ಬೆಳೆ ನಷ್ಟ ಪರಿಹಾರ ದತ್ತಾಂಶ ಪಟ್ಟಿಯಲ್ಲಿ ಯಡ್ರಾಮಿ ಶೂನ್ಯ


Team Udayavani, Dec 24, 2021, 11:15 AM IST

4data

ಯಡ್ರಾಮಿ: ಕಳೆದ ಎರಡು ತಿಂಗಳ ಹಿಂದೆ ತಾಲೂಕಿನಾದ್ಯಂತ ಜಿಟಿಜಿಟಿ ಮಳೆ ಬಂದು ನಿತ್ಯ ಅತಿಯಾದ ಮಂಜು ಆವರಿಸಿದ್ದರಿಂದ ತೊಗರಿ, ಹತ್ತಿ ಬೆಳೆಗಳ ಹೂವು ಉದುರಿ ಗೊಡ್ಡು ಗಿಡಗಳೇ ರೈತನ ಪಾಲಿನ ಫಸಲು ಎಂಬಂತಾಗಿದೆ.

ತಾಲೂಕಿನ ಇಜೇರಿ, ಬಿಳವಾರ, ಅರಳಗುಂಡಗಿ, ಮಳ್ಳಿ ವಲಯಗಳ ಗ್ರಾಮಗಳಲ್ಲಿ ಸೆಪ್ಟೆಂಬರ್‌, ಅಕ್ಟೋಬರ್‌ ಕೊನೆ ವಾರದಲ್ಲಿ, ನವೆಂಬರ್‌ ತಿಂಗಳ ಮೊದಲ ವಾರದಲ್ಲಿ ಅಲ್ಪ ಮಳೆ ಬಂದರೂ ಅತಿಯಾದ ಹೊಗೆಮಂಜು ಬಿದ್ದು ತೊಗರಿ ಮತ್ತು ಹತ್ತಿ ಶೇ.90ರಷ್ಟು ನಾಶವಾಗಿವೆ. ಜಿಲ್ಲಾಡಳಿತ ಜಿಲ್ಲೆಯ ತಾಲೂಕುಗಳಲ್ಲಿ ಆದ ಮಳೆ ಪ್ರಮಾಣದ ಮಾನದಂಡ ಅನುಸರಿಸಿ ಬೆಳೆ ನಷ್ಟದ ಕುರಿತು ನಿರ್ಧರಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಪ್ರಶ್ನೆಯಾಗಿದೆ.

ಜೋರಾದ ಮಳೆ ಬಂದರೆ ಮಾತ್ರ ಬೆಳೆ ನಾಶವಾಗಲಿವೆ ಎಂಬ ಅವೈಜ್ಞಾನಿಕ ತಪ್ಪು ಗ್ರಹಿಕೆಯಿಂದಲೆ ಯಡ್ರಾಮಿ ರೈತರು ಪರಿಹಾರ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ತುಂತುರು ಮಳೆ ಬಂದಾಗ ಬೆಳಗಿನ ಜಾವ ಬೀಳುವ ಮಂಜಿನಿಂದಲೂ ಬೆಳೆ ನಾಶ ಹೊಂದಲಿವೆ ಎಂಬ ಸತ್ಯ ಅಧಿಕಾರಿಗಳು ಮನಗಾಣಬೇಕಿದೆ ಎಂಬುದು ಸ್ಥಳೀಯ ರೈತರ ವಾದವಾಗಿದೆ.

ತಾಲೂಕಿನ ಪ್ರತಿ ಹಳ್ಳಿಯ ಜಮೀನುಗಳಲ್ಲಿ ತಾವು ಬಿತ್ತಿ ಬೆಳೆದ ತೊಗರಿ, ಹತ್ತಿ ಬೆಳೆಗಳ ಲಕ್ಷಣ ನೋಡಿದ ರೈತರಲ್ಲಿನ ಆನಂದ, ಉಲ್ಲಾಸ ನವೆಂಬರ್‌ ಮೊದಲ ವಾರದಲ್ಲಿ ಮಂಜಿನಂತೆ ಕರಗಿ ಹೋಯಿತು. ಪ್ರತಿ ಎಕರೆಗೆ ತೊಗರಿ ಬೆಳೆ ಕನಿಷ್ಟ ಎರಡು ಕ್ವಿಂಟಲ್‌ ಕೂಡಾ ಬರದಂತಾಗಿದೆ ಎಂದು ರೈತರು ಗೋಳು ತೋಡಿಕೊಳ್ಳುತ್ತಿದ್ದಾರೆ. ಹತ್ತಿ ಬೆಳೆಯ ಪಾಡೂ ಈ ಸಮಸ್ಯೆಯಿಂದ ಹೊರತಾಗಿಲ್ಲ. ಅದಕ್ಕೆ ಖರ್ಚು ಮಾಡಿದಷ್ಟು ಹಣ ಬಂದರೆ ಜೀವ ಉಳಿಯಿತು ಎನ್ನುವ ಸ್ಥಿತಿ ರೈತನದ್ದಾಗಿದೆ.

ಇನ್ನಾದರೂ ತಾಲೂಕು, ಜಿಲ್ಲಾಡಳಿತ ಹಾಗೂ ಶಾಸಕರು ಖುದ್ದಾಗಿ ಪರಿಶೀಲಿಸಿ ರೈತರ ಹಿತ ಕಾಪಾಡುವಂತ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ತಾಲೂಕಿನ ಸಂಘಟನೆಗಳ ಮುಖಂಡರು ಹಾಗೂ ರೈತರ ಒತ್ತಾಯವಾಗಿದೆ.

ಜಿಲ್ಲೆಯ 11 ತಾಲೂಕುಗಳಲ್ಲಿ ಯಡ್ರಾಮಿ ಮಾತ್ರ ಪರಿಹಾರ ದತ್ತಾಂಶ ನೋಂದಣಿ ಕಾರ್ಯದಿಂದ ಶೂನ್ಯವಾಗಿದೆ. ಇದಕ್ಕೆ ತಾಲೂಕಾಡಳಿತ ಹಾಗೂ ಶಾಸಕರ ನಿರ್ಲಕ್ಷವೇ ಕಾರಣ ಎನ್ನುವುದು ಜನರ ಅಭಿಪ್ರಾಯವಾಗಿದೆ.

ನಾನು ಕೃಷಿ ಮತ್ತು ಕಂದಾಯ ಇಲಾಖೆ ಜಂಟಿ ಸಮೀಕ್ಷೆ ವರದಿ ಗಮನಿಸಿದ್ದೇನೆ. ಈ ಕುರಿತು ವರದಿಯ ಮಾಹಿತಿ ಸ್ವತಃ ಬರೆದು, ಅದನ್ನು ನಮ್ಮ ಕೇಸ್‌ವರ್ಕರ್‌ಗೆ ಕೊಟ್ಟು, ಅದನ್ನು ಮೇಲಧಿಕಾರಿಗಳಿಗೆ ಕಳುಹಿಸಲು ಸೂಚಿಸಿದ್ದೆ. ಮುಂದೆ ಏನಾಗಿದೆ ಎಂಬುದೇ ತಿಳಿಯುತ್ತಿಲ್ಲ. -ಸತ್ಯಪ್ರಸಾದ, ಗ್ರೇಡ್‌-2 ತಹಶೀಲ್ದಾರ್‌, ಯಡ್ರಾಮಿ

ನಾನು ಹತ್ತು ಎಕರೆ ತೊಗರಿ ಬಿತ್ತಿದ್ದೇನೆ. ಹೂವು ಹಿಡಿಯುವ ತನಕವೂ ಬೆಳೆ ಚೆನ್ನಾಗಿಯೇ ಇತ್ತು. ಹೂವು ಹಿಡಿದು ಮಗ್ಗಿ ಆಗುವ ಸಮಯದಲ್ಲಿ ತೀವ್ರ ಮಂಜು ಬಿದ್ದು, ತೊಗರಿ ಗಿಡಗಳು ಕಸದ ಕಡ್ಡಿಯಂತಾದವು. ಒಂದು ಗಿಡದಲ್ಲಿ ಎರಡ್ಮೂರು ಕಾಯಿ ಇದ್ದರೆ ಎಷ್ಟು ರಾಶಿ ಆಗುತ್ತದೆ ಎನ್ನುವ ವಿಚಾರವನ್ನು ಅಧಿಕಾರಿಗಳು ಮಾಡಬೇಕು. ನಮಗೆ ಪರಿಹಾರ ಒದಗಿಸಬೇಕು. -ಅರ್ಜುನ ಪೂಜಾರಿ, ಹಿರಿಯ ರೈತ, ಕುಕನೂರ

ತಹಶೀಲ್ದಾರ್‌, ಸಿಬ್ಬಂದಿ ಹಾಗೂ ಕೃಷಿ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯವೇ ಸಮಸ್ಯೆಗೆ ಕಾರಣ. ಇಲ್ಲೇ ಕರ್ತವ್ಯ ನಿಭಾಯಿಸುವ ಕಂದಾಯ ಸಿಬ್ಬಂದಿ ಜಮೀನುಗಳಲ್ಲಿನ ಬೆಳೆ ಹಾಳಾಗಿದ್ದನ್ನು ಗಮನಿಸಿದರೂ ವರದಿ ನೀಡುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ರೈತರಿಗೆ ಅನ್ಯಾಯ ಎಸಗುವಂತಹ ಕೆಲಸ ಮಾಡಿದ ನೌಕರರಿಗೆ ತಕ್ಕ ಶಿಕ್ಷೆ ಆಗಬೇಕು. ಕೂಡಲೇ ರೈತರಿಗೆ ನ್ಯಾಯ ಒದಗಿಸಿಕೊಡಬೇಕು. -ಡಾ| ವಿಶ್ವನಾಥ ಪಾಟೀಲ,ಕರವೇ ಮುಖಂಡ, ಯಡ್ರಾಮಿ

ಸಂತೋಷ ಬಿ. ನವಲಗುಂದ

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kharge

Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ

13-

Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

Yathanaa

BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.