ಸ್ತ್ರೀಯರಿಗೆ ಮಾತ್ರ ಪ್ರವೇಶ


Team Udayavani, Jun 10, 2020, 4:30 AM IST

stri chande

ಯದುವಂಶದ ಕುಲಗುರು ಗರ್ಗಾಚಾರ್ಯರು, ಶ್ರೀಕೃಷ್ಣನ ರಾಸಕ್ರೀಡೆಗೆ ಸಂಬಂಧಿಸಿದಂತೆ ವಿಚಿತ್ರ ಘಟನೆಯೊಂದನ್ನು ವಿವರಿಸಿದ್ದಾರೆ. ಕೃಷ್ಣ ಭಕ್ತರೂ, ಮಹಾತಪ ‌ಸ್ವಿಯೂ ಆದ ಮಹರ್ಷಿಗಳೊಬ್ಬರು ಶ್ರೀಕೃಷ್ಣನ ದರ್ಶನಕ್ಕಾಗಿ  ಹಾತೊರೆಯುತ್ತ ಮಹಾದೇವನೊಡನೆ ಬೃಂದಾವನಕ್ಕೆ ತೆರಳುತ್ತಾ ರೆ. ರಾಸಕ್ರೀಡೆಯನ್ನು ನೋಡಿ ಆನಂದಿಸಲೆಂದು ಬಂದವರಿಗೆ ಅಚ್ಚರಿ ಕಾದಿತ್ತು. ಅಲ್ಲಿಯ ವೃಕ್ಷಗಳು ಗೋಪಿಕೆಯರ ರೂಪ ತಳೆದು ಕಾವಲಿಗೆ ನಿಂತಿದ್ದರು.

ಇವರಿಬ್ಬರನ್ನೂ ಒಳಗೆ ಪ್ರವೇಶಿಸಲು ಅನುಮತಿಸಲಿಲ್ಲ. “ಬೃಂದಾವನದಲ್ಲಿ ಸ್ತ್ರೀಯರಿಗೆ ಮಾತ್ರವೇ ಪ್ರವೇಶವುಂಟು. ಶ್ರೀಕೃಷ್ಣನೊಬ್ಬನೇ ಇಲ್ಲಿ ಪುರುಷ. ಆದ್ದರಿಂದ ನೀವು ಸ್ತ್ರೀರೂಪ ತಳೆದರೆ ಮಾತ್ರ ಒಳಗೆ ಪ್ರವೇಶಿಸಬಹುದು’  ಎನ್ನುತ್ತಾರೆ. ಮತ್ತೆ ಮುಂದುವರಿಸುತ್ತಾ “ಮಾನಸ ಸರೋವರ ದಲ್ಲಿ ಮುಳುಗಿ, ಸ್ತ್ರೀರೂಪ ತಳೆದು ಬನ್ನಿ’ ಎಂದು ಸಲಹೆ ನೀಡುತ್ತಾರೆ. ಅವರಿಬ್ಬರೂ ಮಾನಸ ಸರೋವರದಲ್ಲಿ ಮುಳುಗಿ ಸ್ತ್ರೀರೂಪ ತಳೆದು, ಬೃಂದಾವನವನ್ನು ಪ್ರವೇಶಿಸಿ,  ರಾಸಕ್ರೀಡೆಯ ವೈಭವವನ್ನು ಕಂಡು ಆನಂದತುಂದಿಲರಾದರು. ಮೇಲಿನ ಘಟನೆ ವಿಚಿತ್ರವಾಗಿ ಕಾಣುತ್ತಿದೆ.

ಮಾನಸಸರೋವರಕ್ಕೆ ತೀರ್ಥಯಾತ್ರೆ ಮಾಡಿಬಂ ದ ಅನೇಕ ಪುರುಷರುಂಟು. ಅವರಲ್ಲಿ ಯಾರೂ ಸ್ತ್ರೀಯಾಗಿ ಬದಲಾದ ಸುದ್ದಿ  ಇಲ್ಲಿವರೆಗೆ ತಿಳಿದುಬಂದಿಲ್ಲ. ಆದ್ದರಿಂದ, ಮೇಲಿನ ಘಟನೆ ಕಾಲ್ಪನಿಕವೇ ಹೌದು ಎಂದೆನಿ  ಸುತ್ತದೆ. ಪುರಾಣಗಳು ಮುಂತಾದ ಋಷಿ  ಪ್ರಣೀತ ವಾದ ಗ್ರಂಥಗಳಲ್ಲಿ, ಅನೇಕ ಘಟನೆಗಳು ತತ್ತ್ವಾರ್ಥಗರ್ಭಿತವಾಗಿರುತ್ತವೆ. ಮೇಲಿನ  ಘಟನೆಯೂ ಉತ್ಕೃಷ್ಟ ವಿಚಾರವ ನ್ನೇ ತಿಳಿಸುತ್ತಿದೆ. ಇಲ್ಲಿ ಸ್ತ್ರೀರೂಪವೆನ್ನುವುದು ಬಾಹ್ಯರೂಪವಲ್ಲ. ಸೃಷ್ಟೀಶನಾದ ಭಗವಂತ  ನೊ ಬ್ಬನೇ ಪುರುಷ- ಪರಮಪುರುಷ.

ಇತರರೆಲ್ಲರೂ ಶ್ರೀಪತಿಯಾದ ಆತನನ್ನೇ ತಮ್ಮ ಪತಿ/ ಸ್ವಾಮಿಯಾಗಿ ಭಾವಿಸಿ, ಆತನಲ್ಲಿ  ತನ್ಮಯ ರಾಗುವುದನ್ನು, ಸ್ತ್ರೀಭಾವವೆಂಬುದಾಗಿ ಹೇಳಬಹುದು. ಅಂತಹ ಸ್ತ್ರೀರೂಪ- ಭಾವವ ನ್ನು ತಾಳಿದಾಗ, ಅಂತರಂಗದಲ್ಲಿ ರಮಿಸುವ ಭಗವಂತನ ದರ್ಶನ ಸಾಧ್ಯವೆಂಬ ಸತ್ಯವನ್ನೇ ಸಾರುತ್ತಿದೆ ಈ ಕಥೆ.  ಮಾನಸಸರೋವರ  ಎಂಬುದು ಹಿಮಾಲಯ ಪ್ರಾಂತ್ಯದಲ್ಲಿನ ಒಂದು ಸರೋವರ. ಪವಿತ್ರವಾದ ಯಾತ್ರಾಸ್ಥಳ. ಈ ಹೊರ ಸರೋವರವು ನಮ್ಮ ಮನಸ್ಸಿನಾಳದಲ್ಲಿನ ಪವಿತ್ರಸ್ನಾನದ ಹೊರನಕ್ಷೆ. ಇಂತಹ ಸ್ತ್ರೀಭಾವವನ್ನು ಎಲ್ಲರೂ ತಳೆದು, ಭಗವಂತನನ್ನು  ಅನುಭವಿಸಬಹುದಾಗಿದೆ.

* ಮೈಥಿಲೀ ರಾಘವನ್‌, ಸಂಸ್ಕೃತಿ ಚಿಂತಕಿ, ಅಷ್ಟಾಂಗಯೋಗ ವಿಜ್ಞಾನಮಂದಿರಂ

ಟಾಪ್ ನ್ಯೂಸ್

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

Jaladurga-Puuturu

Putturu: ಭಾರೀ ಮಳೆಗೆ ಪೆರುವಾಜೆ ದೇವಾಲಯ ಜಲಾವೃತ

Shettar (3)

R. Ashoka ಪ್ರಕರಣವನ್ನು ಮುಡಾಕ್ಕೆ ಹೋಲಿಸಿದ್ದು ಸರಿಯಲ್ಲ:ಜಗದೀಶ ಶೆಟ್ಟರ್

1-rain-hebri

Heavy Rain: ಹೆಬ್ರಿಯಲ್ಲಿ ಮೇಘಸ್ಫೋಟ: ನೀರಲ್ಲಿ ಕೊಚ್ಚಿ ಹೋದ ಕಾರು!

1-deee

Bidar; ತೊಗರಿ ಹೊಲದಲ್ಲಿ 700ಕ್ಕೂ ಹೆಚ್ಚು ಗಾಂಜಾ ಗಿಡಗಳು!; ಪೊಲೀಸ್ ದಾಳಿ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

dw

Padubidri: ರಸ್ತೆ ಅಪಘಾತ; ಗಾಯಾಳು ಸಾವು

Cap-Brijesh-Chowta

Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ

1-kkk

PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್

crimebb

Kasaragod ಅಪರಾಧ ಸುದ್ದಿಗಳು

13

Malpe: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.