Finance: 5 ದಿನಗಳಲ್ಲಿ ಹೂಡಿಕೆದಾರರಿಗೆ ಮೂರು ಲಕ್ಷ ಕೋಟಿ ನಷ್ಟ
Team Udayavani, Oct 25, 2023, 11:44 PM IST
ಮುಂಬೈ: ಷೇರು ಮಾರುಕಟ್ಟೆಯಲ್ಲಿ ಸತತ ಐದು ದಿನಗಳಿಂದ ಸಂವೇದಿ ಸೂಚ್ಯಂಕ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಈ ಅವಧಿಯಲ್ಲಿ ಹೂಡಿಕೆದಾರರು ಬರೋಬ್ಬರಿ 3 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದ್ದಾರೆ. ಅ.7ರಿಂದ ಇಸ್ರೇಲ್ ಮತ್ತು ಹಮಾಸ್ ಉಗ್ರ ಸಂಘಟನೆಯ ನಡುವೆ ಯುದ್ಧ ಶುರುವಾದ ಬಳಿಕ ಬಾಂಬೆ ಷೇರು ಪೇಟೆಯಲ್ಲಿ ಶೇ.2.70 ಸೂಚ್ಯಂಕ ಇಳಿಕೆಯಾಗಿದೆ.
ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆ ಯಿಂದಾಗಿ ಷೇರುಪೇಟೆಯಲ್ಲಿ ಕುಸಿತದಾಖಲಾಗುತ್ತಿದ್ದು, ಬುಧವಾರ ಸೂಚ್ಯಂಕ್ 522.82 ಪಾಯಿಂಟ್ಸ್ ಕುಸಿತ ದೊಂದಿಗೆ 64,049.06 ಅಂಕಕ್ಕೆ ಮುಕ್ತಾಯ ಗೊಂಡರೆ, ನಿಫ್ಟಿ 159.60 ಪಾಯಿಂಟ್ಸ್ಗಳ ಇಳಿಕೆಯೊಂದಿಗೆ 19,122.15 ಅಂಕಕ್ಕೆ ಮುಕ್ತಾಯಗೊಂಡಿದೆ. ಇನ್ನು ಜಾಗತಿಕ ಪ್ರಕ್ಷುಬ್ಧತೆ ಕಾರಣದಿಂದಾಗಿ ಐಟಿ ಷೇರುಗಳ ಕುಸಿತ ದಾಖಲಾಗುತ್ತಿದ್ದು, ಹೂಡಿಕೆದಾರರು ಈಕ್ವಿಟಿ ಷೇರು ಮೌಲ್ಯಗಳನ್ನು ಕಡಿಮೆ ಮಾಡುತ್ತಿದ್ದಾರೆ. ಪರಿಣಾಮ ಸೆನ್ಸೆಕ್ಸ್ನ ಸಂಸ್ಥೆಗಳಾದ ಇನ್ಫೋಸಿಸ್ ಶೇ.2.76ರಷ್ಟು ಕುಸಿತ ದಾಖಲಿಸಿದ್ದರೆ, ಭಾರ್ತಿ ಏರಟೇಲ್, ಎನ್ಟಿಪಿಸಿ, ಟಾಟಾ ಮೋಟಾರ್ಸ್, ಇಂಡಸ್ ಇಂಡ್ ಬ್ಯಾಂಕ್, ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರಾ, ಟೈಟಾನ್ ಹಾಗೂ ಆ್ಯಕ್ಸಿಸ್ ಬ್ಯಾಂಕ್ಗಳು ಕೂಡ ಕುಸಿತದಾಖಲಾದ ಪ್ರಮುಖ ಸಂಸ್ಥೆಗಳಾಗಿವೆ.
ಮತ್ತೂಂದೆಡೆ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷವೂ ಮುಂದುವರಿದಿರುವುದರಿಂದ ಮುಂದಿನ ಕೆಲ ದಿನಗಳೂ ಷೇರು ವಹಿವಾಟಿನಲ್ಲಿ ಕುಸಿತ ದಾಖಲಾಗುವ ನಿರೀಕ್ಷೆಯಿದೆ ಎಂದು ತಜ್ಞರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ನಟ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್
Female CFO: ಭಾರತದ ಪಾಮ್ ಕೌರ್ಗೆ ಎಚ್ಎಸ್ಬಿಸಿ ಸಿಎಫ್ಒ ಹುದ್ದೆ
Post Office Fined: 50 ಪೈಸೆ ಹಿಂದಿರುಗಿಸದ ಅಂಚೆ ಕಚೇರಿಗೆ 15,000 ದಂಡ!
Cyclone Dana: 10ಲಕ್ಷ ಜನ ಸ್ಥಳಾಂತರ… ಅಪಾಯದ ಭೀತಿಯಲ್ಲಿ ಒಡಿಶಾದ 3,000 ಗ್ರಾಮಗಳು
Threats To Airlines: ಬಾಂಬ್ ಬೆದರಿಕೆ… ಟ್ವಿಟರ್ಗೆ ಕೇಂದ್ರ ಸರಕಾರ ತರಾಟೆ !
MUST WATCH
ಹೊಸ ಸೇರ್ಪಡೆ
Arrested: ನಟ ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿ 5ಕೋಟಿಗೆ ಬೇಡಿಕೆ ಇಟ್ಟಿದ್ದ ಆರೋಪಿ ಅರೆಸ್ಟ್
BBK11: ಬಿಗ್ ಬಾಸ್ ಮನೆಗೆ ಖ್ಯಾತ ಆ್ಯಂಕರ್ ರಾಧಾ ಹಿರೇಗೌಡರ್ ಎಂಟ್ರಿ
Udupi; ಜಗತ್ತು ಯೋಗಮಯವಾಗುವ ಆಕಾಂಕ್ಷೆ: ಪ್ರಾಚ್ಯವಿದ್ಯಾ ಸಮ್ಮೇಳನದಲ್ಲಿ ಬಾಬಾ ರಾಮ್ದೇವ್
Female CFO: ಭಾರತದ ಪಾಮ್ ಕೌರ್ಗೆ ಎಚ್ಎಸ್ಬಿಸಿ ಸಿಎಫ್ಒ ಹುದ್ದೆ
Mudhol: ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.