
Pranab Mukherjee: ಅಧ್ಯಾದೇಶ ರಾಹುಲ್ ಹರಿದಿದ್ದು, ಯುಪಿಎಗೆ ಹೊಡೆದ ಕೊನೆಯ ಮೊಳೆ
ಮಗಳು ಶರ್ಮಿಷ್ಠಾ ಬರೆದ ಪ್ರಣವ್ ಮುಖರ್ಜಿ ಕುರಿತ ಪುಸ್ತಕದಲ್ಲಿ ಉಲ್ಲೇಖ
Team Udayavani, Dec 7, 2023, 12:23 AM IST

ಹೊಸದಿಲ್ಲಿ: ಮಾಜಿ ರಾಷ್ಟ್ರಪತಿ ದಿ| ಪ್ರಣವ್ ಮುಖರ್ಜಿ ಅವರ ಕುರಿತು ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಬರೆದಿರುವ ಪುಸ್ತಕ ಬಿಡುಗಡೆಗೆ ಸಿದ್ಧವಾಗಿದೆ. “ಪ್ರಣವ್, ಮೈ ಫಾದರ್: ಎ ಡಾಟರ್ ರಿಮೆಂಬರ್’ ಪುಸ್ತಕದಲ್ಲಿ ಅವರು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದೊಂದಿಗೆ ಪ್ರಣವ್ ಮುಖರ್ಜಿ ಅವರು ಹೊಂದಿದ್ದ ಒಡನಾಟದ ಕುರಿತು ಪ್ರಸ್ತಾವಿಸಿದ್ದಾರೆ.
“ರಾಹುಲ್ ಗಾಂಧಿ ಅವರು ವಿನಯ ಶೀಲ. ತಲೆಯ ತುಂಬ ಪ್ರಶ್ನೆಗಳನ್ನೇ ಹೊಂದಿದ್ದಾರೆ. ಆದರೆ ರಾಜಕೀಯವಾಗಿ ಇನ್ನೂ ಪ್ರಬುದ್ಧತೆ ಹೊಂದಿಲ್ಲ. ಅಂತಹ ಯಾವುದೇ ಯೋಗ್ಯತೆ ಇಲ್ಲದಿದ್ದರೂ, ಗಾಂಧಿ- ನೆಹರೂ ಕುಟುಂಬದ ಎಲ್ಲ ದುರಹಂಕಾರಗಳನ್ನೂ ಅವರು ಹೊಂದಿದ್ದಾರೆ’ ಎಂದು ಪ್ರಣವ್ ಹೇಳಿದ್ದರು ಎಂದು ಪುಸ್ತಕದಲ್ಲಿದೆ. ಅಷ್ಟು ಮಾತ್ರವಲ್ಲ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸರಕಾರ, ಅಪರಾಧಿಗಳೆಂದು ಸಾಬೀತಾದ ನಾಯಕರು ಅನರ್ಹರಾಗುವುದನ್ನು ತಪ್ಪಿಸಲು ಹೊರಡಿಸಿದ್ದ ಅಧ್ಯಾದೇಶವನ್ನು ಪತ್ರಿಕಾಗೋಷ್ಠಿ ಯಲ್ಲೇ ಹರಿದು ಹಾಕಿದ್ದರು. ಇದು ಯುಪಿಎ ಸರಕಾರದ ಮೇಲೆ ಹೊಡೆದ ಕೊನೆಯ ಮೊಳೆ ಎಂದೂ ಪ್ರಣವ್ಹೇಳಿದ್ದರೆಂದು ಪುಸ್ತಕದಲ್ಲಿದೆ.
“ಅವರು ತಮ್ಮನ್ನು ತಾವು ಏನೆಂದು ಭಾವಿಸಿದ್ದಾರೆ? ಸಂಪುಟದ ಸದಸ್ಯರಲ್ಲದ ಅವರು ಸಂಪುಟದ ತೀರ್ಮಾನದ ಪ್ರತಿಯನ್ನು ಹರಿಯಲು ಏನು ಅಧಿಕಾರವಿದೆ? ತಮ್ಮ ಕ್ರಿಯೆಯ ಪರಿ ಣಾಮ ವನ್ನು ಅವರು ಅರಿತಿಲ್ಲ. ಪ್ರಧಾನಿ ಯನ್ನು ಅವಮಾನಿಸಲು ಅವರಿಗೆ ಏನು ಹಕ್ಕಿದೆ?’ ಎಂದು ರಾಹುಲ್ ಬಗ್ಗೆ ಪ್ರಣವ್ ಕ್ರೋಧಗೊಂಡಿದ್ದರು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.