Honnavar ದೈವಜ್ಞ ಬ್ರಾಹ್ಮಣ ಪೀಠಕ್ಕೆ ನೂತನ ಸ್ವಾಮೀಜಿ
Team Udayavani, Apr 2, 2024, 11:27 PM IST
ಹೊನ್ನಾವರ: ದೈವಜ್ಞ ಬ್ರಾಹ್ಮಣ ಸಮಾಜದ ಮಠ ಪರಂಪರೆ ಹಾಗೂ ಇತಿಹಾಸದಲ್ಲಿ ಬುಧವಾರ ಹೊಸ ಅಧ್ಯಾಯ ಆರಂಭವಾಗಲಿದೆ. ತಾಲೂಕಿನ ಕರ್ಕಿಯ ಜ್ಞಾನೇಶ್ವರಿ ಪೀಠದಲ್ಲಿ ನೂತನ ಶ್ರೀಗಳ ಸನ್ಯಾಸ ಸ್ವೀಕಾರ ಸಮಾರಂಭ ನಡೆಯಲಿದೆ.
ದೈವಜ್ಞ ಸಮಾಜದ ಗಣಪತಿ ದೇವಸ್ಥಾನದ ಅರ್ಚಕರಾಗಿದ್ದ ರಾಮಚಂದ್ರ ಭಟ್ಟರು ತಮ್ಮ ಮಗನನ್ನು ಮಠಾಧಿಪತಿಯಾಗಲು ಒಪ್ಪಿಗೆ ಕೊಟ್ಟ ಕಾರಣ ಸ್ವತಂತ್ರ ದೈವಜ್ಞ ಮಠ 1986ರಲ್ಲಿ ಕರ್ಕಿಯಲ್ಲಿ ಸ್ಥಾಪನೆ ಯಾಯಿತು. ಕಾರವಾರದ ನೇತಲಕರ್ ಕುಟುಂಬದ ಗುರುನಾಥ ಮತ್ತು ದೀಪಾ ದಂಪತಿ ದ್ವಿತೀಯ ಪುತ್ರ ಸಂತೋಷಿಮಾ ಆರಾಧಕರಾಗಿದ್ದ ಕನ್ಹಯ್ನಾ ಎಂಬ ಹೆಸರಿನ 30 ವರ್ಷದ ವಟುವನ್ನು ಶಿಷ್ಯನಾಗಿ ಸ್ವೀಕರಿಸಲು ನಿರ್ಧರಿಸಿದ್ದಾರೆ. ಕನ್ಹಯ್ನಾ ಕರ್ಕಿ ಮಠದ ಮತ್ತು ಶೃಂಗೇರಿ ಮಠದ ಪಾಠಶಾಲೆಗಳಲ್ಲಿ ಓದಿದ್ದಾರೆ. ಇವರ ಸನ್ಯಾಸ ಸ್ವೀಕಾರ ಕಾರ್ಯಕ್ರಮ ಸಮಾಜದ ಪ್ರಮುಖರ ಸಮ್ಮುಖದಲ್ಲಿ ಕರ್ಕಿ ಮಠದಲ್ಲಿ ನಡೆಯಲಿದೆ.
ಜ್ಞಾನೇಶ್ವರಿ ಪೀಠದ ಸಚ್ಚಿದಾನಂದ ಶ್ರೀಗಳು ವಿದ್ಯಾಭ್ಯಾಸ ಮಾಡಿದ ಧಾರವಾಡದ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿದ್ಯಾಲಯದ ಶ್ರೀ ರಾಜೇಶ್ವರ ಶಾಸ್ತ್ರಿಗಳು, ಗೋಕರ್ಣದ ವಿದ್ವಾಂಸರು, ದೈವಜ್ಞ ಸಮಾಜದ ವಿದ್ವಾಂಸರು ಸನ್ಯಾಸ ಸ್ವೀಕಾರದ ಧಾರ್ಮಿಕ ವಿಧಿಗಳನ್ನು ನೆರವೇರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಸರಕು ತುಂಬಿದ ಲಾರಿ ಪಲ್ಟಿಯಾಗಿ ಸಂಚಾರ ಸಂಪೂರ್ಣ ಸ್ಥಗಿತ
Dandeli: ಗ್ರಾಹಕರ ಸೋಗಿನಲ್ಲಿ ಬಂದು ಇಬ್ಬರು ಮಹಿಳೆಯರಿಂದ ಕಳ್ಳತನ: ವಿಡಿಯೋ ವೈರಲ್
Vaccine: ಇನ್ನೆರಡು ವರ್ಷದೊಳಗೆ ಕೆಎಫ್ಡಿ ಲಸಿಕೆ ಬಳಕೆಗೆ ಲಭ್ಯ: ಆರೋಗ್ಯ ಸಚಿವ ದಿನೇಶ್
Sirsi: ಹಿರಿಯ ಯಕ್ಷಗಾನ ಗುರು, ಭಾಗವತ ಕೆ.ಪಿ. ಹೆಗಡೆಗೆ ವಾರ್ಷಿಕ ಸಿರಿಕಲಾ ಪ್ರಶಸ್ತಿ
Sirsi ಜಿಲ್ಲೆ ಹೋರಾಟ ಮತ್ತೆ ಮುನ್ನಲೆಗೆ: ಅನಂತಮೂರ್ತಿ ನೇತೃತ್ವ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.