![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, May 21, 2019, 6:00 AM IST
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯು ಸರಾಸರಿ 18ರಿಂದ 20 ಸ್ಥಾನ ಗೆಲ್ಲುವುದಾಗಿ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಹೇಳಿರುವುದು ಸದ್ಯ ರಾಜ್ಯ ಬಿಜೆಪಿ ನಾಯಕರಲ್ಲಿ ನಿರಾಳ ಭಾವ ಮೂಡಿಸಿದೆ.
ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಕಾರಣಕ್ಕೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್- ಜೆಡಿಎಸ್ ಲೋಕಸಭೆ ಚುನಾವಣೆಗೂ ಮೈತ್ರಿ ಮುಂದುವರಿಸಿದವು. ಇದು ಪಕ್ಷಕ್ಕೆ ವರದಾನವಾಗಲಿದ್ದು, ಮುಖ್ಯವಾಗಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಲಾಭವಾಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿತ್ತು. ಸದ್ಯ ಬಹಿರಂಗವಾಗಿರುವ ಬಹುತೇಕ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ನಿರೀಕ್ಷೆಯಷ್ಟೇ ಸ್ಥಾನಗಳನ್ನು ಗೆಲ್ಲುವುದಾಗಿ ಭವಿಷ್ಯ ಹೇಳಿರುವುದು ಬಿಜೆಪಿ ನಾಯಕರ ಆತ್ಮವಿಶ್ವಾಸ ಹೆಚ್ಚಿಸಿದೆ.
ಈ ಬಾರಿ ರಾಜ್ಯದಲ್ಲಿ ಬಿಜೆಪಿ 22 ಸ್ಥಾನ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಸೇರಿ ಹಲವು ನಾಯಕರು ನಿರಂತರವಾಗಿ ಹೇಳುತ್ತಲೇ ಬಂದಿದ್ದಾರೆ. ಮೇಲ್ನೋಟಕ್ಕೆ ಎಲ್ಲರೂ 22 ಸ್ಥಾನ ಗೆಲ್ಲುವುದಾಗಿ ಹೇಳುತ್ತಿದ್ದರೂ ಅಷ್ಟೂ ಸ್ಥಾನ ಗೆಲ್ಲುವ ವಿಶ್ವಾಸ ಬಹುತೇಕ ನಾಯಕರಿಗೆ ಇದ್ದಂತಿರಲಿಲ್ಲ. ಮೈತ್ರಿ ಪಕ್ಷಗಳ ಮತದಾರರು ಒಂದಾಗಿ ಮತ ಚಲಾಯಿಸಿದರೆ ಬಿಜೆಪಿ ಕೇವಲ 14ರಿಂದ 15 ಕ್ಷೇತ್ರವನ್ನಷ್ಟೇ ಗೆಲ್ಲಲು ಸಾಧ್ಯ ಎಂಬುದು ನಾಯಕರ ಆತಂಕಕ್ಕೆ ಕಾರಣವಾಗಿತ್ತು.
ಎರಡು ಹಂತದ ಮತದಾನ ಮುಗಿದ ನಂತರವೂ ಬಹುಪಾಲು ನಾಯಕರ ಅಭಿಪ್ರಾಯವೂ ಅದೇ ರೀತಿ ಇತ್ತು. ಮೈತ್ರಿ ಪಕ್ಷಗಳ ಕಿತ್ತಾಟ ಇತರೆ ಕಾರಣಗಳಿಗೆ ಕೆಲವೆಡೆ ಬಿಜೆಪಿಗೆ ಅನುಕೂಲವಾದರೂ ಗರಿಷ್ಠವೆಂದರೆ 17- 18 ಸ್ಥಾನ ಗೆಲ್ಲುವ ನಿರೀಕ್ಷೆಯನ್ನಷ್ಟೇ ಇಟ್ಟುಕೊಂಡಿದ್ದರು. ಹಾಗಾಗಿ ಹಲವು ನಾಯಕರಿಗೆ ಒಳಗೊಳಗೆ ಸ್ವಲ್ಪ ಅಂಜಿಕೆ ಇದ್ದಂತಿತ್ತು ಎನ್ನಲಾಗಿದೆ.
ಆತಂಕ ನಿವಾರಿಸಿದ ಸಮೀಕ್ಷೆಗಳು: ಈ ನಡುವೆ ಭಾನುವಾರ ಬಹಿರಂಗವಾಗಿರುವ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ಸರಾಸರಿ 18ರಿಂದ 20 ಸ್ಥಾನ ಗೆಲ್ಲುವುದಾಗಿ ಭವಿಷ್ಯ ನುಡಿದಿವೆ. ಎಬಿಪಿ ಹಾಗೂ ನೀಲ್ಸನ್ ಸಂಸ್ಥೆಗಳು ಬಿಜೆಪಿ 15 ಸ್ಥಾನ ಗೆಲ್ಲುವುದಾಗಿ ಹೇಳಿರುವುದನ್ನು ಹೊರತುಪಡಿಸಿದರೆ ಉಳಿದ ಸಮೀಕ್ಷೆಗಳು ಬಿಜೆಪಿ ಕನಿಷ್ಠ 18ರಿಂದ ಗರಿಷ್ಠ 23 ಸ್ಥಾನ ಗೆಲ್ಲುವುದಾಗಿ ಅಂದಾಜಿಸಿವೆ. ಇಂಡಿಯಾ ಟುಡೆ- ಆ್ಯಕ್ಸಿಸ್ ಸಮೀಕ್ಷೆಯು ಬಿಜೆಪಿ ಕನಿಷ್ಠ 21ರಿಂದ ಗರಿಷ್ಠ 25 ಸ್ಥಾನ ಗೆಲ್ಲುವುದಾಗಿ ಹೇಳಿದೆ. ಇದರಿಂದ ಸಹಜವಾಗಿಯೇ ರಾಜ್ಯ ಬಿಜೆಪಿ ನಾಯಕರು ಸದ್ಯದ ಮಟ್ಟಿಗೆ ನಿರಾಳರಾಗಿದ್ದಾರೆ. ಬಿಜೆಪಿ ನಾಯಕರ ಜತೆಗೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಲ್ಲೂ ಸಮೀಕ್ಷಾ ವರದಿಗಳು ನಿರಾಳ ಭಾವ ಮೂಡಿಸಿದೆ.
ಕರ್ನಾಟಕ 2ನೇ ಸ್ಥಾನದಲ್ಲಿ
ದೇಶದಲ್ಲಿ ಪ್ರಧಾನಿ ಮೋದಿ ಅಲೆ ದೊಡ್ಡ ಮಟ್ಟದಲ್ಲಿರುವ ರಾಜ್ಯಗಳ ಪೈಕಿ ಬಿಹಾರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಹಾಗಾಗಿ ಮೋದಿ ಅಲೆ ಈ ಬಾರಿಯ ಚುನಾವಣೆಯಲ್ಲೂ ಪಕ್ಷದ ಕೈಹಿಡಿಯುವ ನಿರೀಕ್ಷೆಯನ್ನು ಸಮೀಕ್ಷಾ ವರದಿಗಳು ಇನ್ನಷ್ಟು ಗಟ್ಟಿಗೊಳಿಸಿವೆ. ರಾಜ್ಯದಲ್ಲಿ ಬಿಜೆಪಿ ಈವರೆಗೆ 19 ಲೋಕಸಭಾ ಸ್ಥಾನ ಗೆದ್ದ ದಾಖಲೆ ಇದೆ. ಅದನ್ನು ಈ ಚುನಾವಣೆಯಲ್ಲಿ ಹಿಂದಿಕ್ಕುವ ನಿರೀಕ್ಷೆ ಮೂಡಿದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
You seem to have an Ad Blocker on.
To continue reading, please turn it off or whitelist Udayavani.