ಎಲ್ಲರೂ ಅನಿಲ್‌ ಕುಂಬ್ಳೆ ಆಗೋಕಾಗಲ್ಲ…


Team Udayavani, May 26, 2020, 4:36 AM IST

sant tank

ಸಂತೋಷದ ಮೂಲ ಇರುವುದು ಎಲ್ಲಿ ಗೊತ್ತಾ? ಕೃತಜ್ಞತೆಯಲ್ಲಿ. ಬೇರೆಯವರಿಗೆ ಕಷ್ಟದಲ್ಲಿ ಸಹಾಯ ಮಾಡುವುದು, ನಮಗೆ ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸುವುದು ಇದೆಯಲ್ಲ; ಅದು ನಮ್ಮ ಸಂತೋಷವನ್ನು ಹೆಚ್ಚಿಸುತ್ತಾ  ಹೋಗುತ್ತದೆ. ಸುಖದ ಇನ್ನೊಂದು ಮೂಲ ಅಂದರೆ, ಚಾಪೆ ಎಷ್ಟಿರುತ್ತದೆಯೋ ಅಷ್ಟು ಮಾತ್ರ ಕಾಲು ಚಾಚುವುದು. ನಿಮ್ಮ ಆಸೆಯ ಕಾಲಿಗೆ ತಕ್ಕಷ್ಟು ಚಾಪೆ ಹುಡುಕದೇ ಇರುವುದು. ಅಂದರೆ, ದೇವರು ಇಷ್ಟನ್ನಾದರೂ ಕೊಟ್ಟಿದ್ದಾನಲ್ಲ  ಅಂತ ತೃಪ್ತಿ ಪಡುವುದು. ಬೇರೆಯವರನ್ನು ನೋಡಿ ಕರುಬದೇ ಇರುವುದು.

ಬೇಕಿದ್ದರೆ ಗಮನಿಸಿ ನೋಡಿ: ಸದಾ ಕೊರಗುವ ಮನಃಸ್ಥಿಯಲ್ಲಿರುವವರು ಸುಖವಾಗಿರೋಲ್ಲ. ಯಾವ ಮಟ್ಟಿಗೆ ಅಂದರೆ, ನಿದ್ದೆ ಮಾತ್ರೆ ಕೊಟ್ಟರೂ ಅವರ ಕಣ್ಣಿಗೆ  ನಿದ್ದೆ ಹತ್ತೂಲ್ಲ. ಕಾರಣ, ಅವನಿಗೆ ಲಕ್ಷ ರುಪಾಯಿ ಸಂಬಳದ ಕೆಲಸ ಸಿಕು¤, ನನಗೇಕೆ ಇಲ್ಲ? ನಾನೇನು ತಪ್ಪು ಮಾಡಿದ್ದೀನಿ ಅಂತ, ಇನ್ನೊಬ್ಬರೊಂದಿಗೆ ತಮ್ಮನ್ನುಹೋಲಿಕೆ ಮಾಡಿಕೊಳ್ಳುತ್ತಾ ಹೋಗುತ್ತಾರೆ. ಅಷ್ಟೇ ಅಲ್ಲ; ಈ  ಜನ, ಸಮಾಜ ನನಗೆ ಅನ್ಯಾಯ ಮಾಡಿಬಿಟ್ಟಿತು ಎಂಬ ನೆಗೆಟಿವ್‌ ಯೋಚನೆಯನ್ನು ಮನಸ್ಸಿಗೆ ತಂದುಕೊಳ್ಳುತ್ತಾರೆ.

ಆನಂತರದಲ್ಲಿ ಚಿಂತೆ ಹೆಚ್ಚುತ್ತಲೇ ಹೋಗುತ್ತದೆ. ಚಿಂತೆಯ ಸಂತೆಯೊಳಗೆ, ಸಂತೋಷ ಕಾಣೆಯಾಗುತ್ತದೆ. ಇದರಿಂದ  ಮುಕ್ತಿ ಪಡೆಯಬೇಕು ಅಂದರೆ, ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳದೇ ಬದುಕಲು ಕಲಿಯಬೇಕು. ಬೇರೆಯವರು ಎತ್ತರಕ್ಕೆ  ಳೆದಿದ್ದಾರೆ ಅಂದಾಗ, ಅದಕ್ಕೆ ಸಂತೋಷಪಡಿ. ಅವರು ಆ ಸ್ಥಾನ ತಲುಪಲು ಎಷ್ಟು ಕಷ್ಟಪಟ್ಟರು  ಎಂಬುದನ್ನು ಗಮನಿಸಿ.

ಆ ದಾರಿ ಒಳ್ಳೆಯದು ಅನಿಸಿದರೆ, ಅದನ್ನು ಅನುಸರಿಸಿಯೇ ನೀವೂ ಹೆಜ್ಜೆಯಿಡಿ. ಅದು ಬಿಟ್ಟು ಕರುಬುವುದು ಸರಿಯಲ್ಲ. ಒಂದು ಸಲ ಕರುಬುವಿಕೆ ಶುರುವಾದರೆ, ಆನಂತರದಲ್ಲಿ ನಿಮ್ಮ ಯೋಚನೆಗಳೆಲ್ಲವೂ  ನೆಗೆಟೀವ್‌ ಆಗುತ್ತವೆ. ಅದೇ ಕಾರಣದಿಂದ ದೈಹಿಕ, ಮಾನಸಿಕ ಖನ್ನತೆ ಜೊತೆಯಾಗುತ್ತದೆ. ಒಂದು   ಸತ್ಯವನ್ನು ತಿಳಿಯಬೇಕು. ಈ ಜಗತ್ತಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ಪೇಸ್‌ ಇದೆ.

ಅದನ್ನು ಹೆಚ್ಚಿಗೆ, ಕಡಿಮೆ ಮಾಡಿಕೊಳ್ಳುವ  ಸಾಮರ್ಥ್ಯ, ನೈಪುಣ್ಯ ಎಲ್ಲವೂ ನಮ್ಮಕೈಯಲ್ಲೇ ಇರುವುದು. “ಲೋ, ಆ ಅನಿಲ್‌ ಕುಂಬ್ಳೆ 15 ಸಿ ಬಸ್‌ನಲ್ಲಿ ಓಡಾಡ್ತಾ ಇದ್ರು ಕಣೋ… ನಾನೇ ನೋಡಿದ್ದೀನಿ…’ ಅಂತ ಹೇಳ್ಳೋರು ಇದ್ದಾರೆ. ಸರಿ, ಅನಿಲ್‌ ಕುಂಬ್ಳೆ ಆಗ ಬಸ್‌ನಲ್ಲಿ ಓಡಾಡಿದರು ಅನ್ನುವುದು ಮುಖ್ಯ  ಅಲ್ಲ; ಬಸ್‌ನಲ್ಲಿ ಓಡಾಡುತ್ತಿದ್ದ ಒಬ್ಬ ಹುಡುಗ, ನಂತರ ಅಂತಾರಾಷ್ಟ್ರೀಯ ಮಟ್ಟದ ಆಟಗಾರನಾಗಿ ಬೆಳೆದನಲ್ಲ, ಅದಷ್ಟೇ ನಮಗೆ ಮುಖ್ಯವಾಗಬೇಕು.

ನೆನಪಿಡಿ: ಎಲ್ಲರೂ ಅನಿಲ್‌ ಕುಂಬ್ಳೆ ಆಗೋಕಾಗಲ್ಲ, ಹಾಗಂತ ಕರುಬುವ  ವಿಚಾರವಲ್ಲ ಇದು. ನೀವು ಕ್ರಿಕೆಟ್‌ನಲ್ಲಿ ಏನೂ ಮಾಡಲಾಗಲಿಲ್ಲ ಅಂತಾದರೆ ಬಿಡಿ, ನಿಮ್ಮದೇ ಒಂದು ಕ್ಷೇತ್ರ ಗುರುತಿಸಿಕೊಂಡು ಅಲ್ಲಿ   ನಾದರೂ ಸಾಧಿಸಬಹುದಲ್ಲ… ಗೊತ್ತಿರಲಿ, ಅನಿಲ್‌ ಕುಂಬ್ಳೆ ಮಾಡಿದ್ದು, ತೆಂಡೂಲ್ಕರ್‌  ಕಂಡುಕೊಂಡಿದ್ದು ಇದನ್ನೇ. ಅವರವರ ತಾಕತ್ತು, ಅಭಿರುಚಿ ಅರಿತು, ಬದುಕಿನ ದಾರಿಗಳನ್ನು ಹುಡುಕಿಕೊಂಡದ್ದು.

ಟಾಪ್ ನ್ಯೂಸ್

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.