ಪಡುಬಿದ್ರಿ-ಕಾರ್ಕಳ ಜಂಕ್ಷನ್‌ನಲ್ಲಿ ಅಪಘಾತದ ಟೆನ್ಶನ್‌

ಸಿಗ್ನಲ್‌ ಲೈಟ್‌ ಹಾಕೋ ಹಾಗಿಲ್ಲ: ಬೇಕಿದೆ ಸೂಕ್ತ ಪರಿಹಾರ

Team Udayavani, Feb 7, 2022, 6:10 AM IST

ಪಡುಬಿದ್ರಿ-ಕಾರ್ಕಳ ಜಂಕ್ಷನ್‌ನಲ್ಲಿ ಅಪಘಾತದ ಟೆನ್ಶನ್‌

ಪಡುಬಿದ್ರಿ: ಬೈಪಾಸ್‌ ಯೋಜನೆಯನ್ನು ಬದಲಿಸಿ ಹೆದ್ದಾರಿ ಚತುಷ್ಪಥ ಮಾರ್ಗವು ಪಡುಬಿದ್ರಿ ಪೇಟೆಯೊಳಗೆ ಹೋಗುವಂತಾಯಿತು. ಬೈಪಾಸ್‌ಗೆ ಭಾರೀ ವಿರೋಧ ವ್ಯಕ್ತವಾಗಿ ಕೇವಲ 45 ಮೀಟರ್‌ ಭೂ ಸ್ವಾಧೀನತೆ ಜಾರಿಗೆ ಬಂತು. ಪಡುಬಿದ್ರಿ ಪೇಟೆಯಲ್ಲೇ ಪೂರ್ವಕ್ಕೆ ರಾಜ್ಯ ಹೆದ್ದಾರಿ ನಂ. 1 ಕಾರ್ಕಳವನ್ನು ಸಂಪರ್ಕಿಸುತ್ತಿದೆ. ಭಾರೀ ಯೋಜನೆಗಳೆರಡು ಪಡುಬಿದ್ರಿ ಪರಿಸರದಲ್ಲಿದ್ದು ಇಲ್ಲಿಗೆ ಹೋಗಬೇಕಾದ ಘನ ವಾಹನಗಳೂ ಈ ಹೆದ್ದಾರಿಗಳನ್ನು ಬಳಸಿ ಸಾಗುತ್ತಿರಬೇಕು. ಹಾಗಾಗಿ ಪಡುಬಿದ್ರಿ – ಕಾರ್ಕಳ ಜಂಕ್ಷನ್‌ ಈಗಂತೂ ಬಹಳಷ್ಟು ಅಪಘಾತಗಳಿಗೆ ಕಾರಣವಾಗುತ್ತಿದೆ. ಸಾವು, ನೋವು, ಮೂಳೆ ಮುರಿತಗಳಿಗೆ ಜನರು ಅನುಭವಿಸುತ್ತಿದ್ದಾರೆ.

ಸಿಗ್ನಲ್‌ ಲೈಟ್‌ಗೆ ಜನರಿಂದ ಬಹಳಷ್ಟು ಬೇಡಿಕೆಗಳು ಬರುತ್ತಿದ್ದವು. ಬೆಳಗ್ಗಿನ ಹೊತ್ತು ಸಣ್ಣ ಸಣ್ಣ ಶಾಲಾ ಮಕ್ಕಳು ಹೆದ್ದಾರಿ ದಾಟುವುದೇ ಮಹಾನ್‌ ಕಾಯಕವಾಗುತ್ತದೆ. ಬಿರುಸಾಗಿ ಜೀವವನ್ನು ಕೈಯಲ್ಲಿ ಹಿಡಿದು ಬರುವ ರೀತಿ ಈ ಪುಟಾಣಿಗಳು ಸಾಗಬೇಕಾಗುತ್ತದೆ. ಆದರೀಗ ಗುತ್ತಿಗೆದಾರ ನವಯುಗ ನಿರ್ಮಾಣ ಕಂಪೆನಿಯು ತನ್ನ ನೀಲ ನಕಾಶೆಯಲ್ಲಿ ಇಲ್ಲ, ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅನುಮೋದನೆಯಿಲ್ಲದೆ ಏನನ್ನೂ ನಿರ್ವಹಿಸಲಾಗದು ಎನ್ನುತ್ತಿದೆ. ಪೊಲೀಸ್‌ ಇಲಾಖೆಯೂ ಹೆದ್ದಾರಿಯಲ್ಲಿ ಸಿಗ್ನಲ್‌ ಅಳವಡಿಕೆಗೆ ಸೂಕ್ತ ಆದೇಶಗ ಳಾಗದೆ ಅವುಗಳನ್ನು ನಿರ್ವಹಿಸುವಂತಿಲ್ಲ ಎನ್ನುತ್ತಿದೆ. ಈ ಸಂಕಷ್ಟಕ್ಕೆ ಪರಿಹಾರವಾಗಿ ಹೆದ್ದಾರಿ ದಾಟುವ ಪಾದಚಾರಿಗಳಿಗೆ, ಶಾಲಾ ಪುಟಾಣಿಗಳಿಗೆ ಸೂಕ್ತ ಪರಿಹಾರದ ವ್ಯವಸ್ಥೆಯಾಗಬೇಕೆಂಬುದು ಸಾರ್ವಜನಿಕರ ಅಹವಾಲು.

ಎರಡು ತಿಂಗಳುಗಳಲ್ಲಿ ಆರು ಅಪಘಾತಗಳು
ಡಿಸೆಂಬರ್‌- ಜನವರಿ ಎರಡು ತಿಂಗಳುಗಳಲ್ಲಿ 6 ಅಪಘಾತದ ಪ್ರಕರಣಗಳು ಸಂಭವಿಸಿವೆ. 4 ಪ್ರಕರಣಗಳು ಠಾಣೆಯಲ್ಲಿ ದಾಖಲಾಗಿದ್ದು ಎರಡು ಪ್ರಕರಣಗಳು ರಾಜಿಯಲ್ಲಿ ಕೊನೆಗೊಂಡಿವೆ. ದಾಖಲಾದ ನಾಲ್ಕೂ ಪ್ರಕರಣಗಳಲ್ಲಿ ಗಾಯಾಳುಗಳ ಮೂಳೆ ಮುರಿತಗಳು ಸಂಭವಿಸಿದೆ. ಇಲ್ಲಿನ ಜನ ನಿಬಿಡತೆ ಹಾಗೂ ವಾಹನದಟ್ಟಣೆಗಳನ್ನು ಕಡಿಮೆಗೊಳಿಸಲು ಫೂಟ್‌ ಓವರ್‌ ಬ್ರಿಡ್ಜ್ ಸೂಕ್ತ ಮಾರ್ಗವಾಗಿದೆ. ಅದೇ ರೀತಿ ಇಲ್ಲಿನ ರಿಕ್ಷಾ, ಟೆಂಪೋ, ಕಾರುಗಳ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಉಡುಪಿ, ಮಂಗಳೂರು ಹಾಗೂ ಕಾರ್ಕಳದತ್ತ ತೆರಳುವ ಬಸ್‌ಗಳ ಸುಗಮ ಸಂಚಾರವನ್ನು ಸೂಕ್ತ ನಿಲ್ದಾಣಗಳ ವ್ಯವಸ್ಥೆಯೊಂದಿಗೆ ಕಲ್ಪಿಸಿದಾಗ ಪ್ರಮುಖವಾಗಿ ಪಡುಬಿದ್ರಿ ಪೇಟೆ, ಕಾರ್ಕಳ ಜಂಕ್ಷನ್‌ನ ದಟ್ಟಣೆಯು ಕಡಿಮೆಯಾಗಬಲ್ಲದು.
– ಅಶೋಕ ಕುಮಾರ್‌, ಪಿಎಸ್‌ಐ, ಪಡುಬಿದ್ರಿ ಪೊಲೀಸ್‌ ಠಾಣೆ

ಚೆಂಡು ಗ್ರಾ.ಪಂ. ಅಂಗಳದಲ್ಲಿ
ಈಚೆಗೆ ನವಯುಗ ಕಂಪೆನಿಯ ಅಧಿಕಾರಿಯೊಬ್ಬರು ಗ್ರಾ. ಪಂ.ನಲ್ಲಿ ನಡೆದಿದ್ದ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಬಳಿ ಕೇಂದ್ರೀಯ ಹೆದ್ದಾರಿ ಅನುದಾನವಿರುವುದರ ಬಗ್ಗೆ ಸುಳಿವಿತ್ತಿದ್ದಾರೆ. ಈಗ ಚೆಂಡು ಪಂಚಾಯತ್‌ ಅಂಗಣದಲ್ಲಿದೆ. ಅವಕಾಶಗಳನ್ನು ಗ್ರಾ. ಪಂ. ಸದಸ್ಯರು ಸದುಪಯೋಗಿಸಿಕೊಳ್ಳಬೇಕಿದೆ. ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಕಾರ್ಕಳ ಜಂಕ್ಷನ್‌ ಸಮೀಪ ಫೂಟ್‌ ಓವರ್‌ ಬ್ರಿಡ್ಜ್ಗೆ ಠರಾವನ್ನು ಮಂಡಿಸುವ ಚಿಂತನೆ ಇದೆ. ಬಳಿಕ ಇದನ್ನು ಸಂಸದರು, ಎನ್‌ಎಚ್‌ಎಐ, ಜಿಲ್ಲಾಧಿಕಾರಿಯವರಿಗೆ ಕಳುಹಿಸಿ ಪ್ರಾಧಿಕಾರದಲ್ಲಿನ ಅನುದಾನಗಳನ್ನು ಬಳಸಿಕೊಂಡು ಈ ಕಾಮಗಾರಿಗಳನ್ನು ಪೂರೈಸಬೇಕಿದೆ.

-ಆರಾಮ

 

ಟಾಪ್ ನ್ಯೂಸ್

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2-mudhola

ತಿಮ್ಮಾಪುರ ಮಾತಿಗೆ ಯತ್ನಾಳ‌ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.