Addoor Bridge: ಶಾಸಕ ರಾಜೇಶ್‌ ನಾೖಕ್‌ ಅವರ ಉಚಿತ ಬಸ್‌ ಸೇವೆ!


Team Udayavani, Aug 24, 2024, 12:06 AM IST

Addoor Bridge: ಶಾಸಕ ರಾಜೇಶ್‌ ನಾೖಕ್‌ ಅವರ ಉಚಿತ ಬಸ್‌ ಸೇವೆ!

ಬಂಟ್ವಾಳ: ಅಡ್ಡೂರು ಸೇತುವೆಯಲ್ಲಿ ಜಿಲ್ಲಾಡಳಿತವು ಘನ ವಾಹನ ಸಂಚಾರ ನಿಷೇಧಿಸಿದ ಕಾರಣ ಜನರಿಗೆ ಅನುಕೂಲವಾಗಲೆಂದು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ವೈಯಕ್ತಿಕ ನೆಲೆಯಲ್ಲಿ ಮಿನಿ ಬಸ್‌ ಖರೀದಿಸಿ ಪೊಳಲಿಯಿಂದ ಅಡ್ಡೂರುವರೆಗೆ ಉಚಿತ ಸೇವೆ ಆರಂಭಿಸಿದ್ದಾರೆ.

ಪೊಳಲಿ ದೇವಸ್ಥಾನದ ಮುಂಭಾಗದಲ್ಲಿ ಶುಕ್ರ ವಾರ ಬೆಳಗ್ಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ಶಾಸಕರು ಬಸ್‌ ಸಂಚಾರಕ್ಕೆ ಚಾಲನೆ ನೀಡಿದರು.

ಈ ವೇಳೆ ಚಂದ್ರಶೇಖರ್‌ ಶೆಟ್ಟಿ ಬಡಕಬೈಲು ಮಾತನಾಡಿ, ಜನರ ಕಷ್ಟಕ್ಕೆ ಶಾಸಕರು ಸ್ಪಂದಿಸಿದ್ದಾರೆ ಎಂದರು.

ಅಡ್ಡೂರು ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧದ ಬಳಿಕ ತೊಂದರೆಯಾಗಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ ಕೇಳಿ ಬಂದಿತ್ತು. ಈ ಕುರಿತು ದ.ಕ.ಸಂಸದರು ಹಾಗೂ ಶಾಸಕರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಚರ್ಚಿಸಿ ಪರ್ಯಾಯ ವ್ಯವಸ್ಥೆಗೆ ಸೂಚಿಸಿದ್ದು, ಬಳಿಕ ಮತ್ತೊಮ್ಮೆ ಸೇತುವೆಯ ಪರಿಣಿತರ ನಿಯೋಗ ಪರಿಶೀಲನೆ ನಡೆಸಿ ಸಂಚಾರಕ್ಕೆ ಸೂಕ್ತವಲ್ಲ ಎಂಬ ಅಭಿಪ್ರಾಯ ನೀಡಿದ್ದರು. ಮುಂದಿನ ವಾರದಲ್ಲಿ ಸೇತುವೆ ಪರಿಶೀಲನೆ ಯಂತ್ರ ಬಂದು ವರದಿ ನೀಡು ವವರೆಗೆ ಯಾವುದೇ ಕಾರಣಕ್ಕೂ ಬಸ್ಸು ಸಂಚಾರಕ್ಕೆ ಅವಕಾಶವಿಲ್ಲ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಸ್ಥಳೀಯರಿಗೆ ಸ್ಪಷ್ಟಪಡಿಸಿದ್ದರು.

ಹೀಗಾಗಿ ರಾಜೇಶ್‌ ನಾೖಕ್‌ ಅವರು ಪೊಳಲಿ- ಅಡೂxರು ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲ ವಾಗಲು ಪ್ರಸ್ತುತ ಅಳವಡಿಸಿರುವ 2.75 ಮೀ. ಎತ್ತರದ ಗಾರ್ಡ್‌ನಲ್ಲಿ ಸಂಚರಿಸಬಹುದಾದ ಬಸ್ಸು ಖರೀದಿಸಿ ಒದಗಿಸಿದ್ದಾರೆ. ಬೆಳಗ್ಗಿನಿಂದ ಸಂಜೆಯವರೆಗೆ ಈ ಬಸ್ಸು ಸುಮಾರು 2 ಕಿ.ಮೀ.ಅಂತರದಲ್ಲಿ ಪೊಳಲಿ ದೇವಸ್ಥಾನದ ಬಳಿಯಿಂದ ಅಡೂxರು ಜಂಕ್ಷನ್‌ವರೆಗೆ ಸಂಚರಿಸಲಿದೆ. ಇದು ಸಂಪೂರ್ಣ ಉಚಿತ ಸೇವೆ.

ಸೇತುವೆಯಲ್ಲಿ ಘನ ವಾಹನ ಸಂಚಾರ ನಿಷೇಧ ಗೊಂಡ ಬಳಿಕ ಬಿ.ಸಿ. ರೋಡು ಭಾಗದಿಂದ ತೆರ ಳುವ ಬಸ್ಸು ಪೊಳಲಿವರೆಗೆ ಮಾತ್ರ ತೆರಳುತ್ತಿದ್ದು, ಮಂಗ ಳೂರು, ಕಟೀಲು, ಬಜಪೆ ಭಾಗದಿಂದ ಆಗಮಿಸುವ ಬಸ್ಸುಗಳು ಅಡ್ಡೂರು ಭಾಗದವರೆಗೆ ಆಗಮಿಸುತ್ತದೆ. ಸುಕೇಶ್‌ ಚೌಟ, ಚಂದ್ರಶೇಖರ್‌ ಶೆಟ್ಟಿ, ವೆಂಕಟೇಶ್‌ ನಾವಡ, ಭುವನೇಶ್‌ ಪಚ್ಚಿನಡ್ಕ, ಚಂದ್ರಹಾಸ ಪಳ್ಳಿಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Subhra-Swamy

Mangaluru Visit: ಇಂದು ಡಾ. ಸುಬ್ರಮಣಿಯನ್‌ ಸ್ವಾಮಿ ಮಂಗಳೂರಿಗೆ

aane

Sulya: ಆಲೆಟ್ಟಿ: ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

Mangaluru-BjP

Nagamangala Riots: ಕದ್ರಿ: ಗಣೇಶೋತ್ಸವ ಸಮಿತಿಗಳ ಒಕ್ಕೂಟದಿಂದ ಪ್ರತಿಭಟನೆ

udUdupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

Udupi ಗೀತಾರ್ಥ ಚಿಂತನೆ-34: ಸ್ವಕರ್ಮ, ಸ್ವಧರ್ಮ: ಉತ್ಪಾದನೆಯ ಮರ್ಮ

PROTEST

Udupi: ನಾಗಮಂಗಲ ಘಟನೆ ಖಂಡಿಸಿ ವಿವಿಧೆಡೆ ಪ್ರತಿಭಟನೆ

Tulunadu-utsava

Mangaluru: ತುಳುನಾಡ ಉತ್ಸವ ಪಿಲಿಕುಳ ಕಂಬಳ: ಬೆಂಗಳೂರಿನಲ್ಲಿ ಸಭೆ

police

Udupi: ನಾಪತ್ತೆಯಾಗಿದ್ದ ಬಾಲಕನ ರಕ್ಷಣೆ, ಮಕ್ಕಳ ರಕ್ಷಣ ಘಟಕಕ್ಕೆ ಹಸ್ತಾಂತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aane

Sulya: ಆಲೆಟ್ಟಿ: ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

dw

Bike ಅಪಘಾತ- ಚಿಕಿತ್ಸೆ ಫಲಕಾರಿಯಾಗದೆ ಅತಿಥಿ ಉಪನ್ಯಾಸಕಿ ನಿಧನ

3

Puttur: ರಸ್ತೆ ಅಪಘಾತ; ಗಾಯಾಳು ಯುವಕ ಸಾವು

Puttur: ಅಂಗಡಿಗೆ ನುಗ್ಗಿದ ಕಾರು; ಚಾಲಕ ಅಸ್ವಸ್ಥ

Puttur: ಅಂಗಡಿಗೆ ನುಗ್ಗಿದ ಕಾರು; ಚಾಲಕ ಅಸ್ವಸ್ಥ

Belthangady: ಭರದಿಂದ ಸಾಗುತ್ತಿದೆ ಗುಂಡಿ ಮುಚ್ಚುವ ಕಾರ್ಯ

Belthangady: ಭರದಿಂದ ಸಾಗುತ್ತಿದೆ ಗುಂಡಿ ಮುಚ್ಚುವ ಕಾರ್ಯ

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

Subhra-Swamy

Mangaluru Visit: ಇಂದು ಡಾ. ಸುಬ್ರಮಣಿಯನ್‌ ಸ್ವಾಮಿ ಮಂಗಳೂರಿಗೆ

aane

Sulya: ಆಲೆಟ್ಟಿ: ಕಾಡಾನೆ ದಾಳಿ ಪ್ರದೇಶಕ್ಕೆ ಅರಣ್ಯಾಧಿಕಾರಿ ಭೇಟಿ

congress

Haryana ಚುನಾವಣೆ: 89 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಣಕ್ಕೆ, ಸಿಪಿಎಂಗೆ 1 ಸ್ಥಾನ

suicide (2)

Kanpur:ಮಹಿಳೆಯ ಬೆತ್ತಲೆ, ರುಂಡವಿಲ್ಲದ ಮೃತದೇಹ ಪತ್ತೆ

1bbb

Baahubali; ನೆರೆ ನೀರಲ್ಲಿ ತಲೆ ಮೇಲೆ ಬೈಕ್‌ ಹೊತ್ತು ನಡೆದ ‘ಬಾಹುಬಲಿ’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.