ಕೃಷಿ ಕಾಯಕ, ಮಳೆಗಾಲದ ಸಿದ್ಧತೆಯಲ್ಲಿ ಹಳ್ಳಿಗರು


Team Udayavani, Apr 23, 2020, 5:48 AM IST

ಕೃಷಿ ಕಾಯಕ, ಮಳೆಗಾಲದ ಸಿದ್ಧತೆಯಲ್ಲಿ ಹಳ್ಳಿಗರು

ಕುಂದಾಪುರ: ಕೋವಿಡ್-19 ಹಿನ್ನೆಲೆಯಲ್ಲಿ ದೇಶವೇ ಲಾಕ್‌ಡೌನ್‌ನಲ್ಲಿದೆ. ನಗರ ಭಾಗದವರು ಸಮಯ ಕಳೆಯುವುದು ಹೇಗೆಂದು ಚಿಂತಿಸಿದರೆ, ಹಳ್ಳಿಗರು ಮಾತ್ರ ಕೃಷಿ ಚಟುವಟಿಕೆಗಳಲ್ಲಿ, ಮಳೆಗಾಲಕ್ಕೆ ಮನೆಗಳಲ್ಲಿ ಆಗಬೇಕಾದ ಸಿದ್ಧತೆಗಳು, ಹಪ್ಪಳ, ಸಂಡಿಗೆಯಂತಹ ತಿಂಡಿ ತಯಾರಿಕೆಯಲ್ಲಿ ನಿರತರಾಗಿದ್ದಾರೆ.

ಲಾಕ್‌ಡೌನ್‌ ಆದೇಶವನ್ನು ನಗರ ಭಾಗದ ಕೆಲ ಮಂದಿ ಗಾಳಿಗೆ ತೂರಿದರೆ, ಗ್ರಾಮೀಣ ಭಾಗಗಳಲ್ಲಿ ಮಾತ್ರ ಜನ ಹೀಗೆ ತಮಗೆ ಸಿಕ್ಕ ಸಮಯಾವಕಾಶವನ್ನು ಹಾಳು ಮಾಡದೇ ಉತ್ತಮ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಅಡಕೆ ಹೆಕ್ಕುವುದು, ಅಡಕೆ ಒಣಗಿಸುವುದು, ಒಣಗಿದ ಅಡಕೆ ಸುಲಿಯೋದು, ತೋಟಕ್ಕೆ ನೀರು ಹಾಯಿಸುವುದು, ಕಾಳು ಮೆಣಸು ಕೊಯ್ಯುವುದು, ಮಳೆಗಾಲಕ್ಕೆ ಬೇಕಾದ ಕಟ್ಟಿಗೆ ರಾಶಿ ಹಾಕುವುದು, ಹಟ್ಟಿಗೆ ಬೇಕಾದ ತರಗೆಲೆ ರಾಶಿ.. ಇದು ಕುಂದಾಪುರದ ಗ್ರಾಮೀಣ ಭಾಗಗಳಾದ ಹಳ್ಳಿಹೊಳೆ, ಕಮಲಶಿಲೆ, ಯಡಮೊಗೆ, ಅಮಾಸೆಬೈಲು, ದೇವರಬಾಳು, ಕಬ್ಬಿನಾಲೆ ಮತ್ತಿತರ ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬಂದ ಚಿತ್ರಣ.

ಮಳೆಗಾಲದಲ್ಲಿ ಅಡಿಕೆ ಕೆಲಸ ಮಾಡುತ್ತಿದ್ದೇವು. ಲಾಕ್‌ಡೌನ್‌ನಿಂದ ಸ್ವಲ್ಪ ಬೇಗ ಈ ಕೆಲಸ ಆರಂಭಿಸಿದ್ದೇವೆ. ಈ ಭಾಗದಲ್ಲಿ ಹೆಚ್ಚು ಅಡಿಕೆ ಕೃಷಿಕರಿದ್ದು, ಲಾಕ್‌ಡೌನ್‌ನಿಂದ ಅಷ್ಟೇನು ತೊಂದರೆಯಾಗಿಲ್ಲ. ಮಳೆಗಾದ ಸಿದ್ಧತೆಯಂತಹ ಕೆಲಸಗಳು ಈ ವರ್ಷ ಬೇಗನೇ ಮುಗಿದಿವೆ ಎನ್ನುತ್ತಾರೆ ಬರೇಗುಂಡಿಯ ರಾಮಕೃಷ್ಣ ರಾವ್‌.

ಹೊರೆಯಾಗದ ಲಾಕ್‌ಡೌನ್‌
ಗ್ರಾಮೀಣ ಭಾಗದ ಜನರಿಗೆ ಕಳೆದ ಅನೇಕ ದಿನಗಳಿಂದ ಲಾಕ್‌ಡೌನ್‌ ಇದ್ದರೂ, ಅಷ್ಟೇನು ಹೊರೆಯಾದಂತೆ ಕಂಡು ಬಂದಿಲ್ಲ. ಬೇರೆ ಕಡೆಗೆ ಕೆಲಸಕ್ಕೆ ಹೋಗುತ್ತಿದ್ದರಿಂದ ಮನೆ ಕೆಲಸಕ್ಕೆ ಸಮಯ ಸಿಗುತ್ತಿರಲಿಲ್ಲ. ಈಗ ಸಿಕ್ಕಿದೆ. ಮನೆ ಕೆಲಸ, ಕಟ್ಟಿಗೆ ರಾಶಿ, ಹೀಗೆ ಸಮಯ ಕಳೆಯುವುದು ಕೂಡ ಅಷ್ಟೇನು ಕಷ್ಟವಾಗುತ್ತಿಲ್ಲ. ಮನೆಯಲ್ಲಿ ದಾಸ್ತಾನಿರುವ ಅಕ್ಕಿಯಿದೆ. ಅಲ್ಪ – ಸ್ವಲ್ಪ ತರಕಾರಿಗಳು ಕೂಡ ಇವೆ. ಬೇರೆ ಏನಾದರೂ ಬೇಕಾದರೆ ವಾರಕ್ಕೊಮ್ಮೆ ಅಥವಾ 2 ವಾರಕ್ಕೊಮ್ಮೆ ಇಲ್ಲೇ ಸಮೀಪದ ಪೇಟೆಗೆ ಹೋಗುತ್ತೇವೆ ಎನ್ನುವುದು ದೇವರಬಾಳು ನಿವಾಸಿ ರಾಜೇಶ್‌ ಅಭಿಪ್ರಾಯ.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.