IND V/s AFG: ಉದ್ಯಾನ ನಗರಿಯಲ್ಲಿ ಕ್ಲೀನ್‌ಸ್ವೀಪ್‌ ಗುರಿ

ವಿಶ್ವಕಪ್‌ಗೂ ಮೊದಲು ಭಾರತ ಆಡಲಿರುವ ಅಂತಿಮ ಟಿ20 ಪಂದ್ಯ

Team Udayavani, Jan 16, 2024, 11:33 PM IST

jaiswal india

ಬೆಂಗಳೂರು: ಅಫ್ಘಾನಿಸ್ಥಾನ ವಿರುದ್ಧದ ಟಿ20 ಸರಣಿಯನ್ನು ಈಗಾಗಲೇ ವಶಪಡಿಸಿಕೊಂಡಿರುವ ಭಾರತ ವಿನ್ನು ಕ್ಲೀನ್‌ಸ್ವೀಪ್‌ ಗುರಿಯೊಂದಿಗೆ ಅಂತಿಮ ಪಂದ್ಯ ಆಡಲಿಳಿಯಲಿದೆ. ಬುಧವಾರದ ಈ ಮುಖಾಮುಖೀಯ ತಾಣ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ”.

ಅಂದಹಾಗೆ ಇದು ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಆಡಲಿರುವ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯ. ವಿಶ್ವಕಪ್‌ ಆರಂಭಗೊಳ್ಳಲು ಇನ್ನೂ 6 ತಿಂಗಳಿದೆ!

ಅಮೋಘ ಚೇಸಿಂಗ್‌
ಮೊಹಾಲಿ ಮತ್ತು ಇಂದೋರ್‌ನಲ್ಲಿ ನಡೆದ ಎರಡೂ ಪಂದ್ಯಗಳಲ್ಲಿ ಭಾರತ ಚೇಸಿಂಗ್‌ ಅವಕಾಶ ಪಡೆದಿತ್ತು. ಎರಡೂ ಪಂದ್ಯಗಳನ್ನು 6 ವಿಕೆಟ್‌ಗಳಿಂದ ಜಯಿಸಿತ್ತು. ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಕಾರಣ ಕೆಲವು ಓವರ್‌ ಉಳಿದಿರುವಾಗಲೇ ಗುರಿ ಮುಟ್ಟಿತ್ತು. ಮೊಹಾಲಿಯಲ್ಲಿ 17.3 ಓವರ್‌ಗಳಿಂದ 159 ರನ್‌, ಇಂದೋರ್‌ನಲ್ಲಿ 15.4 ಓವರ್‌ಗಳಿಂದ 173 ರನ್‌ ಬಾರಿಸಿತ್ತು. ಹೀಗಾಗಿ ಮೊದಲು ಬ್ಯಾಟಿಂಗ್‌ ನಡೆಸಿದರೆ ಭಾರತದ ಬ್ಯಾಟಿಂಗ್‌ ನಿರ್ವಹಣೆ ಯಾವ ಮಟ್ಟದಲ್ಲಿದ್ದೀತು ಎಂಬುದೊಂದು ಕುತೂಹಲ.

ಎರಡೂ ಪಂದ್ಯಗಳಲ್ಲಿ ಭಾರತದ ಬ್ಯಾಟಿಂಗ್‌ ಅಮೋಘ ಮಟ್ಟದಲ್ಲಿತ್ತು. ಶಿವಂ ದುಬೆ ಸತತ 2 ಅರ್ಧ ಶತಕ ಬಾರಿಸಿ ಮ್ಯಾಚ್‌ ವಿನ್ನರ್‌ ಆಗಿದ್ದನ್ನು ಮರೆಯುವಂತಿಲ್ಲ. ಇವರ ಆಲ್‌ರೌಂಡ್‌ ಪ್ರದರ್ಶನ ಮುಂದೆ ಹಾರ್ದಿಕ್‌ ಪಾಂಡ್ಯ ಅವರ ಹಾದಿಗೆ ತೊಡಕಾಗಲೂಬಹುದು.

ರೋಹಿತ್‌ ಬರಗಾಲ
ಹಾಗೆಯೇ 14 ತಿಂಗಳ ಬಳಿಕ ಟಿ20ಗೆ ಮರಳಿ ನಾಯಕತ್ವ ವಹಿಸಿಕೊಂಡ ರೋಹಿತ್‌ ಶರ್ಮ ಎರಡೂ ಪಂದ್ಯಗಳಲ್ಲಿ ಸೊನ್ನೆ ಸುತ್ತಿ ಹೋಗಿದ್ದಾರೆ. ಇದರಲ್ಲೊಂದು ಗೋಲ್ಡನ್‌ ಡಕ್‌. ಟಿ20 ವಿಶ್ವಕಪ್‌ಗೆ ಇವರನ್ನು ನಾಯಕರನ್ನಾಗಿ ನೇಮಿಸಲೇಬೇಕು ಎಂದು ಬಿಸಿಸಿಐ ಪಣತೊಟ್ಟಿದೆಯೋ ಏನೋ, ರೋಹಿತ್‌ ಬ್ಯಾಟ್‌ ಮುಷ್ಕರ ಹೂಡಲಾರಂಭಿಸಿದೆ! ನಾಯಕತ್ವ ಬಿಡಿ, ತಂಡದಲ್ಲಿ ಸ್ಥಾನ ಪಡೆಯುವುದೇ ಅನುಮಾನ ಎಂಬಂತಾಗಿದೆ ರೋಹಿತ್‌ ಸ್ಥಿತಿ. ಬೆಂಗಳೂರಿನಲ್ಲಾದರೂ ರನ್‌ ಬರಗಾಲದಿಂದ ಮುಕ್ತರಾಗಬೇಕಿದೆ. ಇದು ಅವರ ಮುಂದಿರುವ ಕೊನೆಯ ಅವಕಾಶ. ಬಳಿಕ ಐಪಿಎಲ್‌ ಸಾಧನೆಯನ್ನೇ ನಂಬಿ ಕೂರಬೇಕು.

ಕೊಹ್ಲಿ ಬ್ಯಾಟಿಂಗ್‌ ಟಚ್‌
ರೋಹಿತ್‌ ಅವರಂತೆ 14 ತಿಂಗಳ ಬಳಿಕವೇ ಟಿ20 ಆಡಿದ ವಿರಾಟ್‌ ಕೊಹ್ಲಿ ಉತ್ತಮ “ಬ್ಯಾಟಿಂಗ್‌ ಟಚ್‌’ನಲ್ಲಿದ್ದಾರೆ. ಮೊದಲ ಪಂದ್ಯದಿಂದ ಹೊರಗುಳಿದು ಇಂದೋರ್‌ನಲ್ಲಿ ಕ್ರೀಸ್‌ ಇಳಿದ ಕೊಹ್ಲಿ 16 ಎಸೆತಗಳಿಂದ 29 ರನ್‌ ಬಾರಿಸಿದ್ದಾರೆ. ಅಫ್ಘಾನ್‌ ತಂಡದ ಪ್ರಧಾನ ಸ್ಪಿನ್ನರ್‌ ಮುಜೀಬ್‌ ಉರ್‌ ರೆಹಮಾನ್‌ ಅವರನ್ನು ಟಾರ್ಗೆಟ್‌ ಮಾಡಿದಂತಿದ್ದ ಕೊಹ್ಲಿ, ಇವರ 7 ಎಸೆತಗಳಿಂದ 18 ರನ್‌ ಹೊಡೆದುದನ್ನು ಮರೆಯುವಂತಿಲ್ಲ. ಸ್ಪಿನ್ನರ್‌ಗಳೆದುರು ಕೊಹ್ಲಿ ನಿಧಾನ ಗತಿಯ ಆಟವಾಡುತ್ತಾರೆ ಎಂಬ ಅನಿಸಿಕೆ ಇಲ್ಲಿ ಸುಳ್ಳಾಗಿತ್ತು.

ಜೈಸ್ವಾಲ್‌, ದುಬೆ ಯಶಸ್ಸು
ಎಡಗೈ ಆರಂಭಕಾರ ಯಶಸ್ವಿ ಜೈಸ್ವಾಲ್‌ ಇಂದೋರ್‌ನಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದಾರೆ. ಒಮ್ಮೆ ಸಿಡಿಯಲಾರಂಭಿಸಿದರೆ ಇವರನ್ನು ತಡೆಯುವುದು ಸುಲಭವಲ್ಲ ಎಂಬುದು ಈಗ ಪ್ರತಿಯೊಂದು ತಂಡಕ್ಕೂ ಅರಿವಾಗತೊಡಗಿದೆ.

ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್‌ ಶಿವಂ ದುಬೆ ಮರಳಿ ಅವಕಾಶ ಪಡೆದ ಬಳಿಕ ಹೊಡಿಬಡಿ ಅವತಾರ ಎತ್ತಿದಂತಿದೆ. 3 ವರ್ಷಗಳ ಬ್ರೇಕ್‌ ಬಳಿಕ ಐರ್ಲೆಂಡ್‌ ಸರಣಿ, ಏಷ್ಯಾಡ್‌ ತಂಡದಲ್ಲಿ ಸ್ಥಾನ ಪಡೆದ ದುಬೆ ಉಪಯುಕ್ತ ಆಟಗಾರನಾಗಿ ರೂಪುಗೊಂಡಿದ್ದಾರೆ. ಬಹುಶಃ ಟಿ20 ವಿಶ್ವಕಪ್‌ಗೆ ಇವರ ಸ್ಥಾನ ಪಕ್ಕಾ.

ಸ್ಯಾಮ್ಸನ್‌ಗೆ ಅವಕಾಶ?
ಅಂತಿಮ ಪಂದ್ಯಕ್ಕೆ ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಯಾವುದೇ ಬದಲಾವಣೆ ನಡೆಯುವ ಸಾಧ್ಯತೆ ಇಲ್ಲ. ಆದರೆ ವಿಕೆಟ್‌ ಕೀಪರ್‌ ಜಿತೇಶ್‌ ಶರ್ಮ ಬದಲು ಸಂಜು ಸ್ಯಾಮ್ಸನ್‌ಗೆ ಅವಕಾಶ ಕೊಡುವುದು ಸೂಕ್ತ.

ಬೌಲಿಂಗ್‌ ವಿಭಾಗದಲ್ಲಿ ಎರಡು ಬದಲಾವಣೆ ಸಂಭವಿಸುವ ಸಾಧ್ಯತೆ ಇದೆ. ಕುಲದೀಪ್‌ ಯಾದವ್‌ ಮತ್ತು ಆವೇಶ್‌ ಖಾನ್‌ ಹನ್ನೊಂದರ ಬಳಗ ಪ್ರವೇಶಿ ಸಬಹುದು. ಕುಲದೀಪ್‌ಗಾಗಿ ರವಿ ಬಿಷ್ಣೋಯಿ ಅಥವಾ ವಾಷಿಂಗ್ಟನ್‌ ಸುಂದರ್‌ ಹೊರಗುಳಿಯಬಹುದು. ಮುಕೇಶ್‌ ಕುಮಾರ್‌ ಸ್ಥಾನ ಆವೇಶ್‌ ಖಾನ್‌ ಪಾಲಾಗಬಹುದು.

ಅಫ್ಘಾನ್‌ ನಿರೀಕ್ಷೆ ಹುಸಿ
ಅಪಾಯಕಾರಿ ಎಂದೇ ಗುರುತಿಸಲ್ಪಡುವ ಅಫ್ಘಾನ್‌ ಈವರೆಗೆ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ತಂಡದ ಹಿನ್ನಡೆಗೆ ಪ್ರಧಾನ ಸ್ಪಿನ್ನರ್‌ ರಶೀದ್‌ ಖಾನ್‌ ಗೈರು ಮುಖ್ಯ ಕಾರಣ. ತಂಡದಿಂದ ಇನ್ನೂ “ಮ್ಯಾಚ್‌ ವಿನ್ನಿಂಗ್‌” ಸಾಧನೆ ಕಂಡುಬಂದಿಲ್ಲ. ಆರಂಭಕಾರ ಗುರ್ಬಜ್‌ ಸಿಡಿದು ನಿಲ್ಲಬೇಕಾದ ಅಗತ್ಯವಿದೆ.

“ಚಿನ್ನಸ್ವಾಮಿ ಸ್ಟೇಡಿಯಂ” ಟ್ರ್ಯಾಕ್‌ ಬೌಲರ್‌ಗಳಿಗೆ ಹೆಚ್ಚು ನೆರವು ನೀಡುತ್ತದಾದರೂ ಇಲ್ಲಿನ ಸಣ್ಣ ಅಂತರದ ಬೌಂಡರಿಗಳು ಬ್ಯಾಟರ್‌ಗಳಿಗೆ ಲಾಭ ತಂದುಕೊಡುವ ಸಾಧ್ಯತೆಯಂತೂ ಇದೆ. ಈ ಸರಣಿಯಲ್ಲಷ್ಟೇ ಅಲ್ಲ, ಭಾರತದೆದುರಿನ ಟಿ20 ಪಂದ್ಯಗಳಲ್ಲಿ ಗೆಲುವಿನ ಖಾತೆ ತೆರೆಯಲು ಅಫ್ಘಾನ್‌ ಯಶಸ್ವಿ ಆದೀತೇ ಎಂಬುದು ಬೆಂಗಳೂರು ಪಂದ್ಯದ ಕುತೂಹಲ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.