Hunsur: ಭಾರಿ ಮಳೆ; ಮನೆ ಮೇಲೆ ಉರುಳಿಬಿದ್ದ ತೆಂಗಿನ ಮರ; ತಪ್ಪಿದ ಭಾರೀ ಅನಾಹುತ
ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
Team Udayavani, Jul 15, 2024, 11:10 AM IST
ಹುಣಸೂರು: ತಾಲೂಕಿನಲ್ಲಿ ಭಾನುವಾರ ಸಂಜೆ ಸುರಿದ ಮಳೆಗೆ ನಗರದಲ್ಲಿ ಜನಜೀವನ ಅಸ್ತವ್ಯಸ್ಥವಾಗಿತ್ತು. ಮನೆ ಮೇಲೆ ತೆಂಗಿನ ಮರ ಉರುಳಿ ಬಿದ್ದಿತ್ತಾದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಗರದ ಕಲ್ಕುಣಿಕೆ ಹತ್ತಿ ಮರದ ಬೀದಿಯ ನಿಂಗಣ್ಯರ ಮನೆ ಬಳಿಯ ತೆಂಗಿನ ಮರ ಬುಡ ಸಹಿತ ಮನೆ ಮೇಲೆ ಉರುಳಿಬಿದ್ದ ಪರಿಣಾಮ ಮನೆ ಮೇಲ್ಚಾವಣಿಗೆ ಹಾನಿಯಾಗಿದ್ದರೂ ಮನೆಯವರು ಹೊರಗೆ ಹೋಗಿದ್ದರಿಂದಾಗಿ ಬಚಾವ್ ಆಗಿದ್ದಾರೆ.
ಇದೇ ರಸ್ತೆಯ ಮೂರು ವಿದ್ಯುತ್ ಕಂಬಗಳು ಧರೆಗುರುಳಿದೆ. ಸಂಜೆ 5ರ ವೇಳೆಗೆ ಆರಂಭವಾದ ಜಿಟಿಜಿಟಿ ಮಳೆ ರಾತ್ರಿ 8ರ ವೇಳೆಗೆ ಜೋರಾಗಿ ಬೀಳಲಾರಂಭಿಸಿದೆ. ಇದರಿಂದ ಮನೆಯಿಂದ ಸಾಮಗ್ರಿಗಳನ್ನು ಖರೀದಿಸಲು ಮನೆಯಿಂದ ಹೊರಬಂದಿದ್ದವರು ವಾಪಸ್ ತೆರಳಲಾಗದೆ ಪರದಾಡಿದರು.
ಭಾನುವಾರ ಆಗಿದ್ದರಿಂದ ಶಾಲಾ-ಕಾಲೇಜಿಗೆ ರಜೆ ಇದ್ದುದ್ದರಿಂದಾಗಿ ನಿಟ್ಟುಸಿರು ಬಿಟ್ಟರಾದರೂ ಸಾಮಗ್ರಿಗಳ ಖರೀದಿಗೆ ಬಂದಿದ್ದವರು ಮಳೆಯಿಂದಾಗಿ ಮನೆಗೆ ತೆರಳಲಾರದೆ ಪರದಾಡಿದರು.
ಭಾರಿ ಮಳೆಯಿಂದಾಗಿ ಹುಣಸೂರಿನಲ್ಲಿ ಜು.15ರ ಸೋಮವಾರ ಎಲ್ಲಾ ಶಾಲಾ-ಕಾಲೇಜುಗಳಿಗೆ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.