Hanagodu Society: ಶೇ.75ರಷ್ಟು ಸಾಲ ವಸೂಲಿ; ರೈತರಿಂದ 3 ಕೋಟಿ ಸಾಲ ಬಾಕಿ

ಹನಗೋಡು ಸಹಕಾರ ಸಂಘದಿಂದ ಒಟ್ಟಾರೆ 8.88ಕೋಟಿ ರೂ. ಸಾಲ ವಿತರಣೆ

Team Udayavani, Sep 23, 2023, 10:11 AM IST

5-hunsur

ಹುಣಸೂರು: ತಾಲೂಕಿನ ಹನಗೋಡು ಕೃಷಿ ಪತ್ತಿನ ಸಹಕಾರ ಸಂಘ ಕಳೆದ ಸಾಲಿನಲ್ಲಿ 680 ಮಂದಿಗೆ ಒಟ್ಟಾರೆ 8.88 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ರವಿಕುಮಾರ್ ತಿಳಿಸಿದರು.

ಸಂಘದ ಕಚೇರಿ ಆವರಣದಲ್ಲಿ ನಡೆದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 590 ಮಂದಿ ಕೃಷಿಕರಿಗೆ 8.36 ಕೋಟಿ ರೂ. ಬೆಳೆ ಸಾಲ ಹಾಗೂ 90 ಮಂದಿ ತಂಬಾಕು ಬೆಳೆಗಾರರಿಗೆ 52.80 ಲಕ್ಷ ರೂ. ಸೌದೆ ಸಾಲ ವಿತರಿಸಲಾಗಿದ್ದು, ಶೇ.75ರಷ್ಟು ಮಾತ್ರ ಸಾಲ ವಸೂಲಾತಿಯಾಗಿದೆ ಎಂದರು.

ಸಂಘದ ಮೂಲಕ ಹಿಂದೆ ರೈತರು ಪಡೆದಿದ್ದ ವಿವಿಧ ಸಾಲದ ಬಾಬ್ತು ಸುಮಾರು ಮೂರು ಕೋಟಿ ರೂ. ಸುಸ್ತಿ ಸಾಲ ಬಾಕಿಯಿಂದಾಗಿ ಹೊಸಬರಿಗೆ ಸಾಲ ಸೌಲಭ್ಯ ಕಲ್ಪಿಸಲು ತೊಂದರೆಯಾಗಿದೆ. ಅಲ್ಲದೆ ಸರಕಾರದಿಂದ ರೈತರ ಸಾಲ ಮನ್ನಾ ಬಾಬ್ತು, ಶೇ.3ರ ಬಡ್ಡಿ ಬಾಕಿ ಸೇರಿದಂತೆ ವಿವಿಧ ಬಾಬ್ತುಗಳು ಸೇರಿದಂತೆ ಒಟ್ಟಾರೆ 39.75 ಲಕ್ಷ ರೂ. ಬಾಕಿ ಬರಬೇಕಿದ್ದು, ಸಂಘದ ಆರ್ಥಿಕ ಪ್ರಗತಿಗೆ ಅಡಚಣೆಯಾಗಿದ್ದು, ಬಾಕಿ ಇರುವ ರೈತರು ಸಾಲ ಮರುಪಾವತಿಸಿ ಸಂಘದ ಉಳಿವಿಗೆ ಸಹಕರಿಸಿ ಮನವಿ ಮಾಡಿದರು.

ಅಪೆಕ್ಸ್ ಬ್ಯಾಂಕ್‌ ನಿಂದ ಕಟ್ಟಡಕ್ಕೆ 50 ಲಕ್ಷ ನೆರವು:

ಸಂಘದ ಕಟ್ಟಡ ಶಿಥಿಲಗೊಂಡಿದ್ದು, ಕೆಡವಿ ನೂತನ ಕಟ್ಟಡ ನಿರ್ಮಿಸಲು ಅಪೆಕ್ಸ್ ಬ್ಯಾಂಕ್‌ ಉಪಾಧ್ಯಕ್ಷ, ಶಾಸಕ ಜಿ.ಡಿ. ಹರೀಶ್‌ಗೌಡರು ಅಪೆಕ್ಸ್ ಬ್ಯಾಂಕಿನಿಂದ 50 ಲಕ್ಷ ರೂ. ನೆರವು ಕಲ್ಪಿಸುವ ಭರವಸೆ ನೀಡಿದ್ದಾರೆ. ಸಂಘದ ವತಿಯಿಂದ ಐದು ಸಾವಿರ ಮರಣ ನಿಧಿ, ಮುಂದೆ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೆರವೇರಿಸಲಾಗುವುದೆಂದು ಪ್ರಕಟಿಸಿದರು.

ನಿರ್ದೇಶಕ ಎಚ್.ಆರ್.ರಮೇಶ್ ಮಾತನಾಡಿ, ರೈತರು ಸರಕಾರ ಸಾಲ ಮನ್ನಾಕ್ಕೆ ಕಾಯ್ದೆ ಸಕಾಲದಲ್ಲಿ ಮರು ಪಾವತಿ ಮಾಡಿದಲ್ಲಿ ಮಾತ್ರ ಸಂಘದ ಉಳಿವು ಸಾಧ್ಯವೆಂದರೆ, ಮತ್ತೊರ್ವ ನಿರ್ದೇಶಕ ಲೋಕೆಶ್ ಸರಕಾರದಿಂದ ಸಾಲ ಮನ್ನಾ ಬಾಬ್ತು ಬಾಕಿ ಇದೆ. ಹಿಂದಿನ ಸಿಇಓ ಬೊಮ್ಮರಾಯಿ ಗೌಡ ದುರುಪಯೋಗಪಡಿಸಿಕೊಂಡಿರುವ ಸುಮಾರು 70 ಲಕ್ಷ ರೂ. ವಸೂಲಿಯಾಗದೆ ಸಂಘ ನಷ್ಟ ಹೊಂದುವಂತಾಗಿದೆ. ಐ.ಪಿ.ಸೆಟ್, ಹೊಸಬರಿಗೆ ಸಾಲ ನೀಡಲು ಆಗುತ್ತಿಲ್ಲವೆಂದರು.

ಸದಸ್ಯರಾದ ಪುಟ್ಟಸ್ವಾಮಪ್ಪ, ಈಗ ಬರಗಾಲವಿದ್ದು, ಸರಕಾರ ಕನಿಷ್ಟ ಬಡ್ಡಿ ಮನ್ನಾ ಮಾಡುವಂತೆ ನಿರ್ಣಯ ಕೈಗೊಳ್ಳುವಂತೆ ಮನವಿ ಮಾಡಿದರು.

ಸಿಇಓ. ಪುಷ್ಪಕಲಾ ಮಾತನಾಡಿ, ಸಂಘವು 2022-23 ನೇ ಸಾಲಿನ ಲೆಕ್ಕಪತ್ರ ಮಂಡಿಸಿ, ಸಂಘವು 1.05 ಲಕ್ಷ ರೂ. ಲಾಭದಲ್ಲಿದೆ ಎಂದು ತಿಳಿಸಿ, 2023-24 ನೇ ಸಾಲಿನ ಆಯವ್ಯಯದ ಅನುಮೋದನೆ ಪಡೆದುಕೊಂಡರು.

ಉಪಾಧ್ಯಕ್ಷೆ ಸರೋಜಮ್ಮ, ನಿರ್ದೇಶಕ ಜವರೇಗೌಡ, ಡಾ.ಗಣಪತಿ, ನೇರಳಕುಪ್ಪೆ ಮಹದೇವ್ ಮತ್ತಿತರ ಸದಸ್ಯರು ಮಾತನಾಡಿದರು. ನಿರ್ದೇಶಕರಾದ ರಾಮೇಗೌಡ, ಗೀತಾ,ಉಜ್ಜನಿಗೌಡ, ಮಹದೇವಯ್ಯ, ಚಂದ್ರನಾಯಕ, ಲೆಕ್ಕಾಧಿಕಾರಿ ಜಯರಾಂ, ಸಿಬ್ಬಂದಿ ರೂಪ, ಜಮೀಲ್‌ಪಾಷ, ಮನೋಜ್ ಇದ್ದರು.

ಟಾಪ್ ನ್ಯೂಸ್

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Tata-Airbus: ಗುಜರಾತ್ ಗೆ ಆಗಮಿಸಿದ ಸ್ಪೇನ್ ಪ್ರಧಾನಿ: ಟಾಟಾ-ಏರ್‌ಬಸ್ ಸ್ಥಾವರ ಉದ್ಘಾಟನೆ

Tata-Airbus: ಗುಜರಾತ್ ಗೆ ಆಗಮಿಸಿದ ಸ್ಪೇನ್ ಪ್ರಧಾನಿ: ಟಾಟಾ-ಏರ್‌ಬಸ್ ಸ್ಥಾವರ ಉದ್ಘಾಟನೆ

Actor Darshan: ನಟ ದರ್ಶನ್‌ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ 

Actor Darshan: ನಟ ದರ್ಶನ್‌ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ 

Ajekar-mahajar

Ajekar Case Follow Up: ನಿಧಾನಗತಿಯ ಸಾವಿಗೆ ಎರಡು ವಿಷದ ಬಾಟಲಿ ಖರೀದಿಸಿದ್ದ ದಿಲೀಪ್‌

ಡಾಲರ್‌ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?

ಡಾಲರ್‌ಗೆ ಪರ್ಯಾಯ ಹೆಜ್ಜೆ! ಭಾರತಕ್ಕೆ ಉಂಟಾಗುವ ಲಾಭ-ನಷ್ಟಗಳೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MUDA CASE: ಇಂದು ಮತ್ತೆ 4 ಮಂದಿ ವಿಚಾರಣೆ

MUDA CASE: ಇಂದು ಮತ್ತೆ 4 ಮಂದಿ ವಿಚಾರಣೆ

MUDA Case: Lokayukta notice to CM Siddaramaiah after Diwali?

MUDA Case: ದೀಪಾವಳಿ ಬಳಿಕ ಸಿಎಂ ಸಿದ್ದರಾಮಯ್ಯಗೆ ಲೋಕಾ ನೋಟಿಸ್‌?

 MUDA CASE: 8 ಮಂದಿಗೆ ಇ.ಡಿ. ನೋಟಿಸ್‌ ಜಾರಿ

 MUDA CASE: 8 ಮಂದಿಗೆ ಇ.ಡಿ. ನೋಟಿಸ್‌ ಜಾರಿ

6

Arrested: ಗ್ರಾಪಂ ಅಧ್ಯಕ್ಷ ಸ್ಥಾನಕ್ಕಾಗಿ ಉಪಾಧ್ಯಕ್ಷೆ ಪತಿಯ ಹತ್ಯೆ: ನಾಲ್ವರ ಬಂಧನ 

Siddaramaiah: ಸ್ವಂತ ಮನೆ ಇಲ್ಲದ ಸಿಎಂ ಇದ್ದರೆಂದರೆ ಅದು ನಾನೇ

Siddaramaiah: ಸ್ವಂತ ಮನೆ ಇಲ್ಲದ ಸಿಎಂ ಇದ್ದರೆಂದರೆ ಅದು ನಾನೇ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Goodudeepa Competition: ಪರ್ಯಾಯ ಶ್ರೀಕೃಷ್ಣ ಮಠ… ಗೂಡುದೀಪ ಸ್ಪರ್ಧೆ ಉದ್ಘಾಟನೆ

Goodudeepa Competition: ಪರ್ಯಾಯ ಶ್ರೀಕೃಷ್ಣ ಮಠ… ಗೂಡುದೀಪ ಸ್ಪರ್ಧೆ ಉದ್ಘಾಟನೆ

ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ

ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ: ಅವಿಭಜಿತ ಜಿಲ್ಲೆಯ ಸಹಕಾರಿ ಸಂಘ ದೇಶಕ್ಕೆ ಮಾದರಿ

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Nayanthara: ಮುಖಕ್ಕೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡ್ರಾ ಲೇಡಿ ಸೂಪರ್‌ ಸ್ಟಾರ್?

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Threat: ಇಮೇಲ್ ಮೂಲಕ ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ… ಪೊಲೀಸ್, ಶ್ವಾನ ದಳ ದೌಡು

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Mudhol: ನೂರು ಮೀಟರ್ ರಸ್ತೆ ದುರಸ್ಥಿಗೆ ಅಧಿಕಾರಿಗಳ ಕುಂಟು ನೆಪ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.