ಹಿಂಗಾರು ಬಿಳಿಜೋಳ ಇಳುವರಿ ಹೆಚ್ಚುವ ಹಿಗ್ಗು


Team Udayavani, Dec 25, 2021, 3:30 PM IST

13corn

ವಾಡಿ: ಮಹಾ ಮಳೆ ಬೇಸಾಯಗಾರರಿಗೆ ಪ್ರಸಕ್ತ ವರ್ಷವೂ ಆಘಾತ ತಂದೊಡ್ಡಿದ್ದು, ಕಾಳು ನಾಶದಿಂದ ತೊಗರಿ ಗಿಡಗಳು ಬರಗೆಟ್ಟು ನಿಂತಿವೆ. ಸತತ ಬರಗಾಲದ ಹೊಡೆತ ಅನುಭವಿಸುತ್ತಿರುವ ಅನ್ನದಾತರ ಬದುಕಿಗೆ ಆಸರೆ ಆಗಬೇಕಿದ್ದ ಮುಂಗಾರು ಬೆಳೆಗಳೆಲ್ಲವೂ ಕೈಬಿಟ್ಟಿವೆ.

ಈ ಭಾಗದ ಹಿಂಗಾರು ಬೆಳೆ ಬಿಳಿಜೋಳ ಹುಲುಸಾಗಿ ಫಸಲು ನೀಡಿದ್ದು, ಇಳುವರಿ ಹೆಚ್ಚುವ ಭರವಸೆ ಮೂಡಿಸಿದೆ. ಸೈನಿಕ ಹುಳುಗಳ ಕಾಟದ ಭೀತಿ ನಡುವೆ ಬೆಳೆ ಸಂರಕ್ಷಣೆ ಮಹತ್ವ ಪಡೆದುಕೊಂಡಿದ್ದು, ಒಂದೂವರೆ ತಿಂಗಳ ಜೋಳದ ಬೆಳೆಗೆ ಹುಳು ಬಾಧೆ ತಡೆಯುವುದೇ ರೈತರಿಗೆ ಸವಾಲಾಗಿ ಪರಿಣಮಿಸಿದೆ. ಹುಳುಗಳು ಎಲೆಗಳನ್ನು ತಿಂದು ಹಾಕದಂತೆ ಎಚ್ಚರವಹಿಸುತ್ತಿದ್ದಾರೆ. ಜೋಳದ ಸುಳಿ ಕೀಟಗಳ ಬಾಯಿಗೆ ಆಹಾರವಾದರೆ ಬೆಳೆ ಒಣಗಿ ಹೋಗುವ ಆತಂಕ ಎದುರಾಗಿದೆ.

ಬಳವಡಗಿ, ಕೊಂಚೂರು, ನಾಲವಾರ, ಕೊಲ್ಲೂರು, ಹಳಕರ್ಟಿ, ರಾವೂರ, ಸನ್ನತಿ, ಬನ್ನೇಟಿ, ಮಾರಡಗಿ, ಮಳಗ, ಕುಂದನೂರು, ಇಂಗಳಗಿ ಗ್ರಾಮಗಳ ವ್ಯಾಪ್ತಿಯ ಜಮೀನುಗಳಲ್ಲಿ ಮುಗ್ಗರಿಸಿದ ತೊಗರಿ, ಹತ್ತಿ ನಡುವೆ ಜೋಳ ಹಿಗ್ಗಿನಿಂದ ಬೆಳೆಯುತ್ತಿದೆ. ಡಿಸೆಂಬರ್‌ ತಿಂಗಳ ಕೊರೆಯುವ ಚಳಿಯ ಶೀತಕ್ಕೆ ಬೆಳೆಯುವ ಹಸಿರೆಲೆಯ ಮಾಲ್ದಂಡಿ ಬಿಳಿಜೋಳದ ಫಸಲು, ರೈತರ ಪಾಲಿನ ಸಂಕಷ್ಟದ ದಿನಗಳಲ್ಲಿ ಸಂಗಾತಿಯಾಗುವ ಬೆಳೆಯಾಗಿದೆ. ಮೊದಲೇ ಬರಗಾಲದಿಂದ ಬಳಲಿ ಬೆಂಡಾಗಿರುವ ರೈತರಿಗೆ ಹುಳು ಬಾಧೆ ನುಂಗಲಾರದ ತುತ್ತಾಗಿದೆ.

ಇದರ ನಡುವೆಯೂ ಕೃಷಿಕರು ಜೋಳ ಉಳಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದಾರೆ. ಹೆಣ್ಣುಚಿಟ್ಟೆ ಆರಂಭದಲ್ಲಿ ನೂರರಿಂದ ಇನ್ನೂರು ಮೊಟ್ಟೆಗಳನ್ನು ಗುಂಪುಗುಂಪಾಗಿ ಎಲೆಗಳ ಕೆಳಭಾಗದಲ್ಲಿ ಇಡುತ್ತದೆ. ಹುಳಕ್ಕೆ ಸೂಕ್ತ ವಾತಾವರಣ ಸೃಷ್ಟಿಯಾದರೆ ಸರಿಸುಮಾರು 1500ರಿಂದ 2000ರ ವರೆಗೆ ಮೊಟ್ಟೆ ಇಡುವ ಸಾಮರ್ಥ್ಯವನ್ನು ಹೆಣ್ಣು ಚಿಟ್ಟೆ ಹೊಂದಿದೆ. ಪ್ರಾಥಮಿಕ ಹಂತದ ಹುಳುಗಳು ಎಲೆಯ ತೆರೆದ ಮೇಲ್ಭಾಗ ತಿನ್ನುತ್ತವೆ. ಪರಿಣಾಮ ತೆರೆದ ಭಾಗವು ಬೆಳಗ್ಗೆ ಕಾಣುತ್ತದೆ. ನಂತರದ ದಿನಗಳಲ್ಲಿ ಗಿಡಗಳ ಸುಳಿಯಲ್ಲಿ ಸೇರಿಕೊಂಡು ಒಳಗಿನಿಂದ ಕಾಂಡ ಕೊರೆಯುತ್ತದೆ. ಇದರಿಂದ ಬೆಳೆಗೆ ಅಗತ್ಯವಾದ ಪೋಷಕಾಂಶದ ಕೊರತೆ ಉಂಟಾಗುತ್ತದೆ ಎನ್ನುತ್ತಾರೆ ಕೃಷಿ ವಿಜ್ಞಾನಿಗಳು.

ಜೋಳ ಬಿತ್ತನೆ ಮಾಡಿರುವ ತಾಲೂಕಿನ ಕೃಷಿಕರು, ಎತ್ತರಕ್ಕೆ ಬೆಳೆದಿರುವ ಬೆಳೆ ತೆನೆಕಟ್ಟುವುದನ್ನೇ ಎದುರು ನೋಡುತ್ತಿದ್ದಾರೆ. ಬೆಳೆಗೆ ಮಾರಕವಾಗದ ಪೂರಕ ತೇವಾಂಶ ವಾತಾವರಣ ಸೃಷ್ಟಿಯಾಗಿದರೆ ಮಾತ್ರ ಜೋಳ ಕೈಸೇರುವ ಸಾಧ್ಯತೆಯಿದೆ. ನೇಗಿಲಯೋಗಿ ನಷ್ಟದ ಕೂಪಕ್ಕೆ ಮೈಯೊಡ್ಡುವ ಮೊದಲು ಕೃಷಿ ವಿಜ್ಞಾನಿಗಳು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಮುಂದಾಗಬೇಕಿದೆ.

ಹಿಂದಿನ ವರ್ಷದಂತೆ ಪ್ರಸಕ್ತ ವರ್ಷವೂ ಬಹಳ ನಿರೀಕ್ಷೆ ಹುಟ್ಟಿಸಿದ ತೊಗರಿ ಮತ್ತು ಶೇಂಗಾ ಸಂಪೂರ್ಣ ಹಾಳಾಗಿದೆ. ಇಷ್ಟುದಿನ ಜೋಳ ಬೆಳೆಯ ಸುಳಿಗೆ ಸೈನಿಕ ಹುಳುಗಳ ಕಾಟವಿತ್ತು. ಅದೀಗ ನಿವಾರಣೆಯಾಗಿದೆ. ಭೂಮಿ ತೇವಾಂಶ ಕಾಯ್ದುಕೊಂಡಿದೆ. ಕಳೆದ ಎರಡು ದಿನಗಳಿಂದ ಬೀಳುತ್ತಿರುವ ಇಬ್ಬನಿ ಬೆಳೆ ಬೆಳವಣಿಗೆಗೆ ಸಹಕಾರಿಯಾಗಿದೆ. ಸದ್ಯಕ್ಕಂತೂ ಜೋಳ ಚೆನ್ನಾಗಿದೆ. ತೆನೆಯಾಗಿ ಕಾಳು ಕಟ್ಟಿದರೆ ಮಾತ್ರ ರೈತ ಉಳಿಯುತ್ತಾನೆ. -ಶರಣಪ್ಪ ಗಂಜಿ, ಲಾಡ್ಲಾಪುರ ರೈತ

-ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chalavadi Narayanaswamy ಡ್ರಾಮಾ ಬೇಡ: ಪ್ರಿಯಾಂಕ್‌ ಖರ್ಗೆ

Chalavadi Narayanaswamy ಡ್ರಾಮಾ ಬೇಡ: ಪ್ರಿಯಾಂಕ್‌ ಖರ್ಗೆ

ಬಿಜೆಪಿಯದ್ದು ಜಗಳ ಹಚ್ಚುವ ಪಾಲಿಟಿಕ್ಸ್‌: ಡಾ|ಶರಣಪ್ರಕಾಶ

ಬಿಜೆಪಿಯದ್ದು ಜಗಳ ಹಚ್ಚುವ ಪಾಲಿಟಿಕ್ಸ್‌: ಡಾ|ಶರಣಪ್ರಕಾಶ

siddaramaiahಸಿದ್ಧರಾಮಯ್ಯ ಲೂಟಿಕೋರ ಅಲ್ಲ, ಜುಗ್ಗಯ್ಯ…: ಕಾಗಿನೆಲೆ ಶ್ರೀಗಳು

Kalaburagi; ಸಿದ್ಧರಾಮಯ್ಯ ಲೂಟಿಕೋರ ಅಲ್ಲ, ಜುಗ್ಗಯ್ಯ…: ಕಾಗಿನೆಲೆ ಶ್ರೀಗಳು

Siddaramaiah

Kalaburagi: ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ-ಕೈಗಾರಿಕಾ ನೀತಿ ಜಾರಿಗೆ ಬದ್ದ: ಸಿಎಂ

ಹಗರಣದಲ್ಲೇ ಮುಳುಗಿದೆ ಕಾಂಗ್ರೆಸ್‌ ಸರ್ಕಾರ: ಪಿ. ರಾಜೀವ್‌

ಹಗರಣದಲ್ಲೇ ಮುಳುಗಿದೆ ಕಾಂಗ್ರೆಸ್‌ ಸರ್ಕಾರ: ಪಿ. ರಾಜೀವ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

1-reasas

Americaದಲ್ಲಿ ಬಿಡುವಿನ ದಿನಗಳನ್ನು ಕಳೆಯುತ್ತಿರುವ ಧೋನಿ

1-ccrr-2

Team India ಮೂರನೇ ಸುತ್ತಿನ ಅಭ್ಯಾಸ

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.