ಬಡ ಹೆಣ್ಣು ಮಕ್ಕಳ ಬಾಳು ಬೆಳಗಿಸಿದ 30 ಮಂದಿ ವೈದ್ಯರು
Team Udayavani, Jun 11, 2020, 8:16 AM IST
ಮಂಗಳೂರು: ಸಮಾಜಕ್ಕೆ ಸಹಕಾರಿಯಾಗಬೇಕೆಂದು”ಕರಸೇವಾ’ ಹೆಸರಿನಲ್ಲಿ ಸಂಘಟಿತರಾದ ಮಂಗಳೂರು ಸಹಿತ ರಾಜ್ಯದ 30 ಮಂದಿ ವೈದ್ಯ ವಿದ್ಯಾರ್ಥಿಗಳ ತಂಡವೊಂದು 22 ಮಂದಿ ಬಡ ಕುಟುಂಬದ ಹೆಣ್ಣು ಮಕ್ಕಳ ಬಾಳಿಗೆ ಬೆಳಕಾಗಲು ಹೊರಟಿದೆ.
ಈ ವಿದ್ಯಾರ್ಥಿಗಳು “ಸುಕನ್ಯಾ ವಿದ್ಯಾ ವರ್ಧಕ’ ಎಂಬ ಹೆಸರಿನ ಯೋಜನೆ ಯೊಂದನ್ನು ರೂಪಿಸಿಕೊಂಡು ಅರ್ಹತೆ
ಪಡೆಯುವ ಪ್ರತಿ ಬಾಲಕಿ ಖಾತೆಗೆ ತಿಂಗಳಿಗೆ 250 ರೂ. ಜಮಾ ಮಾಡಿ ಅವರ ಶೈಕ್ಷಣಿಕ, ವೈವಾಹಿಕ ಬದುಕಿಗೆ ಆರ್ಥಿಕ ಭದ್ರತೆ ಒದಗಿಸಲು ಮುಂದಾಗಿದ್ದಾರೆ.
ಮಂಗಳೂರಿನ ಖಾಸಗಿ ಕಾಲೇಜಿ ನಲ್ಲಿ ಎಂಬಿಬಿಎಸ್ ವ್ಯಾಸಂಗ ಮುಗಿಸಿದ್ದ ಈ ವೈದ್ಯರ ತಂಡ ಟೀಂ ಕರಸೇವಾ ಹೆಸರಿನಲ್ಲಿ ಈಗಾಗಲೇ ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಿರತವಾಗಿದೆ. ಇದೀಗ ಸಮಾಜದಲ್ಲಿ ಬಡ ಹೆಣ್ಣು ಮಕ್ಕಳ ಬದುಕಿಗೆ ಆಸರೆಯಾಗುವ ಉದ್ದೇಶದಿಂದ 22 ಮಂದಿ ಬಾಲಕಿಯರನ್ನು ಆಯ್ಕೆ ಮಾಡಿಕೊಂಡು 15 ವರ್ಷ ಕಾಲ ತಿಂಗಳಿಗೆ 250 ರೂ.ನಂತೆ ಅವರೆಲ್ಲರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲು ಹೊರಟಿದ್ದು ಈ ಕನಸಿನ ಪ್ರಯತ್ನಕ್ಕೆ “ಸುಕನ್ಯಾ ವಿದ್ಯಾವರ್ಧಕ ಯೋಜನೆ’ ಎಂದು ಹೆಸರಿಟ್ಟಿದ್ದಾರೆ. ಬಾಲಕಿಯರ ಖಾತೆಗೆ ಪ್ರತಿ ತಿಂಗಳು ಹಣ ಜಮೆಯಾಗುತ್ತಿರುತ್ತದೆ. ಆದರೆ,
ಅದರ ನಿರ್ವಹಣೆಯನ್ನು ಕರಸೇವಾ ಸದಸ್ಯರೇ ಮಾಡಲಿದ್ದಾರೆ. 15 ವರ್ಷಗಳಿಗೆ ಮೊದಲು ಯಾರೂ ಖಾತೆ ಯಿಂದ ಹಣ ವಿಥ್ ಡ್ರಾ ಮಾಡಲು ಸಾಧ್ಯವಾಗುವುದಿಲ್ಲ.
15 ವರ್ಷ ಕಳೆಯುವಾಗ ಪ್ರತಿಯೊಬ್ಬರ ಖಾತೆಯಲ್ಲಿ ಬಡ್ಡಿ ದರ ಸೇರಿದಂತೆ ಜಮೆಯಾಗುವ ಒಟ್ಟು ಮೊತ್ತ ಹಾಗೂ ಆ ನಂತರದ ಆರು ವರ್ಷಗಳ ಮೆಚ್ಯುರಿಟಿ ಅವಧಿಯ ಬಡ್ಡಿ ಸೇರಿದಂತೆ ಒಟ್ಟಾರೆ ಒಂದು ಲಕ್ಷ ರೂ.ಗೂ ಅಧಿಕ ಹಣ ಲಭ್ಯವಾಗಲಿದೆ. ಇದರಿಂದ ಆ ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಅಥವಾ ವಿವಾಹಕ್ಕೆ ನೆರವಾಗುತ್ತದೆ ಎನ್ನುವುದು ಈ ವೈದ್ಯ ವಿದ್ಯಾರ್ಥಿಗಳ ಯೋಚನೆ-ಯೋಜನೆಯಾಗಿದೆ.
ಬಾಲಕಿಯರ ಆಯ್ಕೆ ಹೇಗೆ?
ಸುಕನ್ಯಾ ವಿದ್ಯಾವರ್ಧಕ ಯೋಜನೆಯಡಿ 10 ವರ್ಷದ ಕೆಳಗಿನ ಬಾಲಕಿಯರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
https://docs.google.com/forms/d/e/1FAIpQLSf29gRdMItugmJx4VPbrbBYgeku3mR8ZaQvaXfKHuL9PukP-A/viewform?usp=sf_link ಈ ಲಿಂಕ್ಗೆ ಲಾಗ್ ಇನ್ ಆಗಿ ಪೋಷಕರು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಬದುಕಿಗೆ ನೆರವಾಗುವ ಉದ್ದೇಶ
ಬಡ ಹೆಣ್ಣು ಮಕ್ಕಳ ಬದುಕಿಗೆ ನೆರವಾಗುವ ಉದ್ದೇಶದಿಂದ ಸುಕನ್ಯಾ ವಿದ್ಯಾವರ್ಧಕ ಯೋಜನೆಯನ್ನು ಯೋಜಿಸಿ ದ್ದೇವೆ. 15 ವರ್ಷ ಕಾಲ ಪ್ರತಿ ತಿಂಗಳು 250 ರೂ.ಗಳನ್ನು ಅವರ ಖಾತೆಗೆ ಜಮಾ ಮಾಡಿದರೆ ಅವರ ಉನ್ನತ ಶಿಕ್ಷಣ, ಮದುವೆಯಂತಹ ಸಂದರ್ಭದಲ್ಲಿ ಈ ಹಣ ನೆರವಿಗೆ ಬರಬಹುದು ಎಂಬ ಉದ್ದೇಶ ನಮ್ಮದು.
-ಅನ್ಮೋಲ್ ಬಾಳೇರಿ, ಟೀಂ ಕರಸೇವಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ
Leopard: ಮೂಲ್ಕಿ ಕೊಯ್ಯಾರಿನಲ್ಲಿ ಚಿರತೆ?
Ullal;ಜನಪ್ರತಿನಿಧಿಗಳು ಸೇರಿ ಹಲವರಿಂದ ಅರ್ಜುನ್ ಅಂತಿಮ ದರ್ಶನ
Mangaluru: ರಾಷ್ಟ್ರೀಯ ಹೆದ್ದಾರಿಯಲ್ಲೇ ಹೊತ್ತಿ ಉರಿದ BMW ಕಾರು… ಪ್ರಯಾಣಿಕರು ಪಾರು
Mangaluru: ಮುಕ್ತಿ ಕಾಣದ “ಬ್ಲ್ಯಾಕ್ಸ್ಪಾಟ್’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.