Asia Cup: ಏಷ್ಯಾ ಕಪ್ಗೆ ಅಶ್ವಿನ್, ಚಹಲ್ ಬೇಕಿತ್ತು- ಭಾರತದ ಮಾಜಿ ಕ್ರಿಕೆಟಿಗರ ಅನಿಸಿಕೆ
Team Udayavani, Aug 23, 2023, 11:09 PM IST
ಮುಂಬಯಿ: ಭಾರತದ ಏಷ್ಯಾ ಕಪ್ ತಂಡದಿಂದ ಪ್ರಮುಖ ಸ್ಪಿನ್ನರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಯಜುವೇಂದ್ರ ಚಹಲ್ ಅವರನ್ನು ಕೈಬಿಟ್ಟಿ ದ್ದಕ್ಕೆ ಮಾಜಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಮದನ್ಲಾಲ್, ಕಪಿಲ್ದೇವ್ ಅವರ ಬೌಲಿಂಗ್ ಜತೆಗಾರನಾಗಿದ್ದ ಕರ್ಸನ್ ಘಾವ್ರಿ ಇವರಲ್ಲಿ ಪ್ರಮುಖರು.
“ವಿಶ್ವಕಪ್ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಒಂದು ಅಭ್ಯಾಸ ಪಂದ್ಯಾವಳಿಯಾಗಿದೆ. ಎಲ್ಲವೂ ಏಷ್ಯಾದ ಸ್ಪಿನ್ ಟ್ರ್ಯಾಕ್ನಲ್ಲೇ ನಡೆಯಲಿವೆ. ಹೀಗಾಗಿ ಅನುಭವಿ ಸ್ಪಿನ್ನರ್ಗಳಾದ ಅಶ್ವಿನ್ ಮತ್ತು ಚಹಲ್ ಅವರನ್ನು ಕಡೆಗಣಿಸಬಾರದಿತ್ತು. ಕುಲದೀಪ್ ಎಸೆತಗಳಿಗೆ ಆಸ್ಟ್ರೇಲಿಯನ್ನರು ಚೆನ್ನಾಗಿಯೇ ಉತ್ತರಿಸಿದ್ದಾರೆ. ಚಹಲ್ ಓರ್ವ ಮ್ಯಾಚ್ ವಿನ್ನಿಂಗ್ ಬೌಲರ್’ ಎಂಬುದಾಗಿ ಮದನ್ಲಾಲ್ ಪಿಟಿಐ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
“ಅಶ್ವಿನ್ ಖಾತೆಯಲ್ಲಿ ಈಗಾಗಲೇ 500-600ರಷ್ಟು ವಿಕೆಟ್ಗಳಿವೆ. ಅವರಿಗೆ ವಿಕೆಟ್ ಹೇಗೆ ಪಡೆಯ ಬೇಕೆಂಬುದು ಗೊತ್ತು. ಅವರನ್ನು ಟೆಸ್ಟ್ ವಿಶ್ವಕಪ್ ಫೈನಲ್ನಿಂದ ಹೊರಗಿರಿಸಲಾಯಿತು. ಪರಿಣಾಮ ಏನಾಯಿತೆಂಬುದು ನಮ್ಮ ತಂಡದ ಆಡಳಿತ ಮಂಡಳಿಗೆ ತಿಳಿದಿರಬಹುದು’ ಎಂದು ಮದನ್ಲಾಲ್ ತುಸು ಖಾರವಾಗಿ ನುಡಿದರು.
“712 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅಶ್ವಿನ್ ಇನ್ನೂ ಸಾಧಿಸಿ ತೋರಬೇಕಾದದ್ದು ಏನಿದೆ? ಸೀನಿಯರ್ ಆಟಗಾರನಾಗಿಯೂ ಅವರನ್ನು ಸರಿ ಯಾಗಿ ನಡೆಸಿಕೊಳ್ಳಲಿಲ್ಲ. ಅವರೋರ್ವ ಕ್ವಾಲಿಟಿ ಪ್ಲೇಯರ್. ಏಷ್ಯಾ ಕಪ್ಗೆ ಅವರನ್ನು ಆರಿಸಬೇಕಿತ್ತು. ಭಾರತದ ಟ್ರ್ಯಾಕ್ಗಳಲ್ಲಿ ನಡೆಯುವ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಶ್ವಿನ್ ಕೀ ಬೌಲರ್ ಆಗ ಲಿದ್ದಾರೆ’ ಎಂಬುದು ಕರ್ಸನ್ ಘಾವ್ರಿ ಅವರ ಅಭಿಪ್ರಾಯವಾಗಿತ್ತು.
ಫಿಟ್ನೆಸ್ ಪ್ರಶ್ನಾರ್ಹ
ಏಷ್ಯಾ ಕಪ್ಗೆ ಆಯ್ಕೆಯಾದ ಕೆ.ಎಲ್. ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಫಿಟ್ನೆಸ್ ಕುರಿತೂ ಮದನ್ಲಾಲ್ ಪ್ರಶ್ನೆಯನ್ನೆತ್ತಿದರು.
“ಏಷ್ಯಾ ಕಪ್ ಮತ್ತು ವಿಶ್ವ ಕಪ್ಗ್ಳೆರಡೂ ಪ್ರತಿಷ್ಠಿತ ಪಂದ್ಯಾವಳಿಗಳಾಗಿವೆ. ಇಲ್ಲಿ ಫಿಟ್ನೆಸ್ ಗುಣ ಮಟ್ಟ ನಿರ್ಣಾಯಕವಾಗಿರುತ್ತದೆ. ನೀವು ದೈಹಿಕವಾಗಿ ಸಮರ್ಥರಾಗದೇ ಇದ್ದಲ್ಲಿ ಮಾನಸಿಕ ವಾಗಿಯೂ ಸಮರ್ಥರಾಗಿರುವು ದಿಲ್ಲ’ ಎಂದು ಮದನ್ಲಾಲ್ ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್: ದ.ಆಫ್ರಿಕಾಗೆ 177 ರನ್ ಅಂತರದ ಸೋಲು
147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್
IPL 2025: ಮತ್ತೆ ರಾಹುಲ್ ದ್ರಾವಿಡ್ ಜತೆ ಸೇರಿದ ವಿಕ್ರಮ್ ರಾಥೋರ್
INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್ ಗೆ ಆಲೌಟ್
INDvsBAN: ಟೆಸ್ಟ್ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!
Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್ ಗಾಂಧಿ
Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ
Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ
Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್ ಗೆ ಹೊಡೆದ ಯುವಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.