Hunsur: ಬಿರುಗಾಳಿ ಸಹಿತ ಭಾರೀ ಮಳೆಗೆ ಕೆರೆಯಂತಾದ ಹೊಲಗಳು
ಬುಡ ಸಹಿತ ಉರುಳಿ ಬಿದ್ದ ಮರ, ಕತ್ತಲಿನಲ್ಲಿ ಹಲವು ಗ್ರಾಮಗಳು
Team Udayavani, Jun 2, 2024, 8:52 AM IST
ಹುಣಸೂರು: ತಾಲೂಕಿನ ಹನಗೋಡು ಸುತ್ತಮುತ್ತ ಭಾರೀ ಬಿರುಗಾಳಿ ಸಹಿತ ಮಳೆಗೆ ನೂರಾರು ಮರಗಳು ನೆಲಕ್ಕುರುಳಿದೆ. ಮನೆಗಳ ಮೇಲೆ ಮರ ಬಿದ್ದಿದೆ. ಹೊಲಗಳು ಕೆರೆಯಂತಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯುಂಟಾಗಿದೆ. ಕಿರಂಗೂರು-ಹರಳಹಳ್ಳಿ ರಸ್ತೆ ಮುಚ್ಚಿದೆ. ವಿದ್ಯುತ್ ಕಂಬಗಳು ಉರುಳಿ ಬಿದ್ದು, ಸಂಪರ್ಕ ಕಡಿತಗೊಂಡಿದೆ.
ಶನಿವಾರ ಸಂಜೆ ಕಿರಂಗೂರು, ಹರಳಹಳ್ಳಿ, ಅದ್ವಾಳ, ಕಲ್ಲೂರಪ್ಪನ ಗುಡ್ಡ, ನಾಗಾಪುರ ಗಿರಿಜನ ಪುನರ್ವತಿ ಕೇಂದ್ರ, ಹಿಂಡಗುಡ್ಲು, ದಾಸನಪುರ ಮತ್ತಿತರ ಕಡೆಗಳಲ್ಲಿ ಬಿರುಗಾಳಿಗೆ ಮರಗಳು ಮನೆ ಮೇಲೆ, ರಸ್ತೆ, ವಿದ್ಯುತ್ ಲೈನ್ ಮೇಲೆ ಉರುಳಿ ಬಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಈ ಭಾಗದ ಹಳ್ಳಿಗಳು ಕಗ್ಗತ್ತಲಲ್ಲಿ ಮುಳುಗಿದೆ.
ಕೆರೆಯಂತಾದ ಹೊಲಗಳು:
ಕಿರಂಗೂರು-ಹರಳಹಳ್ಳಿ ಹಳ್ಳದಲ್ಲಿ ಭಾರೀ ಪ್ರಮಾಣದ ನೀರು ಹರಿದು ಹರಳಹಳ್ಳಿ-ಅದ್ವಾಳ ರಸ್ತೆ ಸಂಚಾರ ಬಂದ್ ಆಗಿದೆ.
ನೂರಾರು ಎಕರೆ ಶುಂಠಿ, ತಂಬಾಕು, ಮುಸುಕಿನ ಜೋಳ ಮತ್ತಿತರ ಬೆಳೆಗಳ ಹೊಲದಲ್ಲಿ ಅಪಾರ ಪ್ರಮಾಣದಲ್ಲಿ ನೀರು ತುಂಬಿ ಹರಿದು ಬೆಳೆಗಳೆ ಕೊಚ್ಚಿಕೊಂಡು ಹೋಗಿದೆ. ನೀರು ನಿಂತು ಬೆಳೆ ಸಂಪೂರ್ಣ ನಾಶವಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಉರುಳಿ ಬಿದ್ದ ಮರಗಳು:
ಬಿರುಗಾಳಿಗೆ ಅದ್ವಾಳದ ಚಂದ್ರಪ್ಪ ಎಂಬವರ ಮನೆ ಮೇಲೆ ಭಾರೀ ಗಾತ್ರದ ಮರ ಉರುಳಿ ಬಿದ್ದಿದೆ. ಅಲ್ಲದೆ ನಾಗಾಪುರ, ಹರಳ ಹಳ್ಳಿಗಳಲ್ಲಿ ಮನೆ ಮೇಲೆ ಮರಗಳು ಉರುಳಿ ಬಿದ್ದು ಮನೆಗಳಿಗೆ ಹಾನಿಯಾಗಿದೆ.
ಹರಳಹಳ್ಳಿಯಲ್ಲಿ ಮನೆ ಕಡೆಗೆ ಬರುತ್ತಿದ್ದ ಹಸುವಿನ ಮೇಲೆ ರಸ್ತೆ ಬದಿಯ ಮರ ಬಿದ್ದು ತೀವ್ರಗಾಯವಾಗಿದೆ. ವಿದ್ಯುತ್ ಲೈನ್ ಮೇಲೆ ಮರ ಬಿದ್ದು ಹಲವಾರು ಕಂಬಗಳು ಧರೆಗುರುಳಿವೆ.
ಇದೇ ರೀತಿ ಹನಗೋಡು ಹೋಬಳಿಯಾದ್ಯಂತ ಭಾರೀ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದನ್ನು ಸ್ಮರಿಸಬಹುದು. ಇನ್ನಾದರೂ ಸರಕಾರ ಬೆಳೆ ನಷ್ಟ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಕೊಡಗು, ನಾಗರಹೊಳೆಯಲ್ಲಿ ಭಾರೀ ಮಳೆಗೆ ತುಂಬಿದ ಹನಗೋಡು ಅಣೆಕಟ್ಟೆ
Hunasur: ಪತ್ನಿ ಮನೆಗೆ ಹೋಗಿ ಹಿಂತಿರುಗುವ ವೇಳೆ ರಸ್ತೆ ಅಪಘಾತ… ಪತಿ ಮೃತ್ಯು
Hunasuru: ಮನೆ ಬಳಿ ಮಂಗಳಮುಖಿಯರ ಗಲಾಟೆ, ಹೆದರಿ ಆತ್ಮಹತ್ಯೆಗೆ ಶರಣಾದ ಬಾಲಕ
B.Y. Vijayendra “ಅಭ್ಯರ್ಥಿ ಇನ್ನೂ ತೀರ್ಮಾನ ಆಗಿಲ್ಲ’; ನಾಡಿದ್ದು ದಿಲ್ಲಿಗೆ ತೆರಳಿ ಚರ್ಚೆ
Fake ಷೇರು ಮಾರುಕಟ್ಟೆಯಲ್ಲಿ ಹೂಡಿಕೆ: 3 ಕೋಟಿ ರೂ. ಕಳೆದುಕೊಂಡ ಯುವಕ!
MUST WATCH
ಹೊಸ ಸೇರ್ಪಡೆ
Sandalwood; ಟೀನೇಜ್ ಲವ್ ಸ್ಟೋರಿಗೆ ‘ಕಾಗದ’ ಸಾಕ್ಷಿ
Egg Loli pop Recipes; ಅಬ್ಬಾ! ಏನ್ ರುಚಿ ಈ ಎಗ್ ಲಾಲಿಪಾಪ್
NEET : ಲೋಕಸಭೆಯಲ್ಲಿ ನೀಟ್ ಅಕ್ರಮ ಚರ್ಚೆಗೆ ಪಟ್ಟು, ಕೋಲಾಹಲ; ಕಲಾಪ ಮುಂದೂಡಿಕೆ
INDWvsSAW; ಶಫಾಲಿ ದ್ವಿಶತಕ, ಸ್ಮೃತಿ ಶತಕ: ಹರಿಣಗಳನ್ನು ಹೈರಾಣಾಗಿಸಿದ ಭಾರತೀಯ ಜೋಡಿ
Malur ಆಸ್ಪತ್ರೆಗೆ ಶಾಸಕ ಆರಗ ಜ್ಞಾನೇಂದ್ರ ದಿಡೀರ್ ಭೇಟಿ… ವ್ಯವಸ್ಥೆಗಳ ಬಗ್ಗೆ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.