![Hunasuru-Marriage](https://www.udayavani.com/wp-content/uploads/2024/12/Hunasuru-Marriage-415x249.jpg)
ಕೃಷಿಕನ ಜೀವನಾಧಾರ ರಬ್ಬರ್ ಮರಕ್ಕೆ ಮೆಸ್ಕಾಂ ಕೊಡಲಿ ಏಟು
ಮಾಹಿತಿ ನೀಡದೆ 14 ವರ್ಷದ ಮರ ಕಡಿದ ಹಿರಿಯಡ್ಕ ಮೆಸ್ಕಾಂ ಇಲಾಖೆ
Team Udayavani, Apr 10, 2020, 1:14 PM IST
![ಕೃಷಿಕನ ಜೀವನಾಧಾರ ರಬ್ಬರ್ ಮರಕ್ಕೆ ಮೆಸ್ಕಾಂ ಕೊಡಲಿ ಏಟು](https://www.udayavani.com/wp-content/uploads/2020/04/mESCOM-1-620x375.jpg)
ಬೆಳ್ತಂಗಡಿ: ರಬ್ಬರ್ ಮರ ಕೊಂಬೆಯೊಂದು ಎಚ್.ಟಿ. ಲೈನ್ ವಿದ್ಯುತ್ ತಂತಿಗೆ ಸ್ಪರ್ಶಿಸುತ್ತದೆ ಎಂಬ ನೆಪದಲ್ಲಿ ಕೃಷಿಕರೊಬ್ಬರ 40 ರಬ್ಬರ್ ಮರಗಳನ್ನು ಯಾವುದೇ ಮಾಹಿತಿ ನೀಡದೆ ಹಿರಿಯಡ್ಕ ಕೆಪಿಟಿಸಿಎಲ್ ಸಂಸ್ಥೆಯ ಸಿಬಂದಿಗಳು ಕಡಿದು ಹಾಕಿದ ಅಮಾನವೀಯ ಘಟನೆ ನಾರಾವಿ ಗ್ರಾಮದಲ್ಲಿ ನಡೆದಿದೆ.
ನಾರಾವಿ ಗ್ರಾಮದ ಭೂತಗುಡ್ಡೆ ಎಂಬಲ್ಲಿ ಎನ್.ಶ್ರೀನಿವಾಸ್ ವಿ.ಕಿಣಿ ಎಂಬವರಿಗೆ ಸೇರಿದ ಸ.ನಂ. 456ರಲ್ಲಿ 3.22 ಎಕರೆ ಜಮೀನಿನಲ್ಲಿ ಫಲವತ್ತಾದ ರಬ್ಬರ್ ಕೃಷಿ ಮಾಡಿದ್ದರು. ಎ.8 ಏಕಾಏಕಿ ಕೆಪಿಟಿಸಿಎಲ್ ಹಿರಿಯಡ್ಕ ಶಾಖೆಯ ಸಿಬಂದಿಗಳು ಅಕ್ರಮ ಪ್ರವೇಶಗೈದು 14 ವರ್ಷ ಪ್ರಾಯದ 38 ಮರಗಳನ್ನು ಯಾವುದೇ ಮಾಹಿತಿ ನೀಡದೆ ಕಡಿದುರುಳಿಸಲಾಗಿದೆ.
ಲೈನ್ ಕೆಳಭಾಗ ಎರಡು ಬದಿ 11*11 ಒಟ್ಟು 22 ಅಡಿ ಸ್ಥಳವಕಾಶ ಬಿಟ್ಟಿದ್ದ ಮರಗಳನ್ನು ಕಡಿದು ಹಾಕಲಾಗಿದೆ. ಕೇವಲ ಟ್ರಿಮ್ಮಿಂಗ್ ಮಾಡಬೇಕಿದ್ದ ಮರಗಳನ್ನು ಕಡಿಯಲಾಗಿದೆ. ಕಷ್ಟಪಟ್ಟು ಬೆಳೆದ ಫಲವತ್ತಾದ ರಬ್ಬರ್ ಗಿಡಗಳನ್ನು ಏಕಾಏಕಿ ಕೃಷಿಯನ್ನು ಈ ರೀತಿ ನಾಶ ಮಾಡಿದರೆ ಹೇಗೆ ಎಂದು ಶ್ರೀನಿವಾಸ್ ಕಿಣಿ ಪ್ರಶ್ನಿಸಿದ್ದಾರೆ.
ಈ ಕುರಿತು ಮೆಸ್ಕಾಂ ಇಲಾಖೆಗೆ ಪ್ರಶ್ನಿಸಿದರೆ ಕಾನೂನು ಬದ್ಧವಾಗಿ ಕಡಿದಿದ್ದೇವೆ ಎಂಬ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಆದರೆ ಕೃಷಿಕರಿಗೆ ಮಾಹಿತಿ ನೀಡದಿರುವ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಈ ಕುರಿತು ಜಾಗದ ಕೃಷಿಕರು ವೇಣೂರು ಪೊಲೀಸ್ ಗೆ ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡಲು ಮುಂದಾಗಿದ್ದಾರೆ.
ಟಾಪ್ ನ್ಯೂಸ್
![Hunasuru-Marriage](https://www.udayavani.com/wp-content/uploads/2024/12/Hunasuru-Marriage-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![2](https://www.udayavani.com/wp-content/uploads/2024/12/2-58-150x80.jpg)
Uppinangady: ತ್ಯಾಜ್ಯ ಸರಿಯಾಗಿ ವಿಂಗಡಿಸಿ ಕೊಡದಿದ್ದರೆ ಕ್ರಮಕ್ಕೆ ಸದಸ್ಯರ ಸಲಹೆ
![Bantwal: ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ; ಗಾಯಗೊಂಡಿದ್ದ ಮಹಿಳೆ ಮೃ*ತ್ಯು](https://www.udayavani.com/wp-content/uploads/2024/12/9-39-150x90.jpg)
Bantwal: ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ; ಗಾಯಗೊಂಡಿದ್ದ ಮಹಿಳೆ ಮೃ*ತ್ಯು
![1](https://www.udayavani.com/wp-content/uploads/2024/12/1-57-150x80.jpg)
Bantwal: ಅಭಿವೃದ್ಧಿ ಕಾರ್ಯಕ್ಕಿಂತಲೂ ಸಮಸ್ಯೆಗಳ ಸರಮಾಲೆ ಪ್ರಸ್ತಾವಿಸಿದ ಸಾರ್ವಜನಿಕರು
![1-ptt](https://www.udayavani.com/wp-content/uploads/2024/12/1-ptt-150x96.jpg)
Puttur: ಮುಖ್ಯ ರಸ್ತೆಯ ಚರಂಡಿ ಮೇಲಿನ ಪೈಪ್ನಲ್ಲಿ ಸಿಲುಕಿದ ಮಹಿಳೆ!
![saavu](https://www.udayavani.com/wp-content/uploads/2024/12/saavu-2-150x102.jpg)
Puttur: ಎಸೆಸೆಲ್ಸಿ ವಿದ್ಯಾರ್ಥಿನಿ ಆತ್ಮಹ*ತ್ಯೆ ಯತ್ನ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.