200 ರೂ. ಗಡಿಯಲ್ಲಿ ಕೊಕ್ಕೊ ಧಾರಣೆ : 450 ರೂ. ಗಡಿಯಲ್ಲಿ ಡಬ್ಬಲ್ ಚೋಲ್
Team Udayavani, Mar 23, 2024, 12:27 AM IST
ಪುತ್ತೂರು: ಉಪಬೆಳೆಯಾಗಿ ಕೃಷಿಕರ ಪಾಲಿನ ಆಧಾರವಾಗಿರುವ ಕೊಕ್ಕೊ ಧಾರಣೆ ಸಾರ್ವಕಾಲಿಕ ದಾಖಲೆಯತ್ತ ಮುನ್ನುಗ್ಗುತ್ತಿದ್ದು ಹಸಿ ಕೊಕ್ಕೊ ಧಾರಣೆ ಕೆ.ಜಿ.ಗೆ 200 ರೂ. ಗಡಿ ಸನಿಹಕ್ಕೆ ತಲುಪಿದೆ..!
ಮಾರ್ಚ್ ಮೊದಲ ವಾರದಿಂದ ಧಾರಣೆ ಏರಿಕೆಯ ನಾಗಾಲೋಟ ಮುಂದುವರಿದಿದ್ದು ಇದೀಗ ಮತ್ತಷ್ಟು ಜಿಗಿದಿದೆ. ಜತೆಗೆ ಅಡಿಕೆ ಧಾರಣೆ ಕೂಡ ಏರುಗತ್ತಿಯಲ್ಲಿ ಸಾಗಿದ್ದು ಕೃಷಿಕರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಕೊಕ್ಕೊ ಧಾರಣೆ 200 ರೂ. ಗಡಿಗೆ !
ಮಾ. 6ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ ಕೆ.ಜಿ.ಗೆ 150 ರೂ. ದಾಖಲಾಗುವ ಮೂಲಕ ಗರಿಷ್ಠ ಧಾರಣೆ ಎಂಬ ದಾಖಲೆ ಬರೆಯಿತು. ಅನಂತರ ಧಾರಣೆ ಏರಿಕೆಯತ್ತ ಸಾಗಿತ್ತು. ಮಾ.18 ರಂದು ಕೆ.ಜಿ.ಗೆ 170 ರೂ. ಧಾರಣೆ ದಾಖಲಾಯಿತು. ಮಾ. 22ರಂದು ಹೊರ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 185 ರೂ.ನಲ್ಲಿ ಖರೀದಿಯಾಗಿದ್ದು, ಪಂಜ ಹೊರ ಮಾರುಕಟ್ಟೆಯಲ್ಲಿ 190 ರೂ.ಗೆ ಖರೀದಿಸಲಾಗಿತ್ತು ಎಂದು ಬೆಳೆಗಾರರು ಮಾಹಿತಿ ನೀಡಿದ್ದಾರೆ. ಕ್ಯಾಂಪ್ಕೋ ಧಾರಣೆ ಮಾತ್ರ 170 ರೂ.ನಲ್ಲಿ ಸ್ಥಿರವಾಗಿತ್ತು. ಈಗಿನ ಧಾರಣೆ ಗಮನಿಸಿದರೆ ಸದ್ಯದಲ್ಲೇ 200 ರೂ.ಗಡಿ ದಾಟುವ ನಿರೀಕ್ಷೆ ಇದೆ.
450 ರೂ. ಗಡಿಯಲ್ಲಿ ಡಬ್ಬಲ್ ಚೋಲ್
ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆ ಕಂಡಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಧಾರಣೆ ಸ್ಥಿರವಾಗಿದ್ದರೆ ಹೊರ ಮಾರುಕಟ್ಟೆಯಲ್ಲಿ ಜಿಗಿತ ಕಂಡಿದೆ. ಡಬ್ಬಲ್ ಚೋಲ್ ಧಾರಣೆ 450 ರೂ. ಗಡಿಗೆ ತಲುಪಿದೆ. ಮಾ. 22ರಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 340ರಿಂದ 355 ರೂ., ಸಿಂಗಲ್ ಚೋಲ್ಗೆ 420ರಿಂದ 430 ರೂ., ಡಬ್ಬಲ್ ಚೋಲ್ಗೆ 435 ರಿಂದ 445 ರೂ. ತನಕ ಇತ್ತು. ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ 357 ರೂ., ಸಿಂಗಲ್ ಚೋಲ್ಗೆ 432 ರೂ., ಡಬ್ಬಲ್ ಚೋಲ್ಗೆ 447 ರೂ. ಗೆ ಖರೀದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್ ಸಿಸ್ಟಮ್
Bantwala: ಶರಣ್ ಪಂಪ್ ವೆಲ್ ಗೆ ಸವಾಲು ಹಾಕಿದ ಶರೀಫ್… ಬಂಟ್ವಾಳದಲ್ಲಿ ಬಿಗುವಿನ ವಾತಾವರಣ
Eid Milad: ರ್ಯಾಲಿ ವಿಚಾರ ಪ್ರಚೋದನಕಾರಿ ಹೇಳಿಕೆ: ಇಬ್ಬರ ವಿರುದ್ಧ ಪ್ರಕರಣ ದಾಖಲು
Cocoa; ವ್ಯಾಪಕವಾಗಿ ಕರಟಿದ ಕೊಕ್ಕೋ; ವಿಪರೀತ ಮಳೆ ತಂದೊಡ್ಡಿದೆ ಬೆಳೆಗಾರರಿಗೆ ಭಾರೀ ನಷ್ಟ
Sullia: ಬೈಕ್ ಗಳ ನಡುವೆ ಅಪಘಾತ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್ಐಎಗೆ ವಹಿಸಲಿ: ಶಾಸಕ ಸುನಿಲ್ ಕುಮಾರ್
Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ
Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್ ಸಿಸ್ಟಮ್
Eid: ಈದ್ ಮಿಲಾದ್ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ
Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್ ಮಿಲಾದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.