೇರಿ ನಿರೂಪಿಸಿದರು. ಡಾ| ಶಿವಶಂಕರ ಬಿರಾದಾರ, ಹಾಗೂ ಕಿರಣ್‌ ಪಾಟೀಲ ಅವರ ತಂಡದಿಂದ ಜರುಗಿದ ವಚನಗಳ ಗಾಯನ ಮನ ಸೆಳೆಯಿತು. ಡಾ| ವಿಜಯಕುಮಾರ ಪರುತೆ, ಡಾ| ಆನಂದ ಸಿದ್ಧಮಣಿ, ಸಂತೋಷ ತೊಟ್ನಳ್ಳಿ, ಮಂಗಲಾ ಕಪರೆ, ನಾಗರಾಜ ಕಲ್ಲಾ, ಜಗದೀಶ ಪಾಟೀಲ ಸಣ್ಣೂರ ಇತರರು ಇದ್ದರು.

ಪ್ರಶಸ್ತಿಗೆ ಭಾಜನರಾದ ಸಾಹಿತಿಗಳು

ಸತೀಶಕುಮಾರ ಹೊಸಮನಿ (ಕಾವ್ಯಧಾರೆ), ಬಸವರಾಜ ಪೊಲೀಸ್‌ ಪಾಟೀಲ್‌ (ಜಾನಪದ ಸಂಪದ), ಶಿವಕವಿ ಹಿರೇಮಠ ಜೋಗೂರು (ಮಹಾತಪಸ್ವಿ), ಡಾ| ಕೆ.ವಿ. ರಾಜೇಶ್ವರಿ (ಅಪರೂಪದ ರಾಜಕಾರಣಿರಿ-ಲಾಲ್‌ ಬಹಾದ್ದೂರ ಶಾಸ್ತ್ರೀ), ಬಸವರಾಜ ಕಡ್ಡಿ (ಅರಿವಿನ ಬೆಳಕು), ಕಾವ್ಯಶ್ರೀ ಮಹಾಗಾಂವಕರ್‌ (ಬಟ್ಟೆಯೊಳಗಿನ ಚಿತ್ತಾರ), ಶೈಲಜಾ ಎನ್‌. ಬಾಗೇವಾಡಿ (ಅಂತರಂಗದ ಅಕ್ಷರ ಲೋಕ), ತಯಬಲಿ ಹೊಂಬಳ (101ಮಕ್ಕಳ ಕಥೆಗಳು-3), ಶಿವಪುತ್ರ ಕಂಠಿ ಚಿಂಚನಸೂರ್‌ (ಶರಣರ ಜೀವನ ದರ್ಶನ ಮತ್ತು ವಚನಾಂತರಾಳ), ಸಹನಾ ಕಾಂತಬೆ„ಲು (ಇದು ಬರೀ ಮಣ್ಣಲ್ಲ), ಸಂಗಮೇಶ ಉಪಾಸೆ (ದೇವರುಗಳಿವೆ ಎಚ್ಚರಿಕೆ), ಸನಾವುಲ್ಲಾ ನವಿಲೆಹಾಳು (ಪಂಜು), ಬನ್ನಪ್ಪ ಬಿ.ಕೆ. (ನೈತಿಕ ಶಿಕ್ಷಣ), ಮಧುರಾ ಮೂರ್ತಿ (ಮಧುರ ಗಝಲ್‌), ಅನನ್ಯ ತುಷಿರಾ (ಅರ್ಧ ನೆನಪು ಅರ್ಧ ಕನಸು), ಮಕರಂದ ಮನೋಜ್‌ (ಮನೋಜ್ಞ ಹೈಕುಗಳು), ಸಂಕಲ್ಪ (ಅನಂದ ಪುಷ್ಟ).

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kharge

Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ

13-

Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

Yathanaa

BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.