![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 15, 2020, 7:47 PM IST
ಬೀದರ್: ಗಡಿ ನಾಡು ಬೀದರ್ನಲ್ಲಿ ಕೋವಿಡ್-19 ಆರ್ಭಟ ಮುಂದುವರೆದಿದ್ದು, ಸೋಮವಾರ ಮಹಾರಾಷ್ಟ್ರ ಜತೆಗೆ ತೆಲಂಗಾಣ ಕಂಟಕದಿಂದ ಮತ್ತೆ 11 ಹೊಸ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇನ್ನೊಂದೆಡೆ 36 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ 351 ಕ್ಕೆ ಏರಿಕೆ ಆಗಿದೆ.
ದಿನದಿಂದ ದಿನಕ್ಕೆ ಕೋವಿಡ್-19 ಪಾಟಿಸಿವ್ ಸಂಖ್ಯೆ ಹೆಚ್ಚುತ್ತಲೇ ಇದ್ದು, ಗ್ರಾಮೀಣ ಭಾಗದಲ್ಲಿ ತನ್ನ ಕರಾಳ ಛಾಯೆ ಆವರಿಸುತ್ತಿದೆ. ಸೋಮವಾರ ಮತ್ತೆ ಬಸವಕಲ್ಯಾಣ ತಾಲೂಕಿನಲ್ಲಿ ವೈರಾಣು ಬಾಧಿತರ ಸಂಖ್ಯೆ ಹೆಚ್ಚಿರುವುದು ಆ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ಒಟ್ಟು ಸೋಂಕಿತ 11 ಜನರಲ್ಲಿ ಮೂವರು ತೆಲಂಗಾಣದಿಂದ ಹಿಂದಿರುಗಿದ್ದರೆ, ಇನ್ನುಳಿದ 5 ಮಂದಿ ಮಹಾರಾಷ್ಟ್ರದ ಸಂಪರ್ಕದಿಂದಾಗಿ ರೋಗ ಒಕ್ಕರಿಸಿದೆ.
ಬಸವಕಲ್ಯಾಣ ತಾಲೂಕಿನ ಉಮಾಪೂರ ಗ್ರಾಮದ 3, ಹೊನ್ನಳ್ಳಿ ಗ್ರಾಮದ 2 ಸೇರಿ ಒಟ್ಟು 5 ಕೇಸ್, ಔರಾದ ತಾಲೂಕಿನ ಠಾಣಾಕುಶನೂರ ಗ್ರಾಮದ 3, ಜಮಲಾಪೂರ 1 ಸೇರಿ ಒಟ್ಟು 4 ಕೇಸ್, ಕಮಲನಗರ ತಾಲೂಕಿನ ನಿಟ್ಟೂರ್ ಗ್ರಾಮದ 2 ಕೇಸ್ಗಳು ಪತ್ತೆಯಾಗಿವೆ. 27 ವರ್ಷದ ಹೆಣ್ಣು ಪಿ 7082, 63 ವರ್ಷದ ಗಂಡು ಪಿ 7083, 35ವರ್ಷದ ಗಂಡು ಪಿ 7084, 19 ವರ್ಷದ ಗಂಡು ಪಿ 7085, 27ವರ್ಷದ ಗಂಡು ಪಿ 7086, 25 ವರ್ಷದ ಹೆಣ್ಣು ಪಿ 7087, 40 ವರ್ಷದ ಹೆಣ್ಣು ಪಿ 7088, 15ವರ್ಷದ ಗಂಡು ಪಿ 7089 ಮಹಾರಾಷ್ಟ್ರದ ಸಂಪರ್ಕ ಹಾಗೂ 30 ವರ್ಷದ ಗಂಡು ಪಿ 7090, 25 ವರ್ಷದ ಹೆಣ್ಣು ಪಿ 7091ಮತ್ತು 40 ವರ್ಷದ ಹೆಣ್ಣು ಪಿ 7092 ರೋಗಿಗಳು ತೆಲಂಗಾಣದ ಸಂಪರ್ಕ ಹೊಂದಿದ್ದಾರೆ.
ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ ಈಗ 351 ಆದಂತಾಗಿದೆ. ಒಟ್ಟು 6 ಜನ ಸಾವನ್ನಪ್ಪಿದ್ದರೆ, 239 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 136 ಪ್ರಕರಣಗಳು ಸಕ್ರೀಯವಾಗಿವೆ ಎಂದು ಆರೋಗ್ಯ ಇಲಾಖೆ ದೃಢಪಡಿಸಿದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.