![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Aug 19, 2023, 11:15 PM IST
ಬುಡಾಪೆಸ್ಟ್ (ಹಂಗೇರಿ): ಮೂರು ಸಾವಿರ ಮೀಟರ್ ಸ್ಟೀಪಲ್ಚೇಸ್ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಅವಿನಾಶ್ ಸಾಬಲೆ ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ಅರ್ಹತೆ ಸಂಪಾದಿಸಲು ವಿಫಲರಾಗಿದ್ದಾರೆ. ಹೀಟ್ಸ್ ನಲ್ಲಿ ಅವರು 7ನೇ ಸ್ಥಾನಕ್ಕೆ ಕುಸಿದರು (8 ನಿಮಿಷ, 22.24 ಸೆಕೆಂಡ್ಸ್).
2,300 ಮೀ. ಹಂತದ ತನಕ ಅವಿನಾಶ್ ಸಾಬಲೆ ಅಗ್ರಸ್ಥಾನ ಕಾಯ್ದುಕೊಂಡಿದ್ದರು. ಅನಂತರ ಅವರ ವೇಗ ಕಡಿಮೆಯಾಗುತ್ತ ಹೋಯಿತು. ಮುಖ್ಯವಾಗಿ ಕೊನೆಯ ಲ್ಯಾಪ್ನಲ್ಲಿ ಅವಿನಾಶ್ ಪ್ರಯತ್ನ ಏನೂ ಸಾಲಲಿಲ್ಲ. ತಮ್ಮ ರಾಷ್ಟ್ರೀಯ ದಾಖಲೆಗೂ (8:11.20) ಕಳಪೆ ಪ್ರದರ್ಶನ ನೀಡಿದರು. ಹೀಟ್ಸ್ ನಲ್ಲಿ ಮೊದಲ 5 ಸ್ಥಾನ ಪಡೆದವರಿಗಷ್ಟೇ ಫೈನಲ್ ಅರ್ಹತೆ ಲಭಿಸುತ್ತದೆ.
ಇದು ಸಾಬಲೆ ಅವರ 3ನೇ ವಿಶ್ವ ಆ್ಯತ್ಲೆಟಿಕ್ಸ್ ಚಾಂಪಿಯನ್ಶಿಪ್ ಆಗಿದ್ದು, ಮೊದಲ ಸಲ ಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ. ಕಳೆದ ವರ್ಷದ ಯೂಜೀನ್ ಚಾಂಪಿಯನ್ಶಿಪ್ ಫೈನಲ್ನಲ್ಲಿ 11ನೇ ಸ್ಥಾನ ಪಡೆದಿದ್ದರು.
ರೇಸ್ವಾಕ್
20 ಕಿ.ಮೀ. ರೇಸ್ವಾಕ್ನಲ್ಲೂ ಭಾರತಕ್ಕೆ ನಿರಾ ಸೆಯೇ ಗತಿಯಾಯಿತು. ವಿಕಾಸ್ ಸಿಂಗ್ 28ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು (1 ಗಂಟೆ, 21 ನಿಮಿಷ, 58 ಸೆಕೆಂಡ್ಸ್). ಪರಮ್ಜೀತ್ ಸಿಂಗ್ ಮತ್ತು ಆಕಾಶ್ದೀಪ್ ಸಿಂಗ್ ಕ್ರಮವಾಗಿ 35ನೇ ಹಾಗೂ 47ನೇ ಸ್ಥಾನಿಯಾದರು. ಇವರಲ್ಲಿ ಆಕಾಶ್ದೀಪ್ ನಿರ್ವಹಣೆ ಅತ್ಯಂತ ನಿರಾಶಾದಾಯಕವಾಗಿತ್ತು. ಕಾರಣ, ಇವರು ರಾಷ್ಟ್ರೀಯ ದಾಖಲೆ ಹೊಂದಿ ದ್ದರು. ಒಟ್ಟು 50 ಮಂದಿ ಸ್ಪರ್ಧಿಗಳು ರೇಸ್ವಾಕ್ನಲ್ಲಿ ಪಾಲ್ಗೊಂಡಿದ್ದರು. ಇಬ್ಬರು ರೇಸ್ ಪೂರ್ತಿಗೊಳಿಸಲಿಲ್ಲ.
ಲಾಂಗ್ಜಂಪ್
ವನಿತಾ ಲಾಂಗ್ಜಂಪ್ನಲ್ಲಿ ಶೈಲಿ ಸಿಂಗ್ ಕೂಡ ನಿರಾಸೆ ಮೂಡಿಸಿದರು. “ಬಿ’ ವಿಭಾಗದ ಅರ್ಹತಾ ಸುತ್ತಿನಲ್ಲಿ ಅವರು 14ನೇ ಸ್ಥಾನಿಯಾದರು. ಒಟ್ಟು 18 ಮಂದಿ ಕಣದಲ್ಲಿದ್ದರು. 6.40 ಮೀಟರ್ ಶೈಲಿ ಅವರ ಗರಿಷ್ಠ ದೂರವಾಗಿತ್ತು. ಇದು ಅವರ 6.76 ಮೀಟರ್ಗಳ ವೈಯಕ್ತಿಕ ದಾಖಲೆಗಿಂತಲೂ ಕಡಿಮೆ ದೂರವಾಗಿತ್ತು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.