![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Sep 14, 2023, 11:23 PM IST
ನವದೆಹಲಿ: ಪ್ರತಿಪಕ್ಷಗಳ ಒಕ್ಕೂಟ ಐಎನ್ಡಿಐಎ 14 ಸುದ್ದಿವಾಹಿನಿಗಳು ಮತ್ತು ಅಲ್ಲಿ ಕೆಲಸ ಮಾಡುವ 14 ಮಂದಿ ಪ್ರಮುಖ ಸುದ್ದಿ ವಾಚಕರನ್ನು ಬಹಿಷ್ಕರಿಸಲು ಹಾಗೂ ಅವರು ನಡೆಸಿಕೊಂಡುವ ಚರ್ಚೆಗಳಲ್ಲಿ ಭಾಗವಹಿಸದೇ ಇರಲು ತೀರ್ಮಾನಿಸಿದೆ. ಒಕ್ಕೂಟದ ಮಾಧ್ಯಮ ಸಮಿತಿ ಈ ಬಗ್ಗೆ ತೀರ್ಮಾನ ಕೈಗೊಂಡಿದೆ.
ಬಹಿಷ್ಕಾರಕ್ಕೆ ಒಳಗಾದವರ ಪೈಕಿ ಅರ್ನಾಬ್ ಗೋಸ್ವಾಮಿ (ರಿಪಬ್ಲಿಕ್), ನವಿಕಾ ಕುಮಾರ್ (ಟೈಮ್ಸ್ ನೌ), ಆನಂದ ನರಸಿಂಹನ್ (ನ್ಯೂಸ್18), ಚಿತ್ರಾ ತ್ರಿಪಾಠಿ (ಆಜ್ತಕ್) ಸೇರಿದ್ದಾರೆ. ನಿರ್ಧಾರವನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ನ ಪವನ್ ಖೇರಾ “ನಾವು ಯಾವುದೇ ಸುದ್ದಿ ವಾಚಕರಿಗೆ ವಿರೋಧವಾಗಿಲ್ಲ. ಅವರು ನಡೆಸಿಕೊಡುವ ಕಾರ್ಯಕ್ರಮಗಳಲ್ಲಿ ನಮ್ಮ ಒಕ್ಕೂಟದ ನಾಯಕರು, ವಕ್ತಾರರು ಭಾಗವಹಿಸುವುದಿಲ್ಲ. ಕೆಲವೊಂದು ಮಾಧ್ಯಮ ಸಂಸ್ಥೆಗಳು ಮತ್ತು ಸುದ್ದಿ ವಾಚಕರು ದ್ವೇಷದ ಅಂಗಡಿಯನ್ನು ಇರಿಸಿಕೊಂಡಿದ್ದಾರೆಂದು ಹೇಳಿದ್ದಾರೆ. ನಿರ್ಧಾರದ ಬಗ್ಗೆ ಆಕ್ಷೇಪವೆತ್ತಿರುವ ನ್ಯೂಸ್ ಬ್ರಾಡ್ಕಾಸ್ಟರ್ಸ್ ಆ್ಯಂಡ್ ಡಿಜಿಟಲ್ ಅಸೋಸಿಯೇಷನ್ “ಇಂಥ ನಿರ್ಣಯ ಅಪಾಯಕಾರಿ ಪ್ರವೃತ್ತಿಗೆ ದಾರಿ ಮಾಡಿಕೊಡಲಿದೆ. ಇದು ಪ್ರಜಾಪ್ರಭುತ್ವದ ಆಶಯಕ್ಕೆ ಕೊಡಲಿಯೇಟು ನೀಡಲಿದೆ’ ಎಂದಿದೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.