Canada: 41 ಕೆನಡಾ ರಾಜತಾಂತ್ರಿಕರು ವಾಪಸ್
Team Udayavani, Oct 20, 2023, 11:45 PM IST
ಟೊರೊಂಟೊ/ಹೊಸದಿಲ್ಲಿ: ಕೇಂದ್ರ ಸರಕಾರದ ತಾಕೀತಿನ ಅನ್ವಯ ಹೊಸದಿಲ್ಲಿಯಲ್ಲಿ ಇರುವ ಹೈಕಮಿಷನ್ ಕಚೇರಿಯಿಂದ 41 ಮಂದಿ ಹೆಚ್ಚುವರಿ ರಾಜತಾಂತ್ರಿಕ ಸಿಬಂದಿಯನ್ನು ಕೆನಡಾ ಅಧಿಕೃತವಾಗಿ ವಾಪಸ್ ಪಡೆದುಕೊಂಡಿದೆ.
ಉಗ್ರ ನಿಜ್ಜರ್ ಸಾವಿಗೆ ಭಾರತವೇ ಕಾರಣ ಎಂದು ದೂರಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡೊ ನಗೆಪಾಟಲಿಗೆ ಈಡಾಗಿದ್ದರು. ಈ ಆರೋಪದಿಂದ ಕ್ರುದ್ಧ ಗೊಂಡಿದ್ದ ಭಾರತವು ಹೊಸದಿಲ್ಲಿಯ ಕೆನಡಾ ಹೈಕಮಿಶನ್ ಕಚೇರಿಯಲ್ಲಿ ಇರುವ ಹೆಚ್ಚುವರಿ ಸಿಬಂದಿ ಕಡಿತಗೊಳಿಸಬೇಕು ಎಂದು ಎಚ್ಚರಿಕೆ ನೀಡಿತ್ತು. ಶುಕ್ರವಾರ ಹೆಚ್ಚುವರಿ ರಾಜತಾಂತ್ರಿಕ ಸಿಬಂದಿ ಕೆನಡಾಕ್ಕೆ ವಾಪಸಾಗಿದ್ದಾರೆ.
ವೀಸಾ ಸೇವೆ ಸ್ಥಗಿತ
ಇದರ ಜತೆಗೆ ಬೆಂಗಳೂರು, ಚಂಡೀಗಢ, ಮುಂಬಯಿಯಲ್ಲಿ ಇರುವ ದೂತಾವಾಸ ಕಚೇರಿ ಗಳನ್ನು ಮುಚ್ಚಲು ಕೆನಡಾ ಸರಕಾರ ತೀರ್ಮಾನಿಸಿದೆ. ಮುಂದಿನ ದಿನಗಳಲ್ಲಿ ಹೊಸದಿಲ್ಲಿಯಲ್ಲಿ ಮಾತ್ರ ವೀಸಾ ಮತ್ತು ದೂತಾವಾಸ ಸೇವೆ ನೀಡುವುದಾಗಿ ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.