![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Oct 3, 2023, 9:40 PM IST
ಮುಂಬೈ: “ಪತ್ನಿ, ನಟಿ ಶ್ರೀದೇವಿಯದ್ದು ಸಹಜ ಸಾವಲ್ಲ. ಆಕೆ ಅತಿಯಾದ ಡಯಟ್ ಮಾಡುತ್ತಿದ್ದಳು. ಕಡಿಮೆ ರಕ್ತದೊತ್ತಡ ಕಾರಣದಿಂದ ಆಕೆ ಮೃತಪಟ್ಟಳು’ ಎಂದು ಪತಿ, ಖ್ಯಾತ ನಿರ್ಮಾಪಕ ಬೋನಿ ಕಪೂರ್ ಹೇಳಿದ್ದಾರೆ.
2018ರ ಫೆ.24ರಂದು ದುಬೈನ ಹೋಟೆಲ್ನ ಬಾತ್ ಟಬ್ನಲ್ಲಿ ನಟಿ ಶ್ರೀದೇವಿ ಅಸುನೀಗಿದ್ದರು. ವಿಚಾರಣೆಯ ನಂತರ ಬೋನಿ ಕಪೂರ್ಗೆ ಪೊಲೀಸರಿಂದ ಕ್ಲೀನ್ ಚಿಟ್ ಸಿಕ್ಕಿತ್ತು.
ಇದೇ ಮೊದಲ ಬಾರಿಗೆ ಪತ್ನಿ ಸಾವಿನ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಬೋನಿ ಕಪೂರ್, “ಶ್ರೀದೇವಿ ವಿಪರೀತ ಡಯಟ್ ಮಾಡುತ್ತಿದ್ದಳು. ಇಂಗ್ಲಿಷ್-ವಿಂಗ್ಲಿಷ್ ಸಿನಿಮಾ ಸಂದರ್ಭದಲ್ಲಿ 45 ಕೆಜಿ ಗೆ ತನ್ನ ತೂಕ ಇಳಿಸಿಕೊಂಡಿದ್ದಳು. ಆಹಾರದಲ್ಲಿ ಉಪ್ಪು ಬಳಸುವುದನ್ನೂ ನಿಲ್ಲಿಸಿದ್ದಳು. ಇದರಿಂದ ಅವಳ ರಕ್ತದೊತ್ತಡ ತುಂಬಾ ಕಡಿಮೆ ಆಗಿತ್ತು’ ಎಂದು ತಿಳಿಸಿ¨ªಾರೆ.
“ಶೂಟಿಂಗ್ ಸಂದರ್ಭದಲ್ಲಿ ಅತಿಯಾದ ಡಯಟ್ನಿಂದ ಶ್ರೀದೇವಿ ಶೌಚಗೃಹನಲ್ಲಿ ಬಿದ್ದು ಹಲ್ಲು ಮುರಿದುಕೊಂಡಿದ್ದಳು ಎಂದು ನಟ ನಾಗಾರ್ಜುನ್ ಹೇಳಿದ್ದರು. ಆಕೆಯನ್ನು ಮದುವೆಯಾದ ನಂತರ ಈ ವಿಷಯ ನನಗೆ ತಿಳಿಯಿತು. ನಂತರವೂ ಕೂಡ ಅವಳು ವಿಪರೀತ ಡಯಟ್ ಮಾಡುತ್ತಿದ್ದಳು’ ಎಂದಿದ್ದಾರೆ.
ಇದೇ ವೇಳೆ ಪುತ್ರಿ ಜಾಹ್ನವಿಯ ಜನನದ ಬಗ್ಗೆ ಸ್ಪಷ್ಟನೆ ನೀಡಿದ ಬೋನಿ ಕಪೂರ್ ಶ್ರೀದೇವಿಯವರನ್ನು ವಿವಾಹವಾದ ಬಳಿಕವೇ ಆಕೆ ಜನಿಸಿದ್ದಾಳೆ. 1996 ಜೂ.2ರಂದು ಖಾಸಗಿಯಾಗಿ ಮದುವೆಯಾದ ಬಳಿಕವೇ ಶ್ರೀದೇವಿ ಗರ್ಭಿಣಿಯಾಗಿ ಜಾಹ್ನವಿಗೆ ಜನ್ಮ ನೀಡಿದಳು ಎಂದಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.