Tourism: ಶೀಘ್ರ ಸಿಗಲಿದೆ “ಕ್ಷೇಮ” ಪ್ರವಾಸಾನುಭವ
ಎರಡು ತಿಂಗಳಲ್ಲಿ "ವೆಲ್ನೆಸ್ ಟೂರಿಸಂ" ಮನರಂಜನೆ ಜತೆಗೆ ಮನಶ್ಶಾಂತಿ ಲಭ್ಯ
Team Udayavani, Sep 16, 2023, 11:22 PM IST
ಬೆಂಗಳೂರು: ಪ್ರವಾಸಿಗರ ಆರೋಗ್ಯ, ಯೋಗಕ್ಷೇಮ ಕಾಪಾಡಿಕೊಳ್ಳಲು ಪ್ರವಾಸೋದ್ಯಮ ಇಲಾಖೆಯು ಮುಂದಿನ 2 ತಿಂಗಳಲ್ಲಿ ಆದ್ಯತಾ ಪ್ರವಾಸಿ ತಾಣಗಳಲ್ಲಿ “ವೆಲ್ನೆಸ್ ಟೂರಿಸಂ’ ಸೌಕರ್ಯ ಒದಗಿಸಲು ಸಿದ್ಧತೆ ನಡೆಸುತ್ತಿದೆ. ಅದರನ್ವಯ ಪ್ರವಾಸಿಗರಿಗೆ ಮನರಂಜನೆ ಜತೆಗೆ ಮನಶ್ಶಾಂತಿಯೂ ಸಿಗಲಿದೆ.
ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗಾಗಿ ಸರಕಾರ ರೂಪಿಸಿರುವ ಮಹತ್ವದ ಯೋಜನೆಗಳಲ್ಲಿ ವೆಲ್ನೆಸ್ ಟೂರಿಸಂ ಕೂಡ ಒಂದು. “ವೆಲ್ನೆಸ್ ಟೂರಿಸಮ್’ ಅಡಿಯಲ್ಲಿ “ಆಯುರ್ವೇದ, ಯೋಗ ಹಾಗೂ ನ್ಯಾಚುರೋಪತಿ, ಯುನಾನಿ, ಸಿದ್ಧ, ಹೋಮಿಯೋಪತಿ ಸೌಕರ್ಯ ಸ್ಥಾಪಿಸಲು ಮುಂಬರುವ ಖಾಸಗಿ ಹೂಡಿಕೆದಾರರಿಗೆ ಇಲಾಖೆಯಿಂದ ಸಹಾಯಧನ, ರಿಯಾಯಿತಿ ಹಾಗೂ ಉತ್ತೇಜನ ಒದಗಿಸಲು ಅವಕಾಶ ಕಲ್ಪಿಸಲಾಗಿದೆ.
ಒಪ್ಪಂದ
ಎರಡು ತಿಂಗಳ ಬಳಿಕ “ಗ್ಲೋಬಲ್ ಟೂರಿಸಂ ಸಮ್ಮಿಟ್’ ಆಯೋಜಿಸಲು ಯೋಜನೆ ರೂಪಿಸಿದ್ದೇವೆ. ವೆಲ್ನೆಲ್ ಟೂರಿಸಂ ಯೋಜನೆ ಸಿದ್ಧಗೊಳ್ಳುತ್ತಿದೆ. ಈಗಾಗಲೇ ಸಿದ್ಧಪಡಿಸಿರುವ ಪ್ರಸ್ತಾವನೆ ಇಟ್ಟುಕೊಂಡು ವೆಲ್ನೆಲ್ ಟೂರಿಸಂಗೆ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ಇರುವವರ ಜತೆಗೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಸಹಿ ಮಾಡುತ್ತೇವೆ. ರಾಜ್ಯದಲ್ಲಿರುವ ಪ್ರವಾಸಿ ವ್ಯವಸ್ಥೆ ಅಭಿವೃದ್ಧಿಪಡಿಸುವುದು, ಪ್ರವಾಸಿ ಸ್ಥಳಗಳಲ್ಲಿ ಬಂಡವಾಳ ಹೂಡಿಕೆ ಮಾಡುವುದು, ಸ್ಥಳೀಯ ಯುವಕರಿಗೆ ಉದ್ಯೋಗ ಅವಕಾಶ ಕಲ್ಪಿಸಿಕೊಡುವುದು, ರಾಜ್ಯದ ಆದಾಯ ಹೆಚ್ಚಿಸುವ ಉದ್ದೇಶದಿಂದ ವೆಲ್ನೆಸ್ ಟೂರಿಸಂ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಡಾ| ವಿ.ರಾಮ್ ಪ್ರಸಾದ್ ಮನೋಹರ್ “ಉದಯವಾಣಿ’ಗೆ ತಿಳಿಸಿದ್ದಾರೆ.
ತಾಣ ಗುರುತು ಪ್ರಕ್ರಿಯೆ
ಮನರಂಜನೆ, ಸಾಂಸ್ಕೃತಿಕ ಪ್ರವಾಸಗಳ ಜತೆಜತೆಗೆ ವೆಲ್ನೆಸ್ ಟೂರಿಸಂಗೆ ದೇಶದಲ್ಲಿ ಬೇಡಿಕೆ ವ್ಯಕ್ತವಾಗಿದೆ. ವೆಲ್ನೆಸ್ ಟೂರಿಸಂ ತರಬಹುದಾದ ರಾಜ್ಯದ ಪ್ರವಾಸಿ ತಾಣ ಗುರುತಿಸುವ ಪ್ರಕ್ರಿಯೆಗಳು ನಡೆಯುತ್ತಿವೆ. ಅಧ್ಯಾತ್ಮಿಕ ಅನುಭವ ನೀಡುವ ಸ್ಥಳಗಳಲ್ಲೇ ಈ ವ್ಯವಸ್ಥೆ ನಿರ್ಮಿಸಲು ಚಿಂತಿಸಲಾಗಿದೆ. ಇಲಾಖೆ ಗುರುತಿಸಿರುವ ತಾಣಗಳಲ್ಲಿ ಖಾಸಗಿಯರಿಗೆ ಈ ಸೌಕರ್ಯ ಒದಗಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ರಿಯಾಯಿತಿ ದರಗಳಲ್ಲಿ ಇಲ್ಲಿ ಸೌಲಭ್ಯ ಸಿಗಲಿದೆ. ಹೂಡಿಕೆ ಮಾಡುವ ಖಾಸಗಿ ವ್ಯಕ್ತಿ, ಸಂಸ್ಥೆಗಳಿಗೆ ಒಪ್ಪಂದದ ವೇಳೆಯೇ ಕೆಲವು ಷರತ್ತು ವಿಧಿಸಲು ನಿರ್ಧರಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆಯಲ್ಲಿ 23 ವಿವಿಧ ಸೆಕ್ಟರ್ಗಳಿವೆ. ಅವುಗಳಲ್ಲಿ ವೆಲ್ನೆಸ್ ಟೂರಿಸಂ ಕೂಡ ಒಂದು. ಇದಕ್ಕೆ ಸಂಬಂಧಿಸಿದ ಯೋಜನೆ ಸಿದ್ಧಪಡಿಸುತ್ತಿದ್ದೇವೆ. ಬಂಡವಾಳ ಹೂಡುವ ಆಸಕ್ತರಿಗೆ ಸೌಲಭ್ಯಗಳನ್ನು ಇಲಾಖೆ ಒದಗಿಸಲಿದೆ.
-ಡಾ| ವಿ.ರಾಮ್ ಪ್ರಸಾದ್ ಮನೋಹರ್, ಪ್ರವಾಸೋದ್ಯಮ ಇಲಾಖೆ ನಿರ್ದೇಶಕ
ಏನಿದು ವೆಲ್ನೆಸ್ ಟೂರಿಸಂ ?
ಕ್ಷೇಮ ಪ್ರವಾಸೋದ್ಯಮವು ಭಾರತದಲ್ಲಿ ಭಾರೀ ಮುನ್ನೆಲೆಗೆ ಬರುತ್ತಿದೆ. ರಾಜ್ಯದಲ್ಲಿ ಪ್ರಕೃತಿ ಸಹಜ ವಾತಾವರಣಗಳಿಂದ ಕೂಡಿರುವ ಕೆಲವು ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ವೆಲ್ನೆಸ್ ಟೂರಿಸಂನಡಿ ಯೋಗ, ಧ್ಯಾನ, ಮನಶ್ಶಾಂತಿ ನೀಡುವ ಕೆಲವು ಆಯುರ್ವೇದ ಚಿಕಿತ್ಸೆಗಳು, ಯುನಾನಿ, ಸಿದ್ಧ, ಹೋಮಿಯೋಪತಿ ಚಿಕಿತ್ಸೆಗಳಲ್ಲಿ ಬರುವ ಥೆರಪಿ ಸೌಲಭ್ಯ ಕಲ್ಪಿಸಲಾಗುತ್ತದೆ. ಸದಾ ಕೆಲಸದ ಒತ್ತಡದಲ್ಲಿರುವವರು, ಖನ್ನತೆಗೆ ಒಳಗಾದವರು, ಒಂದೇ ಜಾಗದಲ್ಲಿದ್ದು ಬೇಜಾರಾದರೆ ಬದಲಾವಣೆ ಬಯಸುವ ಮನಸ್ಥಿತಿ ಹೊಂದಿರುವವರಿಗೆ “ವೆಲ್ನೆಸ್ ಟೂರಿಸಂ’ನಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ.
ಅವಿನಾಶ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ
PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ
Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Talk Fight: ಯಾರು ಏನೇ ಅಂದ್ರೂ ಬಿಜೆಪಿ ಕಾರ್ಯಕರ್ತರು ನನ್ನ ಒಪ್ಪಿದ್ದಾರೆ: ವಿಜಯೇಂದ್ರ
Munirathna:ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಹೇಳಿಕೆ; ಸಮುದಾಯದ ಸಚಿವ, ಶಾಸಕರಿಂದ ಸಿಎಂಗೆ ಮನವಿ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.