![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Mar 17, 2022, 12:58 PM IST
ವಾಡಿ: ಪಟ್ಟಣದ ಜನತೆಗಾಗಿ ಸಾರ್ವಜನಿಕ ಉದ್ಯಾನವನ ಮತ್ತು ಯುವಕರಿಗಾಗಿ ಕ್ರೀಡಾಂಗಣ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಬೆಳಗಿನ ಬಳಗದ ಸದಸ್ಯರು ಪುರಸಭೆ ಮುಖ್ಯಾಧಿಕಾರಿ ಡಾ| ಚಿದಾನಂದ ಸ್ವಾಮಿಗೆ ಮನವಿ ಸಲ್ಲಿಸಿದ್ದಾರೆ.
ಪಟ್ಟಣದಲ್ಲಿ ಐವತ್ತು ಸಾವಿರ ಜನಸಂಖ್ಯೆಯಿದೆ. ವಿಶ್ವವಿಖ್ಯಾತ ಸಿಮೆಂಟ್ ಕಾರ್ಖಾನೆ ಹಾಗೂ ಜಂಕ್ಷನ್ ರೈಲು ನಿಲ್ದಾಣವಿದೆ. ಹದಿನೈದು ಪ್ರಾಥಮಿಕ, ಹನ್ನೊಂದು ಪ್ರೌಢ ಶಾಲೆಗಳಿದ್ದು ಸಾವಿರಾರು ಸಂಖ್ಯೆಯಲ್ಲಿ ಯುವಜನರಿದ್ದಾರೆ. ಶೈಕ್ಷಣಿಕವಾಗಿ ಪ್ರಗತಿ ಕಾಣುತ್ತಿರುವ ನಗರದಲ್ಲಿ ಕ್ರೀಡಾ ಸ್ಫೂರ್ತಿಗಾಗಿ ಸೌಲಭ್ಯಗಳು ಮರೀಚಿಕೆಯಾಗಿವೆ.
ವಿದ್ಯಾರ್ಥಿಗಳು, ಯುವಜನರು ಆಟದ ಮೈದಾನದ ಕೊರತೆ ಎದುರಿಸುತ್ತಿದ್ದಾರೆ. ಪುರಸಭೆ ಆಡಳಿತ ಕೇಂದ್ರಸ್ಥಾನದಲ್ಲಿ ವಯಸ್ಕರಿಗಾಗಿ, ಮಕ್ಕಳಿಗಾಗಿ ಸಾರ್ವಜನಿಕ ಉದ್ಯಾನವನ ಸೌಲಭ್ಯ ಒದಗಿಸದಿರುವುದು ಬೇಜವಾಬ್ದಾರಿತನದ ಪರಮಾವಧಿಯಾಗಿದೆ ಎಂದು ದೂರಿದ್ದಾರೆ.ನಗರದ ವಿವಿಧ ಬಡಾವಣೆಗಳ ಯುವಕ ಸಂಘಗಳಿಗೆ ಕ್ರೀಡಾ ಸಾಮಗ್ರಿ ವಿತರಿಸಬೇಕು ಎಂದು ಮನವಿ ಮಾಡಿದ್ದಾರೆ.
ಬೆಳಗಿನ ಬಳಗದ ಸದಸ್ಯರಾದ ಕಾಶೀನಾಥ ಶೆಟಗಾರ, ಪ್ರಕಾಶ ಚಂದನಕೇರಿ, ರಾಜು ಒಡೆಯರಾಜ, ನಾಗರಾಜ ಗೌಡಪ್ಪನೋರ, ಸತೀಶ ಸಾವಳಗಿ, ರವಿ ರದ್ದೇವಾಡಗಿ, ವೀರಣ್ಣ ಯಾರಿ, ಹಿರಿಯರಾದ ವಿ.ಕೆ. ಕೇದಿಲಾಯ, ಭೀಮರಾವ ದೊರೆ, ಸಾಂತಪ್ಪ ಸಾಹು ಅಳ್ಳೊಳ್ಳಿ, ಜಯದೇವಸ್ವಾಮಿ ಜೋಗಿಕಲ್ಮಠ, ಮಲ್ಲಿಕಾರ್ಜುನ ಕರಗರ, ಲಕ್ಷ್ಮೀಕಾಂತ ಬಿರಾದಾರ, ಅಶೋಕ ಖಾನಕುರ್ತೆ ನಿಯೋಗದಲ್ಲಿ ಇದ್ದರು.
Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ
Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ
Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ
MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ
BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್
You seem to have an Ad Blocker on.
To continue reading, please turn it off or whitelist Udayavani.