Sri Lanka: ಶ್ರೀಲಂಕಾ ನೂತನ ಅಧ್ಯಕ್ಷರಾಗಿ ದಿಸ್ಸಾನಾಯಕೆ ಆಯ್ಕೆ- ಭಾರತಕ್ಕೆ ಹೊಸ ಸಮಸ್ಯೆ!

ನೆರೆ ರಾಷ್ಟ್ರದಿಂದ ಯಾವೆಲ್ಲ ಬೆದರಿಕೆ ಬರಬಹುದು

Team Udayavani, Sep 23, 2024, 11:37 AM IST

Sri Lanka: ಶ್ರೀಲಂಕಾ ನೂತನ ಅಧ್ಯಕ್ಷರಾಗಿ ದಿಸ್ಸಾನಾಯಕೆ ಆಯ್ಕೆ- ಭಾರತಕ್ಕೆ ಹೊಸ ಸಮಸ್ಯೆ!

ಕೊಲಂಬೋ: ಭಾರತದ ನೆರೆಯ ರಾಷ್ಟ್ರ ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾರ್ಕ್ಸ್ ವಾದಿ , ನ್ಯಾಷನಲ್‌ ಪೀಪಲ್ಸ್‌ ಪವರ್‌ (ಎನ್‌ಪಿಪಿ) ಪಕ್ಷದ ನಾಯಕ ಅನುರಾ ಕುಮಾರ ದಿಸ್ಸಾ ನಾಯಕೆ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಲಂಕಾದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರದ ಗದ್ದುಗೆ ಓರ್ವ ಮಾರ್ಕ್ಸ್ ವಾದಿ ನಾಯಕನ ಕೈ ಸೇರಿದಂತಾಗಿದೆ.

ಲಂಕೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಮೊದಲಿಗೆ ಶೇ.50ರಷ್ಟು ಮತ ಗಳಿಸಿರುತ್ತಾರೋ ಅವರೇ ಅಧ್ಯಕ್ಷರಾಗುತ್ತಿದ್ದರು. ಈ ಬಾರಿ ಯಾರೂ ಶೇ.50ರ ಗಡಿ ದಾಟದ ಹಿನ್ನೆಲೆಯಲ್ಲಿ ಆ ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ 2ನೇ ಹಂತದ ಮತ ಎಣಿಕೆ ನಡೆಸಲಾಗಿದೆ. ಈ ವೇಳೆ ಶೇ.42.31ರ ಮತದೊಂದಿಗೆ ಅನುರಾ ಗೆದ್ದಿದ್ದು, ಸೋಮವಾರ ಪದಗ್ರಹಣ ನಡೆಯಲಿದೆ.

ಭಾರತಕ್ಕೆ ಮತ್ತೊಂದು ಬದಿಯಲ್ಲೂ ಹೊಸ ಸಮಸ್ಯೆ?
ಪಾಕಿಸ್ತಾನದಿಂದ ಉಗ್ರರ ಕಾಟ, ಚೀನಾ ವಿಸ್ತರಣಾ ವಾದ, ಬಾಂಗ್ಲಾದಿಂದ ಗಡಿ ಭದ್ರತೆಗೆ ಸವಾಲು, ಮಾಲ್ಡೀವ್ಸ್‌ನಿಂದ ಚೀನಾಗೆ ಕುಮ್ಕಕ್ಕು ಹೀಗೆ ಭಾರತ ತನ್ನ ಸುತ್ತಲೂ ಸಮಸ್ಯೆಗಳನ್ನೇ ಹೊದ್ದು ನಿಂತಿರುವಾಗ, ಲಂಕಾದಲ್ಲಿ ಮಾರ್ಕ್ಸ್ ವಾದಿ ನಾಯಕ ಅನುರಾ ರಾಷ್ಟ್ರದ ಗದ್ದುಗೆ ಏರಿದ್ದಾರೆ.

ಇದು ಭಾರತಕ್ಕೆ ಮತ್ತೊಂದು ಸವಾಲು ತಂದೊಡ್ಡುವ ಸಾಧ್ಯತೆಗಳಿಗೆ ಪುಷ್ಠಿ ನೀಡಿದೆ. ಅನುರಾ, ಭಾರತದ ಖಟ್ಟಾ ವಿರೋಧಿ ಸಂಘಟನೆ ಜನತಾ ವಿಮುಕ್ತಿ ಪೆರಮುನ(ಜೆವಿಪಿ) ನಾಯಕ. 1987ರ ಭಾರತ-ಲಂಕಾ ಒಪ್ಪಂದವನ್ನು ಈ ಸಂಘಟನೆ ತೀವ್ರವಾಗಿ ವಿರೋಧಿಸಿ, ಚೀನಾದ ಪರ ನಿಲುವು ಹೊಂದಿತ್ತು. ಇದೀಗ ಅನುರಾ ಕೂಡ ಅದೇ ರೀತಿ ಚೀನಾಪರ ನಿಲುವೊಂದಿಗೆ ಭಾರತದ
ಹಿತಾಸಕ್ತಿಗೆ ಧಕ್ಕೆಯಾಗುವ ಯೋಜನೆಯತ್ತ ಜಾರಬಹುದೆಂಬ ಗುಮಾನಿ ಶುರುವಾಗಿದೆ.

ನೆರೆ ರಾಷ್ಟ್ರದಿಂದ ಯಾವೆಲ್ಲ ಬೆದರಿಕೆ ಬರಬಹುದು
*ಲಂಕಾದಲ್ಲಿ ಭಾರತ ವಿರೋಧಿಗಳಿಗೆ ನೆಲೆ ಸಾಧ್ಯತೆ , ಕುತಂತ್ರಕ್ಕೆ ಪುಷ್ಠಿ
*ಚೀನಾ ಜತೆ ಸೇರಿ ಭಾರತದ ವ್ಯಾಪಾರಕ್ಕೆ ಧಕ್ಕೆ, ಭದ್ರತೆಗೂ ತೊಡಕು
*ಲಂಕಾದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಹೂಡಿಕೆ ಹೆಚ್ಚಿಸಿ ಚೀನಾ ಪ್ರಾಬಲ್ಯ
*ಹಿಂದೂ ಮಹಾಸಾಗರ ಎಂಟ್ರಿಗೆ ಚೀನಾಗೆ ಶ್ರೀಲಂಕಾ ಹೊಸ ಅಸ್ತ್ರ

ಚೀನಾದ ನಿಕಟವರ್ತಿಕಮ್ಯೂನಿಸ್ಟ್‌ ಅಧ್ಯಕ್ಷ
ಕೆಕಿರಾವಾ ಗ್ರಾಮದಲ್ಲಿ ಮೊಟ್ಟ ಮೊದಲ ಬಾರಿಗೆ ವಿಶ್ಚವಿದ್ಯಾಲಯದ ಮೆಟ್ಟಿಲೇರಿದ ವಿದ್ಯಾವಂತ ಅನುರಾ ಕುಮಾರ ದಿಸ್ಸಾನಾಯಕೆ. 1990ರ ದಶಕದಲ್ಲಿ ಕಮ್ಯೂನಿಸಂ ಪ್ರತಿಪಾದನೆಯೊಂದಿಗೆ ವಿದ್ಯಾರ್ಥಿಯಾಗಿದ್ದಾಗಲೇ ಛಾಪು ಮೂಡಿಸಿದ್ದರು. ಬಳಿಕ ಜೆವಿಪಿ ಸಂಘಟನೆ ಸೇರಿ, 1998ರಲ್ಲಿ ಅದೇ ಸಂಸ್ಥೆಯ ನಿರ್ಣಯ ಸಮಿತಿ ಯ ಸದಸ್ಯರಾದರು. 2004ರಲ್ಲಿ ಸಂಸದೀಯ
ಚುನಾವಣೆಯಲ್ಲಿ ಗೆದ್ದು ಸಂಪುಟ ಸಚಿವರಾದರು. 2014ರಲ್ಲಿ ಜೆವಿಪಿ ಮುಖ್ಯಸ್ಥರಾಗಿ, 2015ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿ ವಿಪಕ್ಷದ ಮುಖ್ಯ ಸಚೇತಕರಾಗಿದ್ದರು.  ಇವರು ಚೀನಾದ ನಿಕಟವರ್ತಿಯೂ ಹೌದು.

ಟಾಪ್ ನ್ಯೂಸ್

Mudigere: ಅಂಗನವಾಡಿ ಟೀಚರ್ ಹುದ್ದೆಗೆ ಕನ್ನಡದ ಜೊತೆ ಉರ್ದು ಭಾಷೆಗೆ ಆದ್ಯತೆ: ಬಿಜೆಪಿ ಕಿಡಿ

Mudigere: ಅಂಗನವಾಡಿ ಟೀಚರ್ ಹುದ್ದೆಗೆ ಕನ್ನಡದ ಜೊತೆ ಉರ್ದು ಭಾಷೆಗೆ ಆದ್ಯತೆ: ಬಿಜೆಪಿ ಕಿಡಿ

Oscars 2025: 97ನೇ ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ‘ಲಾಪತಾ ಲೇಡೀಸ್’

Oscars: 97ನೇ ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ‘ಲಾಪತಾ ಲೇಡೀಸ್’

Israel: ವೈಮಾನಿಕ ದಾಳಿಯಲ್ಲಿ ಹಮಾಸ್‌ ನಾಯಕ ಯಾಹ್ಯಾ ಸಾವು? ಇಸ್ರೇಲ್‌ ತನಿಖೆ

Israel: ವೈಮಾನಿಕ ದಾಳಿಯಲ್ಲಿ ಹಮಾಸ್‌ ನಾಯಕ ಯಾಹ್ಯಾ ಸಾವು? ಇಸ್ರೇಲ್‌ ತನಿಖೆ

chaitra j achar joins Marnami movie team

Chaithra J Achar: ಮಾರ್ನಮಿ ತಂಡ ಸೇರಿದ ಚೈತ್ರಾ

Will discuss about Rayanna Chennamma Brigade: K.S.Eshwarappa

Shimoga; ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಬಗ್ಗೆ ಶೀಘ್ರ ತೀರ್ಮಾನ: ಕೆ.ಎಸ್.ಈಶ್ವರಪ್ಪ

Bigg Boss Kannada11: ಸ್ವರ್ಗನೂ ಇಲ್ಲೇ, ನರಕನೂ ಇಲ್ಲೇ.. ಬಿಗ್‌ಬಾಸ್‌ ಮನೆಯ ಫೋಟೋಸ್ ವೈರಲ್

Bigg Boss Kannada11: ಸ್ವರ್ಗನೂ ಇಲ್ಲೇ, ನರಕನೂ ಇಲ್ಲೇ.. ಬಿಗ್‌ಬಾಸ್‌ ಮನೆಯ ಫೋಟೋಸ್ ವೈರಲ್

Tirupati Laddu ವಿವಾದ: ತಿರುಪತಿ ದೇಗುಲದಲ್ಲಿ ಮಹಾ ಶಾಂತಿ ಹೋಮ, ಶುದ್ದೀಕರಣ…

Tirupati Laddu ವಿವಾದ: ತಿರುಪತಿ ದೇಗುಲದಲ್ಲಿ ಮಹಾ ಶಾಂತಿ ಹೋಮ, ಶುದ್ದೀಕರಣ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel: ವೈಮಾನಿಕ ದಾಳಿಯಲ್ಲಿ ಹಮಾಸ್‌ ನಾಯಕ ಯಾಹ್ಯಾ ಸಾವು? ಇಸ್ರೇಲ್‌ ತನಿಖೆ

Israel: ವೈಮಾನಿಕ ದಾಳಿಯಲ್ಲಿ ಹಮಾಸ್‌ ನಾಯಕ ಯಾಹ್ಯಾ ಸಾವು? ಇಸ್ರೇಲ್‌ ತನಿಖೆ

ಪ್ರಧಾನಿ ಮೋದಿ ಶಾಂತಿಮಂತ್ರಕ್ಕೆ ಅಮೆರಿಕ ಶ್ಲಾಘನೆ

PM Modi ಶಾಂತಿಮಂತ್ರಕ್ಕೆ ಅಮೆರಿಕ ಶ್ಲಾಘನೆ

arrested

Italy; ಅತ್ಯಾ*ಚಾರಿಗೆ ಪುರುಷತ್ವ ಹರಣ : ಶೀಘ್ರ ಹೊಸ ಕಾನೂನು?

1-gift-aaa-bg

Modi ಮರೆತ ಬೈಡೆನ್‌: ಕ್ವಾಡ್‌ ಸಭೆಯಲ್ಲಿ ಎಡವಟ್ಟು

1-eewqeq-eqeeqe

Video; ಅಲ್‌ ಜಜೀರಾ ಬ್ಯೂರೋ ಮುಚ್ಚಿಸಿದ ಇಸ್ರೇಲ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Mudigere: ಅಂಗನವಾಡಿ ಟೀಚರ್ ಹುದ್ದೆಗೆ ಕನ್ನಡದ ಜೊತೆ ಉರ್ದು ಭಾಷೆಗೆ ಆದ್ಯತೆ: ಬಿಜೆಪಿ ಕಿಡಿ

Mudigere: ಅಂಗನವಾಡಿ ಟೀಚರ್ ಹುದ್ದೆಗೆ ಕನ್ನಡದ ಜೊತೆ ಉರ್ದು ಭಾಷೆಗೆ ಆದ್ಯತೆ: ಬಿಜೆಪಿ ಕಿಡಿ

Oscars 2025: 97ನೇ ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ‘ಲಾಪತಾ ಲೇಡೀಸ್’

Oscars: 97ನೇ ಆಸ್ಕರ್‌ಗೆ ಭಾರತದಿಂದ ಅಧಿಕೃತ ಪ್ರವೇಶ ಪಡೆದ ‘ಲಾಪತಾ ಲೇಡೀಸ್’

Mudhol: ಅತ್ಯಾಚಾರದಂತಹ ಕೃತ್ಯಕ್ಕೆ ಕೋಮುಬಣ್ಣ ಬಳಿಯುವ ಕೆಲಸವಾಗಬಾರದು

Mudhol: ಅತ್ಯಾಚಾರದಂತಹ ಕೃತ್ಯಕ್ಕೆ ಕೋಮುಬಣ್ಣ ಬಳಿಯುವ ಕೆಲಸವಾಗಬಾರದು

Thekkatte: ಇಂದಿನಿಂದ ಹೆದ್ದಾರಿ ಬದಿಯ ಅನಧಿಕೃತ ಒತ್ತುವರಿ ತೆರವು

Thekkatte: ಇಂದಿನಿಂದ ಹೆದ್ದಾರಿ ಬದಿಯ ಅನಧಿಕೃತ ಒತ್ತುವರಿ ತೆರವು

Israel: ವೈಮಾನಿಕ ದಾಳಿಯಲ್ಲಿ ಹಮಾಸ್‌ ನಾಯಕ ಯಾಹ್ಯಾ ಸಾವು? ಇಸ್ರೇಲ್‌ ತನಿಖೆ

Israel: ವೈಮಾನಿಕ ದಾಳಿಯಲ್ಲಿ ಹಮಾಸ್‌ ನಾಯಕ ಯಾಹ್ಯಾ ಸಾವು? ಇಸ್ರೇಲ್‌ ತನಿಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.