ಕಲಾವಿದರಿಗೆ ಅವಕಾಶ ಕೊಡಿ ಇಲ್ಲವೇ ವಿಷ ಕೊಡಿ: ಜಿಲ್ಲಾಡಳಿತದ ವಿರುದ್ಧ ಕಲಾವಿದರ ಆಕ್ರೋಶ


Team Udayavani, Dec 11, 2020, 1:40 PM IST

ಕಲಾವಿದರಿಗೆ ಅವಕಾಶ ಕೊಡಿ ಇಲ್ಲವೇ ವಿಷ ಕೊಡಿ:  ಜಿಲ್ಲಾಡಳಿತದ ವಿರುದ್ಧ ಕಲಾವಿದರ ಆಕ್ರೋಶ

ಅಂಕೋಲಾ: ಕೋವಿಡ್‌-19 ಕಾರಣದಿಂದ ಸ್ತಬ್ಧವಾಗಿದ್ದ ಎಲ್ಲ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾದರೂ ಕಲಾವಿದರಿಗೆ
ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡದೆ ತಾರತಮ್ಯ ಮಾಡುತ್ತಿರುವ ಜಿಲ್ಲಾಡಳಿತದ ವಿರುದ್ಧ ಹರಿಹಾಯ್ದ ಕಲಾವಿದರಿಗೆ ಬದುಕಲು ಅವಕಾಶ ನೀಡಿ ಇಲ್ಲವೇ ವಿಷ ಕೊಡಿ ಎಂದು ಹೇಳಿ ಮುಂಬರುವ ಗ್ರಾ.ಪಂ ಚುನಾವಣೆ ಬಹಿಷ್ಕಾರದ ನಿರ್ಣಯ
ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ರಂಗಭೂಮಿ, ಯಕ್ಷಗಾನ, ಸಂಗ್ಯಾಬಾಳ್ಯ, ಜಾನಪದ ಕಲಾವಿದರು, ಲೈಟಿಂಗ್‌ ಡೆಕೊರೇಶನ, ಸೌಂಡ್‌ ಸಿಸ್ಟಂ, ಶಾಮಿಯಾನ, ಪ್ರಿಂಟಿಂಗ್‌, ರಂಗಸಜ್ಜಿಕೆ, ಪ್ರಸಾಧನ, ಮುಂತಾದ ಕಲಾಪ್ರಕಾರಗಳ ಪ್ರತಿನಿಧಿಗಳು ಗುರುವಾರ ಜೈಹಿಂದ್‌ ಮೈದಾನದಲ್ಲಿ ಕರೆದ
ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿದ್ದಾರೆ. ರಂಗಸಜ್ಜಿಕೆ ಮಾಲೀಕ ಮೋಹನ ನಾಯ್ಕ ಮಾತನಾಡಿ, ಲಕ್ಷಾಂತರ ರೂ ಸಾಲ ಮಾಡಿ ಹಾಕಿದ ಪರಿಕರಗಳು ಕಾರ್ಯಕ್ರಮಗಳಿಲ್ಲದೆ ಹಾಳಾಗುತ್ತಿದೆ. ಆದಯಾವಿಲ್ಲದೆ ಸಾಲ ತುಂಬಲು ಕಷ್ಟವಾಗುತ್ತಿದೆ. ಸಂಸಾರ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದರು.

ಇದನ್ನೂ ಓದಿ:ಫಿಟ್ ನೆಸ್ ಟೆಸ್ಟ್ ನಲ್ಲಿ ತೇರ್ಗಡೆಯಾದ ರೋಹಿತ್: ಆಸೀಸ್ ಗೆ ಹಾರಲಿದ್ದಾರೆ ಹಿಟ್ ಮ್ಯಾನ್

ಯಕ್ಷಗಾನ ಕಲಾವಿದ ಶಿವಾ ನಾಯ್ಕ ಮಾತನಾಡಿ ಸರಕಾರಿ ರಾಜಕಿಯ ಕಾರ್ಯಕ್ರಮಗಳಿಗ ಯಾವುದೇ ನಿರ್ಬಂಧವಿಲ್ಲದೆ
ನಡೆಯುತ್ತದೆ. ಆದರೆ ಕಲಾವಿದರನ್ನೆ ಟಾರ್ಗೆಟ್‌ ಮಾಡುತ್ತಿದ್ದಾರೆ. ಇದರಿಂದ ಕಲೆ ಮತ್ತು ಸಂಸ್ಕೃತಿಯ ನಾಶ ಮಾಡುತ್ತಿದ್ದಾರೆ ಎಂದರು.

ಜಾನಪದ ಕಲಾವಿದ ಶಿವಾನಂದ ನಾಯ್ಕ ಮಾತನಾಡಿ, ಒಂದು ವಾರದೊಳಗೆ ನಮಗೆ ಅನುಮತಿ ನೀಡದಿದ್ದರೆ ಜಿಲ್ಲಾದ್ಯಂತ ಕಲಾವಿದರು ಬೀದಿಗಿಳಿದು ಹೋರಾಟ ಮಾಡುವ ಅನಿವಾರ್ಯತೆ ಎದುರಾಗುತ್ತದೆ ಎಂದರು. ಶಾಮೀಯಾನ ಮತ್ತು ಸೌಂಡ್‌ ಸಿಟ್ಟಮ್‌ ಮಾಲೀಕ 10 ತಿಂಗಳಿನಿಂದ ನಾವು ಉದ್ಯೋಗ ವಂಚಿತರಾಗಿದ್ದೇವೆ. ಆದಾಯವಿಲ್ಲದೆ ಎಲ್ಲಾ ಪರಿಕರಗಳು ಧೂಳು ತಿನ್ನುತ್ತಿದೆ ಎಂದರು.

ಕಲಾವಿದರ ವೇದಿಕೆ ಅಧ್ಯಕ್ಷ ನಾಗರಾಜ ಜಾಂಬಳೇಕರ ಮಾತನಾಡಿ ಕಲೆಯನ್ನೇ ನಂಬಿ ಬದುಕುವ ಅದನ್ನೇ
ವೃತ್ತಿಯನ್ನಾಗಿಸಿಕೊಂಡ ಸಾವಿರಾರು ಕುಟುಂಬಗಳು ಕಳೆದ ಹತ್ತು ತಿಂಗಳಿಂದ ನಯಾ ಪೈಸೆ ಆದಾಯವಿಲ್ಲದೆ ಸಾಯುವುದಕ್ಕಿಂತ ಬದಲಾಗಿ ಜಿಲ್ಲಾಡಳಿತವೇ ವಿಷ ಕೊಟ್ಟು ಕಲಾವಿದರನ್ನು ಕೊಂದುಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂಬರುವ ದಿನದಲ್ಲಿ ಕಲೆಗಳಿಗೆ ಅವಕಾಶ ನೀಡದಿದ್ದರೆ ಸರಕಾರಿ ಕಾರ್ಯಕ್ರಮಗಳಿಗೂ ಖುರ್ಚಿ, ಶಾಮೀಯಾನ ಸೌಂಡ್‌ ಸಿಸ್ಟಮ್‌ ಮತ್ತು ಮುಂತಾದ ಪರಿಕರಗಳನ್ನು ಸರಕಾರಿ ಮತ್ತು ರಾಜಕಿಯ ಕಾರ್ಯಕ್ರಮಗಳಿಗೆ ಕೊಡುವುದಿಲ್ಲ. ಕೊರೊನಾ ಎಂದು ಕಲೆ ಮತ್ತು ಕಲಾವಿದರಿಗೆ ತುಳಿದರೆ ಮುಂಬರುವ ದಿನದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾದಿತು ಎಂದರು.

ಧನಂಜಯ ನಾಯ್ಕ, ಸುಜೀತ ನಾಯ್ಕ, ಗಣಪತಿ ಗೌಡ, ರಾಮಕೃಷ್ಣ ನಾಯ್ಕ, ಅರುಣ ಗಾಂವಕರ, ಪ್ರಶಾಂತ ಕೇಣಿ,
ಗಣಪತಿ ಶೆಟ್ಟಿ, ಮೋನಪ್ಪಾ ನಾಯ್ಕ, ರಾಜು ಕರಣ, ದಿನೇಶ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.