ಹಸುಗಳ ಬಲಿ ಪಡೆಯುತ್ತಿದ್ದ ಚಿರತೆ ಸೆರೆ

ಕೊಟ್ಟಿಗೆಗೆ ನುಗ್ಗಿ ನಾಯಿ, ಆಡು ಕುರಿ ಭಕ್ಷಿಸುತ್ತಿದ್ದ ವನ್ಯಜೀವಿ ಈ ಭಾಗದಲ್ಲಿರುವ ಇನ್ನೂ 2 ಚಿರತೆ ಸೆರೆಗೆ ಆಗ್ರಹ

Team Udayavani, Nov 11, 2021, 12:08 PM IST

ಹಸುಗಳ ಬಲಿ ಪಡೆಯುತ್ತಿದ್ದ ಚಿರತೆ ಸೆರೆ

ಹುಣಸೂರು: ಹಲವಾರು ದಿನಗಳಿಂದ ಹನಗೋಡು ಭಾಗದ ರೈತರು-ಸಾರ್ವಜನಿಕರನ್ನು ಭಯಭೀತರನ್ನಾಗಿ ಸಿದ್ದ ಚಿರತೆಯು ಕೊನೆಗೂ ಬೋನಿನಲ್ಲಿ ಬಂಧಿಯಾಗಿದೆ. ತಾಲೂಕಿನ ಹನಗೋಡು ಹೋಬಳಿಯ ವಡ್ಡಂಬಾಳು ಗ್ರಾಮದ ಸಿದ್ದರಾಜು ಜಮೀನಿನಲ್ಲಿ ಅರಣ್ಯ ಇಲಾಖೆಯವರು ಇರಿಸಿದ್ದ ಬೋನಿನಲ್ಲಿ ಆರು ವರ್ಷದ ಗಂಡು ಚಿರತೆಯು ಸೆರೆ ಸಿಕ್ಕಿದೆ.

ಬುಧವಾರ ಬೆಳಗ್ಗೆ ಜಮೀನಿನ ಮಾಲಿಕ ಸಿದ್ದರಾಜು ಅವರು ಪ್ರಾದೇಶಿಕ ಅರಣ್ಯ ಇಲಾಖೆಯ ಆರ್‌ ಎಫ್‌ಒ ನಂದಕುಮಾರ್‌ಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಸಿಕ್ಕ ಚಿರತೆಯನ್ನು ನಾಗರಹೊಳೆ ಉದ್ಯಾನದ ಕಲ್ಲಹಳ್ಳ ಅರಣ್ಯದಲ್ಲಿ ಬಂಧ ಮುಕ್ತಗೊಳಿಸಿದರು. ಕಳೆದ 5-6 ತಿಂಗಳುಗಳಿಂದ ಚಿರತೆಯು ಲಕ್ಷ್ಮಣತೀರ್ಥ ನದಿ ದಂಡೆ ಹಾಗೂ ಕಬ್ಬಿನಗದ್ದೆಯ ಆಸುಪಾಸು ಸೇರಿದಂತೆ ಅಕ್ಕಪಕ್ಕದ ಜಮೀನುಗಳಲ್ಲಿ ಮೇಯಲು ಬಿಟ್ಟ ಜಾನುವಾರುಗಳನ್ನು ತಿಂದು ಹಾಕುತ್ತಿತ್ತು.

ಇದನ್ನೂ ಓದಿ:-ಮದಕರಿ ನಾಯಕನಿಗೆ ವಿಷ ಹಾಕಿಕೊಂದ ಟಿಪ್ಪುಜಯಂತಿ ಮಾಡಿದ್ದು ಸಿದ್ದರಾಮಯ್ಯ ಸಾಧನೆ:ಪ್ರತಾಪ್ ಸಿಂಹ

ಇದಲ್ಲದೇ ಗ್ರಾಮದೊಳಗೂ ನುಗ್ಗಿ ಕೊಟ್ಟಿಗೆಯಲ್ಲಿರುವ ಸಾಕುನಾಯಿ, ಆಡು-ಕುರಿಗಳ ಮೇಲೆ ದಾಳಿ ನಡೆಸಿ ಜನರನ್ನು ಭಯಭೀತರನ್ನಾಗಿಸಿತ್ತು. ಅರಣ್ಯ ಇಲಾಖೆಯವರು ಹತ್ತಾರು ಬಾರಿ ಜಾಗ ಬದಲಾಯಿಸಿ ಬೋನ್‌ ಇರಿಸಿದ್ದರೂ ಚಿರತೆ ಬೋನಿನಲ್ಲಿ ಸೆರೆಯಾಗದೆ ಚಳ್ಳೆ ಹಣ್ಣು ತಿನ್ನಿಸಿ ಬೇಟೆಯಾಡಿ ಹೊಟ್ಟೆ ತುಂಬಿಸಿಕೊಂಡು ಓಡಾಡುತ್ತಿತ್ತು.

ಇನ್ನೂ 2 ಚಿರತೆ ಇವೆ: ವಡ್ಡಂಬಾಳು ಸೇರಿದಂತೆ ಅಕ್ಕಪಕ್ಕದ ಜಮೀನುಗಳಲ್ಲಿ ಹಲವಾರು ಬಾರಿ ಬೋನ್‌ ಇರಿಸಲಾಗಿತ್ತಾದರೂ ಬೋನಿಗೆ ಚಿರತೆ ಬೀಳುತ್ತಿಲ್ಲ, ಮತ್ತೆ ಸ್ಥಳವನ್ನು ಬದಲಾಯಿಸುತ್ತಿತ್ತು. ಇದೀಗ ಒಂದು ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಇದಲ್ಲದೆ ಇನ್ನೂ ಎರಡು ಚಿರತೆಗಳಿದ್ದು, ಅವುಗಳನ್ನೂ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

 ಚಿರತೆಗೆ ಕಣ್ಣಿನ ಶಸ್ತ್ರಚಿಕಿತ್ಸೆ

ಬೋನ್‌ನಲ್ಲಿ ಬಂಧಿಯಾಗಿರುವ ಚಿರತೆಯ ಬಲಗಣ್ಣಿನ ಮೇಲೆ ಗುಳ್ಳೆಯಾಗಿದ್ದು, ಅರಣ್ಯ ಇಲಾಖೆ ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಇನ್ನೆರಡು ದಿನಗಳ ನಂತರವಷ್ಟೆ ಕಾಡಿಗೆ ಬಿಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ತಾಲೂಕಿನ ಹೆಗ್ಗಂದೂರಿನಲ್ಲಿ ಸೆರೆ ಸಿಕ್ಕ ಚಿರತೆಯ ಬಲಗಣ್ಣಿನ ಮೇಲೆ ಗುಳ್ಳೆಯಾಗಿದ್ದರೆ, ಮತ್ತೂಂದೆಡೆ ಕಾಲಿಗೂ ಗಾಯಗಳಾಗಿದೆ. ಕಾಡಿನೊಳಗೆ ಬಿಟ್ಟಲ್ಲಿ ಬೇಟೆಯಾಡಲು ಸಾಧ್ಯವಾಗದೆ ನಿತ್ರಾಣ ಗೊಳ್ಳಲಿದೆ. ಹೀಗಾಗಿ ಪಶುವೈದ್ಯ ಡಾ.ರಮೇಶ್‌ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಗುಳ್ಳೆಯನ್ನು ತೆಗೆದಿದ್ದಾರೆ. ಇನ್ನೆಡು ದಿನಗಳ ಕಾಲ ನಿಗಾ ಇಡಲಾಗುವುದು, ಬಳಿಕ ಕಾಡಿಗೆ ಬಿಡಲಾಗುವುದೆಂದು ಪ್ರಾದೇಶಿಕ ಅರಣ್ಯ ವಿಭಾಗದ ಆರ್‌ಎಫ್‌ಒ ನಂದಕುಮಾರ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

8-ptr-bus-campaign

Udayavani Campaign: 14 ಹೊಸ ಬಸ್‌ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಸಿದ್ಧ

ವಿಜಯೇಂದ್ರ

Shimoga; ಸಿಎಂ ಗಮನಕ್ಕೆ ಬಾರದೆ ವಾಲ್ಮೀಕಿ ನಿಗಮ ಹಣ ಲೂಟಿ ಸಾಧ್ಯವಿಲ್ಲ: ವಿಜಯೇಂದ್ರ ಆರೋಪ

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

Postponed UGC NET, CSIR NET exam date announced

NTA; ಮುಂದೂಡಲಾಗಿದ್ದ UGC NET, CSIR NET ಪರೀಕ್ಷಾ ದಿನಾಂಕ ಪ್ರಕಟ

7-thirthahalli

Thirthahalli: ಕಳ್ಳತನಕ್ಕೆ ಬಂದವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು !

1

Renukaswamy: ಕಿರುತೆರೆಯ ಕ್ರೈಮ್‌ ಶೋನಲ್ಲಿ ಪ್ರಸಾರವಾಗಲಿದೆ ರೇಣುಕಾಸ್ವಾಮಿ ಪ್ರಕರಣದ ಕಥೆ?

ಮಮತಾ ಬ್ಯಾನರ್ಜಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ

Defamation Case: ಮಮತಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬಂಗಾಳ ರಾಜ್ಯಪಾಲ ಬೋಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ptr-bus-campaign

Udayavani Campaign: 14 ಹೊಸ ಬಸ್‌ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಸಿದ್ಧ

NEET Paper Leak case: ಸಿಬಿಐನಿಂದ ಜಾರ್ಖಂಡ್‌ ಕಾಲೇಜಿನ ಪ್ರಾಂಶುಪಾಲರ ಬಂಧನ

NEET Paper Leak case: ಸಿಬಿಐನಿಂದ ಜಾರ್ಖಂಡ್‌ ಕಾಲೇಜಿನ ಪ್ರಾಂಶುಪಾಲರ ಬಂಧನ

ವಿಜಯೇಂದ್ರ

Shimoga; ಸಿಎಂ ಗಮನಕ್ಕೆ ಬಾರದೆ ವಾಲ್ಮೀಕಿ ನಿಗಮ ಹಣ ಲೂಟಿ ಸಾಧ್ಯವಿಲ್ಲ: ವಿಜಯೇಂದ್ರ ಆರೋಪ

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

Postponed UGC NET, CSIR NET exam date announced

NTA; ಮುಂದೂಡಲಾಗಿದ್ದ UGC NET, CSIR NET ಪರೀಕ್ಷಾ ದಿನಾಂಕ ಪ್ರಕಟ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

8-ptr-bus-campaign

Udayavani Campaign: 14 ಹೊಸ ಬಸ್‌ ಓಡಾಟಕ್ಕೆ ಕೆಎಸ್‌ಆರ್‌ಟಿಸಿ ಸಿದ್ಧ

NEET Paper Leak case: ಸಿಬಿಐನಿಂದ ಜಾರ್ಖಂಡ್‌ ಕಾಲೇಜಿನ ಪ್ರಾಂಶುಪಾಲರ ಬಂಧನ

NEET Paper Leak case: ಸಿಬಿಐನಿಂದ ಜಾರ್ಖಂಡ್‌ ಕಾಲೇಜಿನ ಪ್ರಾಂಶುಪಾಲರ ಬಂಧನ

ವಿಜಯೇಂದ್ರ

Shimoga; ಸಿಎಂ ಗಮನಕ್ಕೆ ಬಾರದೆ ವಾಲ್ಮೀಕಿ ನಿಗಮ ಹಣ ಲೂಟಿ ಸಾಧ್ಯವಿಲ್ಲ: ವಿಜಯೇಂದ್ರ ಆರೋಪ

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

Box office: ʼಕಲ್ಕಿ 2898 ಎಡಿʼಯ 2ನೇ ದಿನದ ಗಳಿಕೆಯಲ್ಲಿ ಭಾರೀ ಕುಸಿತ; ಗಳಿಸಿದ್ದೆಷ್ಟು?

Postponed UGC NET, CSIR NET exam date announced

NTA; ಮುಂದೂಡಲಾಗಿದ್ದ UGC NET, CSIR NET ಪರೀಕ್ಷಾ ದಿನಾಂಕ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.