Ransomware Attack; 300 ಬ್ಯಾಂಕ್ ಕಂಪ್ಯೂಟರ್ ವ್ಯವಸ್ಥೆ ಮೇಲೆ ಸೈಬರ್ ದಾಳಿ
ಎನ್ಪಿಸಿಐ ತಾತ್ಕಾಲಿಕವಾಗಿ ಸಿ-ಎಡ್ಜ್ ಅನ್ನು ಸ್ಥಗಿತಗೊಳಿಸಿದೆ.
Team Udayavani, Aug 1, 2024, 1:04 PM IST
ನವದೆಹಲಿ: ಆನ್ಲೈನ್ ಪಾವತಿ ತಂತ್ರಜ್ಞಾನದ ಸೇವೆಯೊಂದರ ಮೇಲೆ ಸೈಬರ್ ( Ransomware) ದಾಳಿಯಾಗಿದ್ದು,
ಬುಧವಾರ ರಾತ್ರಿ ದೇಶದ 17 ಜಿಲ್ಲೆಗಳ ಕೇಂದ್ರ ಬ್ಯಾಂಕ್ಗಳು ಸೇರಿ 300ಕ್ಕೂ ಹೆಚ್ಚು ಚಿಕ್ಕ ಹಾಗೂ ಸ್ಥಳೀಯ ಬ್ಯಾಂಕ್ ಗಳ ಆನ್ಲೈನ್( Banking Technology)ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ದೇಶದಲ್ಲಿ ಸಣ್ಣ ಬ್ಯಾಂಕುಗಳಿಗೆ ತಂತ್ರಜ್ಞಾನಗಳನ್ನು ಒದಗಿಸುವ ಸಿ-ಎಡ್ಜ್ ಟೆಕ್ನಾಲಜೀಸ್ ಮೇಲೆ ದಾಳಿ ನಡೆದಿದೆ.
ಈ ಬಗ್ಗೆ ಸಿ-ಎಡ್ಜ್ ಸಂಸ್ಥೆಯಾಗಲೀ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾನ್ಸಮ್ ವೇರ್ ದಾಳಿಯ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಪ್ರತಿಕ್ರಿಯೆ ನೀಡಿದೆ. “ದೇಶದಲ್ಲಿ ಕೆಲವು ಬ್ಯಾಂಕುಗಳ ಯುಪಿಐ, ಐಪಿಎಂಎಸ್ ಹಾಗೂ ಇತರ ಪಾವತಿಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ’ ಎಂದಿದೆ.
ಪಾವತಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಎನ್ಪಿಸಿಐ ತಾತ್ಕಾಲಿಕವಾಗಿ ಸಿ-ಎಡ್ಜ್ ಅನ್ನು ಸ್ಥಗಿತಗೊಳಿಸಿದೆ.
ಕೆಲ ಸಮಯದ ಹಿಂದೆ ಆರ್ಬಿಐ ಮತ್ತು ದೇಶದ ಸೈಬರ್ ಸೆಕ್ಯುರಿಟೆ ಸಂಸ್ಥೆ ಅಧಿಕಾರಿಗಳು ದೇಶದ ಬ್ಯಾಂಕಿಂಗ್
ವ್ಯವಸ್ಥೆ ಮೇಲೆ ದಾಳಿ ನಡೆಯಲಿದೆ ಎಂಬ ಎಚ್ಚರಿಕೆ ನೀಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brazil: ಸುಪ್ರೀಂ ಜಡ್ಜ್ ಜತೆ ಮಸ್ಕ್ ಜಗಳ; ಬ್ರೆಜಿಲ್ನಲ್ಲಿ “ಎಕ್ಸ್’ ಬಳಕೆಗೆ ತಡೆ
Reliance AGM 2024: ರಿಲಯನ್ಸ್ನಿಂದ ಜಿಯೋ ಬ್ರೈನ್,100 ಜಿಬಿ ಉಚಿತ ಕ್ಲೌಡ್ ಸೇವೆ!
Tech Review: Oneplus Nord 4-ಮೆಟಲ್ ಬಾಡಿಯ ಸುಂದರ ಸಮರ್ಥ ಕಾರ್ಯಾಚರಣೆ
iPhone 16 launch: ಐಫೋನ್ 16 ಸರಣಿ ಭಾರತದಲ್ಲಿ ಸೆ. 9ಕ್ಕೆ ಬಿಡುಗಡೆ
X ಜಾಗತಿಕ ಸ್ಥಗಿತ;ಅನೇಕ ‘ಎಕ್ಸ್’ ಬಳಕೆದಾರರಿಗೆ ಸೇವೆಗಳಲ್ಲಿ ವ್ಯತ್ಯಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.