Garlic: ಕೆಜಿಗೆ 300ರ ಬೆನ್ನಲ್ಲೇ 6 ಲಕ್ಷದ ಬೆಳ್ಳುಳ್ಳಿ ಕಳವು
Team Udayavani, Dec 13, 2023, 12:02 AM IST
ಚಿತ್ರದುರ್ಗ: ಈರುಳ್ಳಿ ಬೆಲೆ ಕೆಜಿಗೆ 100 ರೂ. ದಾಟಿದಾಗ ಪೊಲೀಸ್ ಭದ್ರತೆ’ಯಲ್ಲಿ ಸಾಗಾಟ ಮಾಡಿದ್ದು, ಟೊಮೆಟೋ ದರ 200ರೂ. ದಾಟಿದಾಗ ಅದನ್ನು ಹೊತ್ತೂಯ್ಯುತ್ತಿದ್ದ ಲಾರಿಯನ್ನೇ ಅಪಹರಣ ಮಾಡಿದ್ದಂತಹ ಘಟನೆಗಳು ಎಲ್ಲರಿಗೂ ನೆನಪಿರಬಹುದು. ಈಗ ಬೆಳ್ಳುಳ್ಳಿಯ ಸರದಿ!
ಬೆಳ್ಳುಳ್ಳಿ ಬೆಲೆ ಕೆಜಿಗೆ 300ರೂ.ಗೆ ತಲುಪುತ್ತಿದ್ದಂತೆಯೇ ಕಳ್ಳರ ಕಾಟ’ ಆರಂಭವಾಗಿದೆ. ಚಿತ್ರದುರ್ಗದಲ್ಲಿ ವರ್ತಕರೊಬ್ಬರು ಸಂಗ್ರಹಿಸಿಟ್ಟಿದ್ದ ಬರೋಬ್ಬರಿ 6 ಲಕ್ಷ ರೂ. ಮೌಲ್ಯದ ಬೆಳ್ಳುಳ್ಳಿ ಈಗ ಕಳ್ಳರ ಪಾಲಾಗಿದೆ. ವರ್ತಕ ಜಿ.ಎಂ.ಬಸವಕಿರಣ ಅವರು ಮಧ್ಯಪ್ರದೇಶದಿಂದ 1,100 ಚೀಲ ಬೆಳ್ಳುಳ್ಳಿ ಖರೀದಿ ಸಿ ದಂಡಿನಕುರುಬರಹಟ್ಟಿಯ ರೈತ ಜಯಶೀಲ ರೆಡ್ಡಿ ಎಂಬವರ ಜಮೀನಿನಲ್ಲಿದ್ದ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದರು. ಬೆಳ್ಳುಳ್ಳಿ ದರ ಗಗನಕ್ಕೇರಿದ ಬೆನ್ನಲ್ಲೇ, ಗೋದಾಮಿನಲ್ಲಿದ್ದ 50 ಕೆ.ಜಿ. ತೂಕದ 150 ಚೀಲ ಬೆಳ್ಳುಳ್ಳಿ ಕಳವಾಗಿದೆ. ಡಿ.5ರಿಂದ 7ರ ನಡುವೆ ಗೋದಾಮಿನ ಹಿಂಬದಿಯ ಕಿಟಕಿಯ ಸರಳುಗಳು ಹಾಗೂ ರೋಲಿಂಗ್ ಷಟರ್ ಮುರಿದು ಕಳ್ಳತನ ಮಾಡಲಾಗಿದೆ. ಕಳವಾಗಿರುವ ಬೆಳ್ಳುಳ್ಳಿಯ ಮೌಲ್ಯ ಸುಮಾರು 6 ಲಕ್ಷ ರೂ.ಗಳು ಎಂದು ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ಉಲ್ಲೇಖೀಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.